ನನ್ನ “ಸಾಮ್ರಾಟ” ಇನ್ನಿಲ್ಲ
November 29, 2010
ಭೂತ ಚಿಕಿತ್ಸೆ ಪಂಡಿತರು
November 28, 2010
ಮುಂಬೈ ದಾಳಿಗೆ ಇಂದಿಗೆ ಎರಡು ವರ್ಷ
November 26, 2010
ಪ್ರಜಾಪ್ರಭುತ್ವ ಕೊಟ್ಟ ಕೊಡುಗೆಯು, ಫೋಟೋ ಫಿನಿಶ್ mumbai terror attack 1 Comment
ಪಾಕಿಸ್ತಾನದ ಹತ್ತು ಜನ ಪಾತಕಿಗಳು ಮುಂಬೈ ಮೇಲೆ ದಾಳಿ ನಡೆಸಿದ ಕರಾಳ ದಿನಕ್ಕೆ ಇಂದು ಎರಡು ವರ್ಷ. ಆ ಘಟನೆಯನ್ನು ನೆನೆಸಿಕೊಂಡರೆ ನನಗಿನ್ನೂ ರಕ್ತ ಕುದಿಯುತ್ತದೆ, ಸಂದೀಪ ಉನ್ನಿಕೃಷ್ಣನ್ ರ ವೀರ ಮರಣ ಮೈಮೇಲೆ ಮುಳ್ಳು ಬರುವಂತೆ ಮಾಡುತ್ತದೆ. ಮುಂಬೈ ದಾಳಿಯಲ್ಲಿ ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಹೋರಾಡಿದ ನೂರಾರು ಕಮಾಂಡೋಗಳಿಗೆ ಶತಶಃ ಪ್ರಣಾಮಗಳು….
ಚಿತ್ರಕೃಪೆ – ಇಂಟರ್ನೆಟ್ ಹಾಗೂ ಸಂದೇಶ ಪತ್ರಿಕೆ.
ಅಯ್ಯೋ ಮಲೆಯಾಳಿ ಕನ್ನಡವೇ….
November 25, 2010
ಪ್ರಾಮಿಸ್ ಟೂತ್ ಪೇಸ್ಟ್
November 24, 2010
A pride man is below to pig!!
November 23, 2010
ಸುಧಾದಲ್ಲಿ ನನ್ನ ‘ಅತ್ತೆ’ಯ ಸಂದರ್ಶನ
November 22, 2010
ಇದ್ಯಾಕೋ ತುಂಬಾ ಡೈರೆಕ್ಟ್ ರಿಪೋರ್ಟಿಂಗ್ ಅನ್ನಿಸಿತು
November 20, 2010
ಮಣಿಕರ್ಣಿಕಾ ಉರ್ಫ್ ಝಾನ್ಸಿರಾಣಿ ಲಕ್ಷ್ಮೀಬಾಯಿಯವರ 175 ನೇ ಜನ್ಮದಿನ ಇಂದು
November 19, 2010
ಅವರೇನು ಮಾಡಿದರು?, ಐತಿಹಾಸಿಕ jhansi rani lakshmibaayi, manikarnikaa, t n ramakrishna 1 Comment
ಕೆಪಿಪೂ ಅವರ ಮಾಯಾಮೃಗ ನೋಡಲು ಬನ್ನಿ
November 19, 2010
ನಾಟಕ k p poornachandra tejaswi, kiran vati, maayaamruga, prithwi aaradhyaa, vati kutir Leave a comment
ಮನುಷ್ಯ ಸುಮ್ಮನೆ ಕೂರ್ತಾನೆ. ದೇವರು ಯಾಕೆ ಸುಮ್ನಿರ್ತಾನೆ?
November 18, 2010
ಕಿರುತೆರೆಯಲ್ಲಿ ನಟಿಯಾಗಿರುವ ನನ್ನ ಸ್ನೇಹಿತೆಯೊಬ್ಬಳು ಹೇಳಿದ ಘಟನೆ ಇದು……
ನಟನೆ ಎನ್ನುವುದು ನೀರ ಮೇಲಣ ಗುಳ್ಳೆ. ಅದು ಕಿರುತೆರೆಯಾಗಿರಬಹುದು ಅಥವಾ ಬೆಳ್ಳಿತೆರೆಯಾಗಿರಬಹುದು. ಒಂದು ಕಾಲದಲ್ಲಿ ಮಿರಿಮಿರಿ ಮಿಂಚಿದ್ದ ಎಷ್ಟೋ ಜನ ನಟ-ನಟಿಯರು ಕೊನೆ ದಿನಗಳಲ್ಲಿ ಒಪ್ಪೊತ್ತು ಊಟಕ್ಕೂ ಪರದಾಡಿ, ಹೆಂಡತಿ ಮಕ್ಕಳನ್ನು ಬೀದಿಪಾಲು ಮಾಡಿ, ಪತ್ರಿಕೆಗಳಲ್ಲಿ ಸಿಂಗಲ್ ಕಾಲಂ ಸಾವಿನ ಸುದ್ದಿ ಮಾಡಿ ಸತ್ತು ಹೋಗಿದ್ದಾರೆ. ಆದರೆ ಇಷ್ಟೆಲ್ಲ ಇದ್ದರೂ ನಮ್ಮ ನಟರಿಗೆ ಬುದ್ಧಿ ಅನ್ನೋದು ಬರೋದೇ ಇಲ್ವಾ ಅನ್ಸತ್ತೆ.
ಒಬ್ಬ ನಟರಿದ್ದಾರೆ ಸುಘೋಷ್. ತುಂಬಾ ಹಿರಿಯ ನಟರು. ಅವರ ಆಕ್ಟಿಂಗ್ ಬಗ್ಗೆ ಎರಡು ಮಾತಿಲ್ಲ ನೋಡು. ಸಿಂಗಲ್ ಟೇಕ್ ಆರ್ಟಿಸ್ಟ್. ಔಟ್ ಪುಟ್ ಅದ್ಭುತವಾಗಿದೆ. ಆ ಯಪ್ಪಾ ಕ್ಯಾಮರೆ ಮುಂದೆ ನಿಂತ್ರೆ, ಡೈರೆಕ್ಟರ್ ಆದವನು ಎಪಿಸೋಡ್ ಗಟ್ಲೆ ಸುತ್ತಬಹುದು.
ಆದರೆ……
ಅದೇ ಎಟಿಟ್ಯೂಡ್ ವಿಷಯಕ್ಕೆ ಬಂದ್ರೆ ಕನ್ನಿಂಗು, ದುರಹಂಕಾರ, ನನ್ನ ಬಿಟ್ರೆ ಬೇರೆ ಆಕ್ಟರ್ ಗಳೇ ಇಲ್ಲ ಅನ್ನೊ ಕೊಬ್ಬು. ತಮ್ಮ ನಡತೆಯಲ್ಲಿ, ಮಾತಿನಲ್ಲಿ ಸದಾ ಇದನ್ನೇ ತೋರಿಸೋರು. ಸಹ ನಟರ ಎದುರಿಗೇ ಗಾಂಚಾಲಿ ಮಾಡುತ್ತಿದ್ದ ಮನುಷ್ಯ ಇನ್ನು ಸೆಟ್ ಹುಡುಗರನ್ನು ಬಿಟ್ಟಾರೆಯೆ? ನಾವು ಮನೆ ನಾಯಿಯನ್ನೂ ಆ ರೀತಿ ನಡೆಸಿಕೊಳ್ಳುವುದಿಲ್ಲ ಸುಘೋಷ್, ಹಾಗೆ ನಡೆಸಿಕೊಳ್ಳೋರು.
ಒಂದಿನ ಸೆಟ್ ನಲ್ಲಿ ಊಟ ಮಾಡ್ತಾ ಇದ್ವಿ. ನನ್ನ ಪಕ್ಕಾನೇ ಸಾಹೇಬ್ರು ಊಟ ಮಾಡ್ತಾ ಕೂತ್ಕೊಂಡಿದ್ರು. ಅವರ ಊಟ ಮುಗೀತು. ನಾವೆಲ್ಲ ಊಟ ಮುಗಿದ್ರೆ, ನಲ್ಲಿ ಹತ್ರ ಪ್ಲೇಟ್ ಇಟ್ಟು, ಅಲ್ಲೇ ಕೈತೊಳ್ಕೊಂಡು ಬರ್ತಿವಿ. ಆಮೇಲೆ ಬಾಳೆ ಹಣ್ಣು ಇಟ್ಟಿರ್ತಾರೆ. ಅದನ್ನ ತಿಂತೀವಿ. ಆದರೆ ಈ ಯಪ್ಪಾ ಊಟ ಮುಗಿದ ಬಳಿಕ, ಊಟದ ಹುಡಗನ್ನ “ಏ ಬಾರೋ ಇಲ್ಲಿ” ಎಂದು ದರ್ಪದಿಂದ ಕರೆದರು. ಆತ “ಏನ್ ಸಾರ್?” ಎಂದು ಇವರ ಬಳಿ ಬಂದ. ಆತನ ಕೈಗೆ ತಮ್ಮ ತಟ್ಟೆ ಇಟ್ಟರು. ಅದನ್ನು ಇನ್ನೇನು ಹುಡುಗ ತೆಗೆದುಕೊಂಡು ಹೋಗಬೇಕು. ಅಷ್ಟರಲ್ಲಿ “ಏ…..ನಿಲ್ಲೋ ಒಂಚೂರು. ಎಲ್ಲಿ ಓಡಿ ಹೋಗ್ತಿಯಾ?” ಎಂದವರೇ ಆತನ ಕೈಯಲ್ಲಿ ತಟ್ಟೆ ಇರುವಂತೆಯೇ ಅದರಲ್ಲಿ ತಮ್ಮ ಕೈ ತೊಳೆದುಕೊಂಡರು. ಹುಡುಗನಿಗೆ ಒಂಥರಾ ಆಯಿತು. ಆದರೂ ಪಾಪ ಸುಮ್ಮನಿದ್ದ. ಅವರದ್ದು ಕೈ ತೊಳೆದು ಮುಗಿಯಿತು. ಹುಡುಗ ಇನ್ನೇನು ಹೋಗಬೇಕು, ಮತ್ತೆ ತಡೆದು “ಏ……… ಬರೀ ಅರ್ಜಂಟ್ ಮಾಡ್ತಿ ಕಣಯ್ಯಾ ನೀನು. ಏನ್ ಎಲ್ಲಾದ್ರೂ ಹೋಗ್ಬೇಕಾ?” ಎಂದವರೇ ಅಲ್ಲೇ ಇಟ್ಟಿದ್ದ ಬಾಳೆಹಣ್ಣು ತಗೊಂಡು ಸಿಪ್ಪೆ ಸುಲಿದು ಅದನ್ನು ತಟ್ಟೆಯಲ್ಲಿ ಹಾಕಿ “ಹಂ…ನಡಿ” ಎಂದರು ಸೊಕ್ಕಿನಿಂದ. ನಾನು ಸೇರಿದಂತೆ ಅಲ್ಲಿದ್ದ ಹಲವರಿಗೆ ಈ ನಟರ ನಡವಳಿಕೆ ವಾಕರಿಕೆ ಹುಟ್ಟಿಸಿತು. ಆದರೆ ಏನೂ ಅನ್ನುವ ಹಾಗಿಲ್ಲ. ಹಿರಿಯ ನಟರಲ್ಲವೆ? ಹುಡುಗನಿಗೆ ಊಟ ಮಾಡಿದ ತಟ್ಟೆ ಕೊಟ್ಟು ಅದರಲ್ಲಿ ಕೈತೊಳೆದುಕೊಳ್ಳುವುದು ಅನೇಕಬಾರಿ ನಡೆದಿತ್ತು.
ಮನುಷ್ಯರು ಸುಮ್ಮನಿರಬಹುದು. ಆದರೆ ದೇವರು ಸುಮ್ಮನಿರುತ್ತಾನೆಯೆ? ಕರ್ಮಕ್ಕೆ ತಕ್ಕ ಹಾಗೆ ಫಲ.
ಮುಂದೊಂದು ದಿನ ಈ ಹಿರಿಯ ನಟರಿಗೆ ಆಕ್ಡಿಡೆಂಟ್ ಆಗಿ ಎರಡೂ ಕಾಲೂ ಫ್ರಾಕ್ಚರ್ ಆಯಿತು. ಅವರು ಆಕ್ಸಿಡೆಂಟ್ ನಲ್ಲಿ ಉಳಿದದ್ದೇ ಹೆಚ್ಚು. ಆದರೆ ಆಕ್ಸಿಡೆಂಟ್ ಎಂದು ಶೂಟಿಂಗ್ ನಿಲ್ಲಿಸುವಂತಿರಲಿಲ್ಲ. ತುಂಬಾ ಮುಖ್ಯವಾದ ಕ್ಯಾರೆಕ್ಟರ್ ಮಾಡುತ್ತಿದ್ದರು. ಹೀಗಾಗಿ ಕೆಲವೇ ದಿನಗಳ ಬಳಿಕ ಇನ್ನೂ ಕಾಲುಗಳಿಗೆ ಪ್ಲಾಸ್ಟರ್ ಇರುವಂತೆಯೇ ಏನೇನೋ ಪ್ರಯಾಸ ಪಟ್ಟು ಅವರನ್ನು ಶೂಟಿಂಗ್ ಗೆ ಕರೆತರಲಾಯಿತು. ಆಗ ನೋಡಬೇಕಾಗಿತ್ತು ಸೀನು, ಹಿರಿಯ ನಟರಿಗೆ ಕನಿಷ್ಠ ಇಬ್ಬರ ಸಹಾಯವಿಲ್ಲದೆ ನಡೆಯಲು ಬರುತ್ತಿರಲಿಲ್ಲ. ಆ ಕಡೆ ಈ ಕಡೆ ಇಬ್ಬರ ಹೆಗಲ ಮೇಲೆ ಕೈಹಾಕಿ ನಿಧಾನವಾಗಿ ನಡೆದುಕೊಂಡು ಬರಬೇಕಿತ್ತು. ಆದರೆ ಸೆಟ್ ನಲ್ಲಿ ಒಬ್ನೇ ಒಬ್ಬ ಹುಡುಗ ಕೂಡ ಅವರನ್ನ ಕಾರಿನಿಂದ ಇಳಿಸಿಕೊಳ್ಳುವುದಕ್ಕೆ ಬರಲಿಲ್ಲ. ಎಲ್ಲರೂ ಬೇಕೆಂದೇ ಮುಖ ತಪ್ಪಿಸಿಕೊಂಡು ಓಡಾಡುವವರೇ. ಕಾರಿನ ಡ್ರೈವರ್ ಹುಡುಗರನ್ನು ಕರೆದರೂ, ಕುಂಟು ನೆಪ ಹೇಳಿಯೋ, ತಮಗೆ ಬೇರೆ ಕೆಲಸವಿದೆಯೆಂದೋ ಮಾಯವಾದರು. ಆಗ ನಾವೇ ಕೆಲ ಕಲಾವಿದರು ಸೇರಿ ಅವರನ್ನು ಮೇಕಪ್ ರೂಂಗೆ ಕರೆದುಕೊಂಡು ಹೋಗಬೇಕಾಯಿತು. ಈಗೇನೋ ಅವರ ಪ್ಲಾಸ್ಟರ್ ತೆಗೆಯಲಾಗಿದೆ. ಆದರೆ ಪ್ಲಾಸ್ಟರ್ ಹಾಕಿಕೊಂಡೇ ಶೂಟಿಂಗ್ ಬರುತ್ತಿದ್ದಾಗ ಸೆಟ್ ನಲ್ಲಿ ಹುಡುಗರು ಅವರಿಗೆ ಕವಡೆ ಕಾಸಿನ ಕಿಮ್ಮತ್ತೂ ಕೊಡಲಿಲ್ಲ. ಜನರ ಪ್ರೀತಿ ಗಳಿಸಿಕೊಳ್ಳದೇ ಇದ್ರೆ ಏನು ಮಾಡಿ ಏನ್ ಬಂತು ಅಲ್ವಾ?
ಕವಿವಿ 5 ನೇ ವಲಯ ಮಟ್ಟದ ಯುವಜನೋತ್ಸವ ಉದ್ಘಾಟನೆ
November 17, 2010
1984 ರ ಆರ್ಚೀಸ್ ಗ್ರೀಟಿಂಗ್ ಜಾಹೀರಾತು
November 16, 2010
ಮುದ್ರಣ ಮಾಧ್ಯಮ, ರೆಫರೆನ್ಸ್ archies, greeting card, love Leave a comment
70 ಕೆಜಿ ಮಟನ್ನು, 40 ಕೆಜಿ ಚಿಕನ್ನು ಪೆಶಲ್ಲಾಗಿ ಮಾಡ್ಸಿದ್ದೆ
November 15, 2010
ಅನುಭವ (ಕಾಶೀನಾಥಂದು ಅಲ್ಲ ಕಣ್ರೀ..), ಮುಕ್ತ...ಮುಕ್ತ...ಮುಕ್ತ.... 1 Comment
ಮೊನ್ನೆ ನಾನು ಹಾಗೂ ನಮ್ಮ ಲೈಟ್ ಆಫೀಸರ್ (ಶೂಟಿಂಗ್ ನಲ್ಲಿ ಲೈಟ್ ನೋಡಿಕೊಳ್ಳುವವರು) ನಡುವೆ ನಡೆದ ಸಂಭಾಷಣೆ.
“ಸಾ, ನಮ್ಮ ಊರ್ ಕಡೆ ಜಾತ್ರೆ ಐತೆ. ನೀವ್ ಬರ್ಬೇಕು ಸಾ”
“ಹೌದೇನೋ? ಎಲ್ಲಿ ಜಾತ್ರೆ?”
“ನಮ್ ಊರಲ್ಲಿ ಸಾ. ನೀವ್ ಮಂಡ್ಯ ತಾವ ಬಂದು ಪೋನ್ ಹಾಕಿ. ನಾ ಬಂದ್ ಕರ್ಕಂಡ್ ವೋಯ್ತಿನಿ”
“ಟ್ರೈ ಮಾಡ್ತೀನಿ ಕಣೋ. ಟೈಮ್ ಆದ್ರೆ ಖಂಡಿತ ಬರ್ತಿನಿ. ಆದ್ರೆ ನಾ ಬಂದೇ ಬರ್ತಿನಿ ಅಂತ ಕಾಯ್ತಾ ಕೂರ್ಬೇಡ”
“ಸಾಕು ಬಿಡಿ ಸಾ. ನೀವು ಅಂಗ್ ಹೇಳಿದ್ರಲ್ಲ….ಸಾಕು. ಲಾಸ್ಟ್ ಟೈಮ್ ಇದೇ ಟೈಮಲ್ಲಿ ಸಾ ಇವ್ರೆಲ್ಲ ಬರ್ತಿನಿ ಅಂತ ಯೋಳಿ ನನ್ಮಕ್ಳು ಕೈಕೊಟ್ ಬಿಟ್ರು?”
“ಯಾಕೆ ಏನಾಯ್ತು?”
“ನೋಡಿ ಸಾ ಎಲ್ರಿಗೂ ಇನ್ವಿಟೇಸನ್ ಕೊಟ್ಟಿದೆ. ನಮ್ ಊರ್ ಕಡೆ ಜಾತ್ರೆ ಬರ್ಲಾ ಎಲ್ಲಾರೂ ಅಂತ. ಎಲ್ಲಾ ನನ್ಮಕ್ಳೂ ವಪ್ಕಂಡಿದ್ರು. ಅವ್ರು ಬತ್ತಾರೆ ಅಂತ ಹೇಳಿ 70 ಕೆಜಿ ಮಟನ್ನು, 40 ಕೆಜಿ ಚಿಕನ್ನು ಪೆಶಲ್ಲಾಗಿ ಮಾಡ್ಸಿದ್ದೆ. ಮೂರು ಟಗರು ಕಡ್ಸಿದ್ದೆ ಸಾ. ಇನ್ನು ಕೆಲವ್ರು ಎಣ್ಣೆ ಗಿರಾಕಿ ಅಂತ ಗೊತ್ತಿತ್ತು. ಅಂಗಾಗಿ 5 ಸಾವಿರ ರೂಪಾಯಿ ಬಾಟ್ಳು ತರ್ಸಿದ್ದೆ. ಇನ್ನೂ ಹುಡ್ರಲ್ವಾ, ಕ್ಯಾಶ್ ಇರಾಕಿಲ್ಲ ಅಂತ ಬೆಂಗ್ಳೂರಿಂದ ನಮ್ ಮಂಡ್ಯಕ್ಕೆ ಮಂಜನ್ ಸುಮೋ ಬುಕ್ ಮಾಡಿ ಅವಂಗ್ ವಂದ್ ಸಾವಿರ್ ರೂಪಾಯಿ ಕೊಟ್ಟಿದ್ದೆ, ಎಲ್ಲಾರ್ನೂವೇ ಕಕ್ಕಂಡ್ ಬಾ ಅಂತ. ನೀವ್ ನಂಬಲ್ಲ ಸಾ….ನನ್ಮಕ್ಳು ವಬ್ರೂ ಬರ್ಲಿಲ್ಲ ಅವತ್ತು. ಎಲ್ಲಾರೂ ಕೈ ಎತ್ತಿ ಬುಟ್ರು. ಎಷ್ಟೋ ಬೇಜಾರಾಗೋಯ್ತು ಅಂದ್ರೆ, ಮಟನ್ನು, ಚಿಕನ್ನು, ಎಣ್ಣೆ ಎಲ್ಲಾ ವಯ್ದು ನಮ್ ಊರ್ ತಾವ ನಾಲೆ ವಳಗ್ ಎಸೆದ್ ಬುಟ್ಟೆ. ಕಾಸ್ ವೋಯ್ತು ಅಂತ ಬೇಜಾರಿಲ್ಲ ಸಾ….ಆದ್ರೆ ಎಲ್ಲಾ ಸೇರ್ಕಂಡು ನನ್ ಮನಸ್ಸು ಮುರುದ್ರು. ಅವತ್ತೇ ಡಿಸೈಡ್ ಮಾಡ್ದೆ. ಯಾವ್ನ್ ಬರ್ತಾನೆ ಅಂತ ಗ್ವತ್ತಿರತ್ತೋ ಅವಂಗಷ್ಟೇಯಾ ಇನ್ವಿಟೇಸನ್ ಕ್ವಡೋದು ಅಂತ. ಈ ಟೈಮ್ ನೀವ್ ಬನ್ನಿ ಸಾ. ಚೆನ್ನಾಗಿರತ್ತೆ. ನಮ್ಮ ಕಬ್ಬಿನ ತ್ವಾಟದಾಗೆ ಕುಂತ್ಕಂಡ್ ಅಂಗೆ ಬಾಡೂಟ, ಎಣ್ಣೆ ಇಳಿಸ್ತಾ ಇದ್ರೆ…ಆಹಾಹಾ…ಏನ್ ಚಂದ ಸಾ…”
ರಾಜ್ಯೋತ್ಸವ ಪ್ರಶಸ್ತಿಗೆ ಸಂಬಂಧಿಸಿದಂತೆ ಹೀಗೊಂದು ಪತ್ರ
November 12, 2010
ಅವರೇನು ಮಾಡಿದರು?, ಐತಿಹಾಸಿಕ, ಪ್ರಜಾಪ್ರಭುತ್ವ ಕೊಟ್ಟ ಕೊಡುಗೆಯು, ವಿಚಾರ karnataka rajyotsava award, sudhakar chaturvedi 1 Comment
ಟಿ. ಎನ್. ರಾಮಕೃಷ್ಣ, ರಾಷ್ಟ್ರ ಗೌರವ ಸಂರಕ್ಷಣಾ ಪರಿಷತ್ ನ ಸಂಚಾಲಕರು. ರಾಜ್ಯೋತ್ಸವ ಪ್ರಶಸ್ತಿಗೆ ಸಂಬಂಧಿಸಿದಂತೆ ಅವರು ನನ್ನೊಂದಿಗೆ ಹಂಚಿಕೊಂಡ ಒಂದು ಪ್ರಸಂಗ ಇಲ್ಲಿದೆ.
Dear Sughosh,
In continuation to my telecon of day before yesterday, I would like to inform you that the Rajyostsava award is loosing its importance and many undeserving people are getting the same due to caste, influence, political connections as also other criteria.
I have tried to get the Rajyostava award to Centenarian freedom fighter Pandit Sudhakar Chaturvedi. Some of the important facts about Sri. Chaturvedi are as below.
*Born on Ramnavami day of 1897, he is the sole surviving eye witness for Jalian Wala Bagh massacre
*He is a bachelor who has adopted a Harijan as son
*Though he is eligible for both Central and State pention given to freedom fighters, he has not accepted it.
*He had participated in the freedom movement actively and had sufferred imprisonment for 13 years
*He was a contemporary of Gandhiji, Subhas, Nehru, and had associated with Tilak, Lajpat Rai, Bhagat Singh, Chandarshekara Azad, Savarkar,Bipin Chandra pal and many other such towerly extraordinary personalities of freedom movement.
*He has translated Vedas to Kannada and delivers speech on Vedas daily.
The above is only a brief biodata of Sri. Chaturvedi.
I have personally spoken to JAYANAGAR MLA. Sri Chaturvedi lives at 5th Block, Jayanagar, Had also spoken to Malleswaram MLA personally and to an MLC over phone. Had also given letter to CM and to the director of Kannada & Culture Manu Baligar, but all in vain. Also other attempts are also made through a powerful organisation which has got influence on the present state government and sorry to state that even this effort also did not suceed.
Regards
T N Ramakrishna.
ದೀಪಾವಳಿಯ ಮಾರನೇ ದಿನ, ನಮ್ಮ ಗಲ್ಲಿಯ ರಸ್ತೆ
November 11, 2010
1981 ವೀನಸ್ ಸರ್ಕಸ್ ದುರುಂತ – ಮುಂದೇನಾಯಿತು?
November 10, 2010
ಅನುಭವ (ಕಾಶೀನಾಥಂದು ಅಲ್ಲ ಕಣ್ರೀ..), Uncategorized venus circus, vinod dhondale Leave a comment
‘ಮುಕ್ತ ಮುಕ್ತ’ ದ ಸಂಚಿಕೆ ನಿರ್ದೇಶಕ ವಿನೋದ್ ಧೋಂಡಾಳೆ, ಆ ದುರಂತದ ಸಂದರ್ಭದಲ್ಲಿ ನಡೆದ ಮೈಜುಮ್ಮೆನುವ ಘಟನೆ ಹೇಳಿದರು.
“ಸುಘೋಷ್, ಆ ದಿನ ನನಗೆ ಚೆನ್ನಾಗಿ ನೆನಪಿದೆ ಕಣ್ರೀ. ನಾನಾಗ ಒಂದನೇ ಕ್ಲಾಸೋ, ಎರಡನೇ ಕ್ಲಾಸೋ ಇದ್ದೆ. ಅವತ್ತು ಸರ್ಕಸ್ ನೋಡೋದಿಕ್ಕೆ ಅಂತ ಹೋದ ಮಕ್ಕಳಲ್ಲಿ ನಾನೂ ಒಬ್ಬ. ಆದರೆ ಆ ಬೆಂಕಿಗೆ ನಾನಷ್ಟೇ ಅಲ್ಲ ನಮ್ಮ ಶಾಲೆಯ ಮಕ್ಕಳ್ಯಾರೂ ಬಲಿಯಾಗಲಿಲ್ಲ. ಅದಕ್ಕೆಲ್ಲ ಕಾರಣ ನಮ್ಮ ಸರ್ರು. ಬೆಂಕಿ ಹತ್ತಿಕೊಂಡದ್ದು ಸರ್ಕಸ್ ಮುಗಿದ ಬಳಿಕ. ಆದರೆ ಸರ್ಕಸ್ ಮುಗೀಲಿಕ್ಕೆ ಇನ್ನೂ 15 ನಿಮಿಷ ಬಾಕಿ ಇದೆ ಅನ್ನೋವಾಗ, ಸುಮ್ನೆ ಮಕ್ಕಳೆಲ್ಲ ಒಂದೇ ಸಾರಿ ಹೊರಗೆ ಹೋಗೋದಕ್ಕೆ ನೋಡಿ ಗಲಾಟೆ ಮಾಡ್ತಾರೆ ಅಂತ, ನಮ್ಮ ಸರ್ರು ಹುಂ…ನಡೀರಿ ನಡೀರಿ ಸರ್ಕಸ್ ಮುಗೀತು ಅಂತ ನಮ್ಮನ್ನೆಲ್ಲ ಹೊರಗ್ ಕರ್ಕೊಂಡು ಬಂದು ಬಿಟ್ಟಿದ್ರು. ಅಷ್ಟು ದೂರ ಹೋದ ಮೇಲೆ ಹಿಂತಿರುಗಿ ನೋಡ್ತಿವಿ, ಬೆಂಕಿ ಭಗ ಭಗ ಅಂತ ಉರೀತಾ ಇತ್ತು. ನೋಡಿ, ಟೈಮ್ ಹೇಗೆಲ್ಲ ಇರತ್ತೆ ಅಂತ. ನಮ್ಮ ಸರ್ರಿಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರೂ ಸಾಲ್ದು. ಅಲ್ವಾ ”















































ಚಿಠ್ಠೀ ಆಯೀ ಹೈ…