ಕನ್ನಡದ ಹೆಮ್ಮೆಯ ವಾರಪತ್ರಿಕೆ ಸುಧಾದ ಜಾಣರ ಪೆಟ್ಟಿಗೆಯ ಪ್ರತಿಸ್ಪಂದನದಲ್ಲಿ ನನ್ನ ಸಂದರ್ಶನ ಪ್ರಕಟಕವಾಗಿದೆ.
ನನ್ನ ಕಿತಾಪತಿಗಳ ಜಗತ್ತು…
23 Jul 2011 2 Comments
in ಮುಕ್ತ...ಮುಕ್ತ...ಮುಕ್ತ...., ಮುದ್ರಣ ಮಾಧ್ಯಮ Tags: gudihalli nagaraj, jaanara pettige, pratispandana, sudha
19 Jul 2011 Leave a Comment
in ಪ್ರಜಾಪ್ರಭುತ್ವ ಕೊಟ್ಟ ಕೊಡುಗೆಯು Tags: hosabelaku trust
16 Jul 2011 1 Comment
in ಪ್ರಜಾಪ್ರಭುತ್ವ ಕೊಟ್ಟ ಕೊಡುಗೆಯು, ವಿಚಾರ, ಹಿಂಗೇ ಟೈಮ್ ವೇಸ್ಟ್ Tags: dentist, manmohan singh
ಕಳಿಸಿಕೊಟ್ಟದ್ದು – ಜಗಳೂರು ಸೀತಾರಾಮ್.
“ಆದರಣೀಯ ಪ್ರಧಾನಿಯವರೆ,
ದಯವಿಟ್ಟು ನನ್ನ ಕ್ಲೀನಿಕ್ ನಲ್ಲಾದರೂ ಬಾಯಿ ತೆರೆಯಿರಿ”
15 Jul 2011 Leave a Comment
in ನಿಮಗಿದೋ ಆಮಂತ್ರಣ Tags: ನೀನಾನಾದ್ರೆ ನಾನೀನೇನಾ
14 Jul 2011 1 Comment
in ಕಂಬನಿ, ಪ್ರಜಾಪ್ರಭುತ್ವ ಕೊಟ್ಟ ಕೊಡುಗೆಯು Tags: mumbai bomb blast
ಮತ್ತೆ ಬಾಂಬ್ ಸ್ಫೋಟ ಸಂಭವಿಸಿದೆ. ಅಜ್ಮಲ್ ಕಸಾಬ್ ಹಾಗೂ ಅಫ್ಜಲ್ ಗುರುವಿನ ಗೆಳೆಯರು ಮತ್ತೊಮ್ಮೆ ನಕ್ಕಿದ್ದಾರೆ. ಎಂದಿನಂತೆ ದೇಶದೆಲ್ಲೆಡೆ ಕಟ್ಟೆಚ್ಚರ ಘೋಷಿಸಲಾಗಿದೆ (ಬಾಂಬ್ ಸ್ಠೋಟ ನಡೆದ ಬಳಿಕ). ಚಿದು ಸಾಹೇಬರು ತಮ್ಮ ಪಂಚೆ ಸರಿಪಡಿಸಿಕೊಳ್ಳುತ್ತ ಸ್ಪಾಟ್ ವಿಸಿಟ್ ಮಾಡಿದ್ದಾರೆ. ಹೇತ್ಲಾಂಡಿ ಕೇಂದ್ರ ಸರ್ಕಾರದ ಕಣ್ಣು ತೆರೆಯಲು ಇನ್ನೆಷ್ಟು ಬಾಂಬ್ ಸ್ಫೋಟಗಳು ನಡೆಯಬೇಕು.
12 Jul 2011 1 Comment
in ಹಿಂಗೇ ಟೈಮ್ ವೇಸ್ಟ್ Tags: politics in india, sonia gandhi
ಕಳಿಸಿಕೊಟ್ಟದ್ದು – ಶಿಶಿರ್ ಸಪ್ರೆ, ತೀರ್ಥಹಳ್ಳಿ.
Recently Sonia Gandhi went to a school to interact with the children there. After a brief talk she asked if anyone had any questions. One boy raised his hand.
Sonia: “What’s your name”?
Boy : “RAHIM”
Sonia: “What are your questions”?
Rahim: “I’ve 3 questions…
1. Why did you attack & kidnap Baba Ramdev without approval of Court?
2. Why there is no punishment to KASAB as yet?
3. Why does Manmohan singh & the Congress party not support Baba againstcorruption?
Sonia: “You are an intelligent student Rahim.”
Just then the recess bell rang.
Sonia: “Oh students, we wil continue after the recess is over”.
After the recess…
Sonia: “Ok children where were we? So, anybody wants to ask a question”?
RAM raises his hand.
Sonia: “What’s your name”?
Ram: “I’m Ram and I’ve 5 questions…
1. Why did you attack Baba without approval of the court?
2. Why no punishment to Kasab as yet?
3. Why does Manmohan Singh not support the fight against corruption?
4. Why did the recess bell ring 20 mins before the time?
5. Where is Rahim?
10 Jul 2011 4 Comments
in ಮುಕ್ತ...ಮುಕ್ತ...ಮುಕ್ತ.... Tags: postman
ಮುಕ್ತ ಮುಕ್ತದಲ್ಲಿ ನಟನಾದ ಬಳಿಕ ಆಗಿರುವ ಅನುಭವಗಳಲ್ಲಿ ಇದು ಈವರೆಗಿನ ಅತ್ಯಂತ ಕ್ಲಾಸಿಕ್ ಅನುಭವ. ಜನರು ಈ ಧಾರಾವಾಹಿಯನ್ನು ಹೇಗೆಲ್ಲ ನೋಡುತ್ತಾರೆ, ಎಷ್ಟು ಆಸಕ್ತಿಯಿಂದ ವೀಕ್ಷಿಸುತ್ತಾರೆ, ಈ ಧಾರಾವಾಹಿಯಿಂದ ಏನೆಲ್ಲ ಬಯಸುತ್ತಾರೆ ಎಂಬುದಕ್ಕೆ ಇದೊಂದು ಉದಾಹರಣೆ.
ಧರ್ಮ ಭಾರತಿ ಎಂಬ ಮ್ಯಾಗಝೀನ್ ನಲ್ಲಿ ನಾನು ಬರೆದ ಲೇಖನವೊಂದಕ್ಕೆ ಸಂಭಾವನೆಯನ್ನು ಎಂಓ ಮಾಡಲಾಗಿತ್ತು. ಅದನ್ನು ಹಿಡಿದುಕೊಂಡು ಅಂಚೆಯಣ್ಣ ನನ್ನ ಮನೆ ಬಾಗಿಲು ತಟ್ಟಿದರು. ಬಾಗಿಲು ತೆರೆಯುತ್ತಲೇ ನನ್ನನ್ನು ನೋಡಿದವರೆ ಎಕ್ಸೈಟ್ ಆಗಿ “ಓಹ್..ಸಾರ್ ನೀವಾ…” ಎಂದು ಮಾತಿಗಾರಂಭಿಸಿ ಸುಮಾರು ಹದಿನೈದು ನಿಮಿಷಗಳ ಕಾಲ ಹಾಗೆಯೇ ಮಾತಾಡುತ್ತ ನಿಂತುಬಿಟ್ಟರು.
ಚಿಕ್ಕವನಿದ್ದಾಗಿನಿಂದಲೂ ನನಗೆ ಅಂಚೆಯಣ್ಣ ಅಂದರೆ ಎಲ್ಲಿಲ್ಲದ ಪ್ರೀತಿ. ಅಮ್ಮನಿಗೆ ಪತ್ರ ಬರೆಯುವ ಹವ್ಯಾಸ ತುಂಬಾ ಇತ್ತು. ಅದು ನನಗೂ ಹರಿದು ಬಂತು. ಹೊಸವರ್ಷಕ್ಕೆ ದೀಪಾವಳಿಗೆ ಗ್ರೀಟಿಂಗ್ ಕಾರ್ಡ್ ಕಳಿಸುವುದು, ಶಾಲೆಯ ಫಲಿತಾಂಶ ಬಂದ ಮೇಲೆ ಅದನ್ನು ನೆಂಟರಿಷ್ಟರಿಗೆ ತಿಳಿಸುವುದು ಹೀಗೆಲ್ಲ ಮೊದಲು ತುಂಬಾ ಪತ್ರ ಬರೆಯುತ್ತಿದ್ದೆ. ಆದರೆ ಕಳೆದ ಹಲವಾರು ವರ್ಷಗಳಿಂದ ಒಂದೇ ಒಂದು ಪತ್ರ ಬರೆದಿಲ್ಲ. ಕಾರಣ ಸುಲಭ. ಮೊಬೈಲ್ ಬಂದಿದೆ ಅದಕ್ಕೆ. ಇರಲಿ.
ಧಾರಾವಾಹಿ, ಪಾತ್ರಗಳು, ಕಂಟೆಂಟ್ ಎಲ್ಲವನ್ನು ಮಾತನಾಡಿದ ಬಳಿಕ ಅಂಚೆಯಣ್ಣ ಹೇಳಿದರು.
“ಸರ್ ನಿಮಗೊಂದು ರಿಕ್ವೆಸ್ಟ್ ಮಾಡ್ಕೋತಿನಿ. ಬೇಜಾರು ಮಾಡ್ಕೋಬೇಡಿ. ದಯವಿಟ್ಟು ಇದನ್ನ ಸೀತಾರಾಮ್ ಸಾರ್ ಅವರಿಗೂ ಹೇಳಿ” ಅಂದರು.
“ಪರ್ವಾಗಿಲ್ಲ ಹೇಳಿ” ಅಂದೆ.
“ಸರ್, ನೋಡಿ ನಮ್ಮದು ತುಂಬಾ ಹಳೆಯ ಡಿಪಾರ್ಟಮೆಂಟ್. ನಾವು ಪ್ರಧಾನಿ ಬಳಿಯೂ ಹೋಗುತ್ತೇವೆ. ಬಡವನ ಮನೆಗೂ ಹೋಗುತ್ತೇವೆ. ಆದರೆ ನಮ್ಮ ಕಷ್ಟ ಮಾತ್ರ ಹಾಗೇ ಇದೆ. ನಿಮ್ಮ ಸೀರಿಯಲ್ ನಲ್ಲಿ ಪತ್ರ, ಪಾರ್ಸೆಲ್ ಎಲ್ಲ ಹಿಡ್ಕೊಂಡು ಶಂಕರಮೂರ್ತಿ ಮನೆಗೋ, ನಿಮ್ಮ ಮನೆಗೋ ಬರ್ತಾರಲ್ಲ ಆಗ ಅವರ ಕೈಯಲ್ಲಿ ‘ಪೋಸ್ಟ್’ ಅಂತ ಕೂಗ್ಸಿ ಸಾರ್. ‘ಕೊರಿಯರ್’ ಅಂತ ಬೇಡ” ಅಂದರು.
ಒಂದು ಕ್ಷಣ ನನಗೆ ಏನು ಹೇಳಬೇಕೆಂದು ತೋಚಲಿಲ್ಲ.
“ಖಂಡಿತ ಸೀತಾರಾಮ್ ಸರ್ ಗೆ ಹೇಳುತ್ತೇನೆ” ಅಂದೆ. ಅಂಚೆಯಣ್ಣ ಖುಷಿಯಾಗಿ ಮುಂದಿನ ಮನೆಗೆ ಪೋಸ್ಟ್ ಹಾಕಲು ಹೋದರು. ಸರ್ಕಾರ ಮುಂದಿನ ಅಧಿವೇಶನದಲ್ಲಿ ಅಂಚೆ ಇಲಾಖೆಯನ್ನು ಖಾಸಗಿಯವರ ಕೈಗೆ ಕೊಡುವ ನಿರ್ಧಾರ ಮಾಡಲು ಹೊರಟಿದೆ. ನಮ್ಮ ರಾಜಕಾರಣಿಗಳ ಚರ್ಮ ನಿಜಕ್ಕೂ ದಪ್ಪ ಅಲ್ವಾ?
09 Jul 2011 1 Comment
in Uncategorized Tags: mug, toilet, tub
ಇದು ನಿಜವಾದ ಘಟನೆ. ಮೊನ್ನೆ ಯಾರೋ ಮಿತ್ರರು ಹೇಳುತ್ತಿದ್ದರು.
ಅವರ ಸಂಬಂಧಿಕರ ಪೈಕಿ ಯಾರೋ ಒಬ್ಬ ಫ್ರಾನ್ಸ್ ನ ಯುವತಿಯನ್ನು ಪ್ರೀತಿಸಿ ಮದುವೆಯಾದನಂತೆ. ಮದುವೆಯಾಗಿ ಹೊಸ ಜೋಡಿ ಭಾರತದ ಅವರ ಮನೆಗೆ ಬಂದಿದೆ. ನವ ವಧುವಿಗೆ ಭಾರತೀಯ ಸಂಪ್ರದಾಯ, ಮನೆಗೆಲಸ ಇತ್ಯಾದಿಗಳ ಬಗ್ಗೆ ಎಲ್ಲಿಲ್ಲದ ಕುತೂಹಲ. ಮೊದಲ ದಿನ ಕಳೆದು ಮಾರನೆ ದಿನ ಬೆಳಿಗ್ಗೆ ಮನೆಯ ಸದಸ್ಯರೆಲ್ಲ ಸೇರಿ ಕಾಫಿ ಕುಡಿಯುತ್ತಿರಬೇಕಾದರೆ ನವ ವಧು ಅದು ಇದು ಪ್ರಶ್ನೆ ಕೇಳುತ್ತ ಮನೆಯವರಿಗೆ ಕೇಳಿದಳಂತೆ “ಅಂದ ಹಾಗೆ ನೀವು ಮುಖ ತೊಳೆಯಲು ಟಬ್ ಹಾಗೂ ಮಗ್ ಅನ್ನು ಟಾಯ್ಲೆಟ್ ನಲ್ಲಿ ಏಕೆ ಇಟ್ಟಿದ್ದೀರಿ?” ಅಂತ.
ಹೆಂಗಿದೆ ಚಮಕ್?
04 Jul 2011 Leave a Comment
in ನಿಮಗಿದೋ ಆಮಂತ್ರಣ Tags: ಪುಟ್ಟಣ್ಣ ಕಣಗಾಲ್
03 Jul 2011 Leave a Comment
in ನಿಮಗಿದೋ ಆಮಂತ್ರಣ Tags: ಲಿಂಗದೇವರು ಹಳೇಮನೆ, lingadevaru halemane