ಈ ಜಾಹೀರಾತು ಇಷ್ಟವಾಯ್ತು…

Leave a comment

ಚೋಲಿ ಕೆ ಪೀಛೆ ಕ್ಯಾ ಹೈ ಹಾಗೂ ಸೆಕ್ಸಿ ಸೆಕ್ಸಿ ಸೆಕ್ಸಿ ಮುಝೆ ಲೋಗ್ ಬೋಲೆ….

1 Comment

ಕೃಪೆ – ದಿ ಟೈಮ್ಸ್ ಆಫ್ ಇಂಡಿಯಾ

123

‘ಸುಧಾ’ ದಲ್ಲಿ ‘ಥಟ್ ಅಂತ ಬೆಣ್ಣೆ’

Leave a comment

ನವೆಂಬರ್ 22 ರ ‘ಸುಧಾ’ದ ‘ನಿಮ್ಮ ಪುಟ’ದಲ್ಲಿ ಪ್ರಕಟವಾಗಿರುವುದು.

.....

…..

 

ಜಯದೇವರ ಕಾಕು ಶೀಘ್ರವೇ ಬಿಡುಗಡೆ!

Leave a comment

cover page kaku

ಏನ್ ಗುರೂ, ಏನ್ ಬಾಡಿ ಗುರೂ….

Leave a comment

ಬೆಳಗಾವಿಯ ಬಾಡಿ ಬಿಲ್ಡರ್ ಕೀರ್ತಿ ಜೊತೆಗೆ…

……

ಪುರುಷರೇ…ಬೈಗುಳ ಬಳಸುವ ಮೊದಲು ಈ ವೀಡಿಯೋ ನೋಡಿ…

Leave a comment

ಈ ಫೋಟೋಗೆ ಕ್ಯಾಪ್ಶನ್ ಕೊಡಿ

5 Comments

ಇವರು ವಿಕಾಸ್ ಗೌಡ. ಲಂಡನ್ ಒಲಂಪಿಕ್ಸ್ ನಲ್ಲಿ ಡಿಸ್ಕಸ್ ಥ್ರೋ ನಲ್ಲಿ ಮೊಟ್ಟಮೊದಲಬಾರಿಗೆ ಫೈನಲ್ ಪ್ರವೇಶಿಸಿದವರು. ಇವರೊಡನೆ ನಾನು ಮಾಡಿದ ಸಂದರ್ಶನ ಇಂದು ಮಧ್ಯಾಹ್ನ ಮೂರು ಗಂಟೆಗೆ ಸಮಯ ವಾಹಿನಿಯಲ್ಲಿ ಪ್ರಸಾರವಾಗಲಿದೆ. ದಯವಿಟ್ಟು ವೀಕ್ಷಿಸಿ. ಅಂದಹಾಗೆ, ವಿಕಾಸ್ ಎತ್ತರ ಕೇವಲ 6 ಅಡಿ 9 ಇಂಚು. ಅವರೊಡನೆ ನನ್ನ ಫೋಟೊ ಇಲ್ಲಿದೆ.

ವಾಘಾ ಬಾರ್ಡರ್ ನಲ್ಲಿ ಹೀಗಾಗುತ್ತದೆ

Leave a comment

ಜಯದೇವರ ‘ಕಾಸು-ಕುಡಿಕೆ’

Leave a comment

ನಾನು ಇವರನ್ನು ಇದುವರೆಗೂ ಮುಖತಃ ಭೇಟಿಯಾಗಿಲ್ಲ. ಆದರೆ ಕಳೆದ ಸುಮಾರು 1 ವರ್ಷದಿಂದ ನಮ್ಮ ಮಾತುಕತೆ ಫೋನ್ ನಲ್ಲೇ ಸಾಗಿದೆ. ನಾಲ್ಕು ತಿಂಗಳ ಕಾಲ ನಾನು ಹೋಸ್ಟ್ ಮಾಡುತ್ತಿದ್ದ ‘ಸಮಯ ವಾಹಿನಿ’ಯ ‘ಮಾರ್ನಿಂಗ್ ಕಾಫಿ’ಯಲ್ಲಿ ಇವರು ಆರ್ಥಿಕ ಜಗತ್ತಿನ ಆಗುಹೋಗುಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದ್ದಾರೆ. ಉದಯವಾಣಿಯ ಇವರ ಕಾಸು-ಕುಡಿಕೆ ಕಾಲಂ ಈಗಾಗಲೇ ಪ್ರಸಿದ್ಧ. ನಾನು ದಿನಕ್ಕೆ ನಾಲ್ಕಾರು ಬಾರಿ ಫೋನ್ ಮಾಡಿ ಗೋಳು ಹೊಯ್ದುಕೊಂಡರೂ ನಗುತ್ತಲೇ ಮಾಹಿತಿ ನೀಡುವ, ಕೊನೆ ಗಳಿಗೆಯಲ್ಲಿ ಫೋನ್ ಮಾಡಿದರೂ, ಬುಲೆಟಿನ್ ಗೆ ಲೈವ್ ಫೋನೋ ಬರುವ ಇವರೇ ಶ್ರೀ. ಜಯದೇವಪ್ರಸಾದ ಮೊಳೆಯಾರ. ಇದೀಗ ಜಯದೇವರು ತಮ್ಮದೇ ಆದ ಕಾಸು-ಕುಡಿಕೆ ಬ್ಲಾಗ್ ಆರಂಭಿಸಿದ್ದಾರೆ. ನನಗೆ ಜಯದೇವರ ಪರಿಚಯವಾಗಿದ್ದು ‘ಅವಧಿ’ ಹಾಗೂ ಶ್ರೀ. ಜಿ. ಎನ್. ಮೋಹನ್ ರ ಮೂಲಕ.

ಅವರ ಬ್ಲಾಗ್ ಗೆ ಭೇಟಿ ಕೊಡಲು ಇಲ್ಲಿ ಕ್ಲಿಕ್ ಮಾಡಿ.

ವಾಣಿಜ್ಯ, ಬ್ಯಾಂಕಿಂಗ್ ಹಾಗೂ ಷೇರುಮಾರುಕಟ್ಟೆಯ ಸ್ಥಿತಿಗತಿಗಳನ್ನು ಕನ್ನಡದಲ್ಲಿ ಸರಳವಾಗಿ ವಿವರಿಸುವುದು ಸುಲುಭವಲ್ಲ. ಆದರೆ ಜಯದೇವರಿಗೆ ಎರಡೂ ಕಲೆ ಒಲಿದಿದೆ. ಬರವಣಿಗೆ (ಪ್ರಿಂಟ್ ಮೀಡಿಯಾಗಾಗಿ) ಹಾಗೂ ಮೌಖಿಕ ವಿವರಣೆ (ಇಲೆಕ್ಟ್ರಾನಿಕ್ ಮೀಡಿಯಾಗಾಗಿ).  ಆರ್ಥಿಕತೆ ಬಗ್ಗೆ ಕನ್ನಡದಲ್ಲಿ ಲಭ್ಯವಿರುವ ಅತ್ಯುತ್ತಮ ಸಾಹಿತ್ಯ ಇದು ಎಂದರೆ ಅತಿಶಯೋಕ್ತಿಯಾಗಲಾರದು. ಅಂದಹಾಗೆ, ಬ್ಲಾಗ್ ನ ಇಂಗ್ಲೀಷ್ ಅವತರಣಿಕೆ ಕೂಡ ಇದೆ.

 

ಉರ್ದುವಿನಲ್ಲಿ ಚೋಮನ ದುಡಿ

2 Comments

ಡಾ. ಶಿವರಾಮ ಕಾರಂತಚೋಮನ ದುಡಿಯನ್ನು ನನ್ನ ಉರ್ದು ಉಸ್ತಾದ್ ಜನಾಬ್ ಮಾಹೇರ್ ಮನ್ಸೂರ್ ಅವರು 1982 ನೇ ಇಸವಿಯಲ್ಲಿ ಉರ್ದುವಿಗೆ ತಂದಿದ್ದಾರೆ. ಅದರ ಮುಖಪುಟ ಇಲ್ಲಿದೆ. ಉರ್ದುವಿನಲ್ಲಿ ಚೋಮಾ ಕಾ ಢೋಲ್ ಎಂದು ಹೆಸರಿಟ್ಟಿದ್ದಾರೆ. ಈ ಕವರ್ ಪೇಜ್ ನಿಮಗಾಗಿ.

ಚೋಮಾ ಕಾ ಢೋಲ್

ಇದಪ್ಪಾ ಕ್ಯಾಪ್ಶನ್ ಅಂದ್ರೆ….

1 Comment

ನನ್ನ ಫೋಟೋ “ಹೀಗೊಬ್ಬವನು” ಗೆ ರಿಸ್ಪೆಕ್ಟ್ ಎವ್ರಿವನ್ ನೀಡಿರುವ ಕ್ಯಾಪ್ಶನ್ ಇಲ್ಲಿದೆ. ನಿಮ್ಮ ಕ್ಯಾಪ್ಶನ್ ತುಂಬ ಇಷ್ಟವಾಯಿತು ರಿಸ್ಪೆಕ್ಟ್ ಎವ್ರಿವನ್…..

ಇದಪ್ಪಾ ಕ್ಯಾಪ್ಶನ್ ಅಂದ್ರೆ

“ಮೊಬೈಲು ಇಂಟರ್ನೆಟ್ ಫೋನು ಗ್ಯಾಸು MP3 ಡೌನುಲೋಡು ಡ್ಯುಯಲ್ ಸಿಮ್ಮು ನೆಟ್ವರ್ಕು ಶೇರು ಏರು ಇಳಿ ಶೇಂದಿ ಸರಕಾರ ಯಡ್ಡಿ ರೆಡ್ಡಿ ಒಬಾಮ ಚುನಾವಣೆ ದೇವರು ದಿಂಡಿರು ಬೈಕು ಕಾರು ಲಾರಿ ರಸ್ತೆ ವಿಮಾನ ಪೆಟ್ರೋಲು ಡೀಸೆಲು global warmingಉ ಪ್ಲಾಸ್ಟಿಕ್ಕು ಪಟಾಕಿ ಏಸಿ ನುಸಿ ಸೊಳ್ಳೆ ಆರೋಗ್ಯ ಖಾಯಿಲೆ ಕಸಾಲೆ ಶಾಲೆ ಶಿಕ್ಷಣ ರಕ್ಷಣೆ ಮಿಲಿಟರಿ ಭಯೋತ್ಪಾದಕರು ಎಣ್ಣೆ ಹಾಕುವವರು ಬತ್ತಿ ಇಡುವವರು ರೈಲು ಬಿಡುವವರು ಆಡುವವರು ಹಾಡುವವರು ಕುಣಿಯುವವರು ಕಸ ಕಡ್ಡಿ ಕೂಲಿ ಕಾಳು ಶ್ರೀ ೧೦೮ ಮೈನ್ಸು ಕೋರ್ಟು ಲಂಚ  ಬ್ಯಾಂಕು ಲೋನು ದುಡ್ಡು ಕಾಸು ಮಕ್ಕಳು ಮರಿ ಕಾನ್ವೆಂಟು ಇಂಗ್ಲೀಷು ಫಾರಿನ್ನು ಚಂದ್ರಲೋಕ, ಮಂಗಳನಲ್ಲಿ ನೀರು ಕರೆಂಟು ಪಾರ್ಕು ಪಬ್ಬು ಹಬ್ಬ ಬ್ಲಾಗು ಕಾಮೆಂಟು ಇನ್ನೂ ಏನೇನೇನೇನೇನೋ…..ಇವೆಲ್ಲ ನಿಮ್ಮ ಕರ್ಮ, ನನ್ನ ತಪಸ್ಸಿಗೇನೂ ಭಂಗವಿಲ್ಲ”

 

ಕುಂವಿ ಗಾಂಧಿ ಕ್ಲಾಸಿನಿಂದ….

Leave a comment

ಕುಂವಿ ಅವರ ಆತ್ಮಕಥನ ಗಾಂಧಿ ಕ್ಲಾಸು ಓದುತ್ತಿದ್ದೇನೆ. ಅದರೊಳಗಿನ ಆಯ್ದ ಭಾಗ.

ಹ್ಯಾಟ್ಸಾಫ್ ಕುಂವಿ ಸರ್....

ಕೃಪೆ – ಕುಂ. ವೀರಭದ್ರಪ್ಪ, ಶ್ರೀಮತಿ ಅನ್ನಪೂರ್ಣಾ ಕುಂವಿ ಹಾಗೂ ಸಪ್ನ ಬುಕ್ ಹೌಸ್.

ಅವರೆಲ್ಲ ಪೈಕಿ ಪರಮವಿಧೇಯತೆಯೇ ಮೈವೆತ್ತಂತೆ ಬಂದಿರುತ್ತಿದ್ದ ಸಣಕಲು ವ್ಯಕ್ತಿಗೆ ಕಳೆದ ತಿಂಗಳ ವರೆಗೆ ಒಂದು ಖಾಯಂ ಹೆಸರೆಂಬುದಿರಲಿಲ್ಲ. ಹೊಲೆಯನಾಗಿದ್ದರೂ ತುಸು ಎಣ್ಣೆಗೆಂಪು ಬಣ್ಣದ ಅವನನ್ನು ಸಂತೆಕುಡ್ಲೂರು ಗೌಡರ ಮನೆಯಲ್ಲಿದ್ದ ಅಸಂಖ್ಯಾತ ಸದಸ್ಯರು ಅವನನ್ನು ಅಸಂಖ್ಯಾತ ಹೆಸರುಗಳಿಂದ ಕರೆಯುತ್ತಿದ್ದರು. ಅದರೆ ಅವು ಜಗತ್ತಿನ ಯಾವುದೇ ಭಾಷೆಯ ನಾಮವಾಚಕ ನಿಘಂಟಿನಲ್ಲಿರಲು ಸಾಧ್ಯವಿರಲಿಲ್ಲ. ಒಂದೊಂದು ನಾಮವಾಚಕವೂ ನಗೆ ತರಿಸುವಂತಿತ್ತು. “ನಿನ್ನ ಹೆಸರೇನು?” ಎಂದು ಕೇಳಿದೊಡನೆ ಅವನು ತಬ್ಬಿಬ್ಬಾಗದೆ ಇರುತ್ತಿರಲಿಲ್ಲ. ಅವನಂತೆ ನಾಮಾಂಕಿತ ವಂಚಿತರು ದಲಿತರೋಣಿಗಳಲ್ಲಿ ಅಸಂಖ್ಯಾತರಿದ್ದರು. ಆದ್ದರಿಂದ ನಾನು ಅವನಿಗೆ “ಚಂದ್ರ” ಎಂದು ನಾಮಕರಣ ಮಾಡಿ ಕರೆಯುತ್ತಿದ್ದೆನು, ಕಾರಣ ಅವನ ಮೈಬಣ್ಣ ಬೆಳ್ಳಗಿತ್ತು. ಹಾಗೆ ಕರೆದಾಗಲೆಲ್ಲ ಅವನು ನವವಧುನಿನಂತೆ ನಾಚಿ ನೀರಾಗದೆ ಇರಲಿಲ್ಲ. ಆದರೆ ಆ ಹೆಸರಿಗೆ ಅವು ಕ್ರಮೇಣ ಹೊಂದಿಕೊಂಡಿದ್ದು ಸಮಾಧನಕರ ಸಂಗತಿ.

ಚಂದ್ರನ ಸೊಂಟದ ಸುತ್ತ ಒಂದು ತುಂಡು ದೋತರ, ತಲೆಗೊಂದು ಕಿಮುಟು ವಲ್ಲಿ. ಆದರೆ ಅವೂ ಗೌಡರು ಉಟ್ಟುಬಿಟ್ಟವುಗಳಾಗಿದ್ದವು. ಮರ್ಯಾದೆ ಮುಚ್ಚಿಕೊಳ್ಳಲು ತಾನು ಎಷ್ಟು ಪ್ರಯತ್ನಿಸುತ್ತಿದ್ದರೂ ಎರಡು ಕುಂಡಿಗಳ ಪೈಕಿ ಒಂದಾದರೂ ಸಾರ್ವಜನಿಕವಾಗಿ ಗೋಚರಿಸದೆ ಇರುತ್ತಿರಲಿಲ್ಲ. ಕುಂಡಿಗಿಂತ ಮುಖ್ಯವಾಗಿ ಅವನು ತನ್ನ ಸಾಮಾನು ಹೊರಇಣುಕುವಂತೆ ಎಷ್ಟು ಸಾಧ್ಯವೋ ಅಷ್ಟು ಎಚ್ಚರ ವಹಿಸುತ್ತಿದ್ದನು. ಅದು ಅವನ ಕಾಮನ್ ಸೆನ್ಸಾಗಿತ್ತು.

ಸಂಬಳ ಪಡೆದ ದಿವಸ ನಾನು ಆದವಾನಿಯಿಂದ ಒಂದು ಹೆಚ್ಚುವರಿ ಶರ್ಟನ್ನು ಖರೀದಿನಿ ಪ್ಯಾಕು ಮಾಡಿಕೊಂಡು ತಂದು ಗೂಟಕ್ಕೆ ಇಳಿಬಿಟ್ಟಿದ್ದೆನು. ಅವನು ಅದನ್ನು ರೆಪ್ಪೆಯಾಡಿಸದೆ ನೋಡುತ್ತಿದ್ದುದನ್ನು ಗಮನಿಸಿದೆನು. “ಉಟುಗೊಂತಿಯ್ಯೋನು?” ಎಂದು ನಾನು ಕೇಳಿದ್ದು ತಮಾಷೆಗೆ. ಆಶ್ಚರ್ಯವೆಂದರೆ ಅವನು “ಹ್ಹೂ” ಎಂದು ತಲೆ ಅಲ್ಲಾಡಿಸಿಬಿಡುವುದೆ…. ! ತಡಮಾಡದೆ ಅದನ್ನು ಪೇಪರ್ ನಲ್ಲಿ ಸುತ್ತಿಕೊಡುತ್ತ ಚಂದ್ರ, “ಆದರೆ ನೀನಿದನ್ನ ತೊಟ್ಟುಕೊಂಡು ಗೌಡರೆದುರು ಅಡ್ಡಾಡಬೇಕು ನೋಡು” ಎಂದು ಕರಾರು ವಿಧಿಸಿದ್ದು ಎಷ್ಟು ನಿಜವೋ, ಅದಕ್ಕವನು ತಲೆ ಅಲ್ಲಾಡಿಸಿ ಒಪ್ಪಿಗೆ ಸೂಚಿಸಿದ್ದೂ ಅಷ್ಟೇ ನಿಜ.

ಇವತ್ತು ತೊಟ್ಟುಕೊಂಡಾನು, ನಾಳೆ ತೊಟ್ಟುಕೊಂಡಾನು ಎಂದು ಎದುರು ನೋಡಿದ ನನಗೆ ನಿರಾಸೆಯಾಗದಿರಲಿಲ್ಲ. ಅವನದನ್ನು ತೊಟ್ಟುಕೊಂಡರೆ ತಾನೆ….ಗೋಣಿತಾಟು ತುಂಡಿನೊಳಗೆ ಅಡಗಿಸಿಟ್ಟು ಕಂಕುಳದಲ್ಲಿರಿಸಿಕೊಂಡಿರುತ್ತಿದ್ದನೇ ಹೊರತು ಧರಿಸುವ ಧೈರ್ಯ ತೋರಲಿಲ್ಲ. ಹದಿನೈದಿಪ್ಪತ್ತು ದಿವಸಗಳ ಬಳಿಕ “ನೀನದನ್ನು ತೊಟ್ಟುಕೊಳ್ಳದಿದ್ದಲ್ಲಿ ವಾಪಸು ಕೊಡು” ಎಂದು ಒಣ ಬೆದರಿಕೆ ಹಾಕುವುದು ಅನಿವಾರ್ಯವಾಯಿತು. ತೊಟ್ಟರೆಲ್ಲಿ ಗೌಡಿಕೆ ಮಂದಿ ತಮ್ಮ ಅಭಿಜಾತ ಚುಚ್ಚು ಮಾತುಗಳಿಂದ ತನ್ನನ್ನು ಘಾಸಿಗೊಳಿಸುವರೋ ಎಂಬ ಆತಂಕ ಅವನಿಗಿತ್ತು. ಅವನ ಮೈಚಳಿ ಬಿಡಿಸುವ ಮತ್ತು ತನ್ಮೂಲಕ ಜಮೀನ್ದಾರಿಶಾಹಿ ವಿರುದ್ದ ಚಿಕ್ಕ ಪ್ರತಿಭಟನೆ ವ್ಯಕ್ತಪಡಿಸುವ ಇರಾದೆ ನನ್ನದಾಗಿತ್ತು. ಆದರೆ ಅವನು ಸುತ್ತಮುತ್ತ ಯಾರಿಲ್ಲದಿರುವುದನ್ನು ಖಚಿತಪಡಿಸಿಕೊಂಡು “ತ್ವಟಗಂತೀನಿ ಸಾರೂ……ಆದರ ಗವುಡರೆದುರು ಬ್ಯಾಡ….ಪರುಗಗುಣಿಮಾಗಿ ಹೊಲಕ ಬೊರ್ರಿ….ತೊಟಗಂಡು ತ್ವಾರುಸ್ತೀನಿ” ಎಂದು ಮೆಲ್ಲಗೆ ಹೇಳಿದ.

ಪರುಗುಣಿಮಾಗಿಯೆಂಬ ಬಾಣಾಪುರ ಗೌಡರ ಐವತ್ತೆಕರೆ ಬಿಳಿ ಜೋಳದ ಹೊಲ ವಾಗಿಲಿಗೆ ಒಂದು ದಮ್ಮು ದಾರಿ ದೂರದಲ್ಲಿತ್ತು. ಗೌಡರು ನನ್ನಲ್ಲಿಗೆ ಹಲವು ಸಲ ಕರೆದೊಯ್ದು ಬೆಳಸುಕಾಳು ತಿನ್ನಸಿದ್ದರು. ಆದ್ದರಿಂದ ಆ ಹೊಲದ ಪರಿಚಿತವಿತ್ತು. ಹೋದೆ. ಮೇವಿಗೆಂದು ನಡುವಿನ ಒಂದು ಭಾಗವನ್ನು ಕಟ್ಟಾಫ್ ಮಾಡಿದ್ದರು. ಅಲ್ಲಿ ಚಂದ್ರ ಹೊಸ ಶರ್ಟನ್ನು ತೊಟ್ಟುಕೊಂಡು ನವವಧುನಿನೋಪಾದಿಯಲ್ಲಿ ನಾಚಿ ಕೂತಿದ್ದ. ಕಣ್ತುಂಬ ನೋಡಿ ಕಣ್ಣಲ್ಲಿ ನೀರು ತಂದುಕೊಂಡೆ. “ನ್ವಾಡಿದ್ರೇನು ಸಾರೂ….?”ಎಂದು ಕೇಳಿದ. ಕಣ್ಣೊಳಗಿದ್ದ ಆನಂದ ಬಾಷ್ಪ ಒರೆಸಿಕೊಳ್ಳುತ್ತ ನಾನು “ನೋಡಿದ್ನೆಪ್ಪಾ…ನೋಡಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಬಳಿಕ ಅವನು ಒಂದೊಂದಾಗಿ ಗುಂಡಿಗಳನ್ನು ಬಿಚ್ಚಿ ಪುನಃ ಮಡಚಿ ಕಂಕುಳಲ್ಲಿರಿಸಿಕೊಂಡ.

 

 

ಬೆಳ್ಳಿ ಪರದೆಯ ಬಣ್ಣದ ಪ್ರತಿಭೆ ಮೇಕಪ್ ಚಂದ್ರಣ್ಣ

Leave a comment

ಮೇಕಪ್ ಚಂದ್ರಣ್ಣ ಮುಕ್ತ ಮುಕ್ದದಲ್ಲಿ ನನಗೆ ಮೇಕಪ್ ಮಾಡಿದವರು. ಖ್ಯಾತ ನಟ ಶಂಕರನಾಗ್ ಅವರಿಗೆ ಪರ್ಸನಲ್ ಮೇಕಪ್ ಮನ್ ಆಗಿ ಕೂಡ ಚಂದ್ರಣ್ಣ ಕೆಲಸ ಮಾಡಿದವರು ಎಂದು ಗೊತ್ತಾದಾಗ ಅವರ ಬಗ್ಗೆ ಆಸಕ್ತಿ ಬೆಳೆಯಿತು. ಅವರೊಡನೆ ಮಾತನಾಡುತ್ತಿದ್ದಾಗ ಮತ್ತಷ್ಟು ವಿಷಯಗಳು ಸಂಗ್ರಹವಾದವು. ಹೀಗಾಗಿ ಚಂದ್ರಣ್ಣನ ಕುರಿತು ಲೇಖನ ಬರೆಯಲು ಮುಂದಾದೆ. ನಾನು ಬರೆದ ಲೇಖನ ಈ ಬಾರಿಯ ‘ಚಿತ್ರ’ ಪತ್ರಿಕೆಯಲ್ಲಿ ಪ್ರಕಟವಾಗಿದೆ. ತಮಗಾಗಿ ಈ ಲೇಖನ….

ಚಿತ್ರ

1

2

ಅಗ್ನಿಮೀಳೇ ಪುರೋಹಿತಂ

Leave a comment

ಕೃಪೆ - ವಿಜಯ ಕರ್ನಾಟಕ

ವಿಜಯ ಕರ್ನಾಟಕದ ಕತ್ತೆ ವ್ಯಾಪಾರ

2 Comments

 

ಕರೆಕ್ಟಾಗಿದೆ ಅಲ್ವ?

ಹೌದೌದು....ಕರೆಕ್ಟಾಗಿದೆ.

 

 

ಇದಪ್ಪಾ ಟೆಕ್ನಾಲಜಿ ಅಂದ್ರೆ!!

Leave a comment

ಇಂದಿನ ‘ವಿಜಯ ಕರ್ನಾಟಕ’ ಸಂಪಾದಕೀಯ ಹೀಗಿದೆ

3 Comments

ಇದಪ್ಪಾ ರಿಯಲ್ ಜರ್ನಲಿಸಂ ಅಂದ್ರೆ!!

ಕೈಯಿಲ್ಲ, ಕಾಲಿಲ್ಲ, ಆತ್ಮವಿಶ್ವಾಸಕ್ಕೇನೇನೂ ಕೊರತೆಯಿಲ್ಲ

Leave a comment

ಮಹಾತ್ಮಾ ಗಾಂಧಿ ಮಾತನಾಡಿದ್ದಾರೆ

Leave a comment

‘ಅಕ್ಕ’ ಕಥಾ ಸ್ಪರ್ಧೆಯಲ್ಲಿ ಆಯ್ಕೆಯಾದ ಕಥೆಗಳ ಸಂಗ್ರಹ – ದೀಪ ತೋರಿದೆಡೆಗೆ

5 Comments

ದೀಪ ತೋರಿದೆಡೆಗೆ

ದೀಪ ತೋರಿದೆಡೆಗೆ

Older Entries

Follow

Get every new post delivered to your Inbox.

Join 2,049 other followers

%d bloggers like this: