ಮುಕ್ತ ಮುಕ್ತ ಸಂಭಾಷಣೆ

9 Comments

ನನ್ನ ಮೊದಲ ಧಾರಾವಾಹಿ ‘ಮುಕ್ತ ಮುಕ್ತ’ ದಲ್ಲಿಯೇ ನನಗೆ ನಟ ಹಾಗೂ ಸ್ಕ್ರಿಪ್ಟ್ ರೈಟರ್ ಆಗುವ ಎರಡು ಅವಕಾಶಗಳು ಒದಗಿ ಬಂದಿವೆ. ‘ಮುಕ್ತ ಮುಕ್ತ’ ಕ್ಕೆ ಶ್ರೀ ಟಿ.ಎನ್. ಸೀತಾರಾಮ್ ಅವರ ಮಾರ್ಗದರ್ಶನದಲ್ಲಿ ಸಂಭಾಷಣೆ ಬರೆಯುತ್ತಿದ್ದೇನೆ.

ಮುಕ್ತ ಮುಕ್ತ ಮುಕ್ತ....

ಯಾಕೆ ನಗುತ್ತೀರಿ ಮಕ್ಕಳೆ?

2 Comments

ದೇವರು ಕೊಟ್ಟ ಪೀಪಿ...ಹ್ಹಿ...ಹ್ಹಿ...ಹ್ಹಿ....

ಬಹುಶಃ 1960 ರ ಆಸುಪಾಸಿನ ಘಟನೆ. ನನ್ನ ದೂರದ ಸಂಬಂಧಿಕರೊಬ್ಬರು ಹೇಳಿದ್ದು.

ಆಗಿನ್ನೂ ಆಕೆ ಕಾನ್ವೆಂಟ್ ಶಾಲೆಯ ವಿದ್ಯಾರ್ಥಿನಿ. ಕಲಿಸಲು ಬರುತ್ತಿದ್ದವರೆಲ್ಲರೂ ಸಿಸ್ಟರ್ ಗಳು. ಒಮ್ಮೆ ಸಿಸ್ಟರ್ ಪಾಠ ಮಾಡುವಾಗ ಅವರ ಹೊಟ್ಟೆ ಅಪ್ಸೆಟ್ ಆಗಿ, ಭಾರೀ ಶಬ್ದ ಹೊರಟೇ ಬಿಟ್ಟಿತಂತೆ. ಕ್ಲಾಸಿನಲ್ಲಿದ್ದ ಮಕ್ಕಳೆಲ್ಲ ಹೋ ಅಂತ ನಕ್ಕರು. ಸಿಸ್ಟರ್ ಒಂಚೂರು ಕೋಪಗೊಳ್ಳಲಿಲ್ಲವಂತೆ. ಬದಲಾಗಿ ಆಕೆ ಹೇಳಿದ್ದು,,,,

“ಯಾಕೆ ನಗುತ್ತೀರಿ ಮಕ್ಕಳೆ? ಇದು ದೇವರು ಕೊಟ್ಟ ಪೀಪಿ”.

ಬರೀ ಬಾಲ್ ಬಂತು ಅಂದುಕೊಂಡಿದ್ದೇ ತಪ್ಪಾಯಿತು….

1 Comment

speeeeeeeeeed

ಬಾಸ್ ದುಬೈಗೆ ಹೊರಟಿದ್ದರು. ಅವರನ್ನು ಏರ್ ಪೋರ್ಟ್ ಗೆ ಬಿಡಲು ವಾಹಿದ್ ತನ್ನ ಮಹಿಂದ್ರಾ ಲೋಗಾನ್ ಕಾರನ್ನು 100 ಕೀಮಿ. ಸ್ಪೀಡಿನಲ್ಲಿ ಓಡಿಸುತ್ತಿದ್ದ. ಆಗಲೇ ಲೇಟ್ ಆಗಿದ್ದರಿಂದ ಎಕ್ಸಲೇಟರ್ ಮೇಲಿಟ್ಟಿದ್ದ ಕಾಲನ್ನು ಎತ್ತಲು ವಾಹಿದ್ ಸಿದ್ಧನಿರಲಿಲ್ಲ. ಸರಕ್ಕನೆ ಇನ್ನೋವಾ ಹಿಂದೆ ಹಾಕಿ, ಆಟೋವನ್ನು ಒಂದು ಇಂಚು ದೂರದಿಂದ ಓವರ್ ಟೇಕ್ ಮಾಡಿದ. ಈಗ ಆತನ ಕಾರು 120 ಕಿಮಿ. ಸ್ಪೀಡ್ ನಲ್ಲಿ ಓಡುತ್ತಿತ್ತು. ಕಳೆದ ಇಪ್ಪತ್ತು ವರ್ಷಗಳಿಂದ ತನ್ನ ಬಳಿ ಕೆಲಸ ಮಾಡುತ್ತಿದ್ದ ವಾಹಿದ್ ನ ಡ್ರೈವಿಂಗ್ ಬಗ್ಗೆ ಬಾಸ್ ಗೆ ಎಲ್ಲಿಲ್ಲದ ಆತ್ಮವಿಶ್ವಾಸ. ಹೀಗಾಗಿ ನಿಧಾನ ಹೋಗು ಎಂದು ಅವರು ವಾಹಿದ್ ಗೆ ಹೇಳಲಿಲ್ಲ. ಫ್ಲೈಟಿಗೆ ಬೇರೆ ತಡ ಆಗಿತ್ತಲ್ಲ….

ಹೆಬ್ಬಾಳ ದಾಟಿದ ಬಳಿಕ ಕಾರು ಗಾಳಿಯಲ್ಲಿ ಹಾರುವುದೊಂದೆ ಬಾಕಿಯಿತ್ತು. ಅಷ್ಟರಲ್ಲಿ ಸ್ವಲ್ಪ ದೂರದಲ್ಲಿ ಕ್ರಿಕೆಟ್ ಬಾಲೊಂದು ರಸ್ತೆಗೆ ಅಡ್ಡಲಾಗಿ ಉರುಳಿ ಬಂತು. ಓಹ್…ಬಾಲ್ ಅಷ್ಟೇ ಅಲ್ವ ಎಂದುಕೊಂಡು ವಾಹಿದ್ ಬ್ರೇಕ್ ಹಾಕುವ ಗೋಜಿಗೇ ಹೋಗಲಿಲ್ಲ…ಎರಡು ಸೆಕೆಂಡ್ ಕಳೆದಿರಬೇಕಷ್ಟೇ….ಬಾಲ್ ಹಿಂದೆಯೇ ಪುಟ್ಟ ಹುಡುಗನೊಬ್ಬ ರಸ್ತೆ ಮಧ್ಯ ಓಡಿ ಬಂದು ಬಿಟ್ಟ…..

ಒಂದೂವರೆ ತಿಂಗಳು ನನ್ನ ದೇಹದಲ್ಲಿದ್ದ ಸ್ಟೆಂಟ್ ಹೀಗಿತ್ತು…

Leave a comment

ಸಿಸ್ಟೋಸ್ಕೋಪಿ ಆದ ಬಳಿಕವೂ ಕೂಡ ಉಳಿದಿದ್ದ ಒಂದು ಕಿಡ್ನಿ ಸ್ಟೋನ್ ತೆಗೆಯಲು ನನ್ನ ದೇಹದೊಳಕ್ಕೆ ಈ ಸ್ಟೆಂಟ್ ಒಂದೂವರೆ ತಿಂಗಳು ಕೂರಿಸಲಾಗಿತ್ತು….

ಸ್ಟೆಂಟ್


ಶುಂಠಿಯನ್ನ ಗೊಬ್ಬರ ಗುಂಡಿಗೆ ಒಗದೀದಿವಿ….

2 Comments

ಪುಟ್ಟನನ್ನು ನೋಡಿಕೊಳ್ಳಲು ಅಮ್ಮ ಕೊಪ್ಪದಿಂದ ಬಂದಿದ್ದಾರೆ. ನಿರಂತರ ಮನೆಯ ಕೆಲಸದಲ್ಲಿಯೂ ಮಹಿಳಾ ಸ್ವಸಹಾಯ ಗುಂಪಿನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತ, ಮನೆಯ ಸುತ್ತಮುತ್ತ ತರಕಾರಿ ಬೆಳೆಯುತ್ತ, ಇಬ್ಬರು ಮೊಮ್ಮಕ್ಕಳನ್ನು ಸಂಭಾಳಿಸುತ್ತ ಅಮ್ಮ ಇಂದಿಗೂ ಕ್ರಿಯಾಶೀಲವಾಗಿದ್ದಾರೆ. ಇಂತಿಪ್ಪ ಅಮ್ಮ ಬೆಂಗಳೂರಿನ ನನ್ನ ಮನೆಗೆ ಬಂದು ಬೆಂಗಳೂರಿನ ಕಾಸ್ಟ್ ಆಫ್ ಲಿವಿಂಗ್, ಪಿಜ್ಝಾದ ರೇಟ್, ಕೆಲಸದವಳ ಅರೆಬರೆ ಕೆಲಸ, ಇತ್ಯಾದಿ ನೋಡಿ ಹೌಹಾರಿದ್ದಾಳೆ.

ಮೊನ್ನೆ ತರಕಾರಿ ತರಲೆಂದು ಅಮ್ಮನೊಡನೆ ಹತ್ತಿರದ ಅಂಗಡಿಗೆ ಹೋಗಿದ್ದೆ. ಹೈಬ್ರಿಡ್ ತರಕಾರಿಗಳನ್ನಿಟ್ಟುಕೊಂಡಿದ್ದ ಆ ತರಕಾರಿ ಅಂಗಡಿಯನ್ನು ನೋಡಿ ಮೊದಲ ನೋಟದಲ್ಲೇ ಅಮ್ಮ ಮುಖ ಸಿಂಡರಿಸಿದಳು. ಆದರೆ ಬೇರೆ ಉಪಾಯ ಇರಲಿಲ್ಲವಾಗಿ ಅಲ್ಲಿಯೇ ತರಕಾರಿ ತೆಗೆದುಕೊಳ್ಳಬೇಕಾಯಿತು. ಕುಂಬಳಕಾಯಿ 20 ರೂಪಾಯಿ, ಹೀರೇಕಾಯಿ 25 ರೂಪಾಯಿ, ಬೀನ್ಸ್ 60 ರೂಪಾಯಿ, ನುಗ್ಗೆಕಾಯಿ ಮೂರಕ್ಕೆ ಎಂಟುರೂಪಾಯಿ ಎಂದು ರೇಟು ಕೇಳಿ ಇನ್ನಷ್ಟು ಗಲಿಬಿಲಿಗೊಂಡಳು, ತರಕಾರಿ ಕೊಳ್ಳಲು ಹಿಂದೇಟು ಹಾಕಿದಳು. ಹೀಗೆ ಮಾಡಿದರೆ ತರಕಾರಿ ಕೊಂಡಹಾಗೇ ಎಂದುಕೊಂಡು ನಾನು ಅಮ್ಮನಿಗೆ ಒತ್ತಾಯ ಮಾಡಿ ಎಲ್ಲ ತರಕಾರಿಗಳನ್ನು ಚೀಲದಲ್ಲಿ ತುಂಬಿಕೊಳ್ಳತೊಡಗಿದೆ. ಲಿಸ್ಟ್ ನಲ್ಲಿ ಶುಂಠಿ ಕೂಡ ಇತ್ತು. “ಶುಂಠಿ ಹೆಂಗೆ?” ಅಮ್ಮ ಅಂಗಡಿಯವನನ್ನು ಕೇಳಿದಳು.

“60 ರೂಪಾಯಿ ಕೆಜಿ” ಅಂದ ಅವ.

“ಏನು 60 ರೂಪಾಯಿನಾ? ಸುಘೋಷಾ ನೋಡ 60 ರೂಪಾಯಿ ಅಂತೆ”

“ಆಯ್ತಮಾ, 100 ಗ್ರಾಂ ತಗಳ್ಳಾ?” ಅಂದೆ.

“ಹುಂ..ತಗಾ..ಇನ್ನೇನು ಮಾಡದು. ನೋಡು, ಹೈಬ್ರೀಡ್ ಶುಂಠಿ ತಗಳ್ಳಿಕೆ ಮನಸ್ಸು ಬರಲ್ಲ ಮಾರಾಯಾ…..”ಅಂದಳು.

ಅಂಗಡಿಯವ “ಇಲ್ಲ… ಶುಂಠಿ ಚೆನ್ನಾಗಿದೆ” ಅಂದ.

“ಎಂಥ ಚೆನ್ನಾಗಿದೆ….ನಾವು ಸಾವಯವ ಕೃಷಿಯಲ್ಲಿ ಶುಂಠಿ ಬೆಳೀತಿವಿ. ನಿಮ್ಮ ಶುಂಠಿಗಿಂತ ಅರ್ಧದಷ್ಟಿದ್ರೂ ಎಷ್ಟು ಚೆನ್ನಾಗಿರತ್ತೆ ಗೊತ್ತಾ? ಆದ್ರೆನ್ ಮಾಡದು. ಮೊನ್ನೆ ಕೊಪ್ಪದಲ್ಲಿ ಶುಂಠಿ ಬೆಳದ್ವಿ. ಕಿಲೋಗೆ 3 ರೂಪಾಯಿ ಕೂಡ ಸಿಗಲಿಲ್ಲ. ಎಲ್ಲ ಶುಂಠಿ ಒಯ್ದು ಗೊಬ್ಬರ ಗುಂಡಿಗೆ ಒಗದ್ವಿ” ಎಂದಳು.

ಇದು ತನಗೆ ಸಂಬಂಧಿಸಿದ್ದಲ್ಲ ಎಂದು ಅಂಗಡಿಯವ ಸುಮ್ಮನಿದ್ದ. ನಾನು ತರಕಾರಿ ಅಂಗಡಿಯವನಿಗೆ ದುಡ್ಡು ಕೊಡಲು ಪರ್ಸ್ ತೆಗೆದೆ.

ಉದಯವಾಣಿಯಲ್ಲಿ ನಾನು…

5 Comments



ಕಿರುತೆರೆಯಲ್ಲಿ ಕಾಣಿಸಿಕೊಂಡ ಬಳಿಕ ಮೊದಲ ಬಾರಿಗೆ ನನ್ನ ಸಂದರ್ಶನ ಉದಯವಾಣಿಯ ನಮ್ಮ ಬೆಂಗಳೂರು’ ದಲ್ಲಿ ಪ್ರಕಟವಾಗಿದೆ. ಹೇಮಾ ವೆಂಕಟ್ ಚಿಕ್ಕ-ಚೊಕ್ಕವಾಗಿ ನನ್ನ ಕುರಿತು ಬರೆದಿದ್ದಾರೆ. ಥ್ಯಾಂಕ್ಸ್ ಹೇಮಾ…..

ಕೃಪೆ - ಉದಯವಾಣಿ

ಹುಡುಗಿ ಬಂದಿದಾಳೆ…..

2 Comments

ಫೋಟೋ - ಇಂಟರ್ನೆಟ್

ನಮ್ಮ ದಿನನಿತ್ಯದ ವ್ಯವಹಾರದಲ್ಲಿ ನಮಗೆ ಉದ್ದೇಶವಿಲ್ಲದೆಯೇ ಹಲವು ಹಾಸ್ಯ ಪ್ರಸಂಗಗಳು ನಡೆದುಬಿಡುತ್ತವೆ. ಅದರಲ್ಲೂ ಪೋಲಿ ಪ್ರಸಂಗಗಳು ಜರುಗುವುದು, ರವಷ್ಟು ಹೆಚ್ಚೇ. ಅದರಲ್ಲೂ ಹಿರಿಯರಿಂದ ಗೊತ್ತಿಲ್ಲದೆಯೆ ಪೋಲಿ ಪ್ರಸಂಗಗಳೂ ಜರುಗಿದರಂತೂ ಏಳುಕೊಂಡಲವಾಡನೇ ಗತಿ…..

ನನ್ನ ಬಂಧುವೊಬ್ಬರ ಕಿರಾಣಿ ಅಂಗಡಿಯಲ್ಲಿ ನಡೆದಿದ್ದು. ಅವರ ಕಿರಾಣಿ ಅಂಗಡಿ, ಮನೆಯ ಒಂದು ಪಾರ್ಶ್ವದಲ್ಲೇ ಇದೆ. ಅಂಗಡಿಯನ್ನು ಸುಮಾರು 35 ವರ್ಷದ ಮಗ ಹಾಗೂ ಸುಮಾರು 70 ವರ್ಷದ ಅವರ ಅಪ್ಪ ನಡೆಸಿಕೊಂಡು ಹೋಗುತ್ತಾರೆ. ಅಂಗಡಿಯ ಸಂಪೂರ್ಣ ಜವಾಬ್ದಾರಿ ಮಗನದ್ದೇ. ಆದರೆ ಅಂಗಡಿಗೆ ಸಾಮಾನು ತರಬೇಕು, ಇನ್ನೊಂದು ಮತ್ತೊಂದು ಅಂತ ಕೆಲಸ ಬಿದ್ದಾಗಲೆಲ್ಲ, ತಂದೆಯೇ ಅಂಗಡಿ ನೋಡಿಕೊಳ್ಳುವುದು. ಮಗ ಪ್ರಾಮಾಣಿಕ ಹಾಗೂ ಶ್ರಮ ಜೀವಿ. ತಂದೆ ತೀರ ಮುಗ್ದರು. ಜಗತ್ತಿನ ಮುಗ್ಧರನ್ನೆಲ್ಲ ಸೇರಿಸಿದರೂ, ಇವರ ಮುಗ್ಧತೆ ಸ್ವಲ್ಪ ಹೆಚ್ಚೇ ಎನ್ನಿವಷ್ಟಿರುತ್ತದೆ.

ಅದೊಮ್ಮೆ ಅಂಗಡಿಗೆ ಸಾಮಾನು ತರಲೆಂದು ಹೊರಗೆ ಹೋಗಿದ್ದ ಮಗ ಆಗಷ್ಟೆ ಮನೆಗೆ ವಾಪಸ್ ಆಗಿದ್ದಾನೆ. ಮಧ್ಯಾಹ್ನವಾದ್ದರಿಂದ ಊಟ ಮಾಡಲು ಕೂತಿದ್ದಾನೆ. ಅಂಗಡಿಯನ್ನು ತಂದೆ ನೋಡಿಕೊಳ್ಳುತ್ತಿದ್ದಾರೆ. ಬಂದ ನಾಲ್ಕಾರು ಜನರಿಗೆ ಸಾಮಾನು ಕಟ್ಟಿಕೊಡುತ್ತಿದ್ದಾರೆ. ಅದೇ ಸಮಯಕ್ಕೆ ಏರು ಜವ್ವನೆಯೊಬ್ಬಳು ಅಂಗಡಿಗೆ ಬಂದಿದ್ದಾಳೆ. ತಂದೆ ಏನು ಬೇಕೆಂದು ಕೇಳಿದ್ದಕ್ಕೆ “ಕಸಬರಿಗೆ” ಎಂದಿದ್ದಾಳೆ. ತಂದೆ ಅಂಗಡಿಯಲ್ಲಿ ಕಸಬರಿಗೆ ಹುಡುಕಿದ್ದಾರೆ. ಅವರಿಗೆ ಸಿಕ್ಕಿಲ್ಲ. ನಮ್ಮ ಕಡೆ ಕಸಬರಿಗೆಗೆ, ಹಿಡಿ ಎನ್ನುತ್ತಾರೆ. ತಂದೆ ಅಂಗಡಿಯಿಂದಲೇ ಜೋರಾಗಿ ಮಗನಿಗೆ ಕೂಗಿದ್ದಾರೆ….”ಏ…ನೋಡಾ…ಹುಡುಗಿ ಬಂದಿದಾಳೆ, ಹಿಡಿಬೇಕಂತೆ….”

ಇತರ ಗಿರಾಕಿಗಳು ಘೊಳ್ ಎಂದು ನಕ್ಕರೆ, ಹುಡುಗಿ ನಾಚಿ ನೀರಾಗಿದ್ದಾಳೆ. ಮಗ ಸುಸ್ತೋ ಸುಸ್ತು….ತಂದೆಗೆ ಮಾತ್ರ ಪಾಪ ಏನೂ ಗೊತ್ತಾಗಿಲ್ಲ….

‘ಪ್ರಕೃತಿ’ಗೆ 50 ರ ಸಂಭ್ರಮ…

Leave a comment

ಬೆಂಗಳೂರಿನ ಕಬ್ಬನ್ ಬ್ಯಾಂಡ್ ಸ್ಟಾಂಡ್ ನಲ್ಲಿ ಕನ್ನಡ ಗಾನ ಸುಧೆ ಹರಿಸಿದ್ದು ಪ್ರಕೃತಿ. ಎಂ ಎಸ್ ಪ್ರಸಾದ್ ಹಾಗೂ ಪ್ರವೀಣ್ ಡಿ. ರಾವ್ ಅವರ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಇದೀಗ ಪ್ರಕೃತಿಗೆ 50 ನೇ ಸಂಭ್ರಮ. ಈ ಬಾರಿಯ ಪರಿಕಲ್ಪನೆ ಗಂಧದ ಗುಡಿ. ಪಾಲ್ಗೊಳ್ಳಿ….ಪ್ರಕೃತಿಯನ್ನು ಪ್ರೋತ್ಸಾಹಿಸಿ…..

ಪ್ರಕೃತಿ

ಬ್ಯಾಂಡ್ ಸ್ಟಾಂಡ್

PRAKRUTHI Habba will complete 50 events this week. We take this opportunity to Thank each one of you for your support. We are pleased to invite you with your family and friends to “Gandhada Gudi” a historic musical event featuring Super Hit Songs of Dr Raj Kumar and Dr Vishnuvardhan. 6 veteran musicians will be felicitated by Team Snehaloka comprising of Smt. Bharathi Vishnuvardhan, Anirudh, Dharma, Avinash, Shobraj, Abhijith and many others.The latest sensation Sharmila Mandre, Neethu and many other celebrities will be present during the event. Team Anthardhwani comprises of winners from various reality shows and veteran musicians will enthrall you and make you relive the legends.

Come be a part of the celebrations.

Please share the invite with your friends.

Please say no to plastic.

Please keep a bowl of water on the roof for birds.

Entry FREE.

Date : 25th April 2010

Venue: Bandstand, Cubbon Park

Time : 5.00 pm to 7.00 pm

ಹೆಚ್ಚಿನ ಮಾಹಿತಿಗೆ -

M.S.Prasad
99453 68083
(Executive Trustee)
PRAKRUTHI

ಇಳೇಖಾನ್ ಇನ್ನಿಲ್ಲ…

1 Comment

ಈಟಿವಿಯಲ್ಲಿದ್ದಾಗ ನನ್ನ ಹಿರಿಯ ಸಹೋದ್ಯೋಗಿ ಹಾಗೂ ಮಂಡ್ಯದ ವರದಿಗಾರರಾಗಿದ್ದ ಇಳೇಖಾನ್ ಶ್ರೀಕಂಠ ಇನ್ನಿಲ್ಲ. ಐ ವಿಲ್ ಮಿಸ್ ಯೂ ಸರ್….

ನಿಮ್ಮನ್ನು ಕಳೆದುಕೊಂಡ ಪತ್ರಿಕೋದ್ಯಮ ಬಡವಾಗಿದೆ.....(ಫೋಟೋ - ಅವಧಿ)

ಸಾಹಿತಿಯೊಬ್ಬರ ಉಠಾ ಬೈಸ್ ಪ್ರಕರಣವು…..

Leave a comment

ಫೋಟೋ - ಇಂಟರ್ನೆಟ್

ವಿಷುವಲ್ ಮೀಡಿಯಾದಲ್ಲಿ ಈ ಕಷ್ಟ ತಪ್ಪಿದ್ದಲ್ಲ….ಸುದ್ದಿ ಕರಾರುವಕ್ಕಾಗಿ ಸಿಕ್ಕಿ ಬಿಟ್ಟಿರುತ್ತದೆ….ಆದರೆ ಅದಕ್ಕೆ ಸಂಬಂಧಿಸಿದ ವಿಷುವಲ್ ಇರುವುದೇ ಇಲ್ಲ. ಹೋಗಲಿ ಫೈಲ್ ಶಾಟ್ ತೋರಿಸೋಣ ಎಂದರೆ ಒಮ್ಮೊಮ್ಮೆ ಅದೂ ಕೂಡ ಇರುವುದಿಲ್ಲ. ಕೆಲವೊಮ್ಮೆಯಂತೂ ಫೈಲ್ ಶಾಟ್ ಗಳನ್ನು ತೋರಿಸಿ ತೋರಿಸಿ, ಎಷ್ಟು ಅಭ್ಯಾಸವಾಗಿಬಿಟ್ಟಿರುತ್ತದೆಯೆಂದರೆ ಸುಪ್ರೀಂ ಕೋರ್ಟ್ ವಿಷುವಲ್ ತೋರಿಸುವಾಗ ಪ್ರತಿಬಾರಿಯೂ ಕಾಗೆಯೊಂದು ಹಾರಿ ಹೋಗುತ್ತದೆ, ಒಬ್ಬ ನಿರ್ದಿಷ್ಟ ವ್ಯಕ್ತಿ ಸೈಕಲ್ ತುಳಿದು ಹೋಗುತ್ತಾನೆ….ಹೀಗೆ. ಪ್ರತಿ ಚ್ಯಾನಲ್ ಕೂಡ ತನ್ನದೇ ಆದ ಆರ್ಕೈವ್ ಹೊಂದಿದ್ದರೂ, ಕೆಲವೊಮ್ಮೆ ಯೂ ಟ್ಯೂಬ್ ಕೂಡ ಕೆಲಸಕ್ಕೆ ಬಾರದಾಗಿರುತ್ತದೆ.

ಇದು ಈಟಿವಿಯಲ್ಲಿ ಅಂದಕಾಲತ್ತಿಲ್ ನಡೆದ ಘಟನೆ. ಅದೊಮ್ಮೆ ಓರ್ವ ಪ್ರಖ್ಯಾತ ಸಾಹಿತಿಯೊಬ್ಬರಿಗೆ ಸಂಬಂಧಿಸಿದ ಮಹತ್ವದ ಸುದ್ದಿ ಸಿಕ್ಕಿತ್ತು. ಸುದ್ದಿ ಮಹತ್ವದ್ದಾಗಿತ್ತು ಹಾಗೂ ಪೂರ್ಣ ಸುದ್ದಿ ಸಿಕ್ಕಿತ್ತು. ಬುಲೆಟಿನ್ ಟೈಮ್ ಹತ್ತಿರವಾದ್ದರಿಂದ ಸುದ್ದಿಯನ್ನು ಎವಿ (ಆಂಕರ್ ವಿಷುವಲ್ – ಆಂಕರ್ ಸುದ್ದಿ ಓದುತ್ತಿರುವಾಗ ವಿಷುವಲ್ ಓವರ್ ಲ್ಯಾಪ್ ಆಗುವುದು) ಫಾರ್ಮಾಟ್ ನಲ್ಲಿ ತೆಗೆದುಕೊಳ್ಳಲು ನಿರ್ಧರಿಸಲಾಯಿತು. ಸುದ್ದಿಯನ್ನೇನೋ ಬರೆಯಲಾಯಿತು. ಆದರೆ ಅದಕ್ಕೆ ವಿಷುವಲ್ ಇನ್ಸರ್ಟ್ ಮಾಡುವ ಕೆಲಸ ಟ್ರೇನಿ ಕಾಪಿ ಎಡಿಟರ್ ತಲೆಗೆ ಬಿತ್ತು. ಆ ಮಹಾಶಯ ಸಾಹಿತಿಯ ಫೈಲ್ ಶಾಟ್ ಗೆ ಹುಡುಕಿದ್ದಾನೆ. ಎಷ್ಟು ಹುಡುಕಿದರೂ ಸಾಹಿತಿಯ ದರ್ಶನ ಆರ್ಕೈವ್ ನಲ್ಲಿ ಆಗೇ ಇಲ್ಲ. ಬುಲೆಟಿನ್ ಟೈಮ್ ಬೇರೆ ಹತ್ತಿರಾಗುತ್ತಿದೆ. ಕೊನೆಗೊಮ್ಮೆ ಟ್ರೇನಿ ಸಾಹೇಬರಿಗೆ ಸಾಹಿತಿಯಿರುವ ವಿಷುವಲ್ ದರ್ಶನವಾಗಿದೆ. ದುರಾದೃಷ್ಟವೆಂದರೆ ಆ ಸಾಹಿತಿ ಚೇರ್ ನಿಂದ ಎದ್ದು ನಿಲ್ಲುವ ಸುಮಾರು ಮೂರು ಸೆಕೆಂಡ್ ಗಳ ವಿಷುವಲ್ ಅಷ್ಟೇ ಸಿಕ್ಕಿದೆ. ಮುಳುಗುತ್ತಿರುವವನಿಗೆ ಹುಲ್ಲುಕಡ್ಡಿಯೇ ಆಸರೆ, ಬುಲೆಟಿನ್ ಟೈಮ್ ಹತ್ತಿರವಾದವನಿಗೆ ಮೂರು ಸೆಕೆಂಡ್ ವಿಷುವಲ್ಲೇ ಆಸರೆ….ಅದನ್ನೇ ಇನ್ಸರ್ಟ್ ಮಾಡಿ ಎಕ್ಸ್ ಪೋರ್ಟ್ ಮಾಡಿದ್ದಾನೆ ಕಾಪಿ ಎಡಿಟರ್.

ಸುದ್ದಿ ಪ್ರಸಾರವಾದಾಗ ಮಾತ್ರ ಪ್ರಮಾದವಾಗಿ ಹೋಗಿತ್ತು. ಆಂಕರ್ ಸುದ್ದಿಯನ್ನು ಓದುತ್ತಿದ್ದಂತೆ ವಿಷುವಲ್ ಫ್ಲೋ ಬಿಡಲಾಗಿದೆ. ವಿಷುವಲ್ ನಲ್ಲಿ ಆ ಸಾಹಿತಿ ಕುರ್ಚಿಯಿಂದ ಮೇಲೆಳುತ್ತಿದ್ದಾರೆ, ಕೂರುತ್ತಿದ್ದಾರೆ, ಮತ್ತೆ ಮೇಲೆಳುತ್ತಿದ್ದಾರೆ, ಮತ್ತೆ ಕೂರುತ್ತಿದ್ದಾರೆ, ಹೀಗೆಯೇ ತಮ್ಮ ಉಠಾ ಬೈಸ್ ಸುದ್ದಿ ಮುಗಿಯುವವರೆಗೂ ಮುಂದುವರೆಸಿದ್ದಾರೆ. ಬುಲೆಟಿನ್ ಪ್ರೋಡ್ಯೂಸರ್, ಡೆಸ್ಕ್ ಇಂಚಾರ್ಜ್ ಲಬೋ ಲಬೋ ಎಂದಿದ್ದಾರೆ.

ಆಗಿದ್ದಿಷ್ಟು……ಸುದ್ದಿಗೆ ತಕ್ಕಷ್ಟು ವಿಷುವಲ್ ಇಲ್ಲದ ಕಾರಣ ಕಾಪಿ ಎಡಿಟರ್ ತನ್ನ ಶಾರ್ಪ್ ತಲೆಯನ್ನು 120 ಕಿಮಿ. ಸ್ಪೀಡ್ ನಲ್ಲಿ ಓಡಿಸಿದ್ದಾನೆ. ಪುಣ್ಯಾತ್ಮ ಆ ಮೂರು ಸೆಕೆಂಡ್ ವಿಷುವಲ್ಲನ್ನೇ ಕಂಟಿನ್ಯೂಅಸ್ ಆಗಿ ಕಾಪಿ ಪೇಸ್ಟ್ ಮಾಡಿಬಿಟ್ಟಿದ್ದಾನೆ. ಸುದ್ದಿ ನೋಡಿದ ಎಲ್ಲರೂ ಸುಸ್ತೋ ಸುಸ್ತು….ಆ ಸಾಹಿತಿ ಮಾತ್ರ ಈ ಸುದ್ದಿಯನ್ನು ನೋಡಿದರೋ ಇಲ್ಲವೋ ಇನ್ನೂ ಗೊತ್ತಾಗಿಲ್ಲ…..

ಸಂತೆಯೊಳಗೊಂದು ಮನೆಯ ಮಾಡಿ ನಾಟಕಕ್ಕೆ ಆಹ್ವಾನ…

Leave a comment

ಪ್ರತಿಮಾ ನಾಟಕ ರಂಗ 1970 ರಿಂದಲೂ ರಂಗ ಚಟುವಟಿಕೆಗಳಲ್ಲಿ ನಿರತವಾಗಿದೆ. ಖ್ಯಾತ ಬರಹಗಾರರು ಹಾಗೂ ವಿಮರ್ಶಕರಾದ ಪಿ. ಲಂಕೇಶ್, ಡಾ. ಕೆ. ಮರುಳಸಿದ್ದಪ್ಪ, ಟಿ. ಎನ್. ಸೀತಾರಾಮ್, ಕಿ.ರಂ. ನಾಗರಾಜ್ ಹಾಗೂ ಇತರ ಸಮಾನ ಮನಸ್ಕರ ಪ್ರಯತ್ನದ ಫಲವೇ ಪ್ರತಿಮಾ ನಾಟಕ ರಂಗ. ಪ್ರಸ್ತುತ ಪ್ರತಿಮಾ ರಂಗ ಸಂಶೋಧನಾ ಪ್ರತಿಷ್ಠಾನವು ಬಡಾವಣೆ ರಂಗಭೂಮಿಯ ಪರಿಕಲ್ಪನೆಯನ್ನು ಪ್ರಚುರಪಡಿಸುವುದರಲ್ಲಿ ನಿರತವಾಗಿದೆ. ಈ ನಿಟ್ಟಿನಲ್ಲಿ ಖ್ಯಾತ ನಿರ್ದೇಶಕ ಎಂ ಸಿ ಆನಂದ್ ಅವರು ರಚಿಸಿ, ನಿರ್ದೇಶಿಸಿರುವ ‘ಸಂತೆಯೊಳಗೊಂದು ಮನೆಯ ಮಾಡಿ’ ನಾಟಕವನ್ನು ಏಪ್ರಿಲ್ 24 ರಂದು ಪ್ರದರ್ಶಿಸಲಿದೆ. ರಿಸೆಷನ್ ಹಾಗೂ ನಿರುದ್ಯೋಗ ಸಮಸ್ಯೆಯನ್ನು ಹಾಸ್ಯದ ಮೂಲಕ ಪ್ರದರ್ಶಿಸುತ್ತಿರುವುದು ನಾಟಕದ ವಿಶೇಷತೆ.

ಸ್ಥಳ – ಸುಚಿತ್ರಾ ಸಭಾಂಗಣ (ಸುಚಿತ್ರಾ ಫಿಲಂ ಸೊಸೈಟಿ), ನಂ. 36, 9ನೇ ಮೇನ್, ಬಿ. ವಿ. ಕಾರಂತ್ ರೋಡ್, ಬನಶಂಕರಿ ಎರಡನೇ ಹಂತ, ಬೆಂಗಳೂರು- 70

ಸಮಯ – ಸಂಜೆ 6.30 ಕ್ಕೆ.

ವಿವರಗಳಿಗೆ - 9980157147 ಅಥವಾ 9980007239.

ತಪ್ಪದೇ ಬನ್ನಿ….

ಸಂತೆಯೊಳಗೊಂದು ಮನೆಯ ಮಾಡಿ

ಸಂತೆಯೊಳಗೊಂದು ಮನೆಯ ಮಾಡಿ

ಸಂತೆಯೊಳಗೊಂದು ಮನೆಯ ಮಾಡಿ

ಸಂತೆಯೊಳಗೊಂದು ಮನೆಯ ಮಾಡಿ

ಸಂತೆಯೊಳಗೊಂದು ಮನೆಯ ಮಾಡಿ

ಸಂತೆಯೊಳಗೊಂದು ಮನೆಯ ಮಾಡಿ

ಸಂತೆಯೊಳಗೊಂದು ಮನೆಯ ಮಾಡಿ

ಸಂತೆಯೊಳಗೊಂದು ಮನೆಯ ಮಾಡಿ

ಸಂತೆಯೊಳಗೊಂದು ಮನೆಯ ಮಾಡಿ

ಸಂತೆಯೊಳಗೊಂದು ಮನೆಯ ಮಾಡಿ

ಸಂತೆಯೊಳಗೊಂದು ಮನೆಯ ಮಾಡಿ

ಸಂತೆಯೊಳಗೊಂದು ಮನೆಯ ಮಾಡಿ

ಉಸ್ನೆ ಜಿಸ್ ಜಿಸ್ ಜಗಹ್….

1 Comment

ಫೋಟೋ - ಇಂಟರ್ನೆಟ್

ಉಸ್ನೆ ಜಿಸ್ ಜಿಸ್ ಜಗಹ್

ರಖೆ ಕದಮ್….

ಹಮನೆ ವೋ ಹರ್ ಜಮೀನ್ ಚೂಮ್ ಲೀ…..

ಔರ್ ವೋ ಬೆವಫಾ ಘರ್ ಆಕರ್ ಕೆಹತಿ ಹೈ

“ಆಂಟಿ, ನಿಮ್ಮ ಮಗ ಇನ್ನೂ ಮಣ್ಣು ತಿಂತಾನೆ ನೋಡಿ

ಸೆನ್ಸಾರ್ ಕಾಯಿದೆಗೆ ತಿದ್ದುಪಡಿ…

Leave a comment

ಕೃಪೆ - ವಿಜಯ ಕರ್ನಾಟಕ

ರಜನಿಕಾಂತ್ ಈಮೇಲ್ ಐಡಿ ಏನು?

7 Comments

ಇದು ರಜನಿಕಾಂತ್ ಗೆ ಮಾತ್ರ ಸಾಧ್ಯ…..

gmail@rajanikanth.com

ಸಾಫ್ಟ್ ವೇರ್ ಇಂಜಿನಿಯರ್ ಹೀಗೆ ಪ್ರಾಮಿಸ್ ಮಾಡಿರ್ಲೇಬೇಕಂತೆ…

Leave a comment

1. ನಾನು ವಿಶ್ರಾಂತಿ ತೆಗೆದುಕೊಳ್ಳುವುದನ್ನು ದ್ವೇಷಿಸುತ್ತೇನೆ.

2. ನನ್ನ ಬಾಲ್ಯದಲ್ಲಿಯೇ ನಾನು ಬದುಕನ್ನು ಎಂಜಾಯ್ ಮಾಡಿ ಆಗಿದೆ.

3. ನನಗೆ ಟೆನ್ಶನ್ ಅಂದ್ರೆ ತುಂಬಾ ಇಷ್ಟ.

4. ನನ್ನ ಕುಟುಂಬದ ಜೊತೆ ಸಮಯ ಕಳೆಯೋದು ಅಂದ್ರೆ ನನಗಾಗಲ್ಲ.

5. ಭಾನುವಾರ ಹಾಗೂ ರಜಾದಿನಗಳಂದು ಕೆಲಸ ಮಾಡೋದು ಅಂದ್ರೆ ನನಗೆ ಪಂಚಪ್ರಾಣ.

6. ನನ್ನ ಮೇಲೆಯೇ ನನಗೆ ಸೇಡು ತೀರಿಸಿಕೊಳ್ಳಬೇಕಾಗಿದೆ.

(ದಾವಣಗೆರೆಯಿಂದ ಚಂದ್ರಶೇಖರ್ ಕಳಿಸಿದ್ದು)

ನನ್ನ ಕಂಪ್ಯೂಟರ್ ಚೇತರಿಸಿಕೊಳ್ಳುತ್ತಿದೆ…

Leave a comment

ಎರಡು ತಪ್ಪುಗಳಾಗಿದ್ದವು.

1. ಟೆಂಪ್ ಫೈಲ್ ಗಳನ್ನು ಕಳೆದ ಸುಮಾರು ಮೂರು ವರ್ಷಗಳಿಂದ ಡಿಲೀಟ್ ಮಾಡಿರಲಿಲ್ಲ.

2. ಫ್ರೀ ಎಂಟಿ ವೈರಸ್ ಅನ್ನು ನಂಬಿದ್ದೆ.

ಈಗ ಎರಡೂ ಪ್ರಾಬ್ಲಂ ಗಳೂ ಸಾಲ್ವ್ ಆಗಿವೆ. ಕಂಪ್ಯೂಟರ್ ಚೇತರಿಸಿಕೊಳ್ಳುತ್ತಿದೆ. ನಿರಂತರ ಬ್ಲಾಗಿಂಗ್  ಆರಂಭವಾಗಲಿದೆ….

ಫೋಟೋ - ಇಂಟರ್ನೆಟ್

ನನ್ನ ಕಂಪ್ಯೂಟರ್ ಮೇಲೆ ವೈರಸ್ ಅಟ್ಯಾಕ್ ಆಗಿದೆ…..

1 Comment

ಆತ್ಮೀಯರೇ,

ಎಷ್ಟೇ ಕೇರ್ ತೆಗೆದುಕೊಂಡರೂ ಆಗಬಾರದ್ದು ಆಗಿಹೋಗಿದೆ. ನನ್ನ ಕಂಪ್ಯೂಟರ್ ಮೇಲೆ ವೈರಸ್ ಅಟ್ಯಾಕ್ ಆಗಿದೆ. ತಕ್ಷಣ ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋದರೂ, ಅಲ್ಲಿ icu ನಲ್ಲಿ ಅದನ್ನು ದಾಖಲಿಸಲಾಗಿದೆ. ಕಂಪ್ಯೂಟರ್ ಗುಣವಾದ ತಕ್ಷಣ ಮತ್ತೆ ಬ್ಲಾಗಿಂಗ್ ಶುರು ಮಾಡುತ್ತೇನೆ…..

ಕ್ಷಮೆಯಿರಲಿ…..

ವಿಶ್ವಾಸಿ…

ಸುಘೋಷ್ ಎಸ್. ನಿಗಳೆ

ನೀರಿಗಾಗಿ ಬಡಿದಾಟ – ಒಬ್ಬರ ಸಾವಲ್ಲಿ ಅಂತ್ಯ…

2 Comments

ಕೃಪೆ - ವಿಜಯ ಕರ್ನಾಟಕ

ಈ ತಿಂಗಳ 17 ಕ್ಕೆ ಆರ್ಣವ…

Leave a comment

ಹೇಮಾಮಾಲಿನಿ, ರೇಖಾ ಆಕರ್ಷಣೆ ಕಡಿಮೆಯೆ?

2 Comments

‘ಮುಕ್ತ ಮುಕ್ತ’ ದ ‘ಕಲ್ಯಾಣಿ’ ಪಾತ್ರಧಾರಿ ಧನ್ಯಶ್ರೀ ಶ್ರೀಹರಿ ಈ ಬಾರಿಯ ಸುಧಾ ಪ್ರತಿಸ್ಪಂದನದಲ್ಲಿ…

ಕೃಪೆ - ಸುಧಾ

Older Entries

Follow

Get every new post delivered to your Inbox.

Join 2,047 other followers

%d bloggers like this: