ವರಮಹಾಲಕ್ಷ್ಮಿ ಹಬ್ಬದ ನಿಮಿತ್ತವಾಗಿ ಈ ಪುಸ್ತಕ ಓದಿ
July 27, 2012
VIJAYANAGARA BIMBA OFFERS 1 YEAR DIPLOMA COURSE IN THEATRE
July 26, 2012
ನಾಟಕ, ನಿಮಗಿದೋ ಆಮಂತ್ರಣ 1 year diploma course, ksou, vijayanagara bimba Leave a comment
ಆಲ್ ದಿ ಬೆಸ್ಟ್ ಅಣ್ಣಾ
July 25, 2012
ಅವರೇನು ಮಾಡಿದರು?, ಪ್ರಜಾಪ್ರಭುತ್ವ ಕೊಟ್ಟ ಕೊಡುಗೆಯು anna hazare, do or die Leave a comment
Every cloud has a silver lining. Every Indian has a hope!! All the Best Anna.
Visit http://www.annahazare.org/
ವೀಣಾ ಮಲಿಕ್ ಸಂದರ್ಶನ ಇಲ್ಲಿದೆ…
July 20, 2012
ವಿಡಿಯೋ, Media samaya tv, sughosh s nigale, veena malik Leave a comment
ಆರನೇ ತರಗತಿಯ ಹುಡುಗ ಆ ಸಿಂಬಲ್ ತೋರಿಸಿದನಂತೆ…
July 17, 2012
ವಿಚಾರ education, fcuk symbol, school, student 6 Comments
ನನ್ನ ಸ್ಹೇಹಿತೆಯೊಬ್ಬರು ಬೆಂಗಳೂರಿನ ಸೋ ಕಾಲ್ಡ್ ಪ್ರತಿಷ್ಠಿತ ಶಾಲೆಯೊಂದರಲ್ಲಿ ಇಂಗ್ಲೀಷ್ ಹಾಗೂ ಹಿಂದಿ ಕಲಿಸುತ್ತಾರೆ. ಆರನೇ ತರಗತಿಯಲ್ಲಿ ಪಾಠ ಮಾಡುತ್ತಿರಬೇಕಾದರೆ, ಹುಡುಗಿಯೊಬ್ಬಳು ಬಂದು “ಮಿಸ್, ನೋಡಿ ಅವನು ನನಗೆ ‘ಹೀಗೆ’ (ಸಿಂಬಲ್ ತೋರಿಸುತ್ತ) ಮಾಡಿ ತೋರಿಸುತ್ತಿದ್ದಾನೆ” ಎಂದು ಕಂಪ್ಲೇಂಟ್ ಮಾಡಿದಳಂತೆ. ಆಕೆಯ ಸಹಪಾಠಿ ತೋರಿಸಿದ ಸಿಂಬಲ್ ಇಂದು ಸಾಮಾನ್ಯ ಎನ್ನಿಸಿಕೊಂಡಿರುವ FCUK ಸಿಂಬಲ್. ನನ್ನ ಟೀಚರ್ ಸ್ನೇಹಿತೆಯೇನೋ ಹುಡುಗನಿಗೆ ಗದರಿದಳಂತೆ.
ಆದರೆ ಆರನೇ ತರಗತಿಯಲ್ಲಿಯೇ ಈ ಪರಿಸ್ಥಿತಿಯಾದರೆ, ಅದೂ ಸೋ ಕಾಲ್ಡ್ ಇಂಟರ್ನಾಷನಲ್ ಶಾಲೆಯಲ್ಲಿ…..? ತಪ್ಪು ಯಾರದ್ದು, ಮಕ್ಕಳಿಗೆ ಬುದ್ಧಿ ಹೇಳಲಾರದ ತಂದೆ-ತಾಯಿಗಳದ್ದಾ? ಲಂಗುಲಗಾಮಿಲ್ಲದೆ ಬೆಳೆಯುತ್ತಿರುವ ಒಟ್ಟಾರೆ ಪರಿಸರದ್ದಾ? ಹುಡುಗರನ್ನು ಹದ್ದುಬಸ್ತಿನಲ್ಲಿಡಲಾರದ ಟೀಚರ್ ಗಳದ್ದಾ? ಶಿಕ್ಷಣ ವ್ಯವಸ್ಥೆಯದ್ದಾ? ಮೌಲ್ಯಗಳನ್ನು ಮರೆತು ಕೇವಲ ಜ್ಞಾನವನ್ನು ತುರುಕುತ್ತಿರುವ ಪದ್ಧತಿಯದ್ದಾ? ಉತ್ತರ ಗೊಜಲುಗೊಜಲಾಗಿದೆ.
ಇವರು ನೂತನ ಸಚಿವರು, ಉಳಿದ 9 ತಿಂಗಳಿನಲ್ಲಿ “ಅಭಿವೃದ್ಧಿ” ಕಾರ್ಯ ಮಾಡುವವರು…
July 12, 2012
ಪ್ರಜಾಪ್ರಭುತ್ವ ಕೊಟ್ಟ ಕೊಡುಗೆಯು jagadish shetter ministers Leave a comment
ಇವರಲ್ಲಿ ಯಾರು ಯಾವ ಜಾತಿ, ಯಾರ ಮೇಲೆ ಎಷ್ಟು ಕೇಸ್ ಇದೆ, ಯಾರು ಯಾರನ್ನು ತುಳಿದು ಸಚಿವರಾಗಿದ್ದಾರೆ, ಯಾರು ಪರಮಭ್ರಷ್ಟರು, ಯಾರು ಸತ್ಯಸಂಧರು, ಸಚಿವರಾಗಲು ಯಾವ ರೀತಿಯ ಡೀಲಿಂಗ್ ನಡೆದಿದೆ? ಪ್ರಶ್ನೆಗಳು ಸಾಕಷ್ಟಿವೆ.
ಮುಖ್ಯಮಂತ್ರಿ – ಜಗದೀಶ್ ಶೆಟ್ಟರ್
ಉಪಮುಖ್ಯಮಂತ್ರಿ – ಕೆ. ಎಸ್. ಈಶ್ವರಪ್ಪ
ಉಪಮುಖ್ಯಮಂತ್ರಿ – ರಾಮಯ್ಯ ಅಶೋಕ್
ಸಚಿವರು-
ಗೋವಿಂದ ಕಾರಜೋಳ
ಸುರೇಶ್ ಕುಮಾರ್
ಸಿ ಎಂ ಉದಾಸಿ
ವಿಶ್ವೇಶ್ವರ ಹೆಗಡೆ ಕಾಗೇರಿ
ಉಮೇಶ್ ಕತ್ತಿ
ಬಸವರಾಜ ಬೊಮ್ಮಾಯಿ
ಮುರುಗೇಶ್ ಆರ್. ನಿರಾಣಿ
ವಿ. ಸೋಮಣ್ಣ
ಶೋಭಾ ಕರಂದ್ಲಾಜೆ
ಬಚ್ಚೇಗೌಡ
ರೇಣುಕಾಚಾರ್ಯ
ಸಿ. ಪಿ . ಯೋಗೇಶ್ವರ್
ರೇವುನಾಯಕ್ ಬೆಳಮಗಿ
ಬಾಲಚಂದ್ರ ಜಾರಕಿಹೊಳಿ
ಎ. ರಾಮದಾಸ್
ಆನಂದ ಅಸ್ನೋಟಿಕರ್
ಎ. ನಾರಾಯಣಸ್ವಾಮಿ
ಎಸ್. ಎ. ರವೀಂದ್ರನಾಥ್
ರಾಜೂಗೌಡ
ವರ್ತೂರು ಪ್ರಕಾಶ್
ಸೊಗಡು ಶಿವಣ್ಣ
ಸಿ. ಟಿ. ರವಿ
ಡಿ. ಎನ್. ಜೀವರಾಜ್
ಎಸ್. ಕೆ. ಬೆಳ್ಳುಬ್ಬಿ
ಬಿ. ಜೆ. ಪುಟ್ಟಸ್ವಾಮಿ
ಆನಂದ್ ಸಿಂಗ್
ಕಳಕಪ್ಪ ಬಂಡಿ
ಶ್ರೀನಿವಾಸ ಪೂಜಾರಿ
ಸುನೀಲ್ ವಲ್ಯಾಪುರೆ
ಅಪ್ಪಚ್ಚು ರಂಜನ್
ಅರವಿಂದ್ ಲಿಂಬಾವಳಿ
‘ಸಂಗ’ ಕಟ್ಟುವಾಗ ಇದ್ದವರಾರು? ಯಡಿಯೂರಪ್ಪಗೆ ಮಾಸ್ಟರ್ ಹಿರಣ್ಣಯ್ಯ ಖಡಕ್ ಪ್ರಶ್ನೆ
July 11, 2012
ಪ್ರಜಾಪ್ರಭುತ್ವ ಕೊಟ್ಟ ಕೊಡುಗೆಯು, ವಿಚಾರ, Media master hirannayya, yedyurappa 2 Comments
ಮಧುರೈ ಆಧೀನಂ ಮಠದಲ್ಲಿ ನಿತ್ಯಾನಂದ ಸಂದರ್ಶನ ಸಂದರ್ಭದಲ್ಲಿ…
July 10, 2012
ಫೋಟೋ ಫಿನಿಶ್, Media adhinam matham, madhurai, nityananda Leave a comment
ಬಾವರಾ ಮನ್ ದೇಖನೇ ಚಲಾ ಏಕ ಸಪನಾ…
July 7, 2012
ವಿಡಿಯೋ bawra mann dekhane chalaa ek sapana Leave a comment
ಕನಸು ಪೂರ್ಣಗೊಳ್ಳಲು 8 ವರ್ಷಗಳು ಬೇಕಾದವು
July 6, 2012
ಅನುಭವ (ಕಾಶೀನಾಥಂದು ಅಲ್ಲ ಕಣ್ರೀ..), Media g k vale, me anchor, samaya 10 Comments
ಅದು 2003. ಬೆಳಗಾವಿಯಿಂದ ಬೆಂಗಳೂರಿಗೆ ಪಿ.ಜಿ. ಮಾಡಲು ಬಂದಿದ್ದೆ. ಬೆಂಗಳೂರಿನ ಥಳಕು ಬಳುಕಿನ ಬದುಕು ಅಕ್ಷರಶಃ ನನ್ನನ್ನು ಕಂಗೆಡಿಸಿತ್ತು. ಇಲ್ಲಿನ ಜನ, ರಸ್ತೆಗಳು, ಮಾತು, ಲೈಟುಕಂಬ, ನನಗೆ ಹಾಡಹಗಲೇ ಅಣಕಿಸಿದ್ದವು. ಬೆಂಗಳೂರು ನನ್ನನ್ನು ಹೀರಿಕೊಳ್ಳಲು ತೆಗೆದುಕೊಂಡ ಸಮಯ ಸರಿಯಾಗಿ ಒಂದು ವರ್ಷ. ಭಾರತೀಯ ವಿದ್ಯಾಭವನದಲ್ಲಿ ಪಿ. ಜಿ. ಡಿಪ್ಲೋಮಾ ಇನ್ ಮಾಸ್ ಕಮ್ನೂನಿಕೇಷನ್ ಆಗ ತಾನೇ ಮುಗಿಸಿದ್ದೆ. ಮಾಧ್ಯಮ ರಂಗ ಪ್ರವೇಶಿಸಿಲು ಉತ್ಸುಕನಾಗಿದ್ದೆ. ನ್ಯೂಸ್ ಆಂಕರ್ ಆಗಬೇಕೆಂಬುದು ನನ್ನ ಮಹೋನ್ನತ ಕನಸುಗಳಲ್ಲಿ ಒಂದಾಗಿತ್ತು. ಯಾರೋ ಹೇಳಿದರು, “ಇದಕ್ಕೆಲ್ಲ ಮೊದಲು ಪೋರ್ಟ್ ಫೋಲಿಯೋ ಮಾಡಿಸ್ಕೊಳ್ಳಬೇಕು ಕಣಯ್ಯ” ಅಂತ. ಯಾವುದು ಬೆಸ್ಟ್ ಸ್ಟುಡಿಯೋ ಎಂದು ವಿಚಾರಿಸಿದಾಗ ಎಲ್ಲರಿಂದಲೂ ಒಮ್ಮೆಲೇ ಬಂದ ಹೆಸರು ಜಿ. ಕೆ. ವೇಲ್. ಸರಿ ನಾನು ಹಾಗೂ ದೀಪು (ದೀಪು ಈಗ ಸ್ಟಾಂಡರ್ಜ್ ಚಾರ್ಟರ್ಡ್ ಬ್ಯಾಂಕ್ ನಲ್ಲಿ ಬ್ರಾಂಚ್ ಮ್ಯಾನೇಜರ್) ಜೇಬು ತಡಕಾಡಿಕೊಂಡು ಎಂ. ಜಿ. ರೋಡ್ ನಲ್ಲಿದ್ದ ಜಿ. ಕೆ. ವೇಲ್ ಗೆ ಹೋದೆವು. ನಾನು ಹಿಂಗಿಂಗೆ ನ್ಯೂಸ್ ಆಂಕರ್ ಆಗ್ಬೇಕು ಅಂತಿದ್ದೀನಿ. ಅದಕ್ಕೆ ತಕ್ಕ ಹಾಗೆ ಫೋಟೋ ಬೇಕು ಅಂದೆ. ಓ ಯಸ್ ಅಂದವರೇ, ನನ್ನನ್ನು ಸ್ಟುಡಿಯೋಗೆ ಕಳುಹಿಸಿದರು. ಶಿವು ಎಂಬ ಫೋಟೋಗ್ರಾಫರ್ ನನ್ನ ಫೋಟೋಗಳನ್ನು ತೆಗೆದರು. ನಿಜಕ್ಕೂ ಆ ಫೋಟೋದಲ್ಲಿ ನಾನು ಅಪ್ಪಟ ಆಂಕರ್ ಥರಾನೇ ಕಾಣಿಸ್ತಿದ್ದೆ. ಆದರೆ, ಈ ಫೋಟೋಗಳನ್ನು ಹಿಡಿದುಕೊಂಡು ಅಲೆಯುವ ಪ್ರಸಂಗವೇ ಬರಲಿಲ್ಲ. ಯಾಕೆಂದರೆ ಆಗ ಇದ್ದಿದ್ದೇ ಎರಡು ಚ್ಯಾನಲ್. ಒಂದು ಈ ಟಿವಿ, ಮತ್ತೊಂದು ಉದಯ. ಈ ಟಿವಿಯಲ್ಲಿ ಆಂಕರ್ ಆಗಬೇಕೆಂದರೆ ಹೈದ್ರಾಬಾದ್ ನಲ್ಲಿ ಕೆಲಸ ಮಾಡಬೇಕು. ಆದರೆ ಈಟಿವಿ ಸೇರಿದ ಆರೇ ತಿಂಗಳಿಗೆ ನನ್ನನ್ನು ಬೆಂಗಳೂರಿಗೆ ಎತ್ತಿ ಹಾಕಿದ್ದರು. ಮುಂದೆ ರಿಪೋರ್ಟಿಂಗ್ ನಲ್ಲಿ ಕಳೆದುಹೋಗಿಬಿಟ್ಟೆ. ಈ ಮಧ್ಯೆ ಸೀರಿಯಲ್ ಕೈಹಿಡಿಯಿತು. ನ್ಯೂಸ್ ಆಂಕರ್ ಗಿಂತ ಹತ್ತು ಪಟ್ಟು ಕೀರ್ತಿಯನ್ನು ತಂದು ಕಣ್ಮುಂದೆ ಕೆಡವಿತು. ನಂತರ ‘ಸಮಯ’ ಸೇರಿ ಮತ್ತೆ ಮಾಧ್ಯಮ ರಂಗ ಮರುಪ್ರವೇಸಿಸಿದಾಗ ಅಂತೂ ಇಂತೂ ಆಂಕರ್ ಆದೆ. ಅಂದು ಜಿ. ಕೆ. ವೇಲ್ ಸ್ಟುಡಿಯೋದಲ್ಲಿ ಹಾಕಿಕೊಂಡಿದ್ದ ಅದೇ ಕೋಟ್ ಹಾಕಿಕೊಂಡು 8 ವರ್ಷಗಳ ಬಳಿಕ ನ್ಯೂಸ್ ರೀಡಿಂಗ್ ಮಾಡಿದಾಗ, “ಆಜ್ ಮೈ ಊಪರ್ ಆಸಮಾಂ ನೀಚೆ” ಅನುಭವ. ಆ ಎರಡೂ ಫೋಟೋಗಳು ಇಲ್ಲಿವೆ. ಅಫ್ ಕೋರ್ಸ್ ಅದೇ ಕೋಟಿನೊಂದಿಗೆ….
(ಅಂದ ಹಾಗೆ ಈ ಕೋಟ್ ಕೂಡ ನನ್ನ ಕಸಿನ್ ಅಣ್ಣ ವಿವೇಕ್ ಹಳಬೆ ನೀಡಿದ್ದು. “ಕೋಟು ಹಳೆಯದಾದರೇನು, ಲುಕ್ಕು ನವನವೀನ…”)















































ಚಿಠ್ಠೀ ಆಯೀ ಹೈ…