ಕ್ಯಾಮೆರಾ ನೋಡುತ್ತಲೇ ಓಡಿಹೋದವರೆಷ್ಟು ಜನರೋ

5 Comments

ಒಂದೊ ಎರಡೋ, ಅಂಕೆಯ ಹೇಳೋ

ಸುಮಾರು ಮೂರು ವರ್ಷಗಳ ಹಿಂದಿನ ಮಾತು. ಅದು ಅಕ್ಟೋಬರ್ 30 ರ ಆಸುಪಾಸು. ಈಟಿವಿ ಕಚೇರಿಯಲ್ಲಿ ಪತ್ರಕರ್ತರ ಮಧ್ಯಾಹ್ನದ ಮೀಟಿಂಗ್ ನಡೆಯುತ್ತಿತ್ತು. ಜಿ. ಎನ್. ಮೋಹನ್ ಮಾತನಾಡುತ್ತ ಪತ್ರಕರ್ತರಿಗೆ ಕೇಳಿದರು, “ಹುಂ…ಈಗ ನವೆಂಬರ್ 1 ಕ್ಕೆ ಸ್ಟೋರಿ ಏನ್ರಪಾ?” ಅಂತ. ಸರಿ ಶುರುವಾಯಿತು ನೋಡಿ ಪ್ರಕಾಂಡ ಪಂಡಿತ ಪತ್ರಕರ್ತರ ಸ್ಟೋರಿ ಐಡಿಯಾಗಳು, “ಸರ್, ಕನ್ನಡ ಧ್ವಜ ಹರಿದುಹೋಗಿರುತ್ತೆ ಅದರ ಬಗ್ಗೆ ಸ್ಟೋರಿ ಮಾಡಬಹುದು”. “ಸರ್, ಇಂದಿನ ಕನ್ನಡದ ಸ್ಥಿತಿ-ಗತಿ ಬಗ್ಗೆ ಸ್ಟೋರಿ ಮಾಡಬಹುದು”, “ಸರ್ ಕನ್ನಡ ಸಂಘಟನೆಗಳ ‘ಖನ್ನಡ’ ಪ್ರೇಮದ ಬಗ್ಗೆ ಸ್ಟೋರಿ ಮಾಡಬಹುದು” ಅಂತೆಲ್ಲ ಹೇಳುತ್ತ ಹೋದೆವು. ಎಲ್ಲ ಸ್ಟೋರಿಗಳನ್ನು ಅದಾಗಲೇ ಒಂದಿಲ್ಲೊಂದು ರೀತಿಯಲ್ಲಿ ಎಲ್ಲರೂ ಮಾಡಿಯಾಗಿತ್ತು. ಹೀಗಾಗಿ ಅವೇ ಘಿಸಾಪಿಟಾ ಸ್ಟೋರಿಗಳನ್ನು ಮತ್ತೆ ಮತ್ತೆ ಹೇಳುತ್ತಿದ್ದವು. ಕೇಳುವಷ್ಟು ಕೇಳಿಸಿಕೊಂಡ ಮೋಹನ್ ಸರ್, ಕೊನೆಗೆಂದರು, “ಸರಿ, ನಾನೊಂದು ಸ್ಟೋರಿ ಹೇಳ್ತಿನಿ. ಹೀಗ್ ಮಾಡಿದ್ರೆ ಹೇಗೆ ನೋಡಿ, ಕನ್ನಡ ಅಂಕಿಗಳನ್ನ ಒಂದು ಹಾಳೆ ಮೇಲೆ ಬರ್ಕೊಂಡು ಸುಮ್ನೆ ಜನರಿಗೆ ಕೇಳ್ತಾ ಹೋಗಿ ಇದೆಷ್ಟು ಅಂತ. ನೋಡೋಣ, ಎಷ್ಟು ಜನ ಉತ್ತರಿಸ್ತಾರೆ ಅಂತ” ಅಂದ್ರು.

ಎಲ್ಲರಿಗೂ ಈ ಸ್ಟೋರಿ ಐಡಿಯಾ ಭಯಂಕರ ಇಷ್ಟವಾಗಿ ಹೋಯ್ತು. ಆಮೇಲಿನಿದೆ, 1 ರಿಂದ 9 ರವರೆಗಿನ ಅಂಕೆಗಳನ್ನ ವಿವಿಧ ಹಾಳೆಗಳ ಮೇಲೆ ಪ್ರತ್ಯೇಕವಾಗಿ ಬರೆದು ಬೆಂಗಳೂರಿನ ವಿವಿಧ ಏರಿಯಾಗಳಲ್ಲಿ ಪತ್ರಕರ್ತರೆಲ್ಲ ಓಡಿದೆವು. ಅಬ್ಬಾ….ಜನರಿಗೂ ಈ ಅಂಕೆಗಳ ಆಟ ಎಷ್ಟುವಾಯ್ತು ಅಂದ್ರೆ ಜನರೇ ಇದು ಸರಿ ಅದು ಸರಿ ಎಂದು ಬೆಟ್ ಕಟ್ಟಿದರು. ಕೆಲವರಂತೂ ಅಂಕೆ ಗುರುತಿಸಲಾರದೆ ಪ್ಯಾಲಿ ನಗೆ ನಕ್ಕರೆ, ಮತ್ತೆ ಕೆಲವರು ಕನ್ನಡದ 7 ಹಾಗೂ 3 ಅಂಕಿಗಳನ್ನು 2 ಅಂತಲೂ, 9 ನ್ನು 6 ಹಾಗೂ 6 ನ್ನು 9 ಎಂತಲೂ ಓದಿ ‘ಖನ್ನಡ’ ಪ್ರೇಮ ಮೆರೆದರು. ಎಂ.ಜಿ ರೋಡಿನಲ್ಲಂತೂ ಜನ ಮುಖ ತಪ್ಪಿಸಿಕೊಂಡು ಓಡಿದರು. ಬಹುತೇಕ ಕನ್ನಡಿಗರಿಗೆ ಕನ್ನಡ ಅಂಕೆಗಳನ್ನು ಗುರುತಿಸಲು ಸಾಧ್ಯವಾಗಲಿಲ್ಲ.

ಸ್ಟೋರಿ ಅಷ್ಟೇ ಅದ್ಭುತವಾಗಿ ವಿಶೇಷ ಇಫೆಕ್ಟ್ ಮ್ಯೂಸಿಕ್ ನೊಂದಿಗೆ ಎಡಿಟ್ ಆಗಿ ಏರ್ ಆಯಿತು. ಜನರಿಂದ ಅತ್ಯುತ್ತಮ ಪ್ರತಿಕ್ರಿಯೆಯೂ ದೊರೆಯಿತು. ಹೆಂಗಿದೆ ಸ್ಟೋರಿ ಐಡಿಯಾ?

 

ಎಲ್ಲದಕ್ಕೂ ಒಂದೇ ಬೆಲೆ

2 Comments

ಕಳಿಸಿಕೊಟ್ಟದ್ದು – ಶ್ರೀ. ಮೋಹನ್ ಹೆಗಡೆ

....................

ಆರಿಸಿಕೊಂಡಿದ್ದು ದೇಶಭಕ್ತಿಯ ಕೆಲಸಕ್ಕಾಗಿ, ಮಾಡಿಸಿದ್ದು ಬೂಟ್ ಪಾಲಿಶ್

Leave a comment

Contributed by Anuya Warty

Courtesy – NDTV and Mid Day

ಇಲ್ಲಿ ಓದಿ

.................

100 ಯಡ್ಡಿ = 1 ರೆಡ್ಡಿ

Leave a comment

ರಾಜಕೀಯ ಮಾಪಕ

ಹೊಸ ಮೆಟ್ರಿಕ್ ಪದ್ಧತಿಯೊಂದು ಮೊಬೈಲ್ ಗಳಲ್ಲಿ ಹರಿದಾಡುತ್ತಿದೆ. ಅವರವರ ವಿಚಾರಧಾರೆ, ಪಕ್ಷನಿಷ್ಠೆಗೆ ಸಂಬಂಧಿಸಿದಂತೆ ಈ ಮಾಪಕ ಬದಲಾಗುತ್ತಿದೆ. ಇದರ ಒಂದು ಸ್ಯಾಂಪಲ್ ಇಲ್ಲಿದೆ.

100 ಕೋಟಿ = 1 ಯಡ್ಡಿ

100 ಯಡ್ಡಿ = 1 ರೆಡ್ಡಿ

100 ರೆಡ್ಡಿ =  1 ರಾಡಿಯಾ

100 ರಾಡಿಯಾ =  1 ಕಲ್ಮಾಡಿ

100 ಕಲ್ಮಾಡಿ =  1 ಪವಾರ್

100 ಪವಾರ್ =  1 ರಾಜಾ

100 ರಾಜಾ =  1 ಸೋನಿಯಾ

 

ಮಲ್ಲಾಡಿಹಳ್ಳಿ ಫೋಟೋಗಳು

1 Comment

ಜನವರಿ 9 ರಿಂದ 13 ರ ವರೆಗೆ ಐದು ದಿನಗಳ ಕಾಲ ಚಿತ್ರದುರ್ಗ ಜಿಲ್ಲೆಯ ಮಲ್ಲಾಡಿಹಳ್ಳಿಯಲ್ಲಿ ರಾಘವೇಂದ್ರಸ್ವಾಮಿಗಳ ಆಶೀರ್ವಾದದೊಂದಿಗೆ ‘ತಿರುಕರಂಗ ನಾಟಕೋತ್ಸವ’ ನಡೆಯಿತು. ಮಲ್ಲಾಡಿಹಳ್ಳಿಯ ಅನಾಥಸೇವಾಶ್ರಮದ ಮಕ್ಕಳಿಂದಲೇ ಐದು ನಾಟಕಗಳು ಪ್ರದರ್ಶಿಸಲ್ಪಟ್ಟವು. ಮೌನೇಶ್ ಬಡಿಗೇರ್, ಮಂಜುನಾಥ್ ಬಡಿಗೇರ್  ಹಾಗೂ ಬಿ. ವಿ. ರಾಜಾರಾಂ ನಾಟಕಗಳನ್ನು ನಿರ್ದೇಶಿಸಿದ್ದರು. ಜನವರಿ 10 ರಂದು ನಾನು ಹಾಗೂ ಹಿರಿಯ ನಟ ಶಿವರಾಂ ಮುಖ್ಯ ಅತಿಥಿಗಳಗಿ ಹೋಗಿದ್ದೆವು. ಅದರ ಕೆಲವು ಫೋಟೋಗಳು ಇಲ್ಲಿವೆ. ನಾಟಕದ ಫೋಟೋಗಳನ್ನು ಕೂಡ ಸಧ್ಯದಲ್ಲೇ ಪ್ರಕಟಿಸಲಿದ್ದೇನೆ.

ನಾಟಕದ ಬಳಿಕ ನಟ ಶಿವರಾಂ ಮಾತು

ನಾಟಕದ ಬಳಿಕ ಮಕ್ಕಳಿಗೆ ನಾನು ಹೇಳಿದ್ದು "ನಿಮ್ಮಿಂದ ನಾನು ಇಂದು ತುಂಬಾ ಕಲಿತೆ"

ಶಿಕ್ಷಕರ ತರಬೇತಿ ಸಂಸ್ತೆಯ ಹೊರಗಡೆ ಗ್ರುಪ್ ಪೋಟೋ

ಸೇವಾಶ್ರಮದ ಸಮರ್ಥ ಆಡಳಿತಾಧಿಕಾರಿ ರಾಘವೇಂದ್ರ ಪಾಟೀಲರ ಮಾತು

ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಭಾವಿ ಶಿಕ್ಷಕ-ಕಿಯರೊಂದಿಗೆ ಸಂವಾದ

ನನ್ನ ಬಲಕ್ಕೆ ನಿಂತಿರುವವರು ಆತ್ಮೀಯ ಮಿತ್ರ ಹಾಗೂ ಯೋಗಾಸನ ಶಿಕ್ಷಕ ಸಂತೋಷ್ ಕುಮಾರ್

ಇಂದಿಗೆ ರಾಯನನ್ನು ಗಲ್ಲಿಗೇರಿಸಿ 180 ವರ್ಷ

1 Comment

ಕೃಪೆ – ರುದ್ರೇಶ್ ಸಂಪಗಾವಿ, ಇಟಗಿ ಹಾಗೂ ವಿಜಯ ಕರ್ನಾಟಕ

ಕಿತ್ತೂರ ನಾಡಿನ ಈ ಕಥನ

ನಾನು ಸಿಗರೇಟು ಬಿಟ್ಟು ಒಂದು ವರ್ಷ

10 Comments

ಸಿಗರೇಟು ಸತ್ತಿದೆ

ಕನಸಾ? ನಂಬಲಾಗುತ್ತಿಲ್ಲ. ಆದರೂ ನಿಜ. ನಾನು ಸಿಗರೇಟು ಸೇದುವುದನ್ನು ಬಿಟ್ಟು ಜನವರಿ 20, 2011 ಕ್ಕೆ ಸರಿಯಾಗಿ ಒಂದು ವರ್ಷ. ಹೋದವರ್ಷ ಜನವರಿ 20 ರಂದು ಸಿಕ್ಕಾಪಟ್ಟೆ ಹೊಟ್ಟೆ ನೋವು ಬಂದು, ಮೂತ್ರಪಿಂಡದಲ್ಲಿ ಕಲ್ಲುಕಂಡು ಬಂದು, ಸಿಸ್ಟೋಸ್ಕೋಪಿಯಾಗಿದ್ದು ಎಲ್ಲವೂ ಹಸಿರಾಗಿದೆ. ಸಿಸ್ಟೋಸ್ಕೋಪಿ ಬಳಿಕ ನನ್ನ ದೇಹದ ಬಗ್ಗೆ ನನಗೆ ಅತೀವ ಪ್ರೀತಿ, ಅಭಿಮಾನ, ಗೌರವ ಬೆಳೆದು ಸಿಗರೇಟು ಸೇದುವುದನ್ನು ಬಿಟ್ಟುಬಿಟ್ಟೆ.

1999 ರಿಂದ 2009 ರ ನಡುವಿನ ಅವಧಿಯಲ್ಲಿ ನಾನು ಸೇದಿದ ಸಿಗರೇಟುಗಳ ಸಂಖ್ಯೆ ಸುಮಾರು ಆರು ಸಾವಿರ ಹಾಗೂ ಬೀಡಿಗಳ ಸಂಖ್ಯೆ ನಾಲ್ಕು. ವಿಲ್ಸ್ ನೇವಿಕಟ್, ಗೋಲ್ಡ್ ಫ್ಲೇಕ್ ಕಿಂಗ್, ಸ್ಮಾಲ್, ವಿಲ್ಸ್ ಕ್ಲಾಸಿಕ್, ಮೆಂಥಾಲ್, ಗುಡಂಗ್ ಗರಂ, ಮೋರ್, ಬ್ಲಾಕ್ ಹೀಗೆ ಹಲವು ಬ್ರಾಂಡ್ ಗಳನ್ನು ಸೇದಿದೆ. ತುಂಬಾ ಹೆಚ್ಚು ಸೇದಿದ ಬ್ರಾಂಡ್ ಗೋಲ್ಡ್ ಫ್ಲೇಕ್ ಕಿಂಗ್. ತುಂಬಾ ಇಷ್ಟಪಟ್ಟ ಬ್ರಾಂಡ್ ಬ್ಲಾಕ್. ತುಂಬಾ ಕಿಕ್ ಕೊಟ್ಟ ಬ್ರಾಂಡ್ ಯಾವುದೇ ಸಿಗರೇಟಲ್ಲ, ಅದು ಬೀಡಿ. ಬಹುಶಃ 30 ನಂಬರ್ ಬ್ರಾಂಡ್ ಇರಬೇಕು.  ಬ್ಲಾಕ್ ಹಾಗೂ ಗುಡಂಗ್ ಗರಂ ಸಿಗರೇಟುಗಳಲ್ಲಿ ಲವಂಗ ಹಾಗೂ ಇನ್ನು ಕೆಲವು ಮಸಾಲೆ ಪದಾರ್ಥ ತುಂಬಿರುತ್ತಾರೆ. ಸಿಗರೇಟು ಎಳೆದಾಗ ಚರ್ ಚರ್ ಚಟ್ ಎಂದು ಸದ್ದು ಬರುತ್ತಿತ್ತು.

ಆದರೆ ಇದೀಗ ಎಲ್ಲವನ್ನೂ ಮರೆತಿದ್ದೇನೆ. ಇನ್ನು ಮುಂದೆ ಸಿಗರೇಟು ಸೇದುವುದಿಲ್ಲ ಎಂದು ನಾನೆಂದಿಗೂ ಪ್ರತಿಜ್ಞೆ ಮಾಡಿಲ್ಲ. ಮುಂದೆ ಮತ್ತೆ ಸಿಗರೇಟು ಅಂಟಿಸಿಕೊಳ್ಳುತ್ತೇನೆಯೇ ಗೊತ್ತಿಲ್ಲ. ಇಂದು ಮಾತ್ರ ಸಿಗರೇಟು ಬೇಡವೆನಿಸುತ್ತದೆ. ಸಿಗರೇಟು ಬಿಟ್ಟು ಒಂದು ವರ್ಷದ ಬಳಿಕ ನನಗೆ ನನ್ನ ಬಗ್ಗೆಯೇ ಹೆಮ್ಮೆಯಿದೆ. ಸಿಗರೇಟು ಹೊಗೆಯಿಂದ ವಾತಾವಾರಣವನ್ನು ಕಾಪಾಡಿದ್ದಕ್ಕೆ, ನನ್ನ ಮುದ್ದಿನ ದೇಹವನ್ನು ಶೋಷಿಸದಿದ್ದಕ್ಕೆ, ಹಣ ಹಾಗೂ ಸಮಯ ಉಳಿಸಿಕೊಂಡಿದ್ದಕ್ಕೆ.

ಆದರೆ ಸಿಗಾರ್ ಸೇದುವ ಕನಸು ಮಾತ್ರ ಇನ್ನೂ ಹಾಗೆಯೇ ಉಳಿದುಕೊಂಡಿದೆ. ಬಹುಶಃ ಇನ್ನೆಂದಿಗೂ ಆ ಕನಸು ನನಸಾಗಲಾರದು ಎನಿಸುತ್ತದೆ. ಕೆಲವು ಕನಸುಗಳು ನನಸಾಗದಿದ್ದರೇ ಚೆನ್ನ.

ಎನಿ ವೇ, ವಿಶ್ ಮಿ…..

ಚಮ್ಮಾರನನ್ನೂ ಬಿಡಲಿಲ್ಲ ಬಿಜೆಪಿ ಕಾರ್ಯಕರ್ತರು

Leave a comment

ಇದಾ ಅಭಿವೃದ್ಧಿ ಅಂದ್ರೆ?

ಕೃಪೆ – ವಿಜಯ ಕರ್ನಾಟಕ

ಏನ್ ಕರ್ಮಾರೀ ಈ ಜಾಹೀರಾತುಗಳದ್ದು

2 Comments

ಮೊನ್ನೆಯ ವಿಜಯ ಕರ್ನಾಟಕದಲ್ಲಿ ಈ ಜಾಹೀರಾತು ಪ್ರಕಟಗೊಂಡಿದೆ. ಕನ್ನಡ ಲಿಪಿಯಲ್ಲಿ ಹಿಂದಿ ಬರೆದಿದೆ ಸಾಗರೋತ್ತರ ಭಾರತೀಯ ವ್ಯವಹಾರಗಳ ಸಚಿವಾಲಯ. ಎಲ್ಲ ಕನ್ನಡಿಗರಿಗೆ ಹಿಂದಿ ಬರುತ್ತದೆ ಎಂದು ಭಾವಿಸಿದೆಯೆ ಈ ಸಚಿವಾಲಯ?

...............

ಇಂದು ಸುಭಾಷರ 114 ನೇ ಜನ್ಮದಿನ

Leave a comment

“ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ”

ವಂದೇ ಮಾತರಂ

ಮುಖ್ಯಮಂತ್ರಿ v/s ಗವರ್ನರ್ ಯುದ್ಧದಲ್ಲಿ ಬಸ್ಸಿಗೆ ಕಲ್ಲು ಬೇಡ

Leave a comment

ರಾಜ್ಯಕ್ಕೆ ಈಗಾಗಲೇ ಹಾಸಿ ಹೊದ್ದುಕೊಂಡು ಮಚ್ಚರ್ ದಾನಿ ಕಟ್ಟಿಕೊಳ್ಳುವಷ್ಟು ಸಮಸ್ಯೆಗಳಿಗೆ. ಇದೂ ಸಾಲದೆಂಬಂತೆ ಇದೀಗ ಯಡ್ಡಿ ವರ್ಸಸ್ ಹಂಸ್ ಗಲಾಟೆ ಶುರುವಾಗಿದೆ. ಈಗಾಗಲೇ ರಾಜ್ಯದ ಹಲವು ಕಡೆಗಳಲ್ಲಿ ನಿಷ್ಪಾಪಿ ಬಸ್ಸುಗಳು ಏಟು ತಿಂದಿವೆ. ಮತ್ತೆ ಕೆಲವು ಬೆಂಕಿಗೆ ಆಹುತಿಯಾಗಿವೆ. ಅಭಿವೃದ್ಧಿಯ ಮಂತ್ರ ಜಪಿಸುವ ಯಡಿಯೂರಪ್ಪ ಅಭಿಮಾನಿಗಳೇ, ಇದೆಂಥ ಪ್ರತಿಭಟನೆ? ಗಂಡ-ಹೆಂಡಿರ ಜಗಳದಲ್ಲಿ ಕೂಸು ಬಡವಾಗುವುದು ಬೇಡ.

ಇದಂ ಮಮ

ಶಬರಿಮಲೆ ಕಾಲ್ತುಳಿತ: ಸರ್ಕಾರವೇ ಹೊಣೆ

Leave a comment

ಕೃಪೆ – ಶ್ರೀ. ಶಿವಸುಂದರ್ ಹಾಗೂ ವಿಕ

......................

ಐಸಿಐಸಿಐ ಬ್ಯಾಂಕ್ ನಿಂದ ಮನೆ ವಿರುದ್ಧ ಸಾಲ

8 Comments

ಯಾಕಪ್ಪಾ ಮನೆ ಮೇಲೆ ದ್ವೇಷ?

ಮೊಬೈಲ್ ನಂಬರ್ ಪೋರ್ಟಿಬಿಲಿಟಿ ಈಗ ದೇಶಾದ್ಯಂತ ಲಭ್ಯ

Leave a comment

ಮೊಬೈಲ್ ನಂಬರ್ ಪೋರ್ಟಿಬಿಲಿಟಿ ಈಗ ಲಭ್ಯ. ಹೆಚ್ಚಿನ ವಿವರಗಳಿಗೆ  www.trai.gov.in

(ಚಿಕ್ಕ ಫಾಂಟ್ ಸೈಜ್ ಗೆ ವಿಷಾದವಿದೆ)

ಜಾಹಿರಾತು ಕೃಪೆ - ವಿಕ

ಸ್ವಾಮಿ ವಿವೇಕಾನಂದರ ಷಿಕ್ಯಾಗೋ ಭಾಷಣದ ಆಡಿಯೋ

Leave a comment

ಬೆಂಗಳೂರಿನಲ್ಲಿ ಹೃದಯನಾಥ್ ಮಂಗೇಶ್ಕರ್

Leave a comment

ಎಡಿಟಿಂಗ್ ನ ಅವಘಡಗಳು

Leave a comment

ಆಡಿಸುವಾತನ ಕೈಚಳಕದಲಿ...

ಆಗ ಈಟಿವಿ ಹಾಗೂ ಉದಯ ಎರಡೇ ಚ್ಯಾನಲ್ ಗಳಿದ್ದ ಕಾಲ. ರಿಪೋರ್ಟರ್ ಗಳು ಪಿಟಿಸಿ ಕೊಡುವುದೆಂದರೆ ಶಿಕ್ಷೆಯೆಂದೇ ಭಾವಿಸಿದ್ದರು. ( ಪಿಟಿಸಿ – ಪೀಸ್ ಟು ಕ್ಯಾಮರಾ – ಪತ್ರಕರ್ತ ತಾನು ಮಾಡುವ ಸ್ಟೋರಿ ಬಗ್ಗೆ ಆರಂಭದಲ್ಲಿ, ಮಧ್ಯದಲ್ಲಿ, ಕೊನೆಯಲ್ಲಿ ವಿವರಣೆ ನೀಡುವುದು. ಪಿಟಿಸಿಯ ಬೇರೆ ಫಾರ್ಮಾಟ್ ಗಳೂ ಇವೆ). ನಾಲ್ಕೇ ಸಾಲುಗಳನ್ನು ಹೇಳಲು ಕೆಲ ಪತ್ರಕರ್ತರು ಇಡೀ ಟೇಪನ್ನು (ಒಂದು ಟೇಪ್ 60 ನಿಮಿಷ ಇರುತ್ತದೆ) ಬಳಸುತ್ತಿದ್ದರು. ಅಂದರೆ ಅಷ್ಟು ಬಾರಿ ತಪ್ಪುತ್ತಿದ್ದರು ಹಾಗೂ ರಿಟೇಕ್ ತೆಗೆದುಕೊಳ್ಳುತ್ತಿದ್ದರು. ಕೆಲ ಪತ್ರಕರ್ತರಂತೂ ತಾವು ಹೇಳಬೇಕಾಗಿದ್ದ ಸಾಲುಗಳನ್ನು ಒಂದು ದೊಡ್ಡ ಹಾಳೆಯಲ್ಲಿ ಬರೆದುಕೊಂಡು ಕ್ಯಾಮೆರಾ ಲೆನ್ಸ್ ನ ಕೆಳಗಿಟ್ಟು ಪಿಟಿಸಿ ಮುಗಿಸುತ್ತಿದ್ದರು. ಇವನು ಪಿಟಿಸಿ ಓದುತ್ತಿದ್ದಾನೆ ಎಂದು ಎಳೆಯ ಕೂಸು ಸಹ ಹೇಳುವಷ್ಟು ರಿಪೋರ್ಟರ್ ನ ಲುಕ್ ಕೆಳಗಿರುತ್ತಿತ್ತು. ಇಂತರ ಪತ್ರಕರ್ತರ ಪಿಟಿಸಿ ಮಾಡುವುದೆಂದರೆ ಕ್ಯಾಮರಾಮನ್ ಗಳಿಗೂ ತಲೆನೋವು.

ಇಂತಿಪ್ಪ ಸಂದರ್ಭದಲ್ಲಿ ರಿಪೋರ್ಟರ್ ಒಬ್ಬರು ಎಂದಿನಂತೆ ಟೇಕ್ ಮೇಲೆ ಟೇಕ್ ತೆಗೆದುಕೊಂಡು ಪಿಟಿಸಿ ಮಾಡಿದ್ದಾರೆ. ರಿಟೇಕ್ ಹೇಳಿ ಹೇಳಿ ಕ್ಯಾಮರಾಮನ್ ಗೂ ಸಾಕಾಗಿದೆ. ಅಂತೂ ಕೊನೆಗೊಮ್ಮೆ ಪಿಟಿಸಿ ಮುಗಿದಿದೆ. ಪಿಟಿಸಿಯ ಕೊನೆಯಲ್ಲಿ ರಿಪೋರ್ಟರ್ ಸೈನ್ ಆಫ್ ಕೊಡುತ್ತಾರೆ. ಉದಾ – ನವೀನ್, ಈಟಿವಿ ನ್ಯೂಸ್, ಮಂಡ್ಯ, ಗಿರೀಶ್, ಈಟಿವಿ ನ್ಯೂಸ್, ಬೆಂಗಳೂರು. ಹೀಗೆ. ಈ ರಿಪೋರ್ಟರ್ ಸೈನ್ ಆಫ್ ಕೊಟ್ಟ ತಕ್ಷಣ ಕ್ಯಾಮರಾಮನ್ ಗೆ ‘ಸಾಕಾ ಇದು?’ ಎಂದು ಕೇಳಿದ್ದಾರೆ. ಕ್ಯಾಮರಾಮನ್ ಓಕೆ ಅಂದಿದ್ದಾನೆ. ಆಫೀಸಿಗೆ ಬಂದವರೇ ಪಿಟಿಸಿಯನ್ನು ಹೈದ್ರಾಬಾದ್ ಗೆ ಕಳಿಸಿದ್ದಾರೆ. ಸ್ಟೋರಿಯ ಜೊತೆ ಪಿಟಿಸಿ ಟೆಲಿಕಾಸ್ಟ್ ಆದಾಗ ಮಾತ್ರ ಎಲ್ಲರಿಗೂ ಶಾಕ್. ಕಾರಣ ಪಿಟಿಸಿಯಲ್ಲಿ “ರಿಪೋರ್ಟರ್ ಹೆಸರು, ಈಟಿವಿ ನ್ಯೂಸ್, ಬೆಂಗಳೂರು, ಸಾಕಾ ಇದು?” ಎಂದು ಬಂದು ಬಿಟ್ಟಿದೆ. ಎಡಿಟಿಂಗ್ ಮಾಡಿದವನು ಹೊಸ ಹುಡುಗನೋ ಅಥವಾ ಯಾರಾದರೂ ಹಳಬ ಬೇಕೆಂದೆ ಮಾಡಿದನೋ ಗೊತ್ತಿಲ್ಲ. ಆ ಪಿಟಿಸಿಯನ್ನು ನೋಡಿ ಉಳಿದವರು ಮಾತ್ರ ಭಾರೀ ನಕ್ಕಿದ್ದೇ ನಕ್ಕಿದ್ದು.

 

ಯಳ್ಳು ಬೆಲ್ಲ ತಗೋರಿ, ವಳ್ಳೊಳ್ಳೆ ಮಾತಾಡ್ರಿ…

Leave a comment

ಬ್ಲಾಗ್ ಓದುಗರಿಗೆಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಷಯಗಳು.

...................

ಸ್ಯಾಂಡ್ವಿಚ್

12 Comments

...................

“ನಮ್ಮ ಅಪ್ಪ-ಅಮ್ಮ ಭಾರಿ ಆರ್ಥೋಡಾಕ್ಸ, ಟ್ರೆಡಿಷನಲ್ಲ. ಇನ್ನು ನನ್ನ ಮಕ್ಳ, ಭಾರಿ ಫಾಸ್ಟ, ಮಾಡರ್ನ. ನಿಮಗ ಸಣ್ಣ ವಿಷಯ ಹೇಳ್ತೆ. ನಾ ಏನಾರ ಶರ್ಟು, ಬಟ್ಟೆ ಪ್ಯಾಂಟು ಹಾಕ್ಕಂಡೆ ಅಂದ್ರೆ, ಮಗ ಕೇಳ್ತ, ಅಪ್ಪ ಎಂತ ಇದು? ಈಗೆಲ್ಲ ಹಿಂಗ್ ಹಾಕ್ಕೊಳ್ಳುದಿಲ್ಲ, ಜೀನ್ಸ್ ಹಾಕ್ಕೋ ಅಂತಾನೆ. ನಾ ಜೀನ್ಸ್ ಹಾಕ್ಕಂಡ್ರೆ, ನನ್ನ ಅಮ್ಮ, ಎಂತ ಇದು ನೀ ಏನ್ ಸಣ್ಣ ಕೂಸ ಇಂತದ್ದೆಲ್ಲ ಹಾಕ್ಕೊಳ್ಳಿಕ್ಕೆ, ಕಾಲೇಜ್ ಲೆಕ್ಚರರು, ಲೆಕ್ಚರರ್ ತರಾನೆ ಇರ್ಬೇಕು. ಮಕ್ಕಳ ಥರ ಅಲ್ಯೆ ಅಂತಾಳೆ. ಅಲ್ಲ, ಇದು ನಿಮಗ ಸಣ್ಣ ವಿಷ್ಯ ಅನ್ನಸಬಹುದು. ನಮಗೆ ದಿನಾ ಇಂತ ನೂರು ಕಿರಿಕಿರಿ ಮಾರ್ರೆ”

ಪ್ರಶ್ನೆ ಕೇಳೋದು ಸರಿಯಾಗಿಲ್ಲ

3 Comments

ಹೌದಲ್ವಾ?

ಕನ್ನಡದ ಹಿರಿಯ ನಟರೊಬ್ಬರ ಜೊತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದೆ. ಈ ಹಿರಿಯ ನಟರು ಕನ್ನಡದಲ್ಲಿ ಪೋಷಕ ಪಾತ್ರಗಳಿಗೆ ಜೀವ ತುಂಬಿ ಜನಮಾನಸದ ಮೇಲೆ ಅಚ್ಚಳಿಯದ ಮುದ್ರೆಯೊತ್ತಿದ್ದಾರೆ. ನಮ್ಮ ಜೊತೆ ಮತ್ತೊಬ್ಬ ವ್ಯಕ್ತಿಯೂ ಪ್ರಯಾಣಿಸುತ್ತಿದ್ದರು. ಅವರಿಗೆ ಈ ಹಿರಿಯ ನಟರನ್ನು ಕಂಡರೆ ತುಂಬಾ ಗೌರವ. ಹೀಗಾಗಿ ಹಿರಿಯ ನಟರದ್ದು ಹಾಗೂ ಈ ವ್ಯಕ್ತಿಯದ್ದೂ ನಿರಂತರವಾಗಿ ಮಾತು ಸಾಗಿತ್ತು. ಹೀಗೇ ಮಾತನಾಡುವಾಗ ವ್ಯಕ್ತಿ, ಹಿರಿಯ ನಟರಿಗೆ ಕೇಳಿದರು,

“ಸರ್ ತಾವು ರಾಜ್ ಕುಮಾರ್ ಜೊತೆ ಎಷ್ಟು ಪಿಕ್ಚರ್ ಮಾಡಿದ್ದೀರಿ? ವಿಷ್ಣುವರ್ಧನ್ ಜೊತೆ ಎಷ್ಟು ಪಿಕ್ಚರ್ ಮಾಡಿದ್ದೀರಿ?” ಅಂತ. ಆಗ ತಕ್ಷಣ ಹಿರಿಯ ನಟರು ಹೇಳಿದರು, “ನೋಡಿ ಸ್ವಾಮಿ, ಜನ ಹೀಗೇ ಕೇಳ್ತಾರೆ. ರಾಜ್ ಕುಮಾರ್ ಜೊತೆ ಎಷ್ಟು ಪಿಕ್ಚರ್ ಮಾಡಿದೀಯಾ, ವಿಷ್ಣು ಜೊತೆ ಎಷ್ಟು ಮಾಡಿದೀಯಾ ಅಂತ. ಪೋಷಕ ನಟರೆಂದರೆ ಜನರಿಗೆ ಯಾಕೆ ಈ ರೀತಿಯ ಭಾವನೆಯೋ ಗೊತ್ತಿಲ್ಲ. ಯಾರೂ ನನ್ನನ್ನ, ‘ಸಾರ್ ರಾಜ್ ಕುಮಾರ್ ನಿಮ್ಮ ಜೊತೆ ಎಷ್ಟು ಪಿಕ್ಚರ್ ಗಳಲ್ಲಿ ಮಾಡಿದ್ದಾರೆ, ವಿಷ್ಣು ಎಷ್ಟು ಪಿಕ್ಚರ್ ಗಳಲ್ಲಿ ಮಾಡಿದ್ದಾರೆ’ ಅಂತ ಕೇಳೋದೇ ಇಲ್ಲ. ಒಂದು ಚಿತ್ರದಲ್ಲಿ ನವರಸಗಳೂ ಬೇಕು. ಊಟದಲ್ಲಿ ಎಲ್ಲ ರುಚಿಯೂ ಬೇಕು. ಊಟ ಮಾಡುವಾಗ ಹಲವಾರು ಬಾರಿ ಮುಖ್ಯ ಪದಾರ್ಥಕ್ಕಿಂತ ಉಪ್ಪಿನಕಾಯಿಯ ರುಚಿಯೇ ನಾಲಿಗೆಯಲ್ಲಿ ಉಳಿಯುತ್ತದೆ ಅಲ್ಲವೆ?” ಎಂದರು.

ಅವರ ಪಾಯಿಂಟ್ ಸರಿಯೆನಿಸಿತು.

 

Older Entries

Follow

Get every new post delivered to your Inbox.

Join 2,049 other followers

%d bloggers like this: