ಅರ್ತ್ಅವರ್ ಎಷ್ಟು ಉಪಯೋಗವಾಗಿದೆ? ಇಲ್ಲಿದೆ ಉತ್ತರ

Leave a comment

(ಇಂದಿನ ಟೈಮ್ಸ್ ಆಫ್ ಇಂಡಿಯಾ ದಲ್ಲಿ ಬಂದಿದ್ದು).

ನೀರ ಮಾತುಗಳಲ್ಲಿ ಮೀಯಲು ಕರೆಯುತ್ತಿದ್ದಾರೆ ಭಡ್ತಿ

Leave a comment

ಪುಟಾಣಿ ಮಕ್ಕಳೆಲ್ಲ ಒಂದಾಗಿ ಬನ್ನಿ…

Leave a comment

ಚೈತನ್ಯ ಹೆಗಡೆ ಅವರ ‘ಓ ನನ್ನ ಭಾರತ’

Leave a comment

ಮುಕ್ತ ಮುಕ್ತ ಮುಕ್ತ….

Leave a comment

‘ಸುಧಾ’ದ ಪ್ರತಿಸ್ಪಂದನದಲ್ಲಿ ಮುಕ್ತ ಮುಕ್ತದ ನಿವೇದಿತಾ…

Leave a comment

ಜಯಶ್ರೀ ರಾಜ್ ‘ಮುಕ್ತ ಮುಕ್ತ’ ದಲ್ಲಿ ನನ್ನ ಸಹನಟಿ. ಕಳೆದ 12 ವರ್ಷಗಳಿಂದ ನಟಿಸುತ್ತಿರುವ ಜಯಶ್ರೀ ಸೆಟ್ ನಲ್ಲಿ ನನಗೆ ನಟನೆಯ ಟಿಪ್ಸ್ ಗಳನ್ನೂ ಕೊಡುತ್ತಿರುತ್ತಾರೆ. ಈ ಬಾರಿಯ ಸುಧಾದ ಪ್ರತಿಸ್ಪಂದನದಲ್ಲಿ ಅವರ ಸಂದರ್ಶನ ಮೂಡಿ ಬಂದಿದೆ.

ವೋಟ್ ಮಾಡಿ, ಮಾನ ಕಾಪಾಡಿಕೊಳ್ಳಿ…

Leave a comment

ಅಂತೂ ಇಂತೂ ಬಿಬಿಎಂಪಿ ಚುನಾವಣೆಯ ಭಾಗ್ಯ ಬಂದಿದೆ. ನಮ್ಮ ಮತದ ಸಲುವಾಗಿ ರಾಜಕೀಯ ಪಾರ್ಟಿಗಳ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದಾರೆ, ತಲೆ ಒಡೆದುಕೊಂಡಿದ್ದಾರೆ, ದುಡ್ಡು ಹಂಚಿದ್ದಾರೆ, ಸೆರೆ ಕುಡಿಸಿದ್ದಾರೆ, ಬಿಸಿಲಲ್ಲಿ ಗಂಟಲು ಹರಿದಕೊಂಡು ಓಡಾಡಿದ್ದಾರೆ, ಗ್ರಂಥಾಲಯಕ್ಕೆ ಬೆಂಕಿ ಹಚ್ಚಿದ್ದಾರೆ ಏನೆನೆಲ್ಲ ಮಾಡಿದ್ದಾರೆ. ಇವರ ಇಷ್ಟು ಸೇವೆಗೆ ನಾವು ಕನಿಷ್ಟ ಸೌಜನ್ಯ ತೋರಿಸಬೇಕಾಗಿರುವುದು ಅತ್ಯತ್ಯತ್ಯತ್ಯಗತ್ಯ. ಹೀಗಾಗಿ ಇಂದು ದಯವಿಟ್ಟು ವೋಟ್ ಮಾಡಿ. ನಿಮ್ಮ ಅಮೂಲ್ಯ ಮತ ಚಲಾಯಿಸಿ. ಪ್ರಜಾಪ್ರಭುತ್ವ ರಕ್ಷಿಸಿ. ಬೆಂಗಳೂರಿನ ಸೋಫಿಸ್ಟೇಕೆಟೆಡ್ ಜನ ಮನೆ ಹೊರಗೆ ಬಂದು ವೋಟ್ ಮಾಡುವುದೇ ಇಲ್ಲ ಎಂಬ ಶೇಮ್ ಶೇಮ್ ಆರೋಪವನ್ನು ಸುಳ್ಳು ಮಾಡಿ. ವೋಟ್ ಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಇಲ್ಲಿದೆ.

ವೋಟರ್ಸ್ ಲಿಸ್ಟ್ ….

ಮುಕ್ತ ಮುಕ್ತ ಟೈಟಲ್ ಕಾರ್ಡ್ ನಲ್ಲಿ ನಾನು…

Leave a comment

ಮಿತಿಯಿಲ್ಲ, ಕೊನೆಯಿಲ್ಲ, ಗಡಿಯಿಲ್ಲ ಈ ಹಾರಾಟಕ್ಕೆ

Leave a comment

ಸೂತ್ರ-ಧಾರ

ಮಿತಿಯಿಲ್ಲ, ಕೊನೆಯಿಲ್ಲ, ಗಡಿಯಿಲ್ಲ ಈ ಹಾರಾಟಕ್ಕೆ

ಬದುಕಿನಂತೆ.

ಸುತ್ತಲೂ ಹೆಣೆದ ಸೂತ್ರಗಳು ಕರೆದುಕೊಂಡು ಹೊರಟಿವೆ ಎಲ್ಲಿಗೋ

ಗಾಳಿ ಬಂದೊಡೆ ಸೂತ್ರವ ಜಗ್ಗು, ಬಯಸಿದೆಡೆ ಹಾರು, ಜೀಕು

ಬದುಕಿನ ಕಷ್ಟಗಳನ್ನು ಎದುರಿಸುವಂತೆ.

ಯಾವ ಸೂತ್ರ ನಿನ್ನ ಕೈಯಲ್ಲಿ, ಯಾವುದು ಅವನ ಕೈಯಲ್ಲಿ

ಅರಿವಿದೆಯೆ ನಿನಗೆ?

ಗಡಿಯಿಲ್ಲ, ಮಿತಿಯಿಲ್ಲ ಎಂದು ಖುಷಿಪಡಬೇಡ

ನಿನ್ನ ಸೂತ್ರದ ನಿಯಂತ್ರಕ ಬೇರೊಬ್ಬನಿದ್ದಾನೆ.

ಅವನು ಇಲ್ಲಿ ಅದೃಶ್ಯ.

ಕಣ್ಣಿಗೆ ಕಾಣುತ್ತಿರುವುದು ಕೇವಲ ಸೂತ್ರಗಳು, ಮನುಷ್ಯರು, ಬದುಕು.

ಇವೆಲ್ಲವ ಮೀರಿದ ಸೂತ್ರ-ಧಾರ, ನಿನ್ನಂತರಗದೊಳಿದ್ದಾನೆ.

ಭುವಿಗೆ ಬಂದು

ಹುಡುಕಿಕೊ.

ಯಾರು ಹೇಳಿದ್ದು ಕಲಾವಿದರನ್ನು ಎಲ್ಲರೂ ಗುರುತಿಸುತ್ತಾರೆ ಎಂದು?

4 Comments

ಮುಕ್ತ ಮುಕ್ತದಲ್ಲಿ ಆಕ್ಟ್ ಮಾಡಲು ಶುರುಮಾಡಿದಾಗಿನಿಂದ ಎಲ್ಲರೂ ನನ್ನನ್ನು ಗುರುತಿಸುತ್ತಾರೆ ಎಂದು ಹಲವು ಬಾರಿ ನಾನೇ ಹೇಳಿಕೊಂಡಿದ್ದೇನೆ. ಆ ಘಟನೆಗಳನ್ನು ಬರೆದಿದ್ದೇನೆ. ಅದರ ಉಲ್ಟಾ ಘಟನೆಯೊಂದು ಹೀಗಿದೆ.

ಸಿಸ್ಟೋಸ್ಕೋಪಿ ಆದ ಬಳಿಕ ಸ್ಟೆಂಟ್ ರಿಮೂವಲ್ ಇತ್ತು. ಹಾಗಾಗೆ ಮತ್ತೆ ಗಿರಿನಗರದ ರಾಧಾಕೃಷ್ಣನ ಮೊರೆ ಹೋಗಿದ್ದೆ. ಅಲ್ಲಿ ಸ್ಟೆಂಟ್ ರಿಮೂವಲ್ ಗೂ ಮೊದಲು ಎಕ್ಸ್ ರೇ ತೆಗೆಯಲು ಸೂಚಿಸಿದರು. ಸರಿ ಎಂದು ನಾನು ಎಕ್ಸ್ ರೇ ರೂಂನತ್ತ ಹೆಜ್ಜೆ ಹಾಕಿದೆ. ಅಲ್ಲಿ ಅದಾಗಲೇ ನಾಲ್ಕೆಂಟು ಜನ ಎಕ್ಸ್ ರೇ ಗಾಗಿ ಕಾಯುತ್ತಿದ್ದರು. ಲ್ಯಾಬ್ ಅಸಿಸ್ಟೆಂಟ್ ಮಾತ್ರ ಬಂದಿರಲಿಲ್ಲ.

ಒಂದೈದು ನಿಮಿಷ ಬಿಟ್ಟು ಬಂದ ಆತ ಸರದಿ ಪ್ರಕಾರ ಎಕ್ಸ್ ರೇ ತೆಗೆಯಲು ಶುರುಮಾಡಿದ. ನನ್ನ ಸರದಿ ಬರಲು ಇನ್ನೂ ಹತ್ತು ನಿಮಿಷವಿತ್ತಾದ್ದರಿಂದ ಸುಮ್ಮನೇ ಏಕೆ ಕೂರುವುದು ಎಂದು ನನ್ನ ಬ್ಯಾಗ್ ತೆಗೆದೆ. ಮೂರ್ನಾಲ್ಕು ಚೆಕ್ ಗಳನ್ನು ಕಲೆಕ್ಷನ್ ಗೆ ಹಾಕಬೇಕಿತ್ತು. ಪೇ ಇನ್ ಸ್ಲಿಪ್ ಗಳನ್ನು ಮೊದಲೇ ತಂದಿದ್ದೆ. ಹೀಗಾಗಿ ಸ್ಲಿಪ್ ಗಳನ್ನು ತುಂಬುತ್ತ, ಪಿನ್ ಮಾಡತೊಡಗಿದೆ. ಲ್ಯಾಬ್ ಅಸಿಸ್ಟೆಂಟ್ ಸರದಿ ಸಾಲಿನಲ್ಲಿ ಇರುವವರನ್ನು ಕರೆಯಲು ಹೊರ ಬಂದಾಗಲೆಲ್ಲ ನನ್ನನ್ನು ನೋಡುತ್ತಿದ್ದ. ಕೊನೆಗೆ ನನ್ನ ಸರದಿಯೂ ಬಂತು.

ಎಕ್ಸ್ ರೇ ಟೇಬಲ್ ಮೇಲೆ ಮಲಗಿದೆ.

“ಕೆಯುಬಿ ಎಕ್ಸ್ ರೇ ಅಲ್ವಾ? ಯಾವಾಗಾ ಸಿಸ್ಟೋಸ್ಕೋಪಿ ಆಗಿದ್ದು?” ಎಂಬಿತ್ಯಾದಿ ವಿಷಯಗಳನ್ನು ಮಾತನಾಡುತ್ತ ಕೊನೆಗೆ ಆತ ಕೇಳಿದ

“ನೀವು ಕೊರಿಯರ್ ಆಫೀಸ್ ನಲ್ಲಿ ಕೆಲಸ ಮಾಡುತ್ತೀರಾ?”

ಈಗ ಹೇಳಿ ಕಲಾವಿದರ ಪಾಪ್ಯುಲಾರಿಟಿ ಎಷ್ಟಿದೆ ಎಂದು……….

ಹೀಗೊಂದು ಷುಗರ್ ಫ್ರೀ ಲಾಲಿಪಾಪ್…

1 Comment

ಮಹಿಂದ್ರಾ ಬೋಲೆರೋ ಜೀಪಿನಲ್ಲಿ

3 Comments

ಮಳೆಗಾಲದ ದಿನಗಳಲ್ಲಿ

ಬಾಳೆಹೊನ್ನೂರಿನ ದಾರಿಯಲ್ಲಿ

ಮಹಿಂದ್ರಾ ಬೋಲೆರೋ ಜೀಪಿನಲ್ಲಿ

ಸ್ಟೇರಿಂಗ್ ಮುಂದೆ ಒಬ್ಬನೇ ಕುಳಿತು

ಎಲ್ಲ ಗ್ಲಾಸ್ ಗಳನ್ನು ಏರಿಸಿಕೊಂಡು

ಹಬೆಯೇರಿದ ಗಾಜುಗಳ ಮೇಲೆ

ಪ್ರೇಯಸಿಯ ಹೆಸರಿನ ಮೊದಲ ಅಲ್ಭಾಬೆಟ್ ಬರೆಯುತ್ತ

ಬಡ್ವೈಸರ್ ಬಿಯರ್ ಹೀರುತ್ತ

ಡೆಕ್ ನಲ್ಲಿ ‘ದೀವಾರೋಂಸೆ ಮಿಲ್ಕರ್ ರೋನಾ ಅಚ್ಛಾ ಲಗತಾ ಹೈ’

ಹಾಡು ಕೇಳುತ್ತ

ಹೃದಯಕ್ಕಾದ ಗಾಯವನ್ನು ಸವರುತ್ತ

ನೂರಿಪ್ಪತ್ತು ಕಿಲೋಮೀಟರ್ ಸ್ಪೀಡಿನಲ್ಲಿ

ಸಾಗಿ

ಕಣ್ಣುಗಳಿಂದ ಹನಿಗಳನ್ನು ಬೀಳಿಸುವಾಸೆ….

ಈ ಬಸ್ ಏನು ನಿಮ್ ಅಪ್ಪಂದ?

1 Comment

ಮಿರಿಮಿರಿಮಿರಿ ಮಿಂಚುವ ಕೆಂಪುಬಣ್ಣದ ಬಿಎಂಟಿಸಿ ವೋಲ್ವೋ ಬಸ್ ಅದು. “ಆಜಾ ಸನಮ್ ಮಧುರ ಚಾಂದನಿ ಮೇ ಹಂ ತುಂ ಮಿಲೇ ಹೆ ಜಿಯಾ” ಹಾಡು ಎಫ್ ಎಂ ನಿಂದ ಮೂಡಿ ಬಂದು ಇಡೀ ಎಸಿ ಬಸ್ ನ ವಾತಾವರಣವನ್ನು ಮತ್ತಷ್ಟು ಆಹ್ಲಾದಕರವನ್ನಾಗಿಸಿದೆ. ಭಯಂಕರ ಎತ್ತರದ ಕಟ್ಟಡಗಳಲ್ಲಿ ಕೆಲಸ ಮಾಡುವ ಐಟಿ-ಬಿಟಿ-ಘಾಟಿ ಮಂದಿ ಬೆಳಿಗ್ಗೆಬೆಳಿಗ್ಗೆಯೇ ಹ್ಯಾಪು ಮೋರೆ ಹಾಕಿಕೊಂಡಿದ್ದರೂ, ಬಸ್ ನ ವಾತಾವರಣ ಹಾಗೂ ಹಾಡು ಅವರಲ್ಲಿ ಅದೇನೋ ಚೈತನ್ಯ ಮೂಡಿಸಿದೆ.

ಆದರೆ….

ಅಷ್ಟರಲ್ಲಿ ಮಾಸಿದ ಬಿಳಿ ಅಂಗಿ, ಮಣ್ಣು ಮೆತ್ತಿದ ಬಿಳಿ ಪಂಚೆ ಧರಿಸಿದ, ಕೈಯಲ್ಲಿ ಕೋಲು ಹಿಡಿದುಕೊಂಡಿರುವ ಮುದುಕನೊಬ್ಬ ಯಾವುದೋ ಮಾಯದಲ್ಲಿ ಈ ವೋಲ್ವೋ ಬಸ್ ಹತ್ತಿಬಿಟ್ಟಿದ್ದಾನೆ. ಒಳಗಿದ್ದ ಜನ ಇದನ್ನು ವಾರೆಗಣ್ಣಿನಲ್ಲೇ ಗಮನಿಸಿದ್ದಾರೆ. ವೋಲ್ವೋ ಬಸ್ ಚಾರ್ಜ್ ಕೊಡುವಷ್ಟು ಹಣ ಈತನ ಬಳಿ ಇದ್ದಿರಬಹುದೆ ಎಂದು ನೋಡಿದವರಿಗೆ ಪ್ರಶ್ನೆ ಬಿದ್ದಿದೆ. ಆದರೆ ಅಲ್ಲಲ್ಲಿ ಆಧಾರ ಹಿಡಿದುಕೊಂಡು ಮುದುಕ ಕೊನೆಗೂ ಬಾಗಿಲೆದುರಿನ ಸೀಟ್ ಮೇಲೆ ಕುಳಿತಿದ್ದಾನೆ. ಕಂಡಕ್ಟರ್ ಅಲ್ಲಿಗೆ ಬರುವುದಕ್ಕೂ, ಮುದುಕ ತನ್ನ ಪಂಚೆಯನ್ನು ಎತ್ತಿ ಅಂಡರವೇರ್ ನ ಕಿಸೆಯಲ್ಲಿಟ್ಟದ ಪಾಸ್ ತೆಗೆಯುವುದಕ್ಕೂ ಸರಿ ಹೋಗಿದೆ. ಪಾಸ್ ನೋಡಿದ ಕಂಡಕ್ಟರ್ ಬೇಸರಿಸಿ, “ಈ ಪಾಸ್ ನಡ್ಯಲ್ಲ ಅಜ್ಜ ಈ ಬಸ್ ಗೆ. ಮುಂದಿನ ಸ್ಟಾಪ್ ಗೆ ಇಳಿದು ಬಿಡು” ಎಂದಿದ್ದಾನೆ. ಸರಿ ಎಂದು ಮುದುಕ ಕುಳಿತಿದ್ದಾನೆ. ಆದರೆ ಮುಂಬೈ ಲೋಕಲ್ ಟ್ರೇನ್ ಗಳಂತೆ ಮುಂದಿನ, ಅದರ ಮುಂದಿನ ಸ್ಟಾಪ್ ನಲ್ಲಿ ಬಸ್ ಕೇವಲ ಹದಿನೈದು ಸೆಕೆಂಡ್ ಮಾತ್ರ ನಿಂತಿದೆ. ಹೀಗಾಗಿ ಮುದುಕಪ್ಪನಿಗೆ ಇಳಿಯಲಾಗಿಲ್ಲ. ವಾಪಸ್ ಬಂದ ಕಂಡಕ್ಟರ್ ಮುದುಕನ ಮೇಲೆ ರೇಗಿದ್ದಾನೆ. “ಒಂದು ಸಾರಿ ಹೇಳಿದ್ರೆ ಮರ್ಯಾದೆಯಾಗಿ ತಿಳಕೋಬೇಕು. ಇಳಿ ಅಂತ ಹೇಳಿರಲಿಲ್ವಾ…ನಮ್ಮ ಕೆಲಸ ತಗಸ್ತೀರಾ” ಅಂದು ಬೈದಿದ್ದಾನೆ. ಅದಕ್ಕೆ ಉತ್ತರ ಕೊಡಲು ಹೋದ ಅಜ್ಜನ ಕೈಹಿಡಿದು ಬಸ್ಸನ್ನು ಮಧ್ಯದಲ್ಲಿಯೇ ನಿಲ್ಲಿಸಿ ನಿರ್ದಾಕ್ಷಿಣ್ಯವಾಗಿ ಕೆಳಗೆ ಇಳಿಸಿದ್ದಾನೆ. ಮುಂದಿನ ಸ್ಟಾಪ್ ನಲ್ಲಿ ಖಂಡಿತ ಇಳಿಯುವುದಾಗಿ ಅಜ್ಜಪ್ಪ ರಿಕ್ವೆಸ್ಟ್ ಮಾಡಿಕೊಂಡರೂ ಕಂಡಕ್ಟರ್ ಕೇಳಿಲ್ಲ.

ಅಲ್ಲಿದ್ದ ಜನರಿಗೆ ಇದು ನೋಡಿ ಬೇಜಾರಾಗಿದೆ. ಒಬ್ಬ ಹೇಳಿದ್ದಾನೆ. “ರ್ರೀ…ಇಷ್ಟು ದೂರ ಬಂದಿದ್ದಾರೆ. ಮುಂದಿನ ಸ್ಟಾಪ್ ನಲ್ಲಿ ಇಳಿಸಬಾರ್ದಾಗಿತ್ತಾ..ಬೇಕಾದ್ರೆ ನಾನೇ ಟಿಕೆಟ್ ತಗಸ್ತಾ ಇದ್ದೆ. ಯಾಕೆ ರಸ್ತೆ ಮಧ್ಯಾನೇ ಇಳಿಸೋದಕ್ಕೆ ಹೋದ್ರಿ?”

ಕಂಡಕ್ಟರ್ ಹೇಳಿದ್ದಾನೆ “ನೀವು ಒಳ್ಳೇವ್ರು ಸಾರ್ ಅದಕ್ಕೇ ಹೀಗೆ ಹೇಳ್ತಾ ಇದ್ದೀರಿ. ಆದ್ರೆ ಚೆಕಿಂಗ್ ಗೆ ಬರುವವರು ನಿಮ್ಮ ತರಹ ಇರ್ತಾರೆ ಅನ್ಕೊಂಡ್ರಾ…? ನಾನು ಒಂದು ಸಾರಿ ಹೀಗೆ ಜನಸೇವೆ ಮಾಡಲು ಹೋದಾಗ, ‘ಈ ಬಸ್ಸೇನು ನಿಮ್ಮ ಅಪ್ಪಂದ ಬ್ಯಾವರ್ಸಿಗಳನ್ನೆಲ್ಲ ಕರೆದುಕೊಂಡು ಹೋಗಾದಿಕ್ಕೆ?’ ಅಂತ ಬೈಸಿಕೊಂಡಿದ್ದೇನೆ. ಹೀಗಾಗಿ…..”

ಹೀಗೆ ಕಟ್ಟಡ ಹತ್ತಲು ಮೀಟರ್ ಬೇಕು…

2 Comments

ಅಲೇನ್ ರಾಬರ್ಟ್, ಫ್ರಾನ್ಸ್ ನ ಸಾಹಸಿ. ಎತ್ತರದ ಕಟ್ಟಡಗಳನ್ನು ಹತ್ತುವುದು ಆತನ ಹುಚ್ಚುತನ. ಅಬುದಾಭಿಯ ಅತೀ ಎತ್ತರದ ಕಟ್ಟಡ (185 ಮೀಟರ್) ಅಬುದಾಭಿ ಇನ್ವೆಸ್ಟಮೆಂಟ್ ಅಥಾರಿಟಿ ಬಿಲ್ಡಿಂಗನ್ನು ಸಾವಿರಾರು ಜನರೆದುರು ಆತ ಹತ್ತಿದ. ಅದೂ ಕೇವಲ 20 ನಿಮಿಷದಲ್ಲಿ.

(ಕಳಿಸಿಕೊಟ್ಟದ್ದು  – ಶಶಿ ಜೋಯಿಸ್)









ಇಂತಹವರಿಗೆ ಮೈಕ್ ಹೀಗೆಯೇ ಹಿಡಿಯಬೇಕು…

Leave a comment

ಕೆಲದಿನಗಳ ಹಿಂದೆ ಚಿತ್ರಕಲಾಪರಿಷತ್ ನಲ್ಲಿ ಸ್ವಿಟ್ಜರಲ್ಯಾಂಡ್ ನ ದಂಪತಿಗಳು ಮರಗಾಲು ಕಟ್ಟಿಕೊಂಡು ವಿಶಿಷ್ಟ ನೃತ್ಯಪ್ರದರ್ಶನ ನೀಡಿದರು. ಪ್ರದರ್ಶನ ಮುಗಿದ ಬಳಿಕ ಟಿವಿ ಪತ್ರಕರ್ತರು ಅವರನ್ನು ಬೈಟ್ ಗಾಗಿ ಸುತ್ತುವರಿದಾಗ ಆ ನೋಟ ಕಂಡದ್ದು ಹೀಗೆ….

ಶ್ರೀ ಆದಿಶಕ್ತಿ ಸ್ಥಂಬಾಂಬಿಕಾ ದೇವಿ ಹರಕೆಯ ಫಲಗಳು

Leave a comment

(ಆದಿಚುಂಚನಗಿರಿ ಮಹಾಸಂಸ್ಥಾನದ ದೇವಸ್ಥಾನದಲ್ಲಿ ಕ್ಲಿಕ್ಕಿಸಿದ್ದು….)

ತರಂಗ ಯುಗಾದಿ ವಿಶೇಷಾಂಕದಲ್ಲಿ ಎರಡೂಕಾಲು ಅಡಿ

1 Comment

ಆತ್ಮೀಯರೆ,

ಈ ಬಾರಿಯ ತರಂಗ ಯುಗಾದಿ ವಿಶೇಷಾಂಕದಲ್ಲಿ ನನ್ನ ಪ್ರಪ್ರಥಮ ಕಥೆ ಎರಡೂಕಾಲು ಅಡಿ ಪ್ರಕಟವಾಗಿದೆ. ದಯವಿಟ್ಟು ಓದಿ. ಅಭಿಪ್ರಾಯ ತಿಳಿಸಿ.


ಕೋಲಾರದ ಹಾದಿಯಲ್ಲಿ ಕಂಡ ಕಲ್ಲುಗಳು….

2 Comments

ಈ ಬಾರಿ ಮುಕ್ತ ಮುಕ್ತ ಸಂವಾದಕ್ಕೆಂದು ಕೆಜಿಎಫ್ ಗೆ ಹೋಗುತ್ತಿದ್ದಾಗ ಕಣ್ಣಿಗೆ ಬಿದ್ದ ಬಂಡೆಕಲ್ಲುಗಳು, ಏನೇನೋ ಮಾತಾಡಿದವು……

ಯುಗ ಯುಗಾದಿ ಕಳೆದರೂ….

Leave a comment

ಈ ಬಾರಿಯ ಮುಕ್ತ ಮುಕ್ತ ಸಂವಾದ ಕೆಜಿಎಫ್ ನಲ್ಲಿ….

Leave a comment

ಆತ್ಮೀಯರೆ,

ಈ ಬಾರಿಯ ‘ಮುಕ್ತ ಮುಕ್ತ ಸಂವಾದ’ ವನ್ನು ಮಾರ್ಚ್ 13, ಶನಿವಾರ ಮಧ್ಯಾಹ್ನ ಮೂರುಗಂಟೆಗೆ ಕೆಜಿಎಫ್ ನಲ್ಲಿ ಆಯೋಜಿಸಲಾಗಿದೆ. ಸಂವಾದ ನಡೆಯುವ ಸ್ಥಳ

ಬಿಇಎಂಎಲ್ ಕಲಾಕ್ಷೇತ್ರ, ಬೆಮೆಲ್ ನಗರ, ಕೆಜಿಎಫ್ .

ಪ್ರವೇಶ ಉಚಿತ.

ತಮಗೆ ಪ್ರೀತಿಯ ಆಮಂತ್ರಣ…..

ಸುಘೋಷ್ ಎಸ್ ನಿಗಳೆ

(ದೇವಾನಂದಸ್ವಾಮಿ)

Older Entries

Follow

Get every new post delivered to your Inbox.

Join 2,050 other followers

%d bloggers like this: