
ಸಮಾಜದ ಮೇಲ್ಪದರಲ್ಲಿರುವವರು ಯಾವ್ಯಾವುದೋ ಭ್ರಮೆಯಲ್ಲಿಯೇ ಬದುಕುತ್ತಾರೆ. ತಮ್ಮಿಂದಲೇ ಜಗತ್ತು ನಡೆಯುತ್ತಿರುವುದು. ತಾವಿಲ್ಲದಿದ್ದರೆ ಸೂರ್ಯ ಉದಯಿಸುವುದಿಲ್ಲ. ಹುಂಜ ಕೂಗುವುದಿಲ್ಲ ಎಂದೆಲ್ಲ ಅಂದುಕೊಂಡುಬಿಟ್ಟಿರುತ್ತಾರೆ. ಇಂತಹ ಕ್ಯಾಟಗರಿಯಲ್ಲಿ ಹಲವು ಧಾರ್ಮಿಕ ಗುರುಗಳೂ ಸೇರುತ್ತಾರೆ.
ಅದೊಂದು ಬಹುದೊಡ್ಡ ಯಾಗ. ರಾಜಕಾರಣಿಗಳು, ಐಎಎಸ್ ಗಳು, ಐಪಿಎಸ್ ಗಳು, ವಿವಿಐಪಿಗಳು ಆ ಆಯಾಗಕ್ಕೆ ಬಂದಂತಹ ಸಂದರ್ಭ. ಭಾರೀ ಇತಿಹಾಸವುಳ್ಳ, ರಾಜ್ಯದಲ್ಲಷ್ಟೇ ಅಲ್ಲ ದೇಶವಿದೇಶಗಳಲ್ಲಿ ಖ್ಯಾತಿ ಗಳಿಸಿರುವ ಮಠವೊಂದರ ಹಿರಿಯ ಸ್ವಾಮಿಜೀ ಆ ಯಾಗಕ್ಕೆ ಬಂದಿದ್ದರು. ಅಫ್ ಕೋರ್ಸ್ ಅವರ ಮಠವೇ ಆ ಯಾಗ ನಡೆಸುತ್ತಿತ್ತು. ಬೆಳ್ಳಂಬೆಳಿಗ್ಗೆಯೇ ನಾನು ಅದರ ಕವರೇಜ್ ಗೆ ಹೋಗಿದ್ದೆ. ಆ ಸಮಯದಲ್ಲಿ ಕಂಚಿ ಶಂಕರಾಚಾರ್ಯ ಕೊಲೆ ಪ್ರಕರಣವೊಂದರಲ್ಲಿ ಸಿಕ್ಕಿಹಾಕಿಕೊಂಡ ಕಾಲ. ಹಾಗಾಗಿ ಅದಕ್ಕೆ ಸಂಬಂಧಿಸಿದಂತೆ ಈ ಸ್ವಾಮಿಜೀಯ ಬೈಟ್ ಪಡೆಯುವುದು ನನ್ನ ಉದ್ದೇಶವಾಗಿತ್ತು. ಹೋದ ತಕ್ಷಣವೇ ಸ್ವಾಮಿಜೀಯ ಪಿ.ಆರ್.ಓ. ಗೆ ನಾನು ಸ್ವಾಮಿಜೀಯ ಇಂಟರ್ವ್ಯೂ ಮಾಡಬೇಕು ಎಂದು ಹೇಳಿದ್ದೆ. ಬೆಳಿಗ್ಗೆ ಏಳು ಗಂಟೆಗೆ ಹೋಗಿದ್ದ ನಾವು ಒಂಬತ್ತು ಗಂಟೆಯವರೆಗೂ ಕಾದರೂ ಸ್ವಾಮಿಜೀಯ ಸುಳಿವಿಲ್ಲ. ಸಾಮಾನ್ಯವಾಗಿ ಸ್ಟೋರಿಯ ಇಂಪಾರ್ಟೆನ್ಸ್ ನೋಡಿ ನಾನು ಬೈಟ್ ಗಾಗಿ ಕಾಯುತ್ತಿದ್ದೆ. ಅಷ್ಟರಲ್ಲಾಗಲೇ ನಮಗೆ ಪಾನಕ, ಫಲಾಹಾರ ಎಲ್ಲವನ್ನೂ ನೀಡಿ ಸತ್ಕರಿಸಿಯಾಗಿತ್ತು. ‘ಸ್ವಾಮಿಗಳು ಪೂಜೆಯಲ್ಲಿದ್ದಾರೆ ಇನ್ನೇನು ಬಂದುಬಿಡುತ್ತಾರೆ, ಸ್ವಾಮಿಗಳು ಅನುಷ್ಠಾನದಲ್ಲಿದ್ದಾರೆ ಇನ್ನೇನು ಬಂದು ಬಿಡುತ್ತಾರೆ’ ಎಂಬಿತ್ಯಾದಿ ಉತ್ತರಗಳನ್ನು ನೀಡಿ ಆ ಪಿ.ಆರ್.ಓ. ನಾವು ಕೂರುವಂತೆ ಮಾಡಿದ್ದರು. ಕೊನೆಗೂ ನಾನು ಬೇಸತ್ತು “ಸ್ವಲ್ಪ ಹೊತ್ತು ಬಿಟ್ಟು ಬರುತ್ತೇವೆ” ಎಂದು ಅಲ್ಲಿಂದ ಕಾಲ್ಕಿತ್ತೆ.
12.30 ರ ಸುಮಾರಿಗೆ ಸ್ವಾಮಿಜೀಯ ಆಗಮನವಾಗಿದೆ ಎಂದೂ, ನಾವು ಬಂದೂ ಬೈಟ್ ತೆಗೆದುಕೊಳ್ಳಬೇಕೆಂದು ಸ್ವಾಮಿಜೀಯ ಪಿ.ಆರ್.ಓ. ಫೋನ್ ಮಾಡಿದ. ಅಷ್ಟರಲ್ಲಾಗಲೇ ನಾನು ಯಾವುದೋ ಅಸೈನ್ ಮೆಂಟ್ ನಲ್ಲಿ ಬಿಝಿ ಇದ್ದೆನಾದ್ದರಿಂದ ಹಾಗೂ ಅದು ಮುಗಿಯುವುದು ಸಂಜೆಯಾಗುವ ಎಲ್ಲ ಸಾಧ್ಯತೆ ಇದ್ದುದರಿಂದ “ಸ್ವಾಮಿಜೀಯ ಬೈಟ್ ಗೆ ಬರಲಾಗುವುದಿಲ್ಲ” ಎಂದೆ. ತಕ್ಷಣ ಆ ಪಿ.ಆರ್. ಓ., “ಅದ್ಹೇಗ್ರೀ ನೀವು ಬರುವುದಿಲ್ಲ? ನೀವು ಬರದಿದ್ರೆ ಸ್ವಾಮಿಗಳಿಗೆ ಕೋಪ ಬರುತ್ತೆ ಮತ್ತೆ ಹಾಂ…ಢಾಂ…ಢೂಂ…”ಎಂದು ವಿಚಿತ್ರ ಟೋನ್ ನಲ್ಲಿ ಹೇಳಿದ. ನನಗೆ ಸಾಮಾನ್ಯವಾಗಿ ಸಿಟ್ಟು ಬರುವುದೇ ಇಲ್ಲ. ಆದರೆ ಬಂದಾಗ ತಡೆದುಕೊಳ್ಳುವುದು ಕಷ್ಟ. “ರೀ ಸ್ವಾಮಿ…ನೀವು ಯಾರ್ ಜೊತೆ ಮಾತಾಡ್ತೀದೀರಾ ಗೊತ್ತಾ ನಿಮ್ಗೆ? ನಿಮ್ಮ ಸ್ವಾಮಿಗೆ ಕೋಪ ಬಂದ್ರೆ ಸಂತೋಷವಾಗಿ ಮಾಡ್ಕಳ್ಳಿಕ್ಕೆ ಹೇಳ್ರಿ…ಅಲ್ರೀ…ಅವರು ಸ್ವಾಮಿ ಅಲ್ವಾ…ಇನ್ನೂ ಅರಿಷಡ್ವರ್ಗಗಳನ್ನು ಗೆದ್ದಿಲ್ವಾ…?”ಎಂದೆ. ಮತ್ತೆ ಪಿ.ಆರ್.ಓ. ಮಾತನಾಡಿಲ್ಲ.
Tags: religious head, religion, bite, yaga
October 20, 2009 at 1:51 PM |
good