ಸಾಯೊನಾರಾ…ಸಾಯೊನಾರಾ…ವಾದಾ ನಿಭಾವೋಗೆ ಸಾಯೊನಾರಾ

1 Comment

sayonara

ಜಪಾನ್ ನ ಟೋಕಿಯೋ ನಗರದ ಚುಮುಚುಮು ಮುಂಜಾವು. ವರ್ಷದ ಭಾಗಶಃ ಎಲ್ಲದಿನವೂ ಆಗುವಂತೆ ಅಂದೂ ಕೂಡ ಹನಿಹನಿ ಮಳೆ ಬೀಳುತ್ತಿತ್ತು. ಟೋಕಿಯೋಗೆ ಕೆಲಸದ ನಿಮಿತ್ತ ಬಂದಿದ್ದ ಭಾರತೀಯನೊಬ್ಬ ಬಸ್ ಹಿಡಿದು ಹನೇದಾ ಏರ್ ಪೋರ್ಟ್ ಗೆ ಹೋಗಬೇಕಿತ್ತು. ಸುಮಾರು 6.30 ಕ್ಕೆ ಬಸ್ ಸ್ಟಾಪಿಗೆ ಬಂದ. 6.45 ಕ್ಕೆ ಬಸ್ ಬರುವುದಿತ್ತು. ಬಸ್ ಸ್ಟಾಪಿನಲ್ಲಿ ಈತನೇ ಮೊದಲೇ ವ್ಯಕ್ತಿ. ಐದು ನಿಮಿಷ ನಿಂತುಕೊಂಡ. ಅಷ್ಟರಲ್ಲಾಗಲೇ ಐದಾರು ಜನ ಜಪಾನಿಯರು ಬಂದು ಈತನ ಹಿಂದೆ ನೀಟಾಗಿ ಕ್ಯೂನಲ್ಲಿ ನಿಂತುಕೊಂಡರು. ಬಸ್ ಬರಲು ಇನ್ನೂ 10 ನಿಮಿಷ ಇದೆಯಲ್ಲ ಎಂದುಕೊಂಡು ಈತ ಹತ್ತಿರದಲ್ಲಿಯೇ ಇದ್ದ ಅಂಗಡಿಗೆ ಕೋಕ್ ಕೊಳ್ಳಲೆಂದು ಹೋದ. ಅಂಗಡಿಗೆ ಹೊಕ್ಕ ತಕ್ಷಣ ಒಳಗಿನ ಮರ್ಚಂಟೈಸಿಂಗ್ ನೋಡಿ ವಿಸ್ಮಿತನಾದ. ಸಮಯ ಹೋಗಿದ್ದು ತಿಳಿಯಲಿಲ್ಲ. ಹಾಗೆ ನೋಡುತ್ತಿದ್ದಾಗ ತಕ್ಷಣ ತಾನು ಆಫೀಸಿಗೆ ಹೋಗಬೇಕಾಗಿರುವುದು ನೆನಪಾಯಿತು. ಛಕ್ಕನೆ ಗಡಿಯಾರ ನೋಡಿಕೊಂಡ. ಸರಿಯಾಗಿ 6.45 ತೋರಿಸುತ್ತಿತ್ತು. ಬಿಟ್ಟ ಬಾಣದಂತೆ ಅಂಗಡಿಯಿಂದ ಹೊರಬಂದು ಬಸ್ ಸ್ಪಾಪಿಗೆ ಬಂದ. ಅಲ್ಲಾಗಲೇ ಬಸ್ ಬಂದು ನಿಂತಿತ್ತು. ಆದರೆ ಏನಾಶ್ಚರ್ಯ…..ಬಸ್ ಬಾಗಿಲು ತೆರೆದಿದ್ದರೂ ಯಾರೊಬ್ಬರೂ ಬಸ್ ಹತ್ತುತ್ತಿಲ್ಲ. ಎಲ್ಲರೂ ಈತನನ್ನೇ ನೋಡುತ್ತಿದ್ದಾರೆ. ಈತನಿಗೆ ಏಕೆಂದು ತಿಳಿಯಲಿಲ್ಲ. ಹಾಗೇ ಓಡಿ ಬಂದವನೇ ಬಸ್ ಹತ್ತಿದ. ಆತ ಹತ್ತಿದ ತಕ್ಷಣ ಉಳಿದ ಜಪಾನಿಯರು ಲಗುಬಗೆಯಿಂದ ಬಸ್ ಹತ್ತಿದರು.

ನಂತರ ಆಫೀಸಿನಲ್ಲಿ ನಡೆದ ಘಟನೆಯನ್ನು ಜಪಾನಿ ಮಿತ್ರನೊಬ್ಬನಿಗ ವಿವರಿಸಿದ. ಆಗ ಮಿತ್ರ ಹೇಳಿದ, “ಹೌದು ಇಲ್ಲಿ ಹಾಗೆಯೇ. ಕ್ಯೂ ನಲ್ಲಿ ನೀನು ಮೊದಲಿದ್ದೆಯಲ್ಲೇವೆ? ಹೀಗಾಗಿ ನೀನೇ ಮೊದಲು ಬಸ್ ಹತ್ತಬೇಕು. ನೀನು ಹತ್ತುವವರೆಗೂ ಯಾರೂ ಬಸ್ ಹತ್ತುವುದಿಲ್ಲ. ಕ್ಯೂ ಮುರಿಯುವುದು ಇಲ್ಲಿನ ಶಿಷ್ಟಾಚಾರವಲ್ಲ”.

ಎಲ್ಲ ರೀತಿಯ ಯೋಗಾಸನಗಳನ್ನು ಬಲವಂತವಾಗಿ ಮಾಡಿಸುವ ಪುಣೆಯ ಸಿಟಿಬಸ್ ಗಳು ಈತನಿಗೆ ತಕ್ಷಣ ನೆನಪಾದವು.

(ಈ ಘಟನೆ ಹೇಳಿದ್ದು ನನ್ನ ಚಿಕ್ಕಮ್ಮನ ಮಗ ರೋಹನ್ ಫಣಸಳಕರ್. ಇಲ್ಲಿನ ಕಥಾನಾಯಕ ಆತನೇ)

ದೇವರನ್ನು ನಂಬದವನಿಗೆ…

3 Comments

kol

ಐತಿಹಾಸಿಕ ರಾಜಕೀಯ ಕಾದಂಬರಿ ಅವಧೇಶ್ವರಿಯನ್ನು ಬರೆದವರು ಶಂಕರ್ ಮೊಕಾಶಿ ಪುಣೇಕರ್. ಪುರುಕುತ್ಸ, ಪುರುಕುತ್ಸಾನಿ, ತ್ರಸದುಸ್ಯು, ತಾರ್ಕ್ಷ್ಯ, ಸಿಂಹಭಟ್ಟ ಪ್ರಧಾನ ಪಾತ್ರಗಳು. ಅವರ ಕಾದಂಬರಿ ಓದುತ್ತಿದ್ದಾಗ ತುಂಬ ಇಷ್ಟವಾದ ಸಾಲುಗಳು ಇವು.

ಎಲ್ಲಿಯವರೆಗೆ ಪರಿಸ್ಥಿತಿ ಸಾಧ್ಯಾಸಾಧ್ಯತೆಯ ಅಂಕೆಯಲ್ಲಿ ಇರುತ್ತದೆಯೋ ಅಲ್ಲಿಯವರೆಗೆ ವೈಚಾರಿಕತೆ ಕೆಲಸ ಮಾಡಬಲ್ಲದು.

ಎಲ್ಲಿ ವಿಚಾರದ ಅಂಕೆಗೆ ಸಿಕ್ಕದ ತೊಡಕು ಉಂಟಾಗುತ್ತದೆ, ಅಲ್ಲಿ…..

ಬುದ್ಧಿವಂತ ಕಂಗೆಡುತ್ತಾನೆ.

ಶೃದ್ಧಾವಂತ ದೇವರಿಗೆ ಮೊರೆ ಹೋಗುತ್ತಾನೆ.

ದೇವರನ್ನು ನಂಬದವನಿಗೆ ದೇವರೇ ಗತಿ.

ಇನ್ಸಿಡೆಂಟ್ಸ್ @ 100

Leave a comment

100

“ಗೋಧಿ ಮೈ ಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು….”

“ಸರ್ ಅಲ್ಲ…ಅದು …ಆಕರ್ಷಕವಾಗಿಯೇ ಇದ್ದಾಳೆ….”

“ನೋಡಮ್ಮ…. ಎಲ್ಲ ಮಕ್ಕಳು ತಮ್ಮ ತಂದೆ ತಾಯಿಗಳಿಗೆ ಆಕರ್ಷಕವಾಗಿಯೇ ಕಾಣಿಸುತ್ತಾರೆ. ಹೆತ್ತವರಿಗೆ ಅದೇನೋ ಮುದ್ದು ಅಂತಾರಲ್ಲ ಹಾಗೆ….ನೀವು ಹೇಳಿದ ಹಾಗೆ ನಾವು ಬರೆಯುತ್ತ ಹೋದರೆ, ಕಾಣೆಯಾದ ವ್ಯಕ್ತಿಗಳ ಬಗ್ಗೆ ಒಂದೊಂದು ಕಾದಂಬರಿಯನ್ನೇ ಬರೆಯಬೇಕಷ್ಟೇ.ಹಾಂ..ಮುಂದಕ್ಕೆ ಬರ್ಕೊಳಪ್ಪ. ಐದಡಿ ಎರಡಿಂಚು ಎತ್ತರ. ದಿನಾಂಕ …….ರಿಂದ ತ್ಯಾಗರಾಜನಗರ ಪೋಲಿಸ್ ಠಾಣಾ ವ್ಯಾಪ್ತಿಯಿಂದ ಕಾಣೆಯಾಗಿರುತ್ತಾರೆ”.

“ಸರ್ ಹೋಗುವಾಗ ಇಪ್ಪತ್ತು ಸಾವಿರ ರೂಪಾಯಿ ಎಟಿಎಂನಿಂದ ವಿತ್ ಡ್ರಾ ಮಾಡಿದ್ದಾಳೆ. ನಾನ್ ಹೇಳಿದ್ನಲ್ಲ ಸರ್ ಬೇಡ ಬೇಡ ಅಂದ್ರೂ ಆ ಹುಡುಗನ ಜೊತೆ ತಿರಗ್ ತಿದ್ಲು. ಬಹುಶಃ ಅವನ ಜೊತೆಯೇ…..”

“ನೋಡಿಮ್ಮ…ನಾವು ಎಲ್ಲಾ ಸಾಧ್ಯತೆನೂ ಪರಿಶೀಲಸ್ ತೀವಿ. ಅವ್ಳು ನಿಮ್ಮ ಮಗಳು. ನಾವು ಹಾಗೆಲ್ಲ ಈಗ್ಲೇ ಕನ್ಕ್ಲೂಷನ್ ಗೆ ಬರಬಾರ್ದು. ಹೋಗಿದ್ರೆ ಎಲ್ಲ ಹೋಗಿರ್ತಾರೆ ಹೇಳಿ…ತಿರುಪತಿ, ಧರ್ಮಸ್ಥಳ, ಉಡುಪಿ ಅಷ್ಟೇ. ಮೊಬೈಲ್ ಪ್ರಿಂಟ್ ಔಟ್ ಬಂದ ಮೇಲೆ ಟ್ರೇಸ್ ಮಾಡಲು ಈಝಿ ಆಗುತ್ತೆ. ಆದ್ರೆ ನಿಮ್ಮ ಮಗಳು ಮೊಬೈಲ್ ಆನ್ ಮಾಡಿಟ್ಟುಕೊಂಡಿರಬೇಕು ಅಷ್ಟೇ”.

ಎಸ್ ಐ ಡಿಕ್ಟೆಷನ್ ಮುಂದುವರೆಸಿದ. ರೈಟರ್ ಬರೆದುಕೊಳ್ಳುವುದನ್ನು ಮುಂದುವರೆಸಿದ.

———————————————————–

ಮತ್ತೊಂದು ಕೋಣೆಯಲ್ಲಿ ….

“ಆಗೋದಿಲ್ಲ ಸಾರ್….ಯಾರು ಪಾಸ್ ಪೋರ್ಟ್ ಅಪ್ಲಿಕೇಷನ್ ಕೊಟ್ಟಿದಾರೋ ಅವರು ಪರ್ಸನಲ್ ಆಗಿ ಬಂದು ಸಾಹೇಬ್ರನ್ನ ಮೀಟ್ ಮಾಡ್ಬೇಕು. ಪಕ್ಕದ ಮನೆಯಿಂದ್ಲೇ ಯಾವಾಗ ಟೆರರಿಸ್ಟುಗಳು ಅರೆಸ್ಟು ಆಗಲು ಆರಂಭಿಸಿದ್ದಾರೋ ಅಂದಿನಿಂದ ನಾವು ಸಹ ಫುಲ್ ಸೇಫ್ ಆಗಿ ಡೀಲ್ ಮಾಡ್ತಾ ಇದೀವಿ. ಬೇಜಾರು ಮಾಡ್ಕೋಬೇಡಿ. ನೀವು ಜರ್ನಲಿಸ್ಟ್ ಇದೀರಿ ಅಂತೀರಾ…ನೀವೇ ನಮ್ಮ ಕಷ್ಟ ಅರ್ಥ ಮಾಡ್ಕೊಳ್ದಿದ್ರೆ ಇನ್ಯಾರು ಮಾಡ್ಕೋಳ್ ಬೇಕು ಹೇಳಿ…”

—————————————————————

ಸ್ವಲ್ಪ ಹೊತ್ತಿನ ನಂತರ ಹೆಡ್ ಕಾನ್ಸಟೇಬಲ್ ಗೊಣಗುತ್ತಿದ್ದ….

“ಪೋಲಿಸ್ ಠಾಣೆಯಲ್ಲಿ ಕಾಸು ತೋರಿಸಿದ್ರೆ ಕೆಲಸ ಆಗಿ ಬಿಡುತ್ತೆ ಅಂತ ತಿಳ್ಕೊಂಡ್ ಬಿಟ್ಟಿದ್ದಾರೆ. ಏನ್ ಜನಾನೋ ಏನೋ. ಅಲ್ರೀ ಸಬ್ ರಿಜಿಸ್ಟ್ರಾರ್ ಆಫೀಸಿಗೆ ಹೋಗಿ ಕೆಲಸ ಮಾಡಿಕೊಂಡು ಬನ್ನಿ ನೋಡೋಣ. ನನ್ನದೇ ಜಮೀನು ವಿಷಯದಲ್ಲಿ ಡಾಕ್ಯುಮೆಂಟ್ ಎಲ್ಲಾ ಪಕ್ಕಾ ಇದ್ದರೂ ಕಣ್ಣಿನಲ್ಲಿ ನೀರು ಬರಿಸಿಕೊಂಡು ಒಂದು ತಿಂಗಳ ಸಂಬಳ ಐದು ಸಾವಿರ ರೂಪಾಯಿ ಸಬ್ ರಿಜಿಸ್ಟ್ರಿ ಕೈಯಲ್ಲಿಡುವಾಗ ಹೇಗಾಗಿತ್ತು ಗೊತ್ತ…?ನನ್ನ ಇಪ್ಪತ್ತೈದು ವರ್ಷಗಳ ಸರ್ವೀಸಿನಲ್ಲಿ ಇಲ್ಲಿವರೆಗೂ ಒಂದೇ ಒಂದು ಪೈಸೆ ಲಂಚ ತಗೊಂಡಿಲ್ಲ ಗೊತ್ತಾ?”

————————————————————–

ಅಷ್ಟರಲ್ಲಿ ವಾಕಿ ಟಾಕಿ ಚೀರಿತು…..

ಸುಮಾರು 26 ವರ್ಷದ ತರುಣ ಹಾಗೂ ಸುಮಾರು 20 ವರ್ಷದ ತರುಣಿಯ ಮೃತ ದೇಹ ಕಾಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಬಳಿ ಪತ್ತೆಯಾಗಿರುತ್ತದೆ. ಹುಡುಗ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಹಾಗೂ ಕಪ್ಪು ಅಂಗಿ ಧರಿಸಿರುತ್ತಾನೆ. ತರುಣಿಯು ಕೆಂಪು ಬಣ್ಣದ ಸಲ್ವಾರ್ ಕುರ್ತಾ ಧರಿಸಿರುತ್ತಾಳೆ. ಇಂದು ಮುಂಜಾನೆ ಈ ಇಬ್ಬರು ರೈಲ್ವೆ ನಿಲ್ದಾಣದಲ್ಲಿ ತಿರುಗಾಡುತ್ತಿದ್ದರು ಎನ್ನಲಾಗಿದೆ. ಇವರು ಪ್ರೇಮಿಗಳಿರಬಹುದು ಎಂದು ಶಂಕಿಸಲಾಗಿದೆ. ಮುಖ ರೈಲಿಗೆ ಸಿಕ್ಕು ಸಂಪೂರ್ಣ…..ಹೋಗಿರುವುದರಿಂದ ಗುರುತು ಪತ್ತೆ ಕಷ್ಟವಾಗಿದೆ. ಯಾರಾದರೂ ವಾರಸುದಾರರಿದ್ದಲ್ಲಿ ವಿಕ್ಟೋರಿಯಾ ಆಸ್ಪತ್ರೆಯನ್ನು ಸಂಪರ್ಕಿಸಬಹುದು.

———————————————————

ಪಿಸಿ ಮತ್ತೊಬ್ಬನಿಗೆ ಹೇಳುತ್ತಿದ್ದ….

“ಬೋ…..ಮಗ ಹೇಳಿಕೊಳ್ಳಾಕೆ ಡಾಕ್ಟರು. ಮಾಡೋದು ಮಾತ್ರ ಹಲ್ಕಾ ಕೆಲಸ. ಪಾಸ್ ಪೋರ್ಟ್ ಹೇಗಾದ್ರೂ ಆಗುತ್ತೆ ಅಂತ ಏಜೆಂಟನ್ನ ಹಿಡ್ಕೊಂಡಿದ್ದ. ಈಗ ನೋಡಿ ಹಲ್ಕಟ್ ಪ್ಯಾಲೆ ಥರ ಆಡ್ತಾ ಇದಾನೆ. ಕಳೆದ ಎರಡು ವರ್ಷದಿಂದ ಆ ಮನೆಯಲ್ಲೇ ಇದೀನಿ ಅಂತ ಪತ್ರ ಬರೆದುಕೊಂಡು ಓನರ್ ಸೈನ್ ಫೋರ್ಜರಿ ಮಾಡಿದ್ದ. ಇಪ್ಪತ್ತೈದು ವರ್ಷದ ಸರ್ವಿಸ್ ನಂದು. ಇಂಥ ನೂರಾರು ಕೇಸ್ ನೋಡಿದೀನಿ….”

—————————————————————-

ಠಾಣೆಯಲ್ಲಿದ್ದ ಟಿವಿ ಬೊಂಬಡ ಬಜಾಯಿಸಿತು…

“ಭಾರೀ ತಿಮಿಂಗಿಲಗಳು ಲೋಕಾಯುಕ್ತ ಬಲೆಗೆ.

ಲೋಕಾಯುಕ್ತ ಪೋಲಿಸರು ಇಂದು ಬೆಳಗಿನ ಜಾವ ಹತ್ತು ಜನ ಸಬ್ ರಿಜಿಸ್ಟ್ರಾರ್ ಗಳು ಹಾಗೂ ಇಬ್ಬರು ಎಸ್ ಪಿ ಗಳ ಮನೆಗಳ ಮೇಲೆ ಮಿಂಚಿನ ದಾಳಿ ನಡೆಸಿ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವುದನ್ನು ಪತ್ತೆ ಹಚ್ಚಿದ್ದಾರೆ. ಈ ಎಲ್ಲರೂ ನಿವೃತ್ತಿ ವಯಸ್ಸನ್ನು ಸಮೀಪಿಸುತ್ತಿದ್ದು, ನಗರದ ಪ್ರತಿಷ್ಥಿತ ಬಡಾವಣೆಗಳಲ್ಲಿ ಅಪಾರ್ಟಮೆಂಟ್, ರೆಸಾರ್ಟ್ ಹಾಗೂ ಹೋಟೆಲ್ ಗಳನ್ನು ಹೊಂದಿದ್ದಾರೆ. ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿ ಪಡೆಯೋಣ ನಮ್ಮ ಪ್ರತಿನಿಧಿ ಮೇಕ್ ಮನಿ ಅವರಿಂದ….

“ಮೇಕ್ ಮನಿ, ಹೇಳಿ ಇವ್ರು ಇಷ್ಟೆಲ್ಲ ಹಣ ಮಾಡ್ಕೊಂಡಿದ್ದು ಹೇಗೆ?”

“ಏನೊಂದು ಇವತ್ತು ಏನೊಂದು ಈ ದಾಳಿ ನಡೆದಿದೆ. ಏನೊಂದು ಈ ದಾಳಿಯಲ್ಲಿ ಲೋಕಾಯುಕ್ತರು ಏನೊಂದು ಈ ಹತ್ತು ಜನ ಸಬ್ ರಿಜಿಸ್ಟ್ರಿಗಳ ಮನೆ ಮೇಲೆ ಏನೊಏಓನಏನೊಂದು ದಾಳಿ ನಡೆಸಿ ಏನೊಂದು ಇಬ್ರು ಎಸ್ ಪಿಗಳ ಮನೆ ಏನೊಂದು ಈ…. ಆ….ಉ…ಎ……”

ಇಂಥವರಿದ್ದರೆ, ದೇವರು ದೆವ್ವ ಇಬ್ಬರೂ ಬೇಡ!!

Leave a comment

jyotishi

ಶ್ರೀ. ………………., ಪ್ರಸಿದ್ಧ ದೈವಶಕ್ತಿ ಜ್ಯೋತಿಷ್ಯರು

ಮಾನವನ ಬದುಕು ಜನನ-ಮರಣಗಳ ನಡುವೆ ಸಾಗುವ ಸಂಕಷ್ಟಗಳ ಅಕ್ಷಯ ಪಾತ್ರೆ. ಸದಾ ಕಾಡುವ ನಮ್ಮ ಕಷ್ಟಗಳಿಗೆ ಬೆಳಕಾಗಿ ಕಾಣುವುದು ಜೋತಿಷ್ಯ ಶಾಸ್ತ್ರ. ನಿಮ್ಮ ಬದುಕಿನ ಭವ್ಯ ಭವಿಷ್ಯಯದ ಕನಸು ನನಸು ಮಾಡಲು ಬಹುಜನರ ಒತ್ತಾಯದ ಮೇರೆಗೆ ಬೆಂಗಳೂರಿನಲ್ಲೇ ವಾಸವಾಗಿದ್ದಾರೆ ಶ್ರೀ…………ಜ್ಯೋತಿಷಿ. ನಿಮ್ಮ ಸಮಸ್ಯೆಗೆ ಪರಿಹಾರ ಸಿಗದೆ ನೊಂದಿದ್ದರೆ ಯಾವುದೇ ಕಠಿಣ ಸಮಸ್ಯೆಗಳಿಗೆ ಅತೀಶೀಘ್ರ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯೆ, ನಿರುದ್ಯೋಗ, ವ್ಯಾಪರದಲ್ಲಿ ನಷ್ಟ, ವಿವಾಹ ವಿಳಂಬ, ಸಂತಾನ ಹೀನತೆ, ಸ್ತ್ರೀ-ಪುರುಷ ವಶೀಕರಣ, ಪ್ರೇಮ ವೈಫಲ್ಯ, ಪತಿ-ಪತ್ನಿ ಅಶಾಂತಿ, ಅನಾರೋಗ್ಯ, ಕುಟುಂಬ ಸಮಸ್ಯೆ, ಶತ್ರು ಕಾಟ, ಜಾಗದ ವ್ಯಾಜ್ಯೆ, ಬಿಜನೆಸ್, ವಿದೇಶ ಪ್ರಯಾಣ, ಸಾಲಬಾಧೆ, ಶತ್ರು ಬಾಧೆ, ದಾಂಪತ್ಯ, ಲೈಂಗಿಕ ಸುಖ, ಮನಃಶಾಂತಿ, ಕೋರ್ಟ್ ಕೇಸ್, ಮಾಟಮಂತ್ರ, ದುಷ್ಟ ಶಕ್ತಿ, ಗುಪ್ತ ಸಮಸ್ಯೆ ಸೇರಿದಂತೆ ನಿಮ್ಮ ಎಲ್ಲಾ ತೊಂದರೆಗಳಿಗೂ ಕೇರಳದ ಶಾಸ್ತ್ರೀಯ ಪದ್ಧತಿಯಿಂದ ಶಾಶ್ವತ ಪರಿಹಾರ ಶತಸಿದ್ಧ.

ನಿಮ್ಮ ಸಮಸ್ಯೆಗಳಿಗೆ ಕೇವಲ 7 ದಿನಗಳಲ್ಲಿ ಪರಿಹಾರ ಮಾಡಿಕೊಡುತ್ತಾರೆ. ಇಲ್ಲದಿದ್ದರೆ ಹಣ ವಾಪಸ್.

ಐದು ಪ್ರಶ್ನೆಗಳಿಗೆ ಉಚಿತ ಉತ್ತರ.

ವಿಳಾಸ- ರೂಮ್ ನಂ. ………, , ಡೀಲಕ್ಸ್ ಲಾಡ್ಜ್,. ಮೆಜೆಸ್ಟಿಕ್, ಗಾಂಧಿನಗರ ಬೆಂಗಳೂರು.

ನಮ್ಮ ಬಳಿ ಲಕ್ಷಾಂತರ ಜನರು ಸಮಸ್ಯೆ ಪರಿಹಾರ ಮಾಡಿಕೊಂಡು ಹೋಗಿದ್ದಾರೆ.

——————————————————-

ಈಗ ಹೇಳಿ ಇಂಥವರಿದ್ದರೆ ದೇವರು ದೆವ್ವ ಎಲ್ಲ ಬೇಕಾ?

ಇಂಟರ್ನೆಟ್ ನಲ್ಲಿ ಬೇಸಾಯ ಪದ್ಧತಿ

Leave a comment

1234

“ವಜ್ರದಂತಿ…. ವಜ್ರದಂತಿ…… ವಿಕೋ ವಜ್ರದಂತಿ

ವಿಕೋ ಪೌಡರ್ ವಿಕೋ ಪೇಸ್ಟ್……

ಆಯುರ್ವೇದಿಕ್ ಜಡಿ ಬೂಟಿಯೊಂಸೆ ಬನಾ ಸಂಪೂರ್ಣ ಸ್ವದೇಶಿ

ವಿಕೋ…… ವಜ್ರದಂತಿ”

ವಿವಿಧ ಭಾರತಿಯಲ್ಲಿ ರಾತ್ರಿ 10.30 ಕ್ಕೆ ಆರಂಭವಾಗುವ ‘ಆಪ್ ಕೀ ಫರಮಾಯಿಶ್’ ಕಾರ್ಯಕ್ರಮದಲ್ಲಿನ ಈ ಜಾಹಿರಾತನ್ನು ಕೇಳಿಯೇ ನಾನು ನಿದ್ದೆಹೋಗುವುದು. ಇನ್ನೇನು ಕಣ್ಣು ಹತ್ತಬೇಕು, ಅಷ್ಟರಲ್ಲಿ ನನ್ನ ಗೆಳತಿ ಫೋನಾಯಿಸಿದಳು. ನಾನು ಹಲೋ ಎನ್ನುವ ಮೊದಲೇ “ಹಾವೆರ್ಸ್ಟ್ ಯಾರ್” ಎಂದಳು. ನನಗೆ ಅರ್ಥವಾಗಲಿಲ್ಲ. “ವಾಟ್?” ಎಂದೆ. “ಇಫ್ ಯೂ ಡೋಂಟ್ ಹಾರ್ವೆಸ್ಟ್ ನೌ ಇಟ್ ವಿಲ್ ಪೆರಿಶ್” ಎಂದಳು. ಆಗ ಅರ್ಥವಾಯಿತು. ಮಹಾರಾಯತಿ ಫಾರ್ಮ್ ವಿಲ್ಲೆ ಬಗ್ಗೆ ಮಾತನಾಡುತ್ತಿದ್ದಾಳೆ ಎಂದು. “ಕಾನ್ ಐ ಹಾರ್ವೆಸ್ಟ್ ಟುಮಾರೋ ಮಾರ್ನಿಂಗ್” ಕೇಳಿದೆ. “ನೋ. ಐ ಡೋಂಟ್ ಥಿಂಕ್ ಸೋ,,,ಎ ವೇಟ್…. ಐ ವಿಲ್ ಕಾಲ್ ಯೂ ಲೇಟರ್…ಐ ಆಮ್ ಸಪ್ಪೋಸ್ಡ್ ಟು ಗೋ ಟು ದಿ ಮಾರ್ಕೆಟ್ ನೌ ….ಓಕೆ…..ಬೈ…ಟೇಕ್ ಕೇರ್…..”ಎಂದು ಹೇಳಿ ಫೋನಿಟ್ಟಳು.

ಫೇಸ್ ಬುಕ್ ನಲ್ಲಿ ಫಾರ್ಮ್ ವಿಲ್ಲೆ ಎಂಬ ಆಟವೊಂದಿದೆ. ಸಿಂಪಲ್ ಆಟ. ನಿಮಗೆ ಒಂದಿಷ್ಟು ಜಮೀನಿರುತ್ತದೆ. ಅಲ್ಲಿ ಮೆಕ್ಕೆಜೋಳ, ಬದನೆಕಾಯಿ, ಟೋಮೆಟೋ, ಗೋಡಂಬಿ, ಅವರೆಕಾಯಿ ಸೇರಿದಂತೆ ಹಲವು ದವಸಧಾನ್ಯಗಳನ್ನು ಬೆಳೆಯಬಹುದು. ಅಷ್ಟೇ ಅಲ್ಲ ಕುರಿ, ಆಕಳು ಸಾಕಾಣಿಕೆ ಸೇರಿದಂತೆ ಹಲವು ಕೃಷಿಪೂರಕ ಕೆಲಸಗಳನ್ನು ಮಾಡಬಹುದು. ಧಾನ್ಯ ಮಾರಿ ಬಂದ ಹಣದಿಂದ ಮಾರ್ಕೆಟ್ ಗೆ ಹೋಗಿ ಬೀಜಗಳನ್ನು ಖರೀದಿಸಿ ಬಿತ್ತನೆ ಮಾಡಬಹುದು. ನಿಮ್ಮ ಪಕ್ಕದ ಜಮೀನಿಗೆ ಬರುವಂತೆ ನಿಮ್ಮ ಗೆಳೆಯರನ್ನು ಆಹ್ವಾನಿಸಬಹುದು. ಅವರಿಗೆ ಆಕಳು, ಕುರಿ, ಮರ ಹೀಗೆ ಹಲವು ಕೃಷಿಗೆ ನೆರವಾಗಬಲ್ಲಂತಹುಗಳನ್ನು ಗಿಫ್ಟ್ ನೀಡಬಹುದು. ಹೀಗೆ ಮಾಡುತ್ತ ಮಾಡುತ್ತ ನಿಮ್ಮ ಪಾಯಿಂಟ್ಸ್ ಹೆಚ್ಚಿಸುತ್ತ ಹೋಗಬೇಕು.

ಆಮೆಗೂ ಅವಮಾನವಾಗುವ ಹಾಗಿರುವ ನನ್ನ ಇಂಟರ್ನೆಟ್ ಕನೆಕ್ಷನ್ ನಿಂದ ಈ ಆಟ ಆಡುವುದು ಸಾಧ್ಯವೇ ಇರಲಿಲ್ಲ. ನನ್ನ ಜಮೀನಿನಲ್ಲಿ ತಿರುಗಾಡುವ ಸಂದರ್ಭದಲ್ಲಿ ಆಕಸ್ಮಾತ್ತಾಗಿ ಬೀಜ ಬಿತ್ತನೆಯಾಗಿಬಿಟ್ಟಿತ್ತು. ಕೇವಲ ನಾಲ್ಕು ಗಂಟೆಯಲ್ಲಿ ಬೆಳೆ ಬಂದುಬಿಟ್ಟಿತ್ತು. ಅದನ್ನು ಬೇಗ ಹಾರ್ವೆಸ್ಟ್ ಯಾರ್ ಇಲ್ಲದಿದ್ದರೆ ಅದು ಪೆರಿಶ್ ಎಂದು ಹೇಳಲು ನನ್ನ ಗೆಳತಿ ಫೋನ್ ಮಾಡಿದ್ದಳು.

ನಂತರ ನನಗೆ ನಿದ್ದೆ ಹತ್ತಲಿಲ್ಲ.

ಯಾವ ಹಂತಕ್ಕೆ ಬೆಳೆದು ಬಿಟ್ಟಿದ್ದೇವಲ್ಲ ಎಂಬ ಯೋಚನೆ ಬಂತು. ನಮಗೆ ಕೃಷಿ ಬೇಡ. ಕೃಷಿಕ ಬೆಂಬಲ ಬೆಲೆ ಇಲ್ಲದೆ, ಗೊಬ್ಬರವಿಲ್ಲದೆ, ಸಾಲ ತೀರಿಸಲಾಗದೆ ಸಾಯುತ್ತಿದ್ದಾನೆ. ಆತನ ಬಗ್ಗೆ ಕನ್ಸರ್ನ್ ಇಲ್ಲ. ರೈತ ಹೋರಾಟಗಳಿಗೆ ಬೆಲೆಯಿಲ್ಲ. ರೈತನ ಆತ್ಮಹತ್ಯೆಗೆ ಕ್ಯಾರೆ ಇಲ್ಲ.  ಸಗಣಿ ಕಂಡರೆ ಮುಖ ಸಿಂಡರಿಸುವ, ಬೆಂಗಳೂರಿನಲ್ಲಿ ಮಳೆ ಬಂದರೆ ಶಪಿಸುವ ನಮಗೆ ಫಾರ್ಮ್ ವಿಲ್ಲೆ ಮಾತ್ರ ಬೇಕು. ಇಂಟರ್ನೆಟ್ ನಲ್ಲಿ ಕೃಷಿ ಮಾತ್ರ ಬೇಕು. ಹೇಗಿದೆ ನೋಡಿ ತಮಾಷೆ?

ಊರಿಗೆ ಹೋದಾಗಲೆಲ್ಲ ಅಣ್ಣನಿಗೆ ಕುತ್ರಿ ಹಾಕಲು ಸಹಾಯ ಮಾಡುವ, ಬಟ್ಟು ಕೊಯ್ದುಕೊಂಡು ಅಡಕೆ ಸುಲಿಯುವ, ಕೊಟ್ಟಿಗೆಯಲ್ಲಿ ಸಗಣಿ ಬಳಿಯುವ, ಎರೆಗೊಬ್ಬರದಲ್ಲಿ ಎರೆಹುಳು ಆರಿಸುವ ನನಗೆ ಈ ಫಾರ್ಮ್ ವಿಲ್ಲೆ ನಿಜಕ್ಕೂ ತಮಾಷೆಯಾಗಿ ಕಂಡಿತು.  

ನನಗೆ ಫಾರ್ಮ್ ವಿಲ್ಲೆ ಬಗ್ಗೆಯಾಗಲಿ ಅಥವಾ ಈ ರೀತಿಯ ಆಟದ ಬಗ್ಗೆಯಾಗಲಿ ಯಾವುದೇ ಗ್ರಜ್ ಇಲ್ಲ. ಈ ಆಟವಾಡುವವರು ನನ್ನ ಗೆಳೆಯ ಗೆಳತಿಯರೇ ಆಗಿರುವುದರಿಂದ ಅವರ ಬಗ್ಗೆ ಕೋಪವೂ ಇಲ್ಲ. ಆದರೆ ಒಟ್ಟಾರೆ ನಾವು ಸಾಗುತ್ತಿರುವ ದಿಕ್ಕಿನ ಬಗ್ಗೆ ಯೋಚನೆಯಾಯಿತು. ವಾಸ್ತವತೆಯನ್ನು ಧಿಕ್ಕರಿಸುವ, ಅದೇ ವಾಸ್ತವತೆ ಬೇರೊಂದು ರೂಪದಲ್ಲಿ ಬಂದರೆ ಅಪ್ಪಿಕೊಳ್ಳುವ ಮನೋಧರ್ಮ ವಿಚಿತ್ರವಾಗಿದೆಯಲ್ಲ ಅನಿಸಿತು. ಫಾರ್ಮ್ ವಿಲ್ಲೆಯಂತಹ ಆಟವನ್ನು ಶೋಧಿಸಿರುವ ವ್ಯಕ್ತಿ, ಆಟದ ಜೊತೆಜೊತೆಗೇ ಕೃಷಿಕರಿಗೆ ನೆರವಾಗಬಲ್ಲವಂತಹುದನ್ನೇನಾದರೂ ಮಾಡಿದರೆ ಉತ್ತಮ ಅಲ್ಲವೆ? ಹಾಗೆಯೇ ಕೇವಲ ಫಾರ್ಮ್ ವಿಲ್ಲೆ ಆಡುವ ಗೆಳೆಯ-ಗೆಳತಿಯರು ಕೃಷಿ, ಕೃಷಿಕನ ಏಳಿಗೆಗಾಗಿ ವಾಸ್ತವ ನೆಲೆಗಟ್ಟಿನಲ್ಲಿ ಏನಾದರೂ ಯೋಚನೆ ಮಾಡಬಹುದಲ್ಲವೆ?

ಒಂಬತ್ತರ ಗಮ್ಮತ್ತು

Leave a comment

9

ಕನ್ನಡದ ಖ್ಯಾತ ಟಿವಿ ಚಾನಲ್ ಒಂದು ಹಲವಾರು ತಿಂಗಳುಗಳಿಂದ ಈ ಸ್ಕ್ರಾಲ್ ಬಿಡುತ್ತಿದೆ.

“ನಮ್ಮ ಚಾನೆಲ್ ಹೆಸರು ಹೇಳಿಕೊಂಡು ಯಾರಾದರೂ ನಿಮ್ಮ ಹತ್ತಿರ ಹಣ ಕೇಳಿದರೆ ಅಥವಾ ಬೆದರಿಸಿದರೆ 080———- ಈ ನಂಬರ್ ಗೆ ಕಾಲ್ ಮಾಡಿ ನಮಗೆ ತಿಳಿಸಿ”.

ಆ ಚಾನೆಲ್ ನ ಪತ್ರಕರ್ತರೇ ಜನರಿಂದ ನೇರಾನೇರ ಹಣಪಡೆದು ಕೆಲಸ ಬಿಟ್ಟು (ಅಥವಾ ಕೆಲಸ ಬಿಡಿಸಿ) ಹೋಗುತ್ತಿರುವಾಗ ಮೇಲಿನ ಹೇಳಿಕೆ ವಿಪರ್ಯಾಸವೆನಿಸುವುದಿಲ್ಲವೆ?

ಶಿಲೆಗಳು ಸಂಗೀತವಾ ಹಾಡಿವೆ…

Leave a comment

111ಚಿತ್ರ – ನಾನು.

ಸ್ಥಳ – ಐಹೊಳೆ

Electronic journalism is purely a …………

Leave a comment

ETV

Electronic journalism is purely a team work. The driver who takes us to the assignment, the maid who cleans the office dust and protects the computers from virus, I feel, contribute in their own way to our stories. In the team chain, coordination between reporter and cameraman is absolute necessary to carve a wonderful story. In my experience many a times I felt a pinch just because I didn’t bother to look upon the cameraman.

When I moved from print media to electronic few years ago, heading a group of four people (including driver and camera assistant) was little uncomfortable for me. I had to take into confidence all the three – the cameraman, the assistant and the driver to make story. And this was highly irritating experience as there used to be communication and ego problems between the three. When the camera assistant post was scrapped and they were made as junior cameramen, though some of my colleagues were uncomfortable, I was the happiest reporter for this management decision, as my problem was solved automatically to some extent.

But there was no change in the actual problem.

My relationship with the camera persons in the initial days included quite a lot bitter experiences. On one hand there was a sudden change of my profession to electronic pattern of journalism from print and on the other, the camera team was skeptical about me as I was a cub scribe. Both the things were hindrances to develop a good rapport with the camera unit. And without developing a smooth relationship with cameraman, it was practically difficult to evolve a good story. Half of my brain cells used to die, thinking of which cameraman I’m going to get today on field, how to communicate well if I get a cameraman who is not of my choice, what if I get “Mr. Ego Raja” (the nickname I gave to particular cameraman who was too egoistic or I thought him to be) and so on and so forth. All these problems were reflected in the stories I did.

But soon I realized that though the professional skills of the cameramen were different, one thing was common among them. And it was that almost all of them were ‘Good’ people. I had to just tune them according to my professional needs. For this I made some rules to be followed by myself and started behaving in accordance with the rules. (After all, I was dealing with human brains).

Rule No.1

Greet first, work next or Haalchaal poochhana……….

Whenever I saw a cameraman in the office campus, my reflex action was “Hi, how are you?” Before going for an assignment, I wished the cameraman and then boarded the vehicle. This was just an ice-breaking.

Rule No. 2

Brief about the assignment or Usko Bhi Batade…………..

I found in the due course that one of the major reasons that the cameramen were getting irritated and annoyed was that they were not being briefed by the reporter about the assignment. My first action after boarding the vehicle was to communicate in detail to cameraman about assignment, the shots he needs to take, the things he needs to be cautious etc. Some cameramen were even interested in having a glance at the press invitation card or letter. And this act of mine yielded positive results.

Rule No. 3

Never try to ride or Daadaagiri………………

Cameramen and reporters should be complimentary and not contradictory to each other. In number of cases I experienced that the negative egos of both cameramen and reporter lead to disputes. So, I decided o be polite and humble. I never tried to do bossing over the lens men and this proved to be a success. The things which never happened with command were fixed by request. Some of the cameramen who initially didn’t bend to Gaandhigiri, couldn’t continue with their attitude and soon became followers of Mahatma Gandhi!!

Rule No. 4

Communication or Chal, Bol De Yaar……………………..

Most of the problems between reporters and cameramen used to take place due to poor communication from both sides. Calling the name in singular, unintended or intended voice modulation, behavior and body language in the field – each was counted. To solve this problem I made some changes in my way of speaking. I never said, “Take that shot”. But said, “I need that shot.” There was lot of difference between both the sentences. Introducing my cameramen to the source, was one more gesture that made the cameramen to involve themselves in the story.

Rule No. -5

Duniya Jhukti Hai Lekin Jhukanevala Chahiye……………………….

“Sir, the light is a dull. Shooting is not possible”. “This pan is impossible.” “That tilt down is not permitted”. “The politician left before I could adjust my camera. So, I missed the visuals”. These were some of the common statements I used to receive from few cameramen, which drove me crazy. I used to feel that the cameraman is saying this purposefully just to cover his inability to shoot. In some of the cases my belief was to be true and in some it wasn’t. It was practically difficult for me to judge whether the cameramen are lying or not. To check this I had to willingly or unwillingly know the basics of camera. And knowing basic camera operations didn’t take much time. This helped not only to understand the situation of cameramen but also to make prior arrangements for shooting, taking bites and plan my story ideas accordingly. (I have seen incidents where reporters have taken PTCs under scorching sun at 12 noon when there was opportunity to take the same at 7 am).  I could also understand the limitations and advantages of the camera.

All these rules are neither great ‘IdEas’, nor difficult to follow. But they proved to be the best. Soon I became the blue eyed boy for camera section.  You may give a try to these Choti Batain……

ಸುಖಕರ್ತಾ ದುಖಹರ್ತಾ ವಾರ್ತಾ ವಿಘ್ನಾಚಿ….

Leave a comment

image002ಸುಖಕರ್ತಾ ದುಖಹರ್ತಾ ವಾರ್ತಾ ವಿಘ್ನಾಚಿ

ನುರವಿ ಪುರವಿ ಪ್ರೇಮ ಕೃಪಾ ಜಯಾಂಚಿ

ಸರ್ವಾಂಗಿ ಸುಂದರ ಉಟಿ ಶೇಂದೂರಾಚಿ

ಕಂಠಿ ಝಳಕೆ ಮಾಳ ಮುಕ್ತಾ ಫಳಾಂಚಿ

ಜಯದೇವ ಜಯದೇವ ಜಯಮಂಗಲ ಮೂರ್ತಿ

ದರ್ಶನ ಮಾತ್ರೆ ಮನ ಕಾಮನಾ ಪುರತಿ

ಜಯದೇವ ಜಯದೇವ

ತಾಮ್ರದ ಉದ್ಧರಣೆ, ತಟ್ಟೆ, ಲೋಟಕ್ಕೆ ಚಿಕನ್ ಪಾಕ್ಸ್

Leave a comment

kop

ದೇವರ ಮೂರ್ತಿಗಳನ್ನು ಹೊರತು ಪಡಿಸಿ ದೇವರ ಕೋಣೆಯಲ್ಲಿದ್ದ ಎಲ್ಲ ಸಾಮಾನುಗಳನ್ನು ಅಡಿಗೆ ಮನೆಯಲ್ಲಿನ ಸಿಂಕ್ ಹತ್ತಿರ ತಂದೆ. ಊದುಬತ್ತಿಯ ಸ್ಟಾಂಡ್ ಮೇಲೆ ಬೂದಿ ಉದುರಿ ಅದು ಮಾಸಿಹೋಗಿತ್ತು. ನಿಲಾಂಜನಕ್ಕೆ ಜಿಡ್ಡು ಹಿಡಿದಿತ್ತು. ಧೂಪವಿಡುವ ಬಿಲ್ಲೆಯನ್ನು ಡಿಸ್ಪೋಸ್ ಮಾಡಿದರೆನೇ ಚೆನ್ನ ಎನಿಸಿತು. ತಾಮ್ರದ ಉದ್ಧರಣೆ, ತಟ್ಟೆ, ಲೋಟಕ್ಕೆ ಚಿಕನ್ ಪಾಕ್ಸ್ ಆಗಿತ್ತು. ಅರಿಶಿನ-ಕುಂಕುಮ ಇಡುವ ಬೆಳ್ಳಿಯ ಬಟ್ಟಲುಗಳು ಬೆಳ್ಳಿಯವೇ ಎಂಬುದರ ಬಗ್ಗೆ ಸಂಶಯ ಬರುತ್ತಿತ್ತು. ಗಂಟೆ ಮಾತ್ರ ಫಳಫಳನೇ ಹೊಳೆಯುತ್ತ, ತನ್ನನ್ನು ಯಾರೂ ಬಳಸಿಯೇ ಇಲ್ಲ ಎಂದು ಸಾರಿ ಹೇಳುತ್ತಿತ್ತು.

ನಾಗಂದಿಗೆ ಮೇಲಿನ ಕೆಂಪು ಡಬ್ಬಿ ತೆಗೆದು, ಅದರಲ್ಲಿ ಉದ್ದ ಚಮಚ ಹಾಕಿ ಒಂದಷ್ಟು ಪೀತಾಂಬರಿಯನ್ನು ಸುರುವಿಕೊಂಡೆ. ನಾಳೆ ಏರ್ ಟೆಲ್ ಬಿಲ್ ತುಂಬಬೇಕು. ಮೊದಲು ಬೆಳ್ಳಿಯ ನಿಲಾಂಜನ ಕೈಗೆತ್ತಿಕೊಂಡೆ. ಅದರಲ್ಲಿದ್ದ ಬತ್ತಿಯ ಕಾಲು ಹಿಡಿದೆಳೆದು ಕಸದ ಬುಟ್ಟಿಗೆ ಬಿಸಾಕಿ, ನಿಲಾಂಜನವನ್ನು ನಳದ ಕೆಳಗೆ ಹಿಡಿದೆ. ಈ ಬಾರಿಯ ಹಾಯ್ ಬೆಂಗಳೂರಿನಲ್ಲಿಯಾದರೂ ನನ್ನ ಆರ್ಟಿಕಲ್ ಬರಲಿದೆಯೆ?. ಓ ಮನಸೇ ನೀರಸವಾಗುತ್ತಿದೆಯಲ್ಲ….  ಬಲಗೈ ಬೆರಳುಗಳಿಗೆ ಕೊಂಚವೇ ಪೀತಾಂಬರಿ ಮೆತ್ತಿಸಿ ನಿಲಾಂಜನಕ್ಕೆ ಬಳಿದೆ. ಎರಡೂ ಹೆಬ್ಬಟ್ಟುಗಳಿಂದ ಚೆನ್ನಾಗಿ ತಿಕ್ಕಿದೆ. ಪಕ್ಕಕ್ಕಿಟ್ಟೆ.

ತಾಮ್ರದ ಉದ್ಧರಣೆ, ತಟ್ಟೆ, ಲೋಟಕ್ಕೆ ಗಸಗಸಗಸನೆ ಪೀತಾಂಬರಿ ಉಜ್ಜಿದೆ. ಸುಮಾರು ಹೊತ್ತು ಉಜ್ಜುತ್ತಲೇ ಇದ್ದೆ. ಚಿಕನ್ ಪಾಕ್ಸ್ ಹೋಗಲಿಲ್ಲ. ಕಪಾಟಿನಲ್ಲಿದ್ದ ಹಳೆಯ ಟೂತ್ ಬ್ರಶ್ ತಂದೆ. ಪೀತಾಂಬರಿಯಲ್ಲಿ ಅದ್ದಿ ಉಜ್ಜಿದೆ. ರೋಗ ವಾಸಿಯಾಯಿತು. ಮೊನ್ನೆ ಮಟಮಟ ಮಧ್ಯಾಹ್ನ ಪ್ರಯಾಣಿಸುತ್ತಿರಬೇಕಾದರೆ ಸ್ಲೀಪರ್ ಬಸ್ಸಿನಲ್ಲಿ ಎಲ್ಲರೂ ನಿದ್ರಿಸುತ್ತಿದ್ದಾಗ ನಾನೂ ಅವಳು ಇಬ್ಬರೇ ಎಚ್ಚರವಾಗಿದ್ದೆವು. ವಿಪರೀತ ಎಸಿಯಿಂದಾಗಿ ಇಬ್ಬರಿಗೂ ನಿದ್ದೆ ಬರುತ್ತಿರಲಿಲ್ಲ. ಇಬ್ರೂ ಕ್ಯಾಬಿನ್ ಗೆ ಹೋಗಿ ಬೈಟು ಸಿಗರೇಟು ಸೇದಿದ್ದು ಎಷ್ಟು ಚೆನ್ನಾಗಿತ್ತಲ್ಲ. ತಾಮ್ರದ ವಹಿವಾಟೇ ಹಾಗೇ. ಎಷ್ಟು ತೋಳೆದರೂ ನಂತರ ಒರೆಸಿಯೇ ಇಡಬೇಕು. ಇಲ್ಲದಿದ್ದರೆ, ಮತ್ತೆ ಕಲೆ ಉಳಿದುಬಿಡುತ್ತದೆ. ಟರ್ಕಿಸ್ ಟಾವೇಲಿನಿಂದ ಚೆನ್ನಾಗಿ ಒರೆಸಿದೆ. ಫಳಫಳನೆ ಹೊಳೆಯುವಂತೆ ಮಾಡಿದೆ.

ಹಿತ್ತಾಳೆಯ ಊದುಬತ್ತಿ ಸ್ಟಾಂಡನ್ನು ಡಿಟ್ಯಾಚ್ ಮಾಡಿದೆ. ಸಾವಯವ ಕೃಷಿಗೆ ಉತ್ತೇಜನ ನೀಡಲು……. ಮತ್ತೆ ಬ್ರಷ್ಷನ್ನು ಪೀತಾಂಬರಿಯಲ್ಲಿ ಅದ್ದಿ ದಶದಿಕ್ಕುಗಳಿಂದಲೂ ತಿಕ್ಕಿದೆ. ಸ್ಟಾಂಡ್ ಮೇಲೆ ಮಾಡಿದ್ದ ಡಿಸೈನ್ ನಿಂದಾಗಿ ಸಂದಿಯಲ್ಲೆಲ್ಲ ಜಿಡ್ಡು ಮೆತ್ತಿಕೊಂಡಿತ್ತು. ಮತ್ತಷ್ಟು ಪೀತಾಂಬರಿ ಅಂಟಿಸಿದೆ. ಅವನು ಒಂದು ಕೋಟಿ ಮಾಡಿಕೊಂಡನಂತೆ. ನಾವು ಪ್ರೆಸ್ ಕಾನ್ಫರೆನ್ಸಿನಲ್ಲಿ ಪೆನ್ನು, ಪ್ಯಾಡು ತೆಗೆದುಕೊಂಡರೆ ಈ ಹಲ್ಕಟ್ ಮ್ಯಾನೇಜ್ ಮೆಂಟಿಗೆ ಎಕ್ಸಪ್ಲನೇಶನ್ ಕೊಡಬೇಕು. ಸರಿಹೋಯಿತು. ಜಿಡ್ಡು ಎಲ್ಲ ಹೋಗಿ ಸರಿಹೋಯಿತು. ಸ್ಟಾಂಡ್ ಕೂಡ ಮೊದಲಿನಂತಾಯಿತು.

ಅಷ್ಟರಲ್ಲಿ ಪೀತಾಂಬರಿ ಮುಗಿಯಿತು. ಮತ್ತಷ್ಟು ಪೀತಾಂಬರಿ ಸುರಿದುಕೊಂಡೆ. ಅರಿಶಿನ-ಕುಂಕುಮದ ಬೆಳ್ಳಿಯ ಬಟ್ಟಲುಗಳು ತೇಜ ಕಳೆದುಕೊಂಡಿದ್ದವು. ಮೊದಲು ಸೋಪಿನಿಂದ ತೊಳೆದೆ. ಅದಗ್ವಾಡಿ ಅದ ಸೂರು ದಿನವೆಲ್ಲ ಬೇಜಾರು ಹಾಡು ಚೆನ್ನಾಗಿದೆ. ಶಂಕರ್ ನಾಗ್ ವಾಯ್ಸ್ ಸೂಪರ್. ಅಟಲ್ ಬಿಹಾರಿ ವಾಜಪೇಯಿ ವಯಸ್ಸೇಷ್ಟು ಈಗ? ನಂತರ ಮತ್ತೆ ಗಸಗಸನೆ ಪೀತಾಂಬರಿ ತಿಕ್ಕಿ ಬಟ್ಟಲುಗಳು ಬೆಳ್ಳಿಯವೇ ಎಂಬ ಕುರಿತಾದ ಸಂಶಯವನ್ನು ದೂರ ಮಾಡಿದೆ.

ಧೂಪವಿಡುವ ಬಿಲ್ಲೆಯನ್ನು ಕಸದ ಬುಟ್ಟಿಗೆ ಎಸೆದೆ. ಗಂಟೆಯನ್ನು ಕೇವಲ ಒರೆಸಿದೆ.

ಪೂಜೆಯ ಎಲ್ಲ ತಯಾರಿ ಆಗಿತ್ತು. ಎಲ್ಲ ಸಾಮಾನುಗಳನ್ನು ತೆಗೆದುಕೊಂಡು ದೇವರ ಕೋಣೆ ಪ್ರವೇಶಿಸಿದೆ. ದೇವರ ಮೂರ್ತಿಗೆ ಅಲಂಕಾರ ಮಾಡಿದೆ. ದೀಪ ಬೆಳಗಿದೆ. ಊದುಬತ್ತಿ, ಧೂಪ ಹಚ್ಚಿದೆ. ಮಂತ್ರ ಹೇಳಿದೆ. ನೈವೇದ್ಯ ತೋರಿಸಿದೆ. ದೇವರಿಗೆ ಬಾಗಿ ನಮಸ್ಕರಿಸಿದೆ. ತಲೆಯೆತ್ತಿ ನೋಡಿದೆ. ದೇವರು ಕಾಣಿಸಲಿಲ್ಲ.

ಗಣಪತಿ ಬಪ್ಪಾ ಮೋರಯಾ…

Leave a comment

image006

ಪಾರಿವಾಳಗಳಲ್ಲಿದ್ದುದ್ದು ಪತ್ರಕರ್ತರಲ್ಲಿಲ್ಲ…….

1 Comment

ddddಫೋಟೊ ಕೃಪೆ – ದಿ ಹಿಂದೂ

ವಿವಾದಿತ ಧರ್ಮಪ್ರಚಾರಕ ಬೆನ್ನಿಹಿನ್ ಬೆಂಗಳೂರಿಗೆ ಬಂದ ಸಂದರ್ಭ. ಹಿಂದೂ ಸಂಘಟನೆಗಳು, ಪವಾಡ ಬಯಲು ಗುಂಪಿನವರು, ವಿಚಾರವಾದಿಗಳು ಸೇರಿದಂತೆ ಹತ್ತು ಹಲವು ಸಂಸ್ಥೆಗಳ ವಿರೋಧದ ನಡುವೆಯೂ ಅಲ್ಟ್ರಾ ಸೋಫಿಸ್ಟಿಕೇಟೆಡ್, ಅಲ್ಟ್ರಾ ಮಾಡರ್ನ್  ಸಿಲಿಕಾನ್ ಸಿಟಿಯಲ್ಲಿ ಬೆನ್ನಿಹಿನ್ ಕೇವಲ ಜೀಸಸ್ ನಲ್ಲಿ ಪ್ರಾರ್ಥನೆ ಮಾಡುವ ಮೂಲಕ ಕ್ಯಾನ್ಸರ್ ಗುಣಪಡಿಸುತ್ತಿದ್ದ, ಅಂಗವಿಕಲರ ಕೈಕಾಲುಗಳನ್ನು ಸರಿಪಡಿಸುತ್ತಿದ್ದ, ತೆವಳುತ್ತ ಬಂದವರು ಕುಪ್ಪಳಿಸುತ್ತ ಹೋಗುತ್ತಿದ್ದರು. ಹೀಗೆಲ್ಲ ಹುಚ್ಚಾಟ ನಡೆದಿತ್ತು. ಮಾಧ್ಯಮಗಳಂತೂ ಆತನನ್ನು ಹಿಗ್ಗಾಮುಗ್ಗಾ ಝಾಡಿಸುತ್ತಿದ್ದವು.

ಅಂದು ಮೂರು ದಿನಗಳ ಪ್ರೇ ಫಾರ್ ಇಂಡಿಯಾ ಸಮಾವೇಶದ ಕೊನೆ ದಿನ. ಭಾರೀ ಜನಸ್ತೋಮ. ಸಮಾವೇಶ ಮುಗಿದ ತಕ್ಷಣ ಬೆನ್ನಿಹಿನ್ ತನ್ನ ವಿಶೇಷ ಚಾರ್ಟರ್ಡ್ ಫ್ಲೈಟ್ ನಲ್ಲಿ ಬೌನ್ಸರ್ ಗಳ ಸಹಿತ ವಿಮಾನವೇರುವವನಿದ್ದ. ಆದರೆ ಪತ್ರಕರ್ತರು ತೀರ ಒತ್ತಡ ಹೇರಿದ್ದರಿಂದ ಸುದ್ದಿಗೋಷ್ಟಿ ನಡೆಸಲು ಒಪ್ಪಿಕೊಂಡ. ನಾವೆಲ್ಲ ಒಂದೆಡೆ ಸೇರಿ ಜನರ ಮದ್ಯೆ ನುಜ್ಜುಗೊಜ್ಜಾಗಿ (ನುಜ್ಜುಗುಜ್ಜಾಗಿಯಲ್ಲ) ಅಂತೂ ಸ್ಟೇಜ್ ಹಿಂಭಾಗದಲ್ಲಿ ಆತನಿಗೆಂದು ನಿರ್ಮಿಸಲಾಗಿದ್ದ ತಾತ್ಕಾಲಿಕ ರೂಮ್ ನ ಎದುರು ಕಾಯುತ್ತ ನಿಂತೆವು. ಸುಮಾರು ಒಂದು ಗಂಟೆ ಕಾಯಿಸಿದ ಬಳಿಕ ಪ್ರೇ ಫಾರ್ ಇಂಡಿಯಾದ ಪ್ರತಿನಿಧಿಯೊಬ್ಬ ಬಂದು, “Now I will read out the names of the media. Those can come inside” ಎಂದ. ತಕ್ಷಣ ನಮ್ಮ ಗುಂಪಿನಲ್ಲಿ ಅಸಹನೆಯುಂಟಾಯಿತು. ಇದೆಂತಹ ಪತ್ರಿಕಾಗೋಷ್ಟಿ. ಸಮಾವೇಶಕ್ಕೆ ಬರುವಾಗಲೇ 28 ಬಾರಿ ಸೆಕ್ಯುರಿಟಿ ಚೆಕ್ ಗೆ ಒಳಗಾಗಿ ಬಂದಿದ್ದೇವೆ. ಇದೇನಿದು ಹೊಸ ಆಟ ಎಂದೆಲ್ಲ ಕೇಳಿದೆವು. ತಮಗೆ ಬೇಕಾದ ಮಾಧ್ಯಮಗಳನ್ನಷ್ಟೇ ಒಳಗೆ ಕರೆಯುವುದು ಇದರ ಉದ್ದೇಶ ಎಂದು ತಕ್ಷಣ ಅರ್ಥವಾಯಿತು. ಮೊದಮೊದಲು ಎಲ್ಲರೂ ಇದರ ವಿರುದ್ಧ ಪ್ರತಿಭಟಿಸಿದೆವು. ತಮ್ಮ ಮಾಧ್ಯಮದ ಹೆಸರು ಲಿಸ್ಟ್ ನಲ್ಲಿ ಇರದಿದ್ದರೆ ಎಂಬ ಆತಂಕ ಪ್ರತಿಯೊಬ್ಬರಲ್ಲೂ ಇತ್ತಲ್ಲ. ಆದರೆ ಪ್ರತಿಭಟನೆ ಲೆಕ್ಕಿಸದೆ ಆ ಪ್ರತಿನಿಧಿ ಹೆಸರು ಕೂಗಿದ. Times of India….ಸರಿ ಟೈಮ್ಸ್ ಆಫ್ ಇಂಡಿಯಾ ಹುಡುಗಿ “ಓ ಐಮ್ ರೈಟ್ ದೇರ್” ಎಂದು ನುಲಿಯುತ್ತ ಪತ್ರಕರ್ತರ ಹಿಂಡನ್ನು ಬಿಟ್ಟು ಒಳ ಹೋಗಿಬಿಟ್ಟಳು. ಡೆಕ್ಕನ್ ಹೆರಾಲ್ಡ್….. ಮತ್ತೆ ಕೂಗಲಾಯಿತು. “ಯಾ ಯಾ ಐ ಆಮ್ ಹಿಯರ್” ಎಂದು ಗಂಭೀರ ತಲೆಯೊಂದು ಮತ್ತೆ ಒಳನುಗ್ಗಿತು. ಪ್ರತಿಭಟನೆ ಮಾಡುತ್ತಿದ್ದ ಪತ್ರಕರ್ತರು ಒಬ್ಬೊಬ್ಬರಾಗಿ ತಂಡ ಬಿಟ್ಟು ತಮ್ಮ ಹೆಸರು ಬಂದಂತೆಲ್ಲ ಒಳಹೋಗಿಬಿಟ್ಟರು. ಇದು ಅನ್ಯಾಯ, ಇದು ಸರಿಯಲ್ಲ, ಪಿಕ್ ಅಂಡ್ ಚೂಸ್ ಯಾಕೆ, ಎಲ್ಲರನ್ನೂ ಒಳಗೆ ಕರೆಯಬೇಕು, ಇಲ್ಲದಿದ್ದರೆ ಪತ್ರಿಕಾಗೋಷ್ಷಿಯೇ ಬೇಡ ಎಂದೆಲ್ಲಾ ಹಾರಾಡಿದ್ದವರು ಕೋಲೆ ಬಸವನಂತೆ ಬೆನ್ನಿಹಿನ್ ರೂಮೊಳಗೆ ಹೊರಟುಬಿಟ್ಟಿದ್ದರು.

ಕೊನೆಗೆ ಉಳಿದಿದ್ದು ಕೇವಲ ಇಬ್ಬರು. ಈ ಟಿವಿಯಿಂದ ನಾನು ಹಾಗೂ ಉದಯ ಟಿವಿಯಿಂದ ಮತ್ತೊಬ್ಬ ಪತ್ರಕರ್ತ. ನಮ್ಮನ್ನು ಹೊರಗಿಟ್ಟಿರುವ ಕಾರಣ ಸ್ಪಷ್ಟವಾಗಿ ಹೊಳೆಯಿತು. ಕ್ರೈಮ್ ಡೈರಿ ಹಾಗೂ ಕ್ರೈಮ್ ಸ್ಟೋರಿಗಳಲ್ಲಿ ಬೆನ್ನಿಹಿನ್ನನ್ನು ಹಿಗ್ಗಾಮುಗ್ಗಾ ಝಾಡಿಸಲಾಗುತ್ತಿತ್ತು. ಆತ ಬರುವ ಮೊದಲು ಹಲವು ಕ್ರಿಶ್ಚಿಯನ್ ಮುಖಂಡರ ಬೈಟ್ ತೆಗೆದುಕೊಂಡಿದ್ದೆನಾದ್ದರಿಂದ ಅವೆಲ್ಲವನ್ನೂ ಕ್ರೈಮ್ ಡೈರಿಯಲ್ಲಿ ತೋರಿಸಿ, ಮಂಗಳಾರತಿ ಎತ್ತಲಾಗುತ್ತಿತ್ತು. ಇನ್ನು ಬೆನ್ನಿಹಿನ್ ಬೈಟ್ ಸಿಕ್ಕಿಬಿಟ್ಟರೆ ಮತ್ತಷ್ಟು ಹಿಂಡುತ್ತಾರೆ ಎಂದು ಭಾವಿಸಿದ ಸಂಘಟಕರು ನಮ್ಮನ್ನು ಒಳಬಿಟ್ಟಿರಲಿಲ್ಲ.

ಆಗ ಶುರುಹಚ್ಚಿಕೊಂಡೆ ನೋಡಿ. ಕರಿ ಐದರಲ್ಲಿ ದನಿ ಎತ್ತರಿಸಿ You people are cheat. You are coming in between press freedom. How can you do this? Is this the way you handle press? If you are really true, what is stopping you from allowing us? Jesus won’t forgive you for doing this….” ಎಂದೆಲ್ಲ ಕೂಗಾಡಿಬಿಟ್ಟೆ. ಬಹುಶಃ ನನ್ನ ಕೊನೆಯ ವಾಕ್ಯ ಕೆಲಸ ಮಾಡಿತು ಎನಿಸುತ್ತದೆ. ಅಮೇರಿಕನ್ ಮೂತಿಯೊಂದು ಬಂದು “Hey my friend….It was just a matter of space you know. Actually there is no enough space inside the room. That’s why we decided to bring in few press people. I will make space for you. Come Friend Come” ಎಂದು ಒಳಗೆ ಕರೆದುಕೊಂಡು ಹೋಯಿತು. ನಂತರ ಪತ್ರಿಕಾಗೋಷ್ಟಿ ನಡೆದು, ಬೆನ್ನಿಹಿನ್ನು ನನ್ನ ತಲೆ ಮೇಲೆ ಕೈಯಿಟ್ಟು ಆಶೀರ್ವದಿಸಿದ ಎಂಬುದು ಬೇರೆ ವಿಷಯ.

ಆದರೆ ಪತ್ರಕರ್ತರು ಮಾತ್ರ ಒಟ್ಟಾಗಿ ನಿಲ್ಲುವುದಿಲ್ಲವಲ್ಲ ಎಂಬ ವಿಷಯ ಮಾತ್ರ ನನ್ನನ್ನು ತುಂಬ ಡಿಸ್ಟರ್ಬ್ ಮಾಡಿತು. ತಾವು ಸೇಫಾಗಿದ್ದರೆ ಸಾಕು, ಉಳಿದವರು ಹಾಳು ಬಿದ್ದು ಹೋಗಲಿ ಎಂಬ ಭಾವ ಇನ್ನೂ ಇದೆ. ಪಾರಿವಾಳಗಳಲ್ಲಿದ್ದುದ್ದು ಪತ್ರಕರ್ತರಲ್ಲಿಲ್ಲವಲ್ಲ, ದುರಾದೃಷ್ಟ..

ಪ್ರಕೃತಿ, ಕೃತಿ, ಸಂಸ್ಕೃತಿ, ವಿಕೃತಿ.

1 Comment

123

ಅವಳು ಆ ಕಡೆಯಿಂದ ನಡೆದುಕೊಂಡು ಬಂದಳು. ಅವನು ಈ ಕಡೆಯಿಂದ ನಡೆಯುತ್ತ ಬಂದ. ಇಬ್ಬರೂ ಪರಸ್ಪರ ನಡೆದುಕೊಂಡು ಹತ್ತಿರ ಬಂದರು. ಇದು

ಪ್ರಕೃತಿ.

ತೀರ ಹತ್ತಿರ ಬಂದರು. ಒಬ್ಬರನ್ನೊಬ್ಬರು ನೋಡಿದರು. ಅವಳ ಕಣ್ಣುಗಳು ಅವನನ್ನೂ, ಅವನ ಕಣ್ಣುಗಳೂ ಅವಳನ್ನೂ ನೋಡಿ ನಾಚಿಕೊಂಡವು. ಇದು

ಕೃತಿ.

ಹಾಗೆ ನಾಚಿಕೊಂಡ ತಕ್ಷಣ ಇಬ್ಬರೂ ತಮ್ಮಪಾಡಿಗೆ ತಾವು ಹಾದು ಹೋಗಿಬಿಟ್ಟರು. ಇದು

ಸಂಸ್ಕೃತಿ.

ಆದರೆ ಒಂದೇ ಸೆಕೆಂಡ್, ಯಾರೋ ಒಬ್ಬರ ಮನದಲ್ಲಿ ಮತ್ತೊಮ್ಮೆ ನೋಡಬೇಕು ಎನಿಸಿತು. ಯಾರೋ ಒಬ್ಬರು ತಲೆ ತಿರುಗಿಸಿ ಹಿಂದೆ ನೋಡಿದರು. ಇದು

ವಿಕೃತಿ.

(ಕೇಳಿದ್ದು)

ಜನತಾ ದರ್ಶನ

3 Comments

Picture 133

ರಸ್ತೆಯಲ್ಲಿ, ಅಂಗಡಿಗಳಲ್ಲಿ, ಹೋಟೆಲ್ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ನನ್ನನ್ನು ದುರುಗುಟ್ಟಿಕೊಂಡು ನೋಡಿ ಹೋಗುವುದು ಸಾಮಾನ್ಯ. ಪತ್ರಕರ್ತನಾಗಿ ಐದು ವರ್ಷದಲ್ಲಿ ಪಿಟಿಸಿಗಳನ್ನು ನೀಡಿ ಎಷ್ಟು ಜನರಿಗೆ ನನ್ನ ಮುಖ ಪರಿಚಯವಾಗಿದೆಯೋ ಗೊತ್ತಿಲ್ಲ. ಆದರೆ ಮುಕ್ತ ಮುಕ್ತ ದಲ್ಲಿ ಆಕ್ಟಿಂಗ್ ಶುರುವಾದ ಮೇಲಂತೂ ಈ ದುರುಗುಟ್ಟುವಿಕೆ ಸಾಮಾನ್ಯವಾಗಿದೆ. ಇಂತಹ ಜನರಲ್ಲಿ ಎರಡು ವಿಧ. ಒಬ್ಬರು ಕೇವಲ ದುರುಗುಟ್ಟಿಕೊಂಡು ನೋಡಿ ತಮ್ಮ ಪಾಡಿಗೆ ತಾವು ಹೋಗಿಬಿಡುವವರು. ಮತ್ತೊಂದು ಕೆಟೆಗರಿಯ ಜನ, ಫಕ್ಕನೆ ನನ್ನನ್ನು ನಿಲ್ಲಿಸಿ “ಸಾರ್ ನೀವು ಸೀರಿಯಲ್ ನಲ್ಲಿ ಮಾಡ್ತೀರಲ್ಲವಾ?” ಅಥವಾ “ನೀವು ಮುಕ್ತ ಮುಕ್ತದಲ್ಲಿ ಆಕ್ಟ್ ಮಾಡ್ತೀರಲ್ಲವಾ?” ಎಂದು ಆರಂಭಿಸಿ, ಮುಂದಿನ ಕಥೆ ಹೇಳಿ ಎಂದು ಪೀಡಿಸುವವರು. ಈ ಥರದ ಜನ, ಯಾವುದೋ ಪಾತ್ರಕ್ಕೆ ಅನ್ಯಾಯವಾಗುತ್ತಿದೆ ಹಾಗಾಗಬಾರದು, ನೋಡಿಕೊಳ್ಳಿ ಎಂದು ಹುಕುಂ ಜಾರಿ ಮಾಡುತ್ತಾರೆ. ತಮ್ಮ ಪ್ರಕಾರ ಶಾಂಭವಿಗೆ ಮದುವೆಯಾಗಬೇಕು, ಶಂಕರಮೂರ್ತಿಗೆ ಯಾರಾದರೂ ಬಾರಿಸಬೇಕು, ಆನಂದರಾಜ್ ನಂದೀಪುರ್ ಬೈ ಇಲೆಕ್ಷನ್ ನಲ್ಲಿ ಗೆಲ್ಲಬೇಕು, ಮಧುಗೆ ಕಲ್ಯಾಣಿಗಿಂತ ವೈಜಯಂತಿಯೇ ಹೆಚ್ಚು ಸೂಟೆಬಲ್ ಇತ್ಯಾದಿ ಇತ್ಯಾದಿ ಪುಕ್ಕಟೆ ಸಲಹೆ ನೀಡುತ್ತಾರೆ. ನಾನು ಹ್ಹೆ ಹ್ಹೆ ಹ್ಹೆ ಎಂದು ತಲೆಯಲ್ಲಾಡಿಸಿ ಆದಷ್ಟು ಬೇಗ ಅಲ್ಲಿಂದ ಎಸ್ಕೇಪ್ ಆಗುತ್ತೇನೆ. ಮೊದಮೊದಲು ಈ ಅನುಭವಗಳು ವಿಶೇಷ ಎನಿಸುತ್ತಿದ್ದವು. ಇದು ಹೆಚ್ಚಾದಂತೆಲ್ಲ ನನ್ನಲ್ಲಿ ಕೊಂಚ ಮಟ್ಟಿಗಿನ ಅಹಂಕಾರವೂ ಬೆಳೆಯಿತೆನ್ನಿ...ಆದರೆ ಇತ್ತೀಚೆಗೆ ಬೆರೆಯದೇ ಅನುಭವವಾಯಿತು.

ಯಾವುದೋ ಕಾರಣಕ್ಕೆ ಆಸ್ಪತ್ರೆಗೆ ಹೋಗಿದ್ದೆ. ಡಾಕ್ಟರ್ ದಾರಿ ಕಾಯುತ್ತ ಅಲ್ಲೇ ಇದ್ದ ಚೇರಿನಲ್ಲಿ ಕುಳಿತುಕೊಂಡೆ. ನನ್ನ ಪಕ್ಕದಲ್ಲಿದ್ದ ವ್ಯಕ್ತಿ ರಾಗ ಎಳೆಯಿತು. “ಸಾರ್, ನೀವು ಸೀರಿಯಲ್ ನಲ್ಲಿ ಆಕ್ಟ್ ಮಾಡ್ತೀರಲ್ಲವಾ…”

“ಹೌದು” ಎಂದೆ.

ವ್ಯಕ್ತಿ ಸುಮ್ಮನಾಯಿತು. 10 ನಿಮಿಷ ಕಳೆದಿರಬೇಕು “ಸಾರ್, ನಿಮ್ಮ ಊರು ಯಾವುದು” ಎಂದಿತು.

“ಕೊಪ್ಪ” ಎಂದೆ.

ವ್ಯಕ್ತಿ ಸುಮ್ಮನಾಯಿತು.

ನಾನು, “ನಿಮ್ಮ ಊರು ಯಾವುದು” ಎಂದು ಪ್ರಶ್ನಿಸಿದೆ.

“ಬೆಂಗಳೂರೇ” ಎಂದು ಉತ್ತರಿಸಿ ಮತ್ತೆ ಸುಮ್ಮನಾಯಿತು.

“ಏನು ಮಾಡಿಕೊಂಡಿದ್ದೀರಿ?” ಕೇಳಿದೆ.

“ಬಿಸಿನೆಸ್” ಉತ್ತರಿಸಿ ಮತ್ತೆ ಸುಮ್ಮನಾಯಿತು.

ಈ ಬೆಂಗಳೂರಿಗರಿಗೆ ಸ್ಪಲ್ಪ ಕೊಬ್ಬು. ತೀರ ಲೆವೆಲ್ ಮೆಂಟೇನ್ ಮಾಡುತ್ತಾರೆ. ಕಲಾವಿದನೊಬ್ಬ ಪಕ್ಕದಲ್ಲಿ ಬಂದು ಕುಳಿತುಕೊಂಡಿದ್ದರೂ ಸೀರಿಯಲ್ ಬಗ್ಗೆಯಾಗಲಿ, ನನ್ನ ಬಗ್ಗೆಯಾಗಲಿ ಕೇಳುತ್ತಲೇ ಇಲ್ಲವಲ್ಲ ಎಂದು ಅನಿಸಿತು. ಇದಲ್ಲದೆ ನಾನೇ ಮುಂದಾಗಿ ಮಾತನಾಡಿಸುತ್ತಿದ್ದರೂ ಚುಟುಕಾಗಿ ಮಾತನಾಡಿ, ಭಾರೀ ಸ್ಮಾರ್ಟ್ ಆಗಿ ವರ್ತಿಸುತ್ತಿದ್ದಾನೆ, ಸರಿಯಾಗಿ ಮಾತನಾಡಲು ಈ ಮನುಷ್ಯನಿಗೇನು ಧಾಡಿ ಎಂದುಕೊಂಡೆ. ಬೆಂಗಳೂರಿನಂತಹ ಊರಿನಲ್ಲಿ ಹಾದಿಗೊಬ್ಬರು ಬೀದಿಗಿಬ್ಬರು ಟಿವಿ ಕಲಾವಿದರು, ಫಿಲ್ಮ್ ಹಿರೋಗಳು ತಿರುಗಾಡುವುದರಿಂದ ಇಲ್ಲಿನ ಜನರಿಗೆ ಕ್ರೇಜ್ ಸ್ವಲ್ಪ ಕಡಿಮೆಯೇ. ಹಿತ್ತಲ ಗಿಡ ಮದ್ದಲ್ಲವಲ್ಲ. ಅದೂ ಅಲ್ಲದೆ ಬೆಂಗಳೂರಿಗರು ಸೋ ಕಾಲ್ಡ್ ಸೋಫಿಸ್ಟಿಕೇಟೆಡ್ ಜನ. ತಾವೇ ಮುಂದಾಗಿ ಮಾತನಾಡಿಸಿದರೆ ಮರ್ಯಾದೆಗೆ ಕಮ್ಮಿ ಎಂದು ಭಾವಿಸುವವರು. ಈ ವ್ಯಕ್ತಿ ಕೂಡ ಹಾಗೆಯೇ ಹೆಡ್ ವೇಟ್ ನ ವ್ಯಕ್ತಿಯಾಗಿರಬಹುದು ಎಂದೆಲ್ಲ ಯೋಚಿಸತೊಡಗಿದೆ.

ಇತ್ತೀಚೆಗೆ ಬಾಗಲಕೋಟೆಗೆಂದು ಸಂವಾದಕ್ಕೆ ಹೋದಾಗ, ಜನ ನಮ್ಮನ್ನು ಗುರುತಿಸಿದ್ದ ಪರಿ ನೋಡಿ ಬೆಂಗಳೂರಿಗರು ತೀರ ಸಪ್ಪೆ ಎಂದೆನಿಸಿತ್ತು.

ನಾನು ಸುಮ್ಮನಾಗೋಣ ಎಂದುಕೊಂಡರೂ, ನನ್ನಲ್ಲಿದ್ದ ಪತ್ರಕರ್ತ ಸುಮ್ಮನಿರಬೇಕಲ್ಲ. ಮತ್ತೆ ಪಟ್ಟು ಬಿಡದೆ, ವ್ಯಕ್ತಿಯ ಜೊತೆ ಮಾತಿಗಾರಂಭಿಸಿದೆ.

“ಮುಕ್ತ ಮುಕ್ತ ಹೇಗೆನ್ನಿಸುತ್ತಿದೆ?”.

“ಚೆನ್ನಾಗಿ ಬರ್ತಿದೆ ಸಾರ್..” ವ್ಯಕ್ತಿ ಸುಮ್ಮಗಾಯಿತು.

“ನಿಮಗೆ ಯಾವ ಪಾತ್ರ ಇಷ್ಟ?” ಮತ್ತೆ ಪ್ರಶ್ನಿಸಿದೆ.

“ಸಾರ್ ತಪ್ಪು ತಿಳಿಯಬೇಡಿ. ಈಗ ಅರ್ಧ ಗಂಟೆಯ ಮೊದಲಷ್ಟೇ ಹಲ್ಲು ತೆಗೆಸಿಕೊಂಡಿದ್ದೇನೆ. ಹೀಗಾಗಿ ಹೆಚ್ಚು ಮಾತನಾಡಲು ಆಗುತ್ತಿಲ್ಲ” ಎಂದು ಉತ್ತರಿಸಿ ವ್ಯಕ್ತಿ ಸುಮ್ಮನಾಯಿತು.

—————————————————————————————

ಹಾಯ್ ಡೂಡ್…..

1 Comment

145ಬಾದಾಮಿಯ ವ್ಹಾ ನರರು

ಟೇಕನ್ ಫಾರ್ ಗ್ರಾಂಟೇಡ್

Leave a comment

111

ಲಂಬೋದರ ಸಹೋದ್ಯೋಗಿಗಳೊಂದಿಗೆ ಉತ್ತರ ಕರ್ನಾಟಕದ ಟೂರ್ ಗೆ ಹೋಗಿದ್ದ. ಬೆಳಗಾವ್ ಕುಂದಾ, ಧಾರವಾಡ ಪೇಡಾ, ಗೋಕಾರ್ ಕರದಂಟು ಹೀಗೆ ಹೋದ ಕಡೆಯಲ್ಲೆಲ್ಲ ಏನಾದರೊಂದು ಖರೀದಿಸುತ್ತಿದ್ದ. ಇಳಕಲ್ ಗೆ ಬಂದಾಗ ಅಲ್ಲಿಯ ಸೀರೆ ಫೇಮಸ್ ಎಂದು ಗೊತ್ತಾಯಿತು. ಹೆಂಡತಿಗೆ ಸೀರೆ ಖರೀದಿಸೋಣ ಎಂದುಕೊಂಡ ಲಂಬೋದರ, ಆದರೆ ತನ್ನ ಹೆಂಡತಿ ಸೀರೆ ಉಡುವುದನ್ನು ಬಿಟ್ಟು ವರ್ಷಗಳೇ ಕಳೆದಿವೆ. ಸೀರೆ ಎಂದರೆ ಆಕೆಗೆ ಅಷ್ಟಕಷ್ಟೇ ಎಂಬ ಸತ್ಯ ಹೊಳೆದು ಸೀರೆ ಕೊಳ್ಳಲಿಲ್ಲ.

ಟೂರ್ ಮುಗಿಸಿ ಮನೆಗೆ ಬಂದವನೇ ತಾನು ಕೊಂಡು ತಂದ ಸಾಮಾನುಗಳನ್ನೆಲ್ಲ ಮನೆಯವರೆದುರು ಪ್ರದರ್ಶಿಸಿದ.

“ಬೇಡ ಬೇಡ ಅಂತ ಹೇಳಿದ್ರೂ ಯಾಕೆ ಇಷ್ಟೆಲ್ಲಾ ಸಾಮಾನು ತರಕ್ಕೊದ್ರಿ….” ಅಂತ ಮಿಸೆಸ್ ಲಂಬೋದರ ಸಿಡಿಮಿಡಿಗೊಂಡಳು.

ಆಗಷ್ಟೇ ದೇವಸ್ಥಾನದಿಂದ ಮರಳಿದ ಲಂಬೋದರನ ತಾಯಿ, “ಲಂಬೋದರ, ಇಳಕಲ್ ಸೀರೆ ತರಲು ಹೇಳಿದ್ದನೆಲ್ಲ….. ತಂದಿದ್ದೀಯಾ?” ಎಂದು ಕೇಳಿದಳು.

ಯಾವುದು ಸರಿ, ಯಾವುದು ತಪ್ಪು?

1 Comment

156

ಒಂದು ಪತ್ರ…

2 Comments

85

ಆತ್ಮೀಯರೆ,

ಅಗಸ್ಟ್ 16, ಭಾನುವಾರ ಬಾಗಲಕೋಟೆಯ ನವನಗರದಲ್ಲಿ ಮುಕ್ತ ಮುಕ್ತ ಸಂವಾದ ನಡೆಯಲಿದೆ. ಅದಕ್ಕಾಗಿ ಪ್ರಯಾಣ ಬೆಳಸುತ್ತಿದ್ದೇನೆ.

ನಿಮ್ಮವನೇ

ಸುಘೋಷ್ ಎಸ್. ನಿಗಳೆ.

ಟಿವಿ ಕ್ಯಾಮೆರಾ ಅಂದ್ರೆ ಹೆಣಾನೂ ಬಾಯ್ಬಿಟ್ಟಿತ್ತಂತೆ….

Leave a comment

su

ನೈಟ್ ಶಿಫ್ಟ್ ಇತ್ತು. ಸಾಮಾನ್ಯವಾಗಿ ನೈಟ್ ಶಿಫ್ಟ್ ನಲ್ಲಿ ಸ್ಟೋರಿಗಿಂತ ಹೆಚ್ಚಾಗಿ, ಆಫೀಸಿನಲ್ಲಿ ಸೊಳ್ಳೆ ಬರದಂತೆ ಟಾರ್ಟೈಸ್, ಓಡೋಮಾಸ್ ಇದೆಯೆ, ಕಪಾಟಿನಲ್ಲಿ ಶಾಲು ಇದೆಯೆ, ಯಾವ ಯಾವ ಚೇರ್ ಗಳನ್ನು ಎಳೆದು ಹಾಸಿಗೆಯಂತೆ ಮಾಡಿ ನಿದ್ದೆ ಮಾಡಬಹುದುದು ಎಂಬುದರತ್ತವೇ ಹೆಚ್ಚು ಗಮನವಿರುತ್ತದೆ. ಹೆಚ್ಚೆಂದರೆ ಅಗ್ನಿ ಆಕಸ್ಮಿಕ, ಅಥವಾ ಮರ್ಡರ್ ಇದ್ದರೆ, ಹೋಗಿ ಕವರ್ ಮಾಡಿ, ಆಫೀಸಿಗೆ ಬಂದು ಫೀಡ್ ಮತ್ತು ಸ್ಕ್ರಿಪ್ಟ್ ಕಳಿಸಿ ಮತ್ತೆ ನಿದ್ರಾದೇವಿಯನ್ನು ಅಪ್ಪಿಕೊಳ್ಳುವುದು ಎಲ್ಲ ಎಲೆಕ್ಟ್ರಾನಿಕ್ ಮೀಡಿಯಾಗಳಲ್ಲಿ ಅಚಾನೂಕವಾಗಿ ಪಾಲಿಸಿಕೊಂಡು ಬರುತ್ತಿರುವ ಪದ್ಧತಿ.

ಆದರೆ ಸ್ಟೋರಿ ಏನಾದರೂ ಸಿಗುತ್ತದಯೋ ನೋಡೋಣ ಎಂದು ಸುಮಾರು ಒಂದು ಗಂಟೆಯ ಹೊತ್ತಿಗೆ ನಿದ್ದೆಯ ಮಂಪರಿನಲ್ಲಿದ್ದ ಡ್ರೈವರ್ ಹಾಗೂ ಕ್ಯಾಮಾರಾ ಮೆನ್ ಇಟ್ಟುಕೊಂಡು ರೌಂಡ್ಸ್ ಗೆ ಹೊರಟಿದ್ದೆ. ಸ್ಪಲ್ಪ ಸಮಯದ ನಂತರ ಆಫೀಸಿನ ಸೆಕ್ಯುರಿಟಿಯವ ಫೋನ್ ಮಾಡಿದ. “ಸರ್, ಯಾರೋ ಫೋನ್ ಮಾಡಿದ್ದರು. ಗಂಡನ ಮನಯವರ ಹಿಂಸೆ ತಾಳಲಾರದೆ ಮಹಿಳೆಯೊಬ್ಬಳು ಫ್ಯಾನಿಗೆ ನೇಣುಹಾಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳಂತೆ. ನಂಬರ್ ಕೊಟ್ಟಿದ್ದಾರೆ ಸರ್” ಎಂದು ನಂಬರ್ ನೀಡಿದ. ಸೆಕ್ಯುರಿಟಿಯವರು ನೀಡಿದ ನಂಬರ್ ಗೆ ಕಾಲ್ ಮಾಡಿದರೆ ತನ್ನನ್ನು ವೆಂಕಟೇಶ್ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ ಬಹು ಉತ್ಸಾಹದಿಂದ ಅಡ್ರೆಸ್ ಹೇಳಿದ. ಶ್ರೀರಾಮಪುರದ ಯಾವುದೋ ಸಂದಿಯಲ್ಲಿ ಹೋದಾಗ ರಾತ್ರಿ ಎರಡಾಗಿದ್ದರೂ ಸಾಕಷ್ಟು ಜನ ಸೇರಿದ್ದರು. ನಮ್ಮ ಕಾರ್ ಬೀದಿಯನ್ನು ಪ್ರವೇಶಿಸುತ್ತಲೇ ವ್ಯಕ್ತಿಯೊಬ್ಬ ಬಂದು “ಬನ್ನಿ ಬನ್ನಿ ಸರ್. ನೀವು ಬರೋವರ್ಗೂ ಪೋಲಿಸ್ರಿಗೂ ಹೆಣಾ ಮುಟ್ಟಾಕ್ ಬಿಟ್ಟಿಲ್ಲ. ಇನ್ನೂ ಫ್ಯಾನಿನಿಂದ ಇಳ್ಸಿಲ್ಲ. ಬನ್ನಿ ಬನ್ನಿ” ಎಂದು ಮನೆಯೊಳಕ್ಕೆ ಕರೆದುಕೊಂಡು ಹೋದ. ಅಲ್ಲಾಗಲೇ ಕೆಲ ಮಹಿಳೆಯರು ಕಣ್ಣೀರಿಡುತ್ತಾ ನಿಂತಿದ್ದರು. ನೀವು ಸತ್ತ ಮಹಿಳೆಗೆ ಏನಾಗಬೇಕು ಎಂದಿದ್ದಕ್ಕೆ “ಅವಳ ತಮ್ಮ ಸರ್. ವೆಂಕಟೇಶ್ ಅಂತ” ಅಂದ. ಅರೆ ಅಕ್ಕ ಆತ್ಮಹತ್ಯೆ ಮಾಡಿಕೊಂಡಿದ್ದರೂ ಈ ಪಾರ್ಟಿ ಮಾತ್ರ ನಾರ್ಮಲ್ ಆಗೇ ಇದೆಯಲ್ಲ ಎಂದುಕೊಂಡು ಒಳಗೆ ಹೋದರೆ ಬೆಡ್ ರೂಮಿನಲ್ಲಿನ ಫ್ಯಾನ್ ಗೆ ಇನ್ನೂ 30 ರ ಆಸುಪಾಸಿನಲ್ಲಿದ್ದ ಮಹಿಳೆಯೊಬ್ಬಳ ಶವ ನೇತಾಡುತ್ತಿತ್ತು. ಸರಿ, ಕ್ಯಾಮಾರಾ ಮನ್ ಗೆ ಶಾಟ್ ತೆಗೆದುಕೊಳ್ಳಲು ಹೇಳಿ ನಾನು ವೆಂಕಟೇಶನ ಬಳಿ ವಿವರ ಸಂಗ್ರಹಿಸತೊಡಗಿದೆ. ಮದುವೆ ಸಂದರ್ಭದಲ್ಲಿ ಕೊಟ್ಟ ಚಿನ್ನ, ಸೈಟು, ಬೈಕು, ವಾಚು ಇಷ್ಟಿಷ್ಟು. ಮದುವೆಯಾದ ನಂತರ ಆಕೆ ತವರು ಮನೆಗೆ ಬಂದಾಗಲೆಲ್ಲ ನೀಡಿದ ಹಣ ಇಷ್ಟಿಷ್ಟು ಎಂದು ಆತ ವಿವರ ನೀಡಿದ. ಶಾಟ್ ತೆಗೆದುಕೊಂಡಾಯಿತೆಂದು ಕ್ಯಾಮರಾ ಮನ್ ಹೇಳಿದ. ಬೈಟ್ ತೆಗೆದುಕೊಳ್ಳಬೇಕಾಗಿತ್ತು.

ಸಾಮಾನ್ಯವಾಗಿ ಕೊಲೆ, ಆತ್ಮಹತ್ಯೆ, ರೇಪ್, ಆದ ಸಂದರ್ಭಗಳಲ್ಲೆಲ್ಲ ವ್ಯಕ್ತಿಯ ಅತೀ ಹತ್ತಿರದ ಸಂಬಂಧಿಕರನ್ನು ಮಾತನಾಡಿಸುವುದನ್ನು ನಾನು ಆಗಲೂ ಈಗಲೂ ವಿರೋಧಿಸುತ್ತೇನೆ. ತಮ್ಮ ಆತ್ಮೀಯರನ್ನು ಕಳೆದುಕೊಂಡು ರೋದಿಸುತ್ತಿರುವವರ ಮುಂದೆ ಮೈಕ್ ಹಿಡಿದು ನಿಲ್ಲುವುದು ನಾಗರಿಕ ಲಕ್ಷಣವೂ ಅಲ್ಲ. ಇಂತಹ ಸಂದರ್ಭಗಳಲ್ಲಿ ಪರಿಚಯಸ್ಥರು, ಗೆಳೆಯರು, ನೆರೆಹೊರೆಯವರು ಹೀಗೆ ಅಲ್ಟರ್ ನೆಟ್ ಗಳನ್ನು ಹುಡುಕಿ ಬೈಟ್ ತೆಗೆದುಕೊಳ್ಳುತ್ತಿದೆ. ತೀರ ಅನಿವಾರ್ಯ ಸಂದರ್ಭಗಳಲ್ಲಿ, ಆಪ್ಶನ್ ಇಲ್ಲದೆ ಹೋದಾಗ, ಸ್ಟೋರಿಗೆ ಬೈಟ್ ತೀರ ಅಗತ್ಯ ಎಂದಾಗ ಮಾತ್ರ ಹತ್ತಿರದವರ ಬೈಟ್ ತೆಗೆದುಕೊಳ್ಳುತ್ತಿದ್ದೆ. ಆದರೆ ಈಗಷ್ಟೇ ಮರ್ಡರ್ ಆದ ವ್ಯಕ್ತಿಯ ಹೆಂಡತಿಯ ಮುಂದೆ ಮೈಕ್ ಹಿಡಿದು ಈ ಕೊಲೆ ಯಾಕೆ ಆಯ್ತು, ಈಗ ನಿಮಗೆ ಏನು ಅನ್ನಿಸ್ತಾ ಇದೆ ಎಂದು ನಿರಂತರವಾಗಿ ಹುಚ್ಚುಚ್ಚಾರೆ ಪ್ರಶ್ನೆ ಕೇಳುವ ಎಲೆಕ್ಟ್ರಾನಿಕ್ ಮೀಡಿಯಾದ ವರದಿಗಾರಿಗೇನೂ ಕಡಿಮೆಯಿಲ್ಲ. ಒಳ್ಳೆಯ ಸ್ಟೋರಿಯನ್ನು ಮಾಡುವ ಭರದಲ್ಲಿ ಸೆನ್ಟಿಟಿವಿಟಿಯನ್ನೇ ಕೆಲವರು ಕಳೆದುಕೊಂಡಿದ್ದಾರೆ ಅನಿಸುತ್ತದೆ. ಆದರೆ ಇದಕ್ಕೆ ಜನರೂ ಕಾರಣ ಎಂಬುದು ಅಷ್ಟೇ ಸತ್ಯ. ಜೊತೆಗೆ ತನಗೆ ಸಿಕ್ಕ ಮತ್ತೊಬ್ಬರಿಗೆ ಸಿಗಬಾರದು ಅಥವಾ ಮತ್ತೊಬ್ಬರಿಗೆ ಸಿಕ್ಕ ಬೈಟ್ ತನಗೂ ಸಿಗಬೇಕು ಎಂಬ ಆತಂಕ, ಹಲವು ಬಾರಿ ವರದಿಗಾರರು ಎಲ್ಲರ ಬೈಟ್ ತೆಗೆದುಕೊಳ್ಳುವಂತೆ ಮಾಡುತ್ತದೆ.

ವೆಂಕಟೇಶ್ ನಾರ್ಮಲ್ ಆಗಿಯೇ ಇದ್ದುದರಿಂದ ಮಾತಾಡು ಎಂದೆ. ಸರಿ ಸರ್ ಎಂದು ಕ್ಯಾಮೆರಾ ಎದುರ ನಿಂತ. ತಕ್ಷಣ ಆತನ ಹಿಂದೆ ಒಂದಿಬ್ಬರು ಬಂದು ನಿಂತರು. ಅವರ ಹಿಂದೆ ನಾಲ್ಕು ಜನ. ಅವರ ಹಿಂದೆ ಮತ್ತಿಬ್ಬರು. ಹೀಗೆ ಗುಂಪು ದೊಡ್ಡದಾಗಿ, ಕರಗದ ಸಂದರ್ಭದಲ್ಲಿ ವಾಕ್ಸ್ ಪಾಪ್ ತೆಗೆದುಕೊಳ್ಳುವ ಬ್ಯಾಕ್ ಗ್ರೌಂಡ್ ನಿರ್ಮಾಣವಾಗಿತ್ತು. ಪರಿಸ್ಥಿತಿ ಸೂಕ್ಷ್ಮವಾಗಿದ್ದುದರಿಂದ ನಾನೂ ಹೆಚ್ಚಿಗೆ ಮಾತನಾಡದೆ ಬೈಟ್ ತೆಗೆದುಕೊಂಡೆ. ಬೈಟ್ ಮುಗಿದ ತಕ್ಷಣ ವೆಂಕಟೇಶ್, “ಸರ್, ನನ್ನ ತಂದೆ ಕೂಡ ಇಲ್ಲಿದ್ದಾರೆ. ಅವರನ್ನೂ ಮಾತಾಡಸ್ಬುಡಿ ಸಾರ್” ಎಂದ. ಈ ಸ್ಟೋರಿ ಹೆಚ್ಚೆಂದರೆ ಎ.ವಿ. ಯಾಗುತ್ತಿತ್ತು. ವೆಂಕಟೇಶನ ಬೈಟ್ ರೆಫರೆನ್ಸ್ ಗೆಂದು ಇಟ್ಟಿದ್ದೆ. ಅದೂ ಅಲ್ಲದೆ ಮೃತ ವ್ಯಕ್ತಿಯ ಅತೀ ಹತ್ತಿರದ ಸಂಬಂಧಿಗಳನ್ನು ಮಾತನಾಡಿಸಲು ನಾನು ಇಷ್ಟಪಡುತ್ತಿಲ್ಲದ ಕಾರಣ, “ಬೇಡ ವೆಂಕಟೇಶ್. ನೀವು ಮಾತನಾಡಿದ್ದೀರಲ್ಲ. ಅಷ್ಟು ಸಾಕು. ಅದೂ ಅಲ್ಲದೆ ಬೆಳೆದ ಮಗಳನ್ನು ಕಳೆದುಕೊಂಡು ನಿಮ್ಮ ತಂದೆ ಈಗಾಗಲೇ ದುಃಖದಲ್ಲಿದ್ದಾರೆ. ಅವರಿಗೆ ಮತ್ತಷ್ಟು ತೊಂದರೆ ಕೊಡುವುದು ಬೇಡ” ಎಂದೆ. ಆದರೆ ಆಸಾಮಿ ಬಿಡಬೇಕಲ್ಲ. “ಇಲ್ಲ ಸಾರ್, ನಮ್ಮ ತಂದೆ ತುಂಬಾ ಸ್ಟ್ರಾಂಗು. ದುಃಖ ಆಗಿದೆ ನಿಜ. ಆದರೆ ಅವರು ಅದನ್ನು ಧೈರ್ಯವಾಗಿ ತೆಗೆದುಕೊಂಡಿದ್ದಾರೆ. ಬನ್ನಿ ಸಾರ್ ನೋಡಿ ಸಾರ್ ಇಲ್ಲೇ ಇದ್ದಾರೆ. ಮಾತನಾಡಿಸಿ ಸಾರ್. ಒಂದೆ ಒಂದ್ಸಲ್ ಸಾರ್” ಎಂದು ಬೆನ್ನತ್ತಿಯೇ ಬಿಟ್ಟ. ಆತನ ವರ್ತನೆ ನೋಡಿದರೆ ಯಾವುದೋ ಕಂಪನಿಯ ಪಿಆರ್ ಓ ತನ್ನ ಕಂಪನಿಯ ಹೊಸ ಪ್ರಾಡಕ್ಟ್ ನ ಪ್ರಚಾರ ಮಾಡುವುಷ್ಟು ಆಸಕ್ತಿಯಿಂದಲೇ ಮಾತನಾಡುತ್ತಿದ್ದ. ಆತನ ಕಾಟ ತಾಳಲಾರದೆ, ಸರಿ ನಿಮ್ಮ ತಂದೆಯನ್ನು ಕರೆಯಿರಿ. ಎಂದೆ. ಯಥಾ ಪ್ರಕಾರ ತಂದೆ ಕ್ಯಾಮೆರಾ ಎದುರು ನಿಲ್ಲುತ್ತಲೆ ಮತ್ತೆ ಕರಗದ ಬ್ಯಾಕ್ ಗ್ರೌಂಡ್ ನಿರ್ಮಾಣವಾಯಿತು. ತಂದೆ ಎನ್ನಿಸಿಕೊಂಡಾತ ಅಳುತ್ತಳುತ್ತಲೇ ಮಾತನಾಡತೊಡಗಿದಾಗ ನನಗೆ ಭಯಂಕರ ಮುಜುಗರವಾಯಿತು. ಹೇಗೋ ಬೈಟ್ ಮುಗಿಸಿಕೊಂಡು ಹೊರಟು ನಿಂತೆ. ಮತ್ತೆ ವೆಂಕಟೇಶನ ರಿಕ್ಟೆಸ್ಟ್ ಸಿದ್ಧವಾಗಿತ್ತು. “ಸಾರ್ ನಮ್ಮ ಅಮ್ಮ ಕೂಡ ಇಲ್ಲೇ ಇದ್ದಾರೆ. ಅವ್ರೂ ಅಷ್ಟೇ ಸಾರ್. ತುಂಬಾ ಧೈಯರ್ವಾಗಿದ್ದಾರೆ. ಅವರನ್ನೂ ಮಾತನಾಡಿಸಿಬಿಡಿ ಸಾರ್” ಎನ್ನಬೇಕೆ. ನನಗೆ ರೇಗಿ ಹೋಯಿತು. ಅಲ್ರೀ ವೆಂಕಟೇಶ್. ಸತ್ತಿರುವುದು ನಿಮ್ಮ ಸ್ವಂತ ಅಕ್ಕ. ಅದೂ ಆತ್ಮಹತ್ಯೆ ಮಾಡಿಕೊಂಡು. ಇಂತಹ ಸಂದರ್ಭದಲ್ಲಿ ಇದೇನ್ರೀ ಪ್ರತಿಯೊಬ್ಬರನ್ನೂ ಮಾತನಾಡಿಸಿ ಮಾತನಾಡಿಸಿ ಎನ್ನುತ್ತಿದ್ದೀರಾ. ಇಷ್ಟೇ ಸಾಕು” ಎಂದು ಖಾರವಾಗಿಯೇ ಹೇಳಿದೆ. ಸರಿ ಸಾರ್ ಸರಿ ಸಾರ್ ಎಂದು ಸುಮ್ಮಗಾದ. ನಮ್ಮನ್ನು ಕಾರ್ ತನಕ ಕಳಿಸಲು ಬಂದವನು, ಸಾರ್ ಟಿವಿಯಲ್ಲಿ ಯಾವಾಗ ಬರುತ್ತೆ ಸಾರ್ ಎಂದು ರಾಗ ತೆಗೆದ. ಸಮಯ ಬೆಳಗಿನ ಮೂರಾಗುತ್ತಿತ್ತು. ಬೆಳಿಗ್ಗೆ 7.30 ಕ್ಕೆ ಕನ್ನಡನಾಡಿ ನ್ಯೂಸ್ ಬರುತ್ತೆ ಅದರಲ್ಲಿ ಬರುತ್ತೆ ಎಂದೆ. ಆಯ್ತು ಸಾರ್ ಎಂದ.

ನಮ್ಮ ಗಾಡಿ ಸ್ಟಾರ್ಟ್ ಆಗಿ ಮುಂದೆ ಹೋಗುತ್ತಿರುವಂತೆ, ವೆಂಕಟೇಶ್, ತನ್ನ ಗೆಳೆಯರಿಗೆ ಫೋನ್ ಮಾಡಿ ನಾಳೆ ಬೆಳಿಗ್ಗೆ ಏಳೂವರೆಗೆ ಈ ಟಿವಿಯಲ್ಲಿ ಕನ್ನಡನಾಡಿ ನೋಡು ಮಗಾ ಎಂದು ಹೇಳುತ್ತಿದ್ದುದು ಕತ್ತಲಲ್ಲಿ ರಿಂಗಣಿಸುತ್ತಿತ್ತು.

ಇದು ಕೇವಲ ವೆಂಕಟೇಶನ ಕಥೆ ಮಾತ್ರವಲ್ಲ. ನಾನು ಕವರೇಜ್ ಗೆ ಹೋದ ಹೆಚ್ಚಿನ ಸಂದರ್ಭಗಳಲ್ಲೆಲ್ಲಾ ಟಿವಿ ಕ್ಯಾಮೆರಾ ಬಂದ ತಕ್ಷಣ ಕಾಲ-ಪರಿಸ್ಥಿತಿಯ ಎಗ್ಗಿಲ್ಲದೆ ಅಲ್ಲೊಂದು ಸಂಭ್ರಮದ ಮೂಡ್ ಕ್ರಿಯೇಟ್ ಆಗಿದ್ದಿದೆ. ಅದನ್ನು ಟಿವಿ ವರದಿಗಾರರು ಸಹ ಚೆನ್ನಾಗಿಯೇ ಬಳಸಿಕೊಳ್ಳುತ್ತಿದ್ದರು. ಸಾವಿನ ಮನೆಗೆ ಕವರೇಜ್ ಗೆ ಹೋಗಿ ಕಾಫಿ ಕುಡಿದು ಬಂದಿದ್ದೂ ಇದೆ. ಇದನೆಲ್ಲ ಗಮನಿಸಿದಾಗ, ಜನರು ಸಂವೇದನಾಶೀಲತೆಯನ್ನು ಕಳೆದುಕೊಳ್ಳುತ್ತಿದ್ದಾರೆಯೆ ಅಥವಾ ಟಿವಿ ಕ್ಯಾಮೆರಾದ ಮೋಡಿ ಜನರನ್ನು ಈ ರೀತಿ ಮಾಡುತ್ತಿದ್ದೆಯೆ ಎಂಬ ಪ್ರಶ್ನೆ ಮೂಡುತ್ತದೆ. ಅಷ್ಟೇ ಅಲ್ಲ, ಟಿವಿ ವರದಿಗಾರರಿಗೆ ಎಲ್ಲಿ, ಯಾರಿಗೆ, ಹೇಗೆ ಮೈಕ್ ಹಿಡಿಯಬೇಕು ಎಂಬ ತರಬೇತಿ ಅಗತ್ಯವಿದೆ ಎನಿಸುತ್ತದೆ.

ಮರೆತಿದ್ದೆ – ಕೆಲ ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಖ್ಯಾತ ನ್ಯಾಷನಲ್ ಮೀಡಿಯಾದ ಖ್ಯಾತ ವರದಿಗಾರ್ತಿಯ ಖ್ಯಾತ ತಂದೆ ತೀರಿಕೊಂಡಾಗ ಬೈಟ್ ಹೋಗಲಿ, ವಿಶುವಲ್ಸ್ ತೆಗೆದುಕೊಳ್ಳಲೂ ಬಿಟ್ಟಿರಲಿಲ್ಲ.

ಹ್ಯಾಪಿ ಕೃಷ್ಣ ಜನ್ಮಾಷ್ಟಮಿ…

Leave a comment

123ಚಿತ್ರ – ಸುಘೋಷ್ ಎಸ್. ನಿಗಳೆ

ಮಾಡೆಲ್ – ಚಿಂತನ್.

Older Entries

Follow

Get every new post delivered to your Inbox.

Join 87 other followers