ಈ ಬಾರಿಯ ಜಾಣರ ಪೆಟ್ಟಿಗೆ

Leave a comment

ಕೃಪೆ – ಸುಧಾ

20130516a_048101001

ಏಪ್ರಿಲ್ ತಿಂಗಳ ತುಷಾರ ಪತ್ರಿಕೆ ಬೇಕಾಗಿದೆ

Leave a comment

ಏಪ್ರಿಲ್ ತಿಂಗಳ ತುಷಾರ ಬೇಕಾಗಿದೆ. ಲಭ್ಯವಿದ್ದವರು ದಯವಿಟ್ಟು ತಿಳಿಸಿ. ನನ್ನ ಈಮೇಲ್ ವಿಳಾಸ – sughosh.nigale@gmail.com

ವಿಶ್ವಾಸಿ,

ಸುಘೋಷ್ ಎಸ್. ನಿಗಳೆ

ಬೆಂಗಳೂರು.

ಈ ಬಾರಿಯ “ಜಾಣರ ಪೆಟ್ಟಿಗೆ”

Leave a comment

ಕೃಪೆ – ಸುಧಾ

.....

…..

ಈ ವಾರದ “ಜಾಣರ ಪೆಟ್ಟಿಗೆ”

Leave a comment

ಕೃಪೆ - ಸುಧಾ

ಕೃಪೆ – ಸುಧಾ

ಈ ಬಾರಿಯ ‘ಸುಧಾ’ ದ ‘ಜಾಣರ ಪೆಟ್ಟಿಗೆ’ ಹೀಗಿದೆ…

1 Comment

20130411a_048101001

‘ಸುಧಾ’ ದಲ್ಲಿ ‘ಘಮ ಘಮಾಡಸ್ತಾವ ಬೆಕ್ಕು’

Leave a comment

ಈ ವಾರದ ‘ಸುಧಾ’ದಲ್ಲಿ ಪ್ರಕಟಗೊಂಡಿರುವ ನನ್ನ ಲೇಖನ.20130321a_006101001

ನ್ಯೂಸ್ ಪಿಂಟ್ ಈಗ ಆನ್ ಲೈನ್ ನಲ್ಲಿ ಲಭ್ಯ

Leave a comment

ನನ್ನ ಪುಸ್ತಕ ‘ನ್ಯೂಸ್ ಪಿಂಟ್’,  ‘ಸಪ್ನ ಆನ್ ಲೈನ್’ ನಲ್ಲಿ ಲಭ್ಯವಿದೆ. ಭೇಟಿ ಕೊಡಿ Sapna Online

.....

…..

 

‘ಉದಯವಾಣಿ’ಯಲ್ಲಿ ನನ್ನ ಕಥೆ ‘ಓ ಧನಾತ್ಮಕ’

Leave a comment

...

ಇಂದಿನ ಉದಯವಾಣಿಯ ಸಾಪ್ತಾಹಿಕ ಸಂಪದದಲ್ಲಿ ಪ್ರಕಟವಾಗಿರುವ ನನ್ನ ಕಥೆ ‘ಓ ಧನಾತ್ಮಕ

ಕಥೆ ಇಲ್ಲಿದೆ….

ಸಮಾಹಿತ ಹಾಗೂ ಸುಗುಣಿಗೆ ಸಾಕಾಗಿ ಬಿಟ್ಟಿತ್ತು. ಮೊದಮೊದಲು ಅದನ್ನೆಲ್ಲ ತುಂಬಾ ಲಘುವಾಗಿ ತೆಗೆದುಕೊಂಡಿದ್ದರು. ಇತ್ತೀಚೆಗೆ ನೀರು ಮೂಗಿನ ಮಟ್ಟಕ್ಕೆ ಬಂದಿತ್ತು. ದಿನಾಗ್ಲೂ ಸುಮಿತ್ರಮ್ಮನ ಅದೇ ಮಾತು ಕೇಳಿ ಕೇಳಿ ತಲೆ ಚಿಟ್ಟುಹಿಡಿದು, ತಾವು ನಿತ್ಯವೂ ಇಂಪೋರ್ಟೇಡ್ ಶ್ಯಾಂಪೂ ಹಾಕಿ ತೊಳೆಯುವ, ಫಳಫಳ ಹೊಳೆಯುವ, ರೇಷ್ಮೆಯಂತಹ ಕೂದಲುಗಳು ಉದುರಿಬಿಡುತ್ತವೆಯೋ ಎಂದು ಇಬ್ಬರಿಗೂ ಆತಂಕ ಶುರುವಾಗಿತ್ತು. ಮೊನ್ನೆ ಸಮಾಹಿತನ ತಲೆಯಲ್ಲಿ ಬೆಳ್ಳಿ ಕೂದಲೊಂದನ್ನು ನೋಡಿ ಹೌಹಾರಿದ್ದ ಸುಗುಣಿ, ತನ್ನ ಗಂಡನ ಶೀರ್ಷದಲ್ಲಿನ ಈ ಬೆಳ್ಳಿ ಕೂದಲಿನ ಚೊಚ್ಚಲ ಜನನಕ್ಕೆ ಸುಮಿತ್ರಮ್ಮನ ಕಿರುಕುಳವೇ ಕಾರಣ ಎಂದು ನಿರ್ಧರಿಸಿಬಿಟ್ಟಿದ್ದಳು. ತನ್ನ ತಲೆಯಲ್ಲಿ ಬೆಳ್ಳಿ ಕೂದಲಿನ ಬಾಣಂತನ ಮಾಡಲು ಇಷ್ಟವಿಲ್ಲದ ಆಕೆಗೆ, ಈ ಸಮಸ್ಯೆಗೆ ಉಪಾಯ ಹುಡುಕಲೇ ಬೇಕಾದ ಅನಿವಾರ್ಯತೆ ಬಂದೊದಗಿತ್ತು. ಆದರೆ ಏನೇ ಮಾಡಿದರೂ ಈ ಸಮಸ್ಯೆಯಿಂದ ಪಾರಾಗುವ ಬಗ್ಗೆ ಮಾತ್ರ ದಂಪತಿಗಳು ‘ದಂ’ ಬರುವವರೆಗೆ ಯೋಚಿಸಿದರೂ ಗೊತ್ತಾಗಿರಲಿಲ್ಲ. ಒಟ್ಟಿನಲ್ಲಿ ಆಡುವ ಹಾಗಿಲ್ಲ, ಅನುಭವಿಸುವ ಹಾಗಿಲ್ಲ ಅನ್ನೋ ಪರಿಸ್ಥಿತಿ.

ಆಗಿದ್ದಿಷ್ಟೇ….ಸಮಾಹಿತ ಹಾಗೂ ಸುಗುಣಿ ಮದುವೆಯಾಗಿ, ಮೊದಲ ಮಹಡಿಯಲ್ಲಿದ್ದ ಈ ಹೊಸ ಮನೆಗೆ ಬಾಡಿಗೆಗೆ ಬಂದು ಆರು ತಿಂಗಳು ಕಳೆದಿತ್ತು. ಬಾಡಿಗೆ ಮನೆಯನ್ನು ತೋರಿಸಲು ಬ್ರೋಕರ್ ಕರೆದುಕೊಂಡು ಬಂದಾಗ ಇಬ್ಬರಿಗೂ ಮನೆ ತುಂಬಾ ಇಷ್ಟವಾಗಿಬಿಟ್ಟಿತ್ತು. ಜೊತೆಗೆ ಬ್ರೋಕರ್ ಎಂಬ ಮನೆಮುರುಕನ ಹಿಂದೆ ನಾಲ್ಕು ದಿನಗಳಿಂದ ಮನೆ ಬಾಡಿಗೆ ಮನೆ ನೋಡಲು ಸುತ್ತಾಡಿದ್ದರಿಂದ, ಇನ್ನೂ ಹೆಚ್ಚು ಮನೆಗಳನ್ನು ನೋಡುವ ತ್ರಾಣವಾಗಲಿ, ಸಮಯವಾಗಲಿ ಇಬ್ಬರಿಗೂ ಇರಲಿಲ್ಲ. ಹೀಗಾಗಿ ಇದೇ ಮನೆಯನ್ನು ಬಾಡಿಗೆಗೆ ಹಿಡಿಯುವುದೆಂದು ನಿರ್ಧರಿಸಿದರು.  ಓನರ್ ಜೊತೆ ಮಾತನಾಡಲು ಕುಳಿತಾಗಲಂತೂ, ಓನರ್ ಗೋಪಾಲಯ್ಯ ಹಾಗೂ ಅವರ ಧರ್ಮಪತ್ನಿ ಸುಮಿತ್ರಮ್ಮ ತುಂಬ ಪ್ರೀತಿಯಿಂದ ಮಾತನಾಡಿಸಿದರು. ಗೋಪಾಲಯ್ಯನವರ ಮನೆಯ ಟೀಪಾಯ್ ಮೇಲಿದ್ದ ಒಂದು ಇಂಗ್ಲೀಷ್, ಒಂದು ಕನ್ನಡ ದಿನಪತ್ರಿಕೆ, ಕನ್ನಡದ ಎರಡು ಪ್ರಮುಖ ವಾರ ಪತ್ರಿಕೆಗಳು, ಇತ್ತೀಚೆಗಷ್ಟೇ ಪ್ರಕಟವಾಗಿದ್ದ ಖ್ಯಾತ ಸಾಹಿತಿಯೊಬ್ಬರ ಬೋಗಸ್ ಕಾದಂಬರಿ –ಈ ಎಲ್ಲ ಪರಮೋಚ್ಚ ಕನ್ನಡ ಸಾಹಿತ್ಯವು ಓನರ್ ಸಾಕಷ್ಟು ಓದಿಕೊಂಡವರು ಎಂಬುದನ್ನು ಸಾರಿ ಸಾರಿ ಹೇಳುತ್ತಿದ್ದವು. ಗೋಪಾಲಯ್ಯ ಮನೆಮುರುಕನಿಗೆ ಬಾಡಿಗೆ ಮನೆಯ ಕೀ ಕೊಡದೆ, ಹಸಿರು ಕ್ರಾಂತಿ ಆದಾಗ ಭಾರತದಲ್ಲಿ ಬಂದ ಬಂಪರ್ ಬೆಳೆಯನ್ನು ನೆನಪಿಸುವ ತಮ್ಮ ಎದೆಯ ಮೇಲಿನ ಕಪ್ಪು-ಬಿಳಿ ಮಿಶ್ರಿತ ಕೂದಲುಗಳನ್ನು ಪ್ರದರ್ಶಿಸುತ್ತ, ಗುಂಡುಗುಂಡಾದ ಶರೀರವನ್ನು ಹೊತ್ತುಕೊಂಡು ದುಡುದುಡು ಫಸ್ಟ್ ಫ್ಲೋರ್ ಗೆ ಹೋಗಿ, ಇಡೀ ಮನೆಯಲ್ಲಿ ಅಡ್ಡಾಡಿ ದಂಪತಿಗಳಿಗೆ ಮನೆ ತೋರಿಸಿದ್ದರು. ಮನೆಯಲ್ಲಿ ಯಥೇಚ್ಛವಾಗಿದ್ದ ಗಾಳಿ ಬೆಳಕು, ಮನೆಯ ಲೊಕೇಷನ್ ಎಲ್ಲವೂ ತುಂಬಾ ಚೆನ್ನಾಗಿತ್ತು. ಕೆಳಗೆ ಓನರ್, ಮೇಲೆ ಬಾಡಿಗೆದಾರರು. ಕಾವೇರಿ ಕನೆಕ್ಷನ್ ಜೊತೆಗೆ ಬೋರ್ವೆಲ್ ನೀರು. ಪ್ರತ್ಯೇಕ ಮೀಟರ್. ವಿಶಾಲವಾದ ಟೆರೆಸ್…..ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ. ಎಲ್ಲರೂ ಮನೆ ನೋಡಿಕೊಂಡು ಕೆಳಗೆ ಬರುವಷ್ಟರಲ್ಲಿ ಗೋಪಾಲಯ್ಯನವರ ಧರ್ಮಪತ್ನಿ ಮಾ.ಸ.ಸೌ. (ಮಾತೋಶ್ರಿ ಸಮಾನರಾದ ಸೌಭಾಗ್ಯವತಿ ಅಲ್ಲ, ಮಾತಿನಿಂದ ಸಡ್ಡುಹೊಡೆಯುವ ಸೌಭಾಗ್ಯವತಿ) ಸುಮಿತ್ರಮ್ಮ ಬೆಳ್ಳಿ ಬಟ್ಟಲನ್ನು ನಾಚಿಸುವ ಸ್ಟೀಲ್ ಬಟ್ಟಲುಗಳಲ್ಲಿ ಎಲ್ಲರಿಗೂ ಬಿಸಿ ಬಿಸಿ ಕಾಫಿ ತಂದಿರಿಸಿದ್ದರು. ಕಾಫಿ ಹೀರುತ್ತ ಬಾಡಿಗೆ ವಿಷಯ ಚರ್ಚೆಯಾಯಿತು.

“ಒಂಭತ್ತೂವರೆ ಸಾವಿರ ರೂಪಾಯಿ, ಹತ್ತು ತಿಂಗಳ ಬಾಡಿಗೆ ಅಡ್ವಾನ್ಸ್” ಗೋಪಾಲಯ್ಯ ಹೇಳಿದರು.

“ಸಾರ್, ನಾವು ಈಗಷ್ಟೇ ಮದುವೆಯಾಗಿದ್ದೇವೆ. ನಿಮಗೂ ಗೊತ್ತು….ಆರಂಭದಲ್ಲಿ ಸಂಸಾರ ಎಷ್ಟು ಕಷ್ಟ ಅಂತ. ಹೀಗಾಗಿ ಎಂಟೂವರೆ ಸಾವಿರ, ಹತ್ತು ತಿಂಗಳ ಬಾಡಿಗೆಯಾದರೆ ನಮಗೆ ಅನುಕೂಲವಾಗುತ್ತಿತ್ತು” ಎಂದ ಸಮಾಹಿತ. ಗೋಪಾಲಯ್ಯ ಏನೋ ಮಾತಾಡಬೇಕು ಅನ್ನುವಷ್ಟರಲ್ಲಿ ಮತ್ತೆ ಮಾ.ಸ.ಸೌ ಅವರು ಮಧ್ಯೆಯೇ ಮೂಗು ತೂರಿಸಿ “ನಮ್ದೂ ಬೇಡ. ನಿಮ್ದೂ ಬೇಡ. ಒಂಬತ್ತು ಸಾವಿರ. ಹತ್ತು ತಿಂಗಳ ಅಡ್ವಾನ್ಸ್. ಆಗ್ಬಹುದಾ?” ಅಂದರು. ಸಮಾಹಿತ-ಸುಗುಣಿಗೂ ಅಷ್ಟೇ ಬೇಕಾಗಿತ್ತು. ಇನ್ನೇನು ಟೋಕನ್ ಅಡ್ವಾನ್ಸ್ ಕೊಡಬೇಕು ಅನ್ನುವಷ್ಟರಲ್ಲಿ ಥಟ್ಟನೆ ಸುಮಿತ್ರಮ್ಮ ಕೇಳಿದ ಪ್ರಶ್ನೆಗೆ ಸಮಾಹಿತ ಬೆಚ್ಚಿದ್ದ.

“ಅಂದಹಾಗೆ, ನಿಮ್ಮದು ಯಾವ ಕಡೆ?”

ಈ ಪ್ರಶ್ನೆಗೆ ಹೇಗೆ ಉತ್ತರಿಸಬೇಕೆಂದು ಸಮಾಹಿತನಿಗೆ ಗೊತ್ತಾಗಲಿಲ್ಲ. ಮೇಡಂ ತಮ್ಮ ಊರು ಕೇಳುತ್ತಿದ್ದಾರೋ, ಜಾತಿ ಕೇಳುತ್ತಿದ್ದಾರೋ, ಅಥವಾ ಬೇರೆನನ್ನೋ ಕೇಳುತ್ತಿದ್ದಾರೋ ತಿಳಿಯದೆ ಗೊಂದಲಕ್ಕೊಳಗಾದ. ರಕ್ಷಣಾತ್ಮಕವಾಗಿ ಆಡಲು ನಿರ್ಧರಿಸಿದವನೇ, “ನಮ್ಮದು ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಯ ವಡಗಾಂವ್ ಬುದ್ರುಕ್ ಊರು” ಎಂದಿದ್ದ.

“ಛೆ ಛೆ ನಾನು ಊರು ಕೇಳ್ಳಿಲ್ಲ…..ಅಂದ್ರೆ ನೀಮ್ಮದು ಯಾವ ಕಮ್ಯುನಿಟಿ ಅಂತ?” ಎಂದು ರಾಗವಾಗಿ, ಕನ್ನಡದ ಖ್ಯಾತ ಸೀರಿಯಲ್ ಒಂದರಲ್ಲಿನ ಪೆದ್ದು ಶಾರದಮ್ಮನ ಪಾತ್ರ ಕೇಳುವ ಹಾಗೆ ತಾನ್ ಪುರಾ ಇಲ್ಲದೆ ರಾಗವಾಗಿ ಸುಮಿತ್ರಮ್ಮ ಕೇಳಿದರು.

ಸಮಾಹಿತ ಸುಲಭವಾಗಿ ಸುಳ್ಳು ಹೇಳಬಹುದಾಗಿದ್ದರೂ, ಆತನಿಗಾಗಲಿ ಸುಗುಣಿಗಾಗಲಿ ಸುಳ್ಳು ಹೇಳುವುದು ಇಷ್ಟವಿರಲಿಲ್ಲ. ಗೋಪಾಲಯ್ಯ-ಸುಮಿತ್ರಮ್ಮ ಸಾಕಷ್ಟು ಸಂಪ್ರದಾಯಸ್ಥರಂತೆ ಕಾಣುತ್ತಿದ್ದುದರಿಂದ ಅವರಿಂದ ಸತ್ಯ ಮುಚ್ಚಿಟ್ಟು ಚೀಟ್ ಮಾಡುವುದು ಬೇಡ ಅನ್ನಿಸಿತು.

“ನನ್ನದು ……………ಕಮ್ಯುನಿಟಿ. ಸುಗುಣಿಯದ್ದು…………….ಕಮ್ಯುನಿಟಿ. ನಮ್ಮದು ಇಂಟರ್ ಕಾಸ್ಟ್ ಮ್ಯಾರೇಜ್” ಅಂದ..

“ಲವ್ ಮ್ಯಾರೇಜ್ಜಾ?” ಧಟ್ಟನೆ ಕೇಳಿದ್ದರು ಮಾ.ಸ.ಸೌ.

ಹೌದೆಂದು ಇಬ್ಬರೂ ತಲೆಯಾಡಿಸಿದರು. ತಮ್ಮದು ಇಂಟರ್ ಕಾಸ್ಟ್ ಮ್ಯಾರೇಜ್ ಅಂದ ತಕ್ಷಣ ಈ ಮನೆ ತಮ್ಮಿಂದ ಕೈಬಿಟ್ಟಿತು ಅಂದುಕೊಂಡಿದ್ದ ಸಮಾಹಿತ. ಏಕೆಂದರೆ ಈ ಹಿಂದೆ ಕೂಡ ನಾಲ್ಕೈದು ಕಡೆ ಮನೆ ಓನರ್ ಗಳು ಎಲ್ಲದಕ್ಕೂ ಒಪ್ಪಿ ಕೊನೆಗೆ ಇವರು ತಮ್ಮ ಕಮ್ಯುನಿಟಿಯಲ್ಲ ಎಂದ ತಕ್ಷಣ, ಏನೋ ಕಾರಣ ಹೇಳಿ ಮನೆ ಬಾಡಿಗೆಗೆ ನೀಡಿರಲಿಲ್ಲ. ಇಲ್ಲಿ ಮಾತ್ರ ನಡೆದದ್ದೇ ಬೇರೆ. ಸುಮಿತ್ರಮ್ಮ ಸರಿಯಾಗಿ ಹನ್ನೊಂದು ನಿಮಿಷ 21 ಸೆಕೆಂಡು 17 ಮೈಕ್ರೋ ಸೆಕೆಂಡು ಯಾರಿಗೂ ಮಧ್ಯ ಪ್ರವೇಶಿಸಲು ಅನುವಾಗದಂತೆ ನಿರಂತರವಾಗಿ, ಪಕ್ಕಾ ಪ್ರಗತಿಪರ ನಾಯಕರಂತೆ “ಜಾತಿಯೆಲ್ಲ ಮಿಥ್ಯ, ಮನುಷ್ಯತ್ವವೊಂದೇ ಸತ್ಯ, ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ, ಮನುಷ್ಯ ಜಾತಿ ತಾನೊಂದೇ ವಲಂ, ನೂರ ದೇವರನೆಲ್ಲ ನೂಕಾಚೆ ದೂರ, ತಮಗಂತೂ ಜಾತಿ ವ್ಯವಸ್ಥೆಯಲ್ಲಿ ನಂಬಿಕೆಯೇ ಇಲ್ಲ,…”ಎಂದೆಲ್ಲ ಯದ್ವಾತದ್ವಾ ಮಾತಾಡಿ ನವದಂಪತಿಗಳಿಗೆ ಆನಂದವನ್ನುಂಟುಮಾಡಿದ್ದರು. ಅಂದೇ ಸಾಯಂಕಾಲ ರೆಂಟ್ ಅಗ್ರಿಮೆಂಟ್ ಗೆ ಸಹಿ ಬಿದ್ದಿತ್ತು. ಬ್ರೋಕರ್ ತನ್ನ ಹರುಕು ಮುರುಕು ಇಂಗ್ಲೀಷ್ ನಲ್ಲಿ ಕಾಗೆ ಕಾಲು ಗುಬ್ಬಿ ಕಾಲು ಕೆತ್ತಿ ಸಹಿ…….ಓ ಸಾರಿ……ಸಿಗ್ನೇಚರ್ ಮಾಡಿದ್ದ.

ಒಂದು ಶುಭ ದಿನ ಮಿನಿ ಲಾರಿಯೊಂದರಲ್ಲಿ ಎಲ್ಲ ಸಾಮಾನುಗಳನ್ನು ಹೊಸ ಮನೆಗೆ ಶಿಫ್ಟ್ ಮಾಡಲಾಯಿತು. ನೂತನ ದಂಪತಿಗಳ ಸಂಸಾರ ಶುರುವಾಯಿತು. ಸುಮಿತ್ರಮ್ಮ ಹಾಗೂ ಗೋಪಾಲಯ್ಯನವರಿಗೆ ಮಕ್ಕಳಿರಲಿಲ್ಲ ಎಂದು ನಿಧಾನವಾಗಿ ಸುಗುಣಿ-ಸಮಾಹಿತರಿಗೆ ತಿಳಿದಿತ್ತು. ಸುಮಿತ್ರಮ್ಮನೇ ಪರೋಕ್ಷವಾಗಿ ಈ ವಿಷಯ ತಿಳಿಸಿದ್ದರು. ಮಕ್ಕಳಿರುತ್ತಿದ್ದರೆ ಬಹುಶಃ ಸಮಾಹಿತ, ಸುಗುಣಿಯ ವಯಸ್ಸಿನವರೇ ಆಗಿರುತ್ತಿದ್ದರು. ಆದರೆ ಈಗ ಈ ಇಬ್ಬರೂ ಆ ಇಬ್ಬರಿಗೆ ಮಕ್ಕಳಂತಾಗಿದ್ದರು. ಮನೆಗ ಬಂದ ಎರಡನೆಯ ದಿನವೇ ತಮ್ಮನ್ನು ಸರ್ ಎಂದು ಕರೆಯದೆ ಅಂಕಲ್ ಹಾಗೂ ಆಂಟಿ ಎಂದು ಕರೆಯಬೇಕೆಂದು ಗೋಪಾಲಯ್ಯ ತಾಕೀತು ಮಾಡಿದ್ದರು. ತನ್ನ ಮನೆಯಲ್ಲಿ ವಿರೋಧ ಕಟ್ಟಿಕೊಂಡು ಮದುವೆಯಾಗಿದ್ದ ಸುಗುಣಿಯನ್ನು ಆಕೆಯ ತಂದೆ, ತಾಯಿ, ಅಣ್ಣಂದಿರು, ನೆಂಟರು ಬಾಯಿಕಾಟು ಮಾಡಿದ್ದರು. ಹೀಗಾಗಿ ಆಕೆಯಂತೂ ಆಂಟಿ-ಅಂಕಲ್ ಎಂದು ಕರೆಯುವ ಬದಲಾಗಿ ಮಮ್ಮಿ-ಡ್ಯಾಡಿ ಎಂದು ಕರೆಯುವುದೊಂದು ಬಾಕಿಯಿತ್ತು. ಸುಗುಣಿ, ಸುಮಿತ್ರಮ್ಮನವರ ಜಾತಿಯವಳೇ ಆಗಿದ್ದ ಕಾರಣ ಸ್ವಲ್ಪ ಹೆಚ್ಚೇ ಅನಿಸುವಷ್ಟು ವಾತ್ಸಲ್ಯ ನಾಲ್ಕೇ ದಿನದಲ್ಲಿ ಬೆಳೆದು ಬಿಟ್ಟಿತ್ತು. ಗೋಪಾಲಯ್ಯ ರಿಟೈರ್ ಆಗಿದ್ದರಿಂದ ಧಾರಾಳವಾಗಿ ವಾತ್ಸಲ್ಯ ಹರಿಸುತ್ತ ಕೂರುವಷ್ಟು ಸಮಯ ಅವರ ಬಳಿಯೂ ಇತ್ತು.

ಆದರೆ ಸಮಸ್ಯೆ ಶುರುವಾಗಿದ್ದು ಕೆಲ ದಿನಗಳ ಕಳೆದ ಬಳಿಕ. ನವ ದಂಪತಿಗಳು ಜಗತ್ಪ್ರಸಿದ್ಧ ಸಾಫ್ಟ್ ವೇರ್ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರು. ಜಗತ್ಪ್ರಸಿದ್ದ ಕಂಪನಿ ಎಂದ ಮೇಲೆ ಕೇಳಬೇಕೆ?, ಇಬ್ಬರಿಗೂ ಲಕ್ಷಕ್ಕೂ ಮೇಲ್ಪಟ್ಟು ಸಂಬಳ. ಹಾಗೆಯೇ ಸ್ವಾತಂತ್ರ್ಯ ಪೂರ್ವದಲ್ಲಿ ಅಂಡಮಾನ್ ಜೈಲಿನ ಕಾಲಾಪಾನಿಯ ಕೈದಿಗಳಿಗೆ ನೀಡಲಾಗುತ್ತಿದ್ದ ಕೆಲಸಕ್ಕಿಂತ ಹೆಚ್ಚು ಕೆಲಸ ಇಬ್ಬರ ಪಾಲಿಗೂ ಇರುತ್ತಿತ್ತು. ಹೀಗಾಗಿ ಗಂಡ-ಹೆಂಡತಿ ನಿತ್ಯವೂ ದುಡಿದುಡಿದು, ಸ್ಟಾರ್ಚ್ ಹಾಕಿರುತ್ತಿದ್ದ ಬಟ್ಟೆಗಳನ್ನು ಹಿಗ್ಗಾಮುಗ್ಗಾ ಸುಕ್ಕು ಮಾಡಿಕೊಂಡು ಹೈರಾಣಾಗಿ ಮನೆಗೆ ಬರುತ್ತಿದ್ದರು. ಮನೆಗೆ ಬಂದ ಮೇಲೆ ಸುಗುಣಿಗೆ ಅಡಿಗೆ ಮಾಡುವುದು ಹೋಗಲಿ, ಟೀ ಮಾಡುವಷ್ಟು ಕೂಡ ತ್ರಾಣ ಇರುತ್ತಿರಲಿಲ್ಲ. ಒಂದು ದಿನ ಡೋಮಿನೋಸಂ, ಮತ್ತೊಂದು ದಿನ ಪಿಝಾ ಹಟ್ಟಂ, ಮಗದೊಂದು ದಿನ ಮಯೂರಿಯಂ, ಅದರ ನೆಕ್ಸ್ಟ್ ದಿನ ನಂದಿನಿ ಡೀಲಕ್ಸಂ ಹೀಗೆ ಹೋಟಲ್ ನಿಂದ ಊಟ-ತಿಂಡಿ ಬರುವುದು ಸಾಮಾನ್ಯವಾಗಿತ್ತು. ಇಂತಹ ಒತ್ತಡದ ಬದುಕಿನಲ್ಲೇ ಸುಗುಣಿ ಸಾಧ್ಯವಾದಗಲೆಲ್ಲ ಮನೆಯ ಹೊರಗೆ ರಂಗೋಲಿ ಹಾಕುವುದು, ದೇವರ ಪೂಜೆ ಮಾಡುವುದು ಮಾಡುತ್ತಿದ್ದಳು.

ನಿಜವಾದ ಸಮಸ್ಯೆ ಇಲ್ಲಿಂದ ಶುರುವಾಯಿತು ಅನ್ನಬಹುದು.ಸುಮಿತ್ರಮ್ಮ ಅಂದು ಮಾಡಿದ ಪ್ರಗತಿಪರ ಭಾಷಣಕ್ಕೂ ಅವರ ವರ್ತನೆಗೂ ಸಂಬಂಧವೇ ಇಲ್ಲ ಎಂಬುದು ಸುಗುಣಿಗೆ ನಿಧಾನವಾಗಿ ತಿಳಿಯುತ್ತ ಹೋಗಿತ್ತು. ನಾಗರ ಪಂಚಮಿಯಿಂದ ವಿಜಯದಶಮಿಯವರೆಗಿನ ಅವಧಿಯಲ್ಲಿ ನವದಂಪತಿಗಳು ಪಟ್ಟ ಪಾಡು ಅಷ್ಟಿಷ್ಟಲ್ಲ. “ನೀನು ದಿನಾಲೂ ಯಾಕೆ ಮನೆ ಮುಂದೆ ರಂಗೋಲಿ ಹಾಕಲ್ಲ?”, “ಇವತ್ತು ಗ್ರಹಣ. ಮನೆಗೆ ವಾಪಸ್ ಬಂದ್ಮೇಲೆ ಸ್ನಾನ ಮಾಡಿಲ್ವಾ?”, “ಇವತ್ತು ಗಣೇಶ ಚತುರ್ಥಿ. ಮನೇಲಿ ಮೋದಕ ಮಾಡಿದಿಯಾ ತಾನೆ?”, “ನಿಮ್ಮ ಕಡೆ (ನಿಮ್ಮ ಜಾತಿಯಲ್ಲಿ) ವರಮಹಾಲಕ್ಷ್ಮಿ ಹಬ್ಬ ಮಾಡಲ್ವಾ?”, ಹೀಗೆ ಆಯಾಯಾ ಸಂದರ್ಭಕ್ಕೆ, ಹಬ್ಬಕ್ಕೆ ತಕ್ಕಂತೆ ಮಿಲಿಯನ್ ಗಟ್ಟಲೆ ಪ್ರಶ್ನೆ ಕೇಳಿ ಸುಗುಣಿಯನ್ನು ಸುಸ್ತು ಮಾಡಿದ್ದರು ಸುಮಿತ್ರಮ್ಮ. ಬರೀ ಪ್ರಶ್ನೆ ಕೇಳಿದ್ದರೆ ಪರವಾಗಿರಲಿಲ್ಲ. ಆದರೆ ಅವರು ಕೇಳುತ್ತಿದ್ದ ರೀತಿ ಹೇಗಿರುತ್ತಿತ್ತೆಂದರೆ “ಎಂಥ ಜನಾನಪ್ಪ ನೀವು? ಒಂಚೂರು ಸಂಪ್ರದಾಯ, ನೇಮ ನಿಷ್ಠೆ ಅಂತ ಬೇಡ್ವ. ಸಮಾಹಿತಂದು ಬಿಡು. ಅವನು ಬೇರೆ ಜಾತಿ. ನೀನಾದ್ರೂ ಮಾಡ್ಬಾರ್ದಾ? ನಿಂದು ನಮ್ದು ಒಂದೇ ಜಾತಿ ಅಲ್ವ?” – ಈ ಎಲ್ಲ ಭಾವಗಳನ್ನು ಸುಮಿತ್ರಮ್ಮ ತಮ್ಮ ಪ್ರಶ್ನೆಯಲ್ಲಿ ಧ್ವನಿಸುತ್ತಿದ್ದರು. ಒಂದೆರಡು ಬಾರಿಯಂತೂ ಪರೋಕ್ಷವಾಗಿ ಸುಮಿತ್ರಮ್ಮ ಹೀಗೆ ಹೇಳಿಯೂ ಇದ್ದರು. ಮನೆಯ ಎದುರು ರಂಗೋಲಿ ಹಾಕಲು ಸಮಯವಿಲ್ಲದ ಸುಗುಣಿ, ಗೌರಿ ಹಬ್ಬಕ್ಕೆ ಮೋದಕ ಮಾಡುವುದು, ಆಚಾರ್ಯರೇಣುಕರು ರಾಜ್ಯದ ಡಿಸಿಎಂ ಆಗುವಷ್ಟೇ ಅಸಾಧ್ಯವಾಗಿತ್ತು. ಈ ಚೊರೆ ಎಷ್ಟು ಹೆಚ್ಚಿತೆಂದರೆ ಹಬ್ಬ-ಹರಿದಿನ-ಸೂರ್ಯಗ್ರಹಣ-ಚಂದ್ರಗ್ರಹಣಕ್ಕೆ ಎರಡು ದಿನ ಮೊದಲೇ ಸುಗುಣಿಯ ರಕ್ತದೊತ್ತಡ ಜಾಸ್ತಿಯಾಗಿ, ಮೂಡ್ ಆಫ್ ಆಗಿ, ಅದರಿಂದಾಗಿ ಸಮಾಹಿತನ ಜೊತೆ ವಿನಾಕಾರಣ ಜಗಳ ಆಗಿ ಇನ್ನೇನೇನೆಲ್ಲ ಆಗಿ, ಆಗಬಾರದ್ದೆಲ್ಲ ಆಗಿ ಬಿಡುತ್ತಿತ್ತು.

ಮೊದಲೆಲ್ಲ ಬರೀ ಪ್ರಶ್ನೆಯಾಗಿ ಕಾಡಲಾರಂಭಿಸಿದ್ದು, ನಂತರ ಆದೇಶಗಳಾಗಿ ಮಾರ್ಪಟ್ಟವು. ಪ್ರಶ್ನಾರ್ಥಕ ಚಿಹ್ನೆಗಳು ಮಾಯವಾದವು. “ರಂಗೋಲಿ ಹಾಕು, ತೋರಣ ಕಟ್ಟು, ಅರಿಷಿನ ದಾರ ಕಟ್ಕೋ, ಇವತ್ತು ರಾತ್ರಿ ಸಮಾಹಿತನ ಜೊತೆ ಮಲಗ್ಬೇಡ, ದಿನ ಚನ್ನಾಗಿಲ್ಲ…..”ಹೀಗೆಲ್ಲ ಸುಮಿತ್ರಮ್ಮ ಮಾತಾನಾಡಲಾರಂಭಿಸಿದ್ದರು. ಸುಗುಣಿ ಸಿಕ್ಕಾಗಲೆಲ್ಲ ತಮ್ಮದು ಶ್ರೇಷ್ಠ ಜಾತಿ. ಅಷ್ಟೇ ಅಲ್ಲ ಆ ಶ್ರೇಷ್ಠ ಜಾತಿಯ ಸಬ್ ಕಾಸ್ಟ್ ಗಳಲ್ಲಿರುವ ಮತ್ತೂ ಶ್ರೇಷ್ಠವಾಗಿರುವ ಜಾತಿ ತಮ್ಮದು. ತಮ್ಮ ಜಾತಿಯ ವಿಶಿಷ್ಟತೆ, ಆಚಾರ, ಪದ್ಧತಿ ಇತ್ಯಾದಿಗಳ ಬಗ್ಗೆ ಸಮಾ ಕೊರೆಯುತ್ತಿದ್ದರು. ಆಗಾಗ ಸಮಾಹಿತನ ಜಾತಿಯ ಬಗ್ಗೆ ನೇರವಾಗಿಯೇ ಕೀಳಾಗಿ ಮಾತಾಡುತ್ತಿದ್ದರು ಕೂಡ.

ಪರಿಸ್ಥಿತಿ ಹೀಗಿರುತ್ತ ಒಂದು ದಿನ……

ವಿದೇಶದಲ್ಲಿ ಯಾವುದೋ ಫೀಸ್ಟ್ ಇದ್ದದ್ದರಿಂದ ಭಾರತದಲ್ಲಿನ ಸುಗುಣಿ ಕೆಲಸ ಮಾಡುತ್ತಿದ್ದ ಜಗತ್ಪ್ರಸಿದ್ಧ ಎಂಎನ್ಸಿ ಕಂಪನಿಗೆ ರಜಾ ಇತ್ತು. ಸುಮಿತ್ರಮ್ಮನಿಂದ ತಪ್ಪಿಸಿಕೊಳ್ಳಲು ಸುಗುಣಿ, ಪಕ್ಕದ ಮನೆಗೆ ಹೋಗಿ ಮಾತನಾಡುತ್ತ ಕುಳಿತಿದ್ದಳು. ಹೀಗೆ ಮಾತುಮಾತಲ್ಲೇ ಸುಗುಣಿ, ಸುಮಿತ್ರಮ್ಮನವರಿಗೆ ಮಕ್ಕಳಿಲ್ಲದರ ಬಗ್ಗೆ ಬೇಸರ ವ್ಯಕ್ತಪಡಿಸಿದಳು. ಆಗ ಪಕ್ಕದ ಮನೆಯಾಕೆ ಹೌಹಾರಿ, “ಅಯ್ಯೋ ಅವರಿಗೇನ್ ಬಂತ್ರಿ ರೋಗ… ನಿಮ್ಮ ಹತ್ರ ತಮಗ ಮಕ್ಳಿಲ್ಲ ಅಂತ ಹೇಳಿದ್ರಾ…? ರಾಮ ರಾಮ…!! ಏನು ಕಾಲ ಬಂತು ನೋಡ್ರಿ…ಅವರಿಗೆ ಮಗ ಸೊಸೆ ಎಲ್ಲಾ ಇದಾರೆ ಕಣ್ರೀ. ಆದರೆ ಇವರ ಜೊತೆ ಇರಲ್ಲ. ಬೇರೆ ಮನೆ ಮಾಡ್ಕೊಂಡು ಇರ್ತಾರೆ ಅಷ್ಟೆ” ಎಂದರು. ಸುಗುಣಿಗೆ ಒಂದು ಕ್ಷಣ ಏನೂ ಗೊತ್ತಾಗಲಿಲ್ಲ.

“ಮತ್ತೆ ನಮ್ಮ ಹತ್ರ ಹಾಗ್ಯಾಕೆ ಹೇಳಿದರು?” ಅಂತ ಕೇಳಿದಳು. ಡ್ರಾಯಿಂಗ್ ರೂಮಿನಲ್ಲಿ ಕುಳಿತಿದ್ದರೂ, ಅಭ್ಯಾಸ ಬಲದಂತೆ ಆ ಕಡೆ ಈ ಕಡೆ ನೋಡಿದ ಪಕ್ಕದ ಮನೆಯಾಕೆ, ತೀರ ಮೆಲುದನಿಯಲ್ಲಿ “ಅಯ್ಯೋ ಅವರ ಮಗಂದು ಲವ್ ಮ್ಯಾರೇಜು. ಲವ್ವಲ್ಲಿ ಜಾತಿ ಯಾರಾದ್ರೂ ನೋಡ್ತಾರಾ? ಸರಿ, ಅವರ ಮಗಾನೂ ಜಾತಿ ನೋಡ್ತೇ ಲವ್ ಮಾಡ್ದ. ಹುಡುಗಿದು ಯಾವುದೋ ಕೆಳಗಿನ ಜಾತಿ ಅಂತ ಸುಮಿತ್ರಮ್ಮಂಗೆ ಗೊತ್ತಾಯ್ತು. ನೀವು ನಂಬಲ್ಲ ಆದ್ರೂ ಹೇಳ್ತಿನಿ. ಈ ಸುಮಿತ್ರಮ್ಮ ತಮ್ಮ ಸೊಸೆಗೆ ಮನೆ ಹೊಸಿಲು ತುಳಿಯೋದಕ್ಕೂ ಬಿಡ್ಲಿಲ್ಲ. ಗೋಪಾಲಯ್ಯ ಮಗನ ಮದುವೆನ ಒಪ್ಕೊಂಡ್ರೂ ಸುಮಿತ್ರಮ್ಮ ರಂಪ ರಾಮಾಯಣ ಮಾಡಿ ಸೊಸೆನ ಮನೆ ಒಳಗೆ ಬಿಟ್ಟಕೊಳ್ಳಲೇ ಇಲ್ಲ. ಅದಕ್ಕೆ ಮಗ ಬೇರೆ ಮನೆ ಮಾಡಿ ಇದ್ದಾನೆ. ಜಾತಿ ಅಂದ್ರೆ ಅಷ್ಟು ಮುಖ್ಯ ಆ ಯಮ್ಮಂಗೆ” ಅಂದರು ಪಕ್ಕದ ಮನೆಯಾಕೆ.

ಗಿರ್ ಎಂದು ಸುತ್ತುತ್ತಿದ್ದ ಸುಗುಣಿಯ ತಲೆ ಸಮಸ್ಥಿತಿಗೆ ಬರಲು ಕೆಲವು ನಿಮಿಷಗಳೇ ಹಿಡಿದವು. ವಾಪಸ್ ಮನೆಗೆ ಬಂದಳವಳೇ ಸಮಾಹಿತನಿಗೆ ಹಿಂಗಿಂಗೆ ಹಿಂಗಿಂಗೆ ಎಂದು ಹೇಳಿ, ಸುಮಿತ್ರಮ್ಮನ ಕಾಟದಿಂದ ತಪ್ಪಿಸಿಕೊಳ್ಳಬೇಕಾದರೆ ಹಾಗೂ ತಮ್ಮ ತಲೆ ಕೂದಲುಗಳು ಬಿಳಿಯಾಗುವುದನ್ನು ತಡೆಯಬೇಕಾದರೆ, ಬೇರೆ ಮನೆ ನೋಡುವುದೇ ಉತ್ತಮ ಎಂದು ಹೇಳಿದಳು. ಸಮಾಹಿತ ತುಂಬ ಹರ್ಷದಿಂದ ಇದನ್ನು ಒಪ್ಪಿದ. ಸುಮಿತ್ರಮ್ಮನ ಮಾತಿನ ಟಾರ್ಚರ್ ನಿಂದಾಗಿ ಸುಗುಣಿ ಅನಗತ್ಯವಾಗಿ ತನ್ನ ಫ್ರಸ್ಟ್ರೇಷನ್ನನ್ನು ಸಮಾಹಿತನ ಮೇಲೆ ತೀರಿಸಿಕೊಳ್ಳುತ್ತಿದ್ದಳು. ಹೀಗಾಗಿ ಇಬ್ಬರ ನಡುವೆ ಅನಗತ್ಯವಾಗಿ ಮಾತಿನ ಚಕಮಕಿ ನಡೆಯುತ್ತಿದ್ದವು. ಜಾತಿಗಾಗಿ ಸ್ವಂತ ಸೊಸೆಯನ್ನೇ ಒಪ್ಪದ ಸುಮಿತ್ರಮ್ಮ ತಮ್ಮ ನಡುವೆ ಡಿವೋರ್ಸ್ ಮಾಡಿಸಲೂ ಹಿಂಜರಿಯುವುದಿಲ್ಲ ಎಂದು ಸುಗುಣಿಗೆ ಅನ್ನಿಸಿತ್ತು. ಬರೀ ಜಾತಿ ಜಾತಿ ಎಂದು 24 ಗಂಟೆಯೂ ಬಡಿದುಕೊಳ್ಳುವ ಜನಕ್ಕೆ ಬುದ್ಧಿ ಬರುವಾದದರೂ ಯಾವಾಗ ಎಂದು ಆಕೆ ಯೋಚಿಸುತ್ತಿದ್ದಳು. ಫುಲೆ, ಕಬೀರ್, ಬಸವಣ್ಣ, ಮತ್ತೆ ಹುಟ್ಟಿಬರಬಾರದೇ ಎನಿಸುತ್ತಿತ್ತು.

ಸಮಾಹಿತ ಅದಾಗಲೇ ಹೊಸ ಬಾಡಿಗೆ ಮನೆ ನೋಡಿ ಬಂದಿದ್ದ. ಹೊಸ ಮನೆ ಯಾವ ರೀತಿಯಲ್ಲಿಯೂ ಅವರು ಈಗಿದ್ದ ಮನೆಗೆ ಸಮವಾಗಿಲ್ಲದಿದ್ದರೂ ಮನೆ ಬದಲಾಯಿಸಲು ದಂಪತಿಗಳು ನಿರ್ಧರಿಸಿಯಾಗಿತ್ತು.

ಇನ್ನೇನು ಒಂದೆರಡು ದಿನದಲ್ಲೇ ಮನೆ ಬದಲಾಯಿಸುಬೇಕು ಅನ್ನುವಷ್ಟರಲ್ಲಿ…..

ತಮ್ಮ 1987 ಮಾಡೆಲ್ ಬಜಾಜ್ ಸ್ಕೂಟರ್ ಮೇಲೆ ಹೋಗುತ್ತಿದ್ದ ಗೋಪಾಲಯ್ಯನವರಿಗೆ ಆಟೋರಿಕ್ಷಾ ಬಂದು ಗುದ್ದಿತು. ಗೋಪಾಲಯ್ಯನವರನ್ನು ಆಸ್ಪತ್ರೆ ಸೇರಿಸಲು ಸುತ್ತಲಿದ್ದ ಸೊಫಿಸ್ಟಿಕೇಟೆಡ್ ಜನ ಮುಂದಾಗದ ಕಾರಣ, ಕೊನೆಗೆ ಪೋಲಿಸರೇ ಬಂದು ಹತ್ತಿರದ ಖಾಸಗಿ ಆಸ್ಪತ್ರೆಗೆ ಸೇರಿಸಿದರು. ಸುಮಿತ್ರಮ್ಮನವರಿಗೆ ಸುದ್ಧಿ ತಿಳಿದು ಆಸ್ಪತ್ರೆ ತಲುಪಿದಾಗ ಗೋಪಾಲಯ್ಯನವರ ತಲೆ, ಕಾಲು, ಭುಜಕ್ಕೆ ಬ್ಯಾಂಡೇಜ್ ಸುತ್ತಿ ಮಲಗಿಸಲಾಗಿತ್ತು. ಅವರಿಗೆ ತುರ್ತು ಆಪರೇಷನ್ ಮಾಡಬೇಕಿತ್ತು. ಸುಮಿತ್ರಮ್ಮನ ಪರ್ಸಿನಲ್ಲಿ ಎರಡು ಕ್ರೆಡಿಟ್ ಕಾರ್ಡ್ ಹಾಗೂ ಒಂದು ಡೆಬಿಟ್ ಕಾರ್ಡ್ ನೋಡಿದ ಖಾಸಗಿ ಆಸ್ಪತ್ರೆಯವರು ಗೋಪಾಲಯ್ಯನವರನ್ನು ತಕ್ಷಣ ಆಪರೇಷನ್ ಥೇಟರ್ ನೊಳಕ್ಕೆ ಕರೆದೊಯ್ದರು. ಅಷ್ಟರಲ್ಲಿ ಅಪಘಾತದ ಸುದ್ಧಿ ತಿಳಿದು ಸುಗುಣಿ-ಸಮಾಹಿತ ಕೂಡ ಬಂದು ಸುಮಿತ್ರಮ್ಮನವರನ್ನು ಕೂಡಿಕೊಂಡರು. ಕೆಲ ಹೊತ್ತಿನಲ್ಲಿ ಆಪರೇಷನ್ ಥೇಟರ್ ನೊಳಗಿಂದ ಹೊರ ಬಂದ ಜೂನಿಯರ್  ಡಾಕ್ಟರ್ ಪಾಶ್ಚಾಪುರೆ, “ಮೇಡಂ, ನಿಮ್ಮ ಹಸ್ಬೆಂಡ್ ಗೆ ಅರ್ಜೆಂಟಾಗಿ ಬ್ಲಡ್ ಕೊಡಬೇಕು. ನಮ್ಮಲ್ಲಿ ಬ್ಲಡ್ ಇಲ್ಲ. ಅರೇಂಜ್ ಮಾಡಿ. ಕ್ವಿಕ್” ಎಂದು ಹೇಳಿ ಮಾಯವಾದರು. ಕ್ರೆಡಿಟ್ ಕಾರ್ಡ್ ಇದ್ದರೆ ಎಲ್ಲವೂ ಸಾಧ್ಯ ಅಂದುಕೊಂಡಿದ್ದ ಸುಮಿತ್ರಮ್ಮ ತಕ್ಷಣ ತಮ್ಮ ಮೊಬೈಲ್ ನಿಂದ ನೆಂಟರಿಗೆಲ್ಲ ಫೋನ್ ಮಾಡಲಾರಂಭಿಸಿದರು. ಇಪ್ಪತ್ತು ನಿಮಿಷ ಕಳೆದರೂ ಸುಮಿತ್ರಮ್ಮನವರಿಗೆ ತಮ್ಮ ಯಾವೊಬ್ಬ ನೆಂಟರಿಂದಲೂ ರಕ್ತ ನೀಡಲು ಕರೆಸಲಾಗಲಿಲ್ಲ. ಅಷ್ಟರಲ್ಲಾಗಲೇ ಡಾ. ಪಾಶ್ಚಾಪುರೆ ಎರಡು ಬಾರಿ ಬಂದು “ಅರೇಂಜ್ ಆಯ್ತಾ?” ಎಂದು ಕೇಳಿ ಸುಮಿತ್ರಮ್ಮನವರ ಹೆಚ್ಚುತ್ತಿರುವ ರಕ್ತದೊತ್ತಡಕ್ಕೆ ತಮ್ಮ ಅಮೂಲ್ಯ ಕೊಡುಗೆ ನೀಡಿ ಹೋಗಿದ್ದರು. ಬ್ಲಡ್ ಬ್ಯಾಂಕ್ ಗಳಿಗೆ ಸುಮಿತ್ರಮ್ಮ ಏಕೆ ಫೋನ್ ಮಾಡುತ್ತಿಲ್ಲ ಎಂಬುದು ಸುಗುಣಿ ಸಮಾಹಿತರಿಗೆ ಅರ್ಥವಾಗಿತ್ತು. ಕೊನೆಗೂ ತಮ್ಮ ನೆಂಟರು ಯಾರೊಬ್ಬರೂ ಸಿಗದೇ ಸುಮಿತ್ರಮ್ಮ ಕೈಚೆಲ್ಲಿ ಕುಳಿತಾಗ ಸುಗುಣಿಗೆ ಕೆಡುಕೆನಿಸಿತು. ಸುಮಿತ್ರಮ್ಮನ ಬಳಿ ಹೋದವಳೇ, “ಆಂಟಿ, ಸಮಾಹಿತಂದು ‘ಓ’ ಪಾಸಿಟಿವ್ ಬ್ಲಡ್ ಗ್ರೂಪ್. ಅಂದ್ರೆ ಯೂನಿವರ್ಸಲ್ ಡೋನರ್. ನಿಮಗೆ ಪರ್ವಾಗಿಲ್ಲ ಅಂದ್ರೆ, ಸಮಾಹಿತಾನೇ ಬ್ಲಡ್ ಡೊನೇಟ್ ಮಾಡ್ತಾರೆ. ಆದ್ರೆ ಅವರು ನಿಮ್ಮ ಜಾತಿ ಅಲ್ಲ. ಗೊತ್ತಲ್ವ? ನಿಮಗೆ ನಡೆಯತ್ತಾ?” ಎಂದು ಕೇಳಿದಳು.

ಕೆಲ ಹೊತ್ತಿನ ನಂತರ ಸುಗುಣಿ-ಸಮಾಹಿತ ಆಸ್ಪತ್ರೆಯಿಂದ ಹೊರಟರು. ಸಮಾಹಿತ, ಕೈಮೇಲೆ ಸೂಜಿ ಚುಚ್ಚಿದ್ದ ಜಾಗವನ್ನು ಹತ್ತಿಯಲ್ಲಿ ಒರೆಸಿಕೊಂಡು, ರಕ್ತವಂಟಿದ್ದ ಹತ್ತಿಯನ್ನು ಡಸ್ಟ್ ಬಿನ್ ನಲ್ಲಿ ಒಗೆದು ಸುಗುಣಿಯ ಕೈಹಿಡಿದು ನಡೆಯತೊಡಗಿದ.

……

 

ವಾಚಕರ ವಿಜಯದಲ್ಲಿ ಬೈಕ್ ಗಳ ಹಾವಳಿ

1 Comment

.........

………

ನಿನ್ನೆಯ ವಿಜಯ ಕರ್ನಾಟಕದ ವಾಚಕರ ವಿಜಯದಲ್ಲಿ ಪ್ರಕಟವಾಗಿರುವ ನನ್ನ ಪತ್ರ

 

‘ಸುಧಾ’ ದಲ್ಲಿ ‘ಥಟ್ ಅಂತ ಬೆಣ್ಣೆ’

Leave a comment

ನವೆಂಬರ್ 22 ರ ‘ಸುಧಾ’ದ ‘ನಿಮ್ಮ ಪುಟ’ದಲ್ಲಿ ಪ್ರಕಟವಾಗಿರುವುದು.

.....

…..

 

ಜರ್ನಲಿಸ್ಟ್ ಗಣಪತಿ

Leave a comment

ಎಲ್ಲರಿಗೂ ಗಣಪತಿ ಹಬ್ಬದ ಶುಭಾಶಯಗಳು.

ವಿಘ್ನನಿವಾರಕ ಎಲ್ಲರಿಗೂ ಸದ್ಬುದ್ಧಿ ನೀಡಲಿ. ವಿಶೇಷವಾಗಿ ಮಾಧ್ಯಮದವರಿಗೆ!!

ಕೃಪೆ – ರಾಧಿಕಾ ಆನ್ ಲೈನ್

ಈ ಸುದ್ದಿಗೆ ಎಲ್ಲಿಂದ ನಗಬೇಕು?

Leave a comment

ಕೃಪೆ – ವಿಜಯ ವಾಣಿ

ವೈದ್ಯರ ಬೆದರಿಕೆಗೆ ಮಣಿಯದರಿ

Leave a comment

ಇಂದಿನ ಪ್ರಜಾವಾಣಿಯಲ್ಲಿ ಪ್ರಕಟವಾಗಿರುವ ಪತ್ರ

….

‘ಸುಧಾ’ದಲ್ಲಿ ನನ್ನ ಸಂದರ್ಶನ

2 Comments

ಕನ್ನಡದ ಹೆಮ್ಮೆಯ ವಾರಪತ್ರಿಕೆ ಸುಧಾಜಾಣರ ಪೆಟ್ಟಿಗೆಪ್ರತಿಸ್ಪಂದನದಲ್ಲಿ ನನ್ನ ಸಂದರ್ಶನ ಪ್ರಕಟಕವಾಗಿದೆ.

...

 

ಅಪ್ಪ ಬದಲಾಗಿದ್ದಾನೆ…!!!

13 Comments

©SUGHOSH S. NIGALE

 

©SUGHOSH S. NIGALE

ಅಪ್ಪ. ಅದೊಂದು ಆತ್ಮವಿಶ್ವಾಸ. ಅದೊಂದು ನಂಬಿಕೆ. ಅದು ಭದ್ರತೆ. ಅದು ಭಯಮಿಶ್ರಿತ ಪ್ರೀತಿ ಅಥವಾ ಪ್ರೀತಿ ಮಿಶ್ರಿತ ಭಯ. ಅದೊಂದು ಆಸರೆ. ದಟ್ಟ ಕೂದಲಿನ ಗಟ್ಟಿ ಎದೆಯ ಮೇಲೆ ಪುಟ್ಟ ತಲೆಯನ್ನಿಟ್ಟು ತಾಚಿ ಮಾಡಿದ ಮಗು ಆ ಸ್ಪರ್ಶವನ್ನೆಂದಿಗೂ ಮರೆಯಲಾರದು. ಅಪ್ಪ ಮುದ್ದಿಸುವಾಗ ಎರಡು ದಿನದಿಂದ ಕ್ಷೌರ ಮಾಡಿರದ ಆತನ ಗಡ್ಡ ಚುಚ್ಚಿದರೂ, ಅದರಲ್ಲೇ ಪ್ರೀತಿ ಕಾಣುತ್ತದೆ ಮಗು. ಅಪ್ಪ ಎಂದಿಗೂ ಅಪ್ಪನೇ.

ಅಪ್ಪ ಯಾರು ಎಂಬುದಕ್ಕೆ ಚೆಂದಾದ ಸುಭಾಷಿತವೊಂದು ಸರಳವಾದ ವ್ಯಾಖ್ಯೆಯನ್ನು ನೀಡುತ್ತದೆ. ಸುಭಾಷಿತ ಹೀಗಿದೆ.

ಜನಿತಾಚೋಪನೇತಾಚ ಯಸ್ತು ವಿದ್ಯಾಂ ಪ್ರಯಚ್ಛತಿ

ಅನ್ನದಾತಾ ಭಯತ್ರಾತಾ ಪಂಚೈತೇ ಪಿತರಸ್ಮೃತಾಃ

ಅರ್ಥ – ಜನ್ಮ ನೀಡಿದವನು, ಉಪನಯನ ಮಾಡಿದವನು, ವಿದ್ಯೆ ಹೇಳಿಕೊಟ್ಟವನು, ಅನ್ನ ನೀಡಿದವನು, ಅಂಜಿಕೆ ಹತ್ತಿರ ಸುಳಿಯದಂತೆ ಕಾಪಾಡಿದವನು – ಈ ಐದನ್ನು ಯಾರು ಮಾಡುತ್ತಾರೋ ಆತ ತಂದೆ ಅನ್ನಿಸಿಕೊಳ್ಳಲು ಅರ್ಹ.

ಹಿಂದಿನ ಕಾಲದಿಂದಲೂ ನಮ್ಮ ಪರಂಪರೆಯಲ್ಲಿ ಅಪ್ಪನಿಗೆ ವಿಶೇಷ ಸ್ಥಾನವನ್ನು ನೀಡಲಾಗಿದೆ. ತಾಯಿಗೆ ನಮಸ್ಕಾರ ಅಂದ ತಕ್ಷಣ ನಾವು ಅನ್ನುವುದೇ ‘ಪಿತೃ ದೇವೋಭವ’ ಎಂದು. ದೇವರ ಸ್ಥಾನವನ್ನು ನೀಡಿರುವ ನಮ್ಮ ಪರಂಪರೆಯೇ ಮಗುವಿನ ಬೆಳವಣಿಗೆಯ ವಿವಿಧ ಹಂತಗಳಲ್ಲಿ ತಂದೆಯಾದವನು ಮಗುವಿನೊಡನೆ ಯಾವ ರೀತಿಯಿಂದ ನಡೆದುಕೊಳ್ಳಬೇಕು ಎಂಬುದನ್ನೂ ಸೂಚಿಸಿದೆ.

ಲಾಲಯೇತ್ ಪಂಚವರ್ಷಾಣಿ

ದಶ ವರ್ಷಾಣಿ ತಾಡಯೇತ್

ಪ್ರಾಪ್ತೇತು ಷೋಡಷೇ ವರ್ಷೇ

ಪುತ್ರಂ ಮಿತ್ರವದಾಚರೇತ್

ಅರ್ಥ – ಮಗುವನ್ನು ಐದು ವರ್ಷದ ವರಗೆ ಪ್ರೀತಿಯಿಂದ ನೋಡಿಕೊಳ್ಳಬೇಕು. ಹತ್ತು ವರ್ಷದವನಾದಾಗ ತಪ್ಪು ಮಾಡುವ ಸಂದರ್ಭದಲ್ಲಿ ಎರಡೇಟು ಹಾಕಿ ತಿದ್ದಬೇಕು. ಆದರೆ ಅದೇ ಮಗು ಹದಿನಾರು ವರ್ಷದವನಾದಾಗ ಅದನ್ನು ಮಿತ್ರನಂತೆ ನೋಡಿಕೊಳ್ಳಬೇಕು ಎನ್ನುತ್ತದೆ ಸುಭಾಷಿತ. ಹೌದು. ದೇವರೂ ಕೂಡ ಮಿತ್ರನಾಗಲು ಸಾಧ್ಯವಲ್ಲವೆ?

ನಮ್ಮಲ್ಲಿ ಮೊದಲಿನಿಂದಲೂ ತಂದೆಯ ಬಗ್ಗೆಯಿದ್ದ ಪರಿಕಲ್ಪನೆ ಒಂದೇ ತೆರನಾಗಿದ್ದಾದರೂ, ಕಾಲದಿಂದ ಕಾಲಕ್ಕೆ ತಂದೆ-ಮಗ  ಅಥವಾ ತಂದೆ-ಮಗಳ ಸಂಬಂಧ ಮಾತ್ರ ಕಾಲನ ಹೊಡೆತಕ್ಕೆ ಸಿಕ್ಕು ತನ್ನ ಸ್ವರೂಪವನ್ನು ಬದಲಿಸಿಕೊಂಡಿದೆ. ಆಧುನಿಕತೆ ಹಾಗೂ ಜಾಗತೀಕರಣದ ಇಂದಿನ ಯುಗದಲ್ಲಂತೂ ತಂದೆ-ಮಗನ ಸಂಬಂಧ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಶ್ರೀರಾಮನ ಆಸ್ಥಾನಕ್ಕೆ ಬಂದು ಕುಶ-ಲವರು ರಾಮ ಚರಿತೆಯನ್ನು ಹಾಡಿದಾಗ ಇದ್ದ ಸಂಬಂಧಕ್ಕೂ, ತಂದೆಯಾದವನು ತನ್ನ ಮಕ್ಕಳ ವಿಧ್ಯಾಭ್ಯಾಸಕ್ಕೋ, ಮದುವೆಗೋ ಎಂದೋ ಮಕ್ಕಳಿಗೆ 2 ವರ್ಷ ತುಂಬುತ್ತಲೇ ಉಳಿತಾಯ ಆರಂಭಿಸಬೇಕು ಅಥವಾ ವಿಮಾ ಪಾಲಿಸಿ ತೆಗೆದುಕೊಳ್ಳಬೇಕು ಎಂದು ಹೇಳುವ ಇಂದಿನ ಕಾಲದ ಸಂಬಂಧಕ್ಕೂ ಸಾಕಷ್ಟು ವ್ಯತ್ಯಾಸವಿದೆ.

ಪುರುಷ ಪ್ರಧಾನ ಸಮಾಜದಲ್ಲಿ ಸಹಜವಾಗಿಯೇ ತಂದೆಗೊಂದು ಸ್ಥಾನ ತಾನೇ ತಾನಾಗಿ ಲಭಿಸಿದೆ. ಆ ತಂದೆ ಎಂತಹ ಕ್ರೂರ ತಂದೆಯೇ ಆಗಿರಲಿ – ಇದು ವಿಪರ್ಯಾಸವಾದರೂ – ಆತನಿಗೊಂದು ಸ್ಥಾನ ಎಂದು ನೀಡಲ್ಪಟ್ಟಿದೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ತಂದೆಯಾದವನು ಮಕ್ಕಳಿಗೆ ಒಂದು ಅನನ್ಯತೆಯನ್ನು (ಐಡೆಂಟಿಟಿ) ದೊರಕಿಸಿಕೊಡುತ್ತಾನೆ. “ತಾಯಿಯಾರೋ ಗೊತ್ತಿಲ್ಲ” ಎಂಬುದಕ್ಕಿಂತ “ತಂದೆಯಾರೋ ಗೊತ್ತಿಲ್ಲ” ಎಂಬುದು ನಮ್ಮ ಸಮಾಜದಲ್ಲಿ ಹೆಚ್ಚು ಇರುಸುಮುರುಸು ಉಂಟುಮಾಡುವ ಸಂಗತಿಯಾಗಿದೆ. ಹಿಂದಿ ಚಿತ್ರರಂಗದಲ್ಲಂತೂ ತಂದೆಯಿಲ್ಲದೆ, ಐಡೆಂಟಿಟಿ ಕ್ರೈಸಿಸ್ ನಿಂದ ಬಳಲುವ ನಾಯಕ ಚಿತ್ರದುದ್ದಕ್ಕೂ ಪ್ರೇಕ್ಷಕರ ಕರುಣೆಗಿಟ್ಟಿಸುತ್ತಾನೆ.

ರಾಮಾಯಣದ ಕಾಲದಲ್ಲಿ ವಾಸ್ತವವಾಗಿಯೇ ತಂದೆ ‘ದೇವೋಭವ’ ಆಗಿದ್ದ. ಅದಕ್ಕೇ ಅಲ್ಲವೇ ಸ್ವತಃ ಶ್ರೀರಾಮ ತಂದೆಯ ಮಾತನ್ನು ಉಳಿಸಲು ಪತ್ನಿ ಹಾಗೂ ತಮ್ಮನೊಡನೆ 14 ವರ್ಷಗಳ ಕಾಲ ಕಾಡಿನತ್ತ ಹೆಜ್ಜೆ ಹಾಕಿ ಇನ್ನಿಲ್ಲದ ಕಷ್ಟಗಳಿಗೆ ಸಿಕ್ಕಿಹಾಕಿಕೊಂಡದ್ದು? ರಾಮ ಅಂದಿಗೂ ಇಂದಿಗೂ ನಮಗೆ ಆದರ್ಶ. ಎಲ್ಲ ಸಂಬಂಧಗಳಿಗೂ ಆದರ್ಶ. ಅಗಸನ ಮಾತನ್ನು ಕೇಳಿಕೊಂಡು ಪತ್ನಿಯನ್ನು ದೂರ ಮಾಡಿದ ಎಂಬ ಆರೋಪ ರಾಮನ ಮೇಲಿದ್ದರೂ, ಹಿಂದಿನ ಘಟನೆಗಳು ಆಯಾ ದೇಶ-ಕಾಲ-ಪರಿಸ್ಥಿತಿಯ ಒತ್ತಡಗಳಿಂದ ಉಂಟಾಗಿದ್ದು ಎಂಬುದನ್ನು ಮರೆಯಬಾರದು. ರಾಮ ಅಧಿಕಾರವನ್ನು ತ್ಯಜಿಸಿ ಸೀತೆ ಹಾಗೂ ಲಕ್ಷ್ಮಣನೊಡನೆ ಕಾಡಿಗೆ ಹೋಗಿದ್ದು, ಅಲ್ಲಿ ಲಕ್ಷ್ಮಣ, ಶೂರ್ಪನಖಿಯ ಮೂಗು ಕತ್ತರಿಸಿದ್ದು, ಸೀತೆಗೆ ಮಾಯಾಜಿಂಕೆ ಕಂಡಿದ್ದು, ಸೀತಾಪಹರಣವಾಗಿದ್ದು, ಜಟಾಯು ರೆಕ್ಕೆ ಕತ್ತರಿಸಿಕೊಂಡದ್ದು, ಹನುಮ ಸಮುದ್ರ ಜಿಗಿದದ್ದು, ತನ್ನ ಬಾಲದಿಂದ ಲಂಕೆಗೆ ಬೆಂಕಿ ಇಟ್ಟದ್ದು, ಭಾರತದಿಂದ ಶ್ರೀಲಂಕೆಗೆ ಸೇತುವೆ ನಿರ್ಮಾಣವಾಗಿದ್ದು, ರಾಮ-ರಾವಣ ಯುದ್ಧವಾಗಿದ್ದು, ಕೊನೆಗೆ ರಾಮ ಸೀತೆಯೊಡನೆ ಮರಳಿದ್ದು ಎಲ್ಲವೂ ನಡೆದಿದ್ದು ಕೇವಲ ಕೇವಲ ಶ್ರೀರಾಮನ ಪಿತೃವಾಕ್ಯ ಪರಿಪಾಲನೆಗಾಗಿ!!

ಬಹುಶಃ ಶ್ರೀರಾಮ, “ಇಲ್ಲ ತಂದೆಯೇ, ನೀನು ಕೈಕೇಯಿಗೆ ಮಾತು ಕೊಟ್ಟಿರಬಹುದು. ನಿನ್ನ ಮಾತನ್ನು ಉಳಿಸಿಕೊಳ್ಳುವುದು ನಿನ್ನ ಜವಾಬ್ದಾರಿಯೇ ಹೊರತು. ನನ್ನದಲ್ಲ. ಕ್ಷಮಿಸು. ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಒಬ್ಬ ರಾಜನ ಮಗನಾಗಿ ನನ್ನ ಕರ್ತವ್ಯ ಕೇವಲ ಅಯೋಧ್ಯೆಯ ರಕ್ಷಣೆ ಹಾಗೂ ಪ್ರಜಾ ಪರಿಪಾಲನೆ. ಅದು ಧರ್ಮ ಕೂಡ” ಎಂದಿದ್ದರೆ ರಾಮನ ಮಾತಿಗೆ ಭರತನೂ ಎದುರಾಡುತ್ತಿರಲಿಲ್ಲ. ರಾಮಾಯಣವೂ ನಡೆಯುತ್ತಿರಲಿಲ್ಲ! ಆದರೆ ರಾಮ ತಂದೆಯ ಇಕ್ಕಟ್ಟನ್ನು ಅರ್ಥಮಾಡಿಕೊಂಡವನೇ ನೇರವಾಗಿ ಕಾಡಿಗೆ ನಡೆದುಬಿಟ್ಟ. 14 ವರ್ಷಗಳಲ್ಲಿ ಏನೆಲ್ಲ ನಡೆದುಹೋಯಿತು. ಕೇವಲ ರಾಮ ದಶರಥನ ಮೇಲೆ ಇಟ್ಟಿದ್ದ ಭಕ್ತಿ ಹಾಗೂ ಗೌರವಕ್ಕಾಗಿ.

ತ್ರೇತಾಯುಗದಲ್ಲಿ ‘ಪಿತೃವಾಕ್ಯ’ಕ್ಕಾಗಿ ಇಷ್ಟೆಲ್ಲ ನಡೆದರೆ ದ್ವಾಪರಯುಗದಲ್ಲಿ ನಡೆದದ್ದು ಮತ್ತಷ್ಟು ವಿಚಿತ್ರ.  ತಂದೆ ಶಂತುನುವಿಗಾಗಿ ಸತ್ಯವತಿಯ ಬಳಿ ತೆರಳಿ ಬ್ರಹ್ಮಚಾರಿಯಾಗಿರುವುದಾಗಿ ಘೋಷಿಸಿದ ಭೀಷ್ಮ ಎಲ್ಲೊ ಒಂದು ಕಂಡೆ ದ್ವಾಪರದಲ್ಲಿ ಶ್ರೀರಾಮನ ಮುಂದುವರಿದ ಭಾಗದಂತೆ, ಆತನ ಪ್ರತಿನಿಧಿಯಂತೆ ಕಂಡುಬರುತ್ತಾನೆ. ಆದರೆ ಈ ಸಾತ್ವಿಕತೆ ಹೆಚ್ಚು ಹೊತ್ತು ಉಳಿಯುವುದಿಲ್ಲ. ಏಕೆಂದರೆ ತಲೆ ಮೇಲೆ ಮಗುವನ್ನು ಹೊತ್ತುಕೊಂಡು ಯಮುನಾ ನದಿ ದಾಟಿ ಕೃಷ್ಣನನ್ನು ಬದುಕಿಸಿದ ವಸುದೇವ ಆದರ್ಶ ತಂದೆಯಾಗಿ ಕಂಡರೆ, ಮತ್ತೊಂದೆಡೆ ಮಕ್ಕಳ ಮೇಲಿನ ಕುರುಡು ಪ್ರೀತಿಯಿಂದ ಮಕ್ಕಳ ವಿನಾಶಕ್ಕೇ ಕಾರಣನಾದ ಧೃತರಾಷ್ಟ್ರನೂ ಕಾಣಸಿಗುತ್ತಾನೆ. ತ್ರೇತಾಯುಗದಲ್ಲಿ ಅಪ್ಪನ ಮಾತಿಗೆ ಮಗ ಬೆಲೆಕೊಟ್ಟು ಕಾಡಿಗೆ ಹೋದರೆ, ದ್ವಾಪರದಲ್ಲಿ ಅಪ್ಪನೇ ಮಕ್ಕಳ ಕುಕರ್ಮಗಳನ್ನು ತಿದ್ದದೆ ಅವರಿಗೆ ರಕ್ಷಣೆಯಾಗಿ ನಿಲ್ಲುತ್ತಾನೆ. ಇದು ಕಾಲದ ಬದಲಾವಣೆಯನ್ನು ತೋರಿಸುವುದರ ಜೊತೆಗೆ ಅಪ್ಪ ಎಂಬ ಮೌಲ್ಯ, ಆದರ್ಶ ಹೇಗೆ ಬದಲಾಯಿತು ಎಂಬುದನ್ನು ಸೂರ್ಯನಷ್ಟು ಸ್ಪಷ್ಟವಾಗಿ ತೋರಿಸುತ್ತದೆ. ಜೊತೆಗೆಯೇ ದ್ವಾಪರಯುಗದಲ್ಲಿ ತಂದೆಯ ಮೌಲ್ಯವೇ ಹಲವಾರು ಸಂದರ್ಭಗಳಲ್ಲಿ ಅಲ್ಲಾಡಿಹೋಗುತ್ತದೆ. ತಂದೆಯ ಅಸ್ತಿತ್ವಕ್ಕೆ ಪ್ರಶ್ನೆ ಚಿಹ್ನೆ ಎದುರಾಗುತ್ತದೆ. ಪಾಂಡುರಾಜ, ಧೃತರಾಷ್ಟ್ರ, ವಿದುರ, ಕರ್ಣ, ಹಾಗೂ ಪಾಂಡವರ ಜನನ ಪ್ರಕ್ರಿಯೆಯಲ್ಲಿ ಅಪ್ಪನಾದವನು ಕೇವಲ ಜೈವಿಕ ತಂದೆ (ಬಯೋಲಾಜಿಕಲ್ ಫಾದರ್) ಆಗುತ್ತಾನೆಯೇ ಹೊರತು ಭಾವನಾತ್ಮಕ ತಂದೆ ಆಗುವುದೇ ಇಲ್ಲ. ಅಪ್ಪನ ಅಸ್ತಿತ್ವ, ಮೌಲ್ಯ, ಪಾತ್ರ, ಇತ್ಯಾದಿಗಳ ಬಗ್ಗೆ ಬಹುಶಃ ಮೊಟ್ಟಮೊದಲ ಸ್ಥಿತ್ಯಂತರ ಇಲ್ಲಿಂದಲೇ ಆರಂಭವಾಯಿತು ಎನ್ನಬಹುದು.

ಇನ್ನು ಕಲಿಯುಗದಲ್ಲಿ ಕಂಡಷ್ಟು ಸ್ಥಿತ್ಯಂತರಗಳು, ಬದಲಾವಣೆಗಳು ಇನ್ನೂ ಅಗಾಧ. ಇಂದು ಅಪ್ಪ ಕೇವಲ ಅಪ್ಪನಾಗಿ ಉಳಿದಿಲ್ಲ. ವಾಸ್ತವವಾಗಿ ಹೇಳಬೇಕೆಂದರೆ ಹೆಚ್ಚುತ್ತಿರುವ ಪರಿಸರ ಮಾಲಿನ್ಯ, ಕೆಲಸದ ಒತ್ತಡ, ಬದಲಾಗಿರುವ ಜೀವನ ಶೈಲಿ, ವ್ಯಾಯಮ ರಹಿತ ಜೀವನ, ಕುಡಿತ-ಸಿಗರೇಟು ಸೇವನೆಯಂತಹ ದುಶ್ಚಟಗಳು, ಅತಿಯಾದ ಬೊಜ್ಜು, ಕಲುಷಿತ ಆಹಾರ-ನೀರು ಸೇವನೆ, ಕುಂಠಿತಗೊಂಡಿರುವ ವೀರ್ಯಾಣುಗಳ ಸಂಖ್ಯೆಯಿಂದಾಗಿ ಜೈವಿಕ ತಂದೆಯಾಗುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. (ಹಾಗಾದರೆ ಭಾರತದ ಜನಸಂಖ್ಯೆ ಇಷ್ಟು ಹೇಗೆ ಹೆಚ್ಚಾಗಿದೆ ಅನ್ನುತ್ತೀರಾ? ಈ ಅಂಶವನ್ನು ಸಧ್ಯ ಪಕ್ಕಕ್ಕಿಟ್ಟು ಯೋಚಿಸೋಣ). ಸಂತಾನ ಹೀನತೆ ಹೊಸ ಯುಗದಲ್ಲಿ ಸವಾಲಾಗಿ ಪರಿಣಮಿಸಿದ್ದರೆ, ವೈದ್ಯಕೀಯ ರಂಗಕ್ಕೆ ಉದ್ಯಮವಾಗಿ ಮಾರ್ಪಟ್ಟಿದೆ. ರಾಜ್ಯ ರಾಜಧಾನಿ ಬೆಂಗಳೂರು ಅಷ್ಟೇ ಅಲ್ಲದೇ ಜಿಲ್ಲಾ ಕೇಂದ್ರಗಳಲ್ಲೂ ಪ್ರತಿವರ್ಷ ಹೊಸ ಹೊಸ ಸಂತಾನ ಹೀನತೆ ಚಿಕಿತ್ಸಾ ಕೇಂದ್ರಗಳು ಸಂತಾನವಿಲ್ಲದ ದಂಪತಿಗಳಿಗೆ ಚಿಕಿತ್ಸೆ ನೀಡುತ್ತಿವೆ. ಇಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆಯೂ ದಿನೇದಿನೇ ಏರುತ್ತಿದೆ. ಬೆಂಗಳೂರಿನಲ್ಲೇ ಪ್ರತಿಷ್ಠಿತ ಚಿಕಿತ್ಸಾ ಕೇಂದ್ರಗಳಲ್ಲಿ ತಿಂಗಳಿಗೆ ಕನಿಷ್ಠ ತಲಾ 5 ಪ್ರನಾಳ ಶಿಶುಗಳು ಜನ್ಮತಾಳುತ್ತಿವೆ. ಪ್ರತಿಯೊಂದು ಪ್ರನಾಳ ಶಿಶುವಿಗೂ ಕನಿಷ್ಠ ಒಂದೂವರೆಯಿಂದ 2 ಲಕ್ಷ ರೂಪಾಯಿಯಷ್ಟು ಖರ್ಚು ತಗಲುತ್ತದೆ. ಆದರೆ ವೈದ್ಯಕೀಯ ಸಾಧನೆಗಳ ಸಹಾಯದಿಂದ ಜೈವಿಕ ತಂದೆ-ತಾಯಿಯಾಗುವವರು, ಭಾವನತ್ಮಕವಾಗಿ, ಲೌಕಿಕವಾಗಿ ಕೂಡ ಉತ್ತಮ ತಂದೆತಾಯಿ ಎನಿಸಿಕೊಳ್ಳಬೇಕಾಗುತ್ತದೆ. ಈ ಹಂತದಲ್ಲೇ ಸ್ವಲ್ಪ ಎಡವಟ್ಟಾಗುತ್ತಿರುವುದು ಕಂಡಬರುತ್ತಿದೆ.

ಮೊನ್ನೆ ಒಬ್ಬ ಹಿರಿಯರು ಹೇಳಿದರು. “ಇತ್ತೀಚೆಗೆ DINK ಕುಟುಂಬಗಳು ಹೆಚ್ಚಾಗುತ್ತಿವೆ” ಅಂತ. “ಹಾಗೆಂದರೇನು?” ಅಂತ ಕೇಳಿದೆ. ಅವರು ಹೇಳಿದ್ದು “DINK ಅಂದರೆ Double Income No Kids ಕುಟುಂಬಗಳು” ಅಂತ. ಮಕ್ಕಳು ಬೇಕೋ ಬೇಡವೋ ಎಂಬ ನಿರ್ಧಾರ ವೈಯುಕ್ತಿಕ ಮಟ್ಟದ್ದು. ಅದರಲ್ಲಿ ಮೂರನೇ ವ್ಯಕ್ತಿ ತಲೆಹಾಕುವ ಹಾಗಿಲ್ಲ. ಎಷ್ಟೋ ದಂಪತಿಗಳು ಮದುವೆಗೆ ಮುನ್ನವೇ ತಮಗೆ ಮಕ್ಕಳು ಬೇಡ ಎಂದು ಪ್ರಜ್ಞಾಪೂರ್ವಕವಾಗಿ ನಿರ್ಧರಿಸುತ್ತಾರೆ. ಆದರೆ ಮಕ್ಕಳು ಬೇಕೆಂದು ಬಯಸುವ ತಂದೆತಾಯಿಗಳು ಆಧುನಿಕತೆ ಹಾಗೂ ಆಧುನಿಕ ಜೀವನ ಶೈಲಿಯ ಒತ್ತಡದಿಂದಾಗಿ ಸಾಕಷ್ಟು ಹಣ ಗಳಿಸುತ್ತಿದ್ದರೂ ಮಕ್ಕಳಾಗದೇ ಕೊರಗುವುದು ಹೊಸ ಯುಗದ ಮತ್ತೊಂದು ದುರಂತ ಎನಿಸುತ್ತದೆ.

ಶ್ರೀಮಂತ ಹಾಗೂ ಮಧ್ಯಮ ವರ್ಗದಲ್ಲಿ ಈ ಕಥೆಯಾದರೆ ಬಡ ವರ್ಗದ ಲೆಕ್ಕಾಚಾರಗಳೇ ಬೇರೆ. ಅಲ್ಲಿ ಮದುವೆಯಾದ ಬಳಿಕ ಅಪ್ಪನಾಗುವುದು ಹೆಮ್ಮೆಯ ವಿಷಯ ಅಲ್ಲವೇ ಅಲ್ಲ. ಮಕ್ಕಳನ್ನು ‘ಹುಟ್ಟಿಸುವುದು’ ಅನಿವಾರ್ಯವೇ ಹೊರತು ಆಯ್ಕೆಯಲ್ಲ. ಹೆಚ್ಚು ಹೆಚ್ಚು ಮಕ್ಕಳಾದಷ್ಟೂ ಕುಟುಂಬದ ಬಡತನ ದೂರವಾಗುತ್ತದೆ ಎಂಬ ಭ್ರಮೆ ಜನಸಂಖ್ಯಾ ಸ್ಫೋಟಕ್ಕೆ ಕಾರಣವಾಗುತ್ತದೆ. ಕುಟುಂಬ ನಿರ್ವಹಣೆಯ ಜವಾಬ್ದಾರಿ ಅಪ್ಪನ ಮೇಲಿರುವುದರಿಂದ ಆತನ ಮೊದಲ ಮಗನ ವಯಸ್ಸು 16 ವರ್ಷಗಳಿದ್ದರೆ ಕೊನೆಯ ಮಗಳಿಗೆ 8 ತಿಂಗಳೂ ಪೂರೈಸಿರುವುದಿಲ್ಲ. ಇವರೂ ಕೇವಲ ಜೈವಿಕ ತಂದೆಯರು. ದ್ವಾಪರ ಯುಗದ ಜೈವಿಕ ಅಪ್ಪಂದಿರ ಹಾಗೆ. ಕಾರಣಗಳು ಬೇರೆ ಬೇರೆ ಇದ್ದರೂ ಪರಿಣಾಮ ಮಾತ್ರ ಒಂದೇ. ಒಂದು ಮಗುವಿಗೆ ಅಪ್ಪನಾಗುವುದೇ ಕಷ್ಟವಿರುವಾಗ ಹತ್ತು ಮಕ್ಕಳಿಗೆ ಒಬ್ಬನೇ ವ್ಯಕ್ತಿ ಅದ್ಹೇಗೆ ಸಮರ್ಥ ತಂದೆಯಾಗಬಲ್ಲ? ಹತ್ತು ಮಕ್ಕಳಲ್ಲಿ ಯಾವ ಮಗು ತಾನೆ ‘ಮೈ ಡ್ಯಾಡಿ ಸ್ಟ್ರಾಂಗೆಸ್ಟ್’ ಅಂತ ಹೆಮ್ಮೆಯಿಂದ ಹೇಳಬಹುದು?

ಈ ಸಮಸ್ಯೆ ಕೇವಲ ಹತ್ತು ಮಕ್ಕಳಿರುವ ಕುಟುಂಬದಲ್ಲಿಯೇ ಇರಬೇಕು ಎಂದೇನಿಲ್ಲ. ಎಷ್ಟೋ ಉಳ್ಳವರ ಮನೆಗಳಲ್ಲಿಯೇ, ಒಂದೇ ಮಗು ಇರುವ ಕುಟುಂಬದಲ್ಲಿ ಕೂಡ ಆ ಒಂಟಿ ಮಗು ಮೈ ಡ್ಯಾಡಿ ಸ್ಟ್ರಾಂಗೆಸ್ಟ್ ಎಂದು ಹೇಳುವ ಪರಿಸ್ಥಿತಿಯಿಲ್ಲ.

ಕೆಲ ವರ್ಷಗಳ ಹಿಂದೆ ಜೋಕೊಂದು ಪ್ರಚಲಿತದಲ್ಲಿತ್ತು. ವಿದೇಶದಲ್ಲಿ ತಂದೆಯಾದವನು ಎಷ್ಟು ಬಿಝಿಯಾಗಿರುತ್ತಾನೆಂದರೆ, ವೀಕೆಂಡ್ ಗಳಲ್ಲಿ ಆತ ಮನೆಗೆ ಬಂದಾಗ ಆತನ ಮಗ ತನ್ನ ತಾಯಿಗೆ “ಮಮ್ಮಿ, ಸಮ್ ಅಂಕಲ್ ಹ್ಯಾಸ್ ಕಮ್” ಎಂದು ಹೇಳುತ್ತಾನೆ ಅಂತ. ಆದರೆ ಈ ಜೋಕ್ ಇದೀಗ ನಮ್ಮಲ್ಲಿನ  ಸಾಕಷ್ಟು ಕುಟುಂಬಗಳಲ್ಲಿ ಘಟಿಸಿಬಿಡುವ ಆತಂಕ ಎದುರಾಗಿದೆ. ಮಗು ತನ್ನ ತಂದೆಗೆ ಅಂಕಲ್ ಎಂದು ಹೇಳದಿದ್ದರೂ, ತಂದೆ ಮಕ್ಕಳ ನಡುವಿನ ಸಂಬಂಧದ ರೇಷ್ಮೆ ದಾರಗಳು ಲಡ್ಡಾಗುತ್ತಿವೆ.

ಅಪ್ಪನಾದನವ ಪಾತ್ರ, ಜವಾಬ್ದಾರಿ, ಹರವು, ವಿಸ್ತಾರ, ಇಂದು ತೀರ ಹೆಚ್ಚಿದೆ. ಅಪ್ಪ ಇಂದು ಕೇವಲ ಅಪ್ಪನಾಗಿ ಉಳಿಯದೇ ಅಮ್ಮನ ಪಾತ್ರವನ್ನೂ ನಿರ್ವಹಿಸುತ್ತಿದ್ದಾನೆ. ಹಾಗೆ ನೋಡಿದರೆ, ಅಮ್ಮನಾದವಳು ಕೂಡ ಅಪ್ಪನ ಪಾತ್ರವನ್ನು ನಿರ್ವಹಿಸುತ್ತಿದ್ದಾಳೆ ಬಿಡಿ. ಆದರೆ ಒಂದು ವಿಷಯ ಗಮನದಲ್ಲಿಟ್ಟುಕೊಳ್ಳಬೇಕು. ಭಾಗಶಃ ಎಲ್ಲ ಅಮ್ಮಂದಿರಿಗೂ ಅಪ್ಪನ ಪಾತ್ರವನ್ನು ನಿರ್ವಹಿಸುವದು ಸಾಧ್ಯ. ಆ ಅರ್ಹತೆ, ಸಾಮರ್ಥ್ಯ, ಅಡಾಪ್ಟೆಬಿಲಿಟಿ, ಎಲ್ಲ ಸ್ತ್ರೀಯರಲ್ಲಿದೆ. ಆದರೆ ಪುರುಷರಲ್ಲಿ? ಪುಟ್ಟ ಮಗುವೊಂದರ ಚಡ್ಡಿ ಬದಲು ಮಾಡಬೇಕೆಂದರೂ ಹಲವು ಅಪ್ಪಂದಿರಿಗೆ ಕುತ್ತಿಗೆಗೆ ಬಂದು ಬಿಡುತ್ತದೆ. ಇನ್ನು ಮಗುವಿಗೆ ಒಂದು, ಎರಡು ಮಾಡಿಸುವುದಂತೂ ದೂರ ಉಳಿಯಿತು. ಎಲ್ಲ ಅಪ್ಪಂದಿರೂ ಇದನ್ನು ಮಾಡಲೇಬೇಕೆಂದಿಲ್ಲ. ಹಲವರಿಗೆ ಇದನ್ನು ಮಾಡಲೇಬೇಕಾದ ಅನಿವಾರ್ಯತೆ ಕೂಡ ಇರಲಾರದು.

ಆದರೆ ಅಪ್ಪನಾದವನು ಅಮ್ಮನಾಗುವುದರಲ್ಲಿ ಇರುವ ಸುಖವೇ ಬೇರೆ. ಆ ಮಜವನ್ನು ಅನುಭವಿಸಿದ ಅಪ್ಪಂದಿರಿಗೇ ಗೊತ್ತು, ಆ ಸುಖ ಎಂತಹುದೆಂದು. ಮಕ್ಕಳಿಗೆ ಇನ್ಶೂರೆನ್ಸ್ ಮಾಡಿಸುವುದು, ನೋಟ್ ಪುಸ್ತಕ, ಪೆನ್ನು, ಪಾಟಿಚೀಲ (ಈಗಿನ ಮಕ್ಕಳು ಪಾಟಿ ಬಳಸದೇ ಇರುವುದರಿಂದ ಸ್ಕೂಲ್ ಬ್ಯಾಗ್ ಅನ್ನೋಣವೇ?), ಹೊತ್ತಿಗೆ ಸರಿಯಾಗಿ ಊಟ, ಬಟ್ಟೆ, ವಸತಿ ಒದಗಿಸಿಬಿಟ್ಟರೆ ಅಲ್ಲಿಗೆ ಅಪ್ಪನ ಜವಾಬ್ದಾರಿ ಮುಗಿದುಹೋಯಿತೆ? ಅನೇಕ ಅಪ್ಪಂದಿರು ಇವಿಷ್ಟನ್ನೇ ತಮ್ಮ ಜವಾಬ್ದಾರಿಯೆಂದು ತಿಳಿದುಕೊಂಡಿರುವುದು ಆಘಾತಕಾರಿ. ಮಗು ಒಂದಾ ಮಾಡಿದರೆ, ಆರಾಮವಾಗಿ ಟಿವಿ ನೋಡುತ್ತ, ಚಿಪ್ಸ್ ಮೆಲ್ಲುತ್ತ ಕುಳಿತಿರುವ ಗಂಡ, ಹೆಂಡತಿಯನ್ನು ಕರೆದು “ನೋಡೇ, ಪುಟ್ಟ ಒಂದಾ ಮಾಡಿದೆ. ಒರಸೂ ಒಂಚೂರು” ಎಂದು ಹೇಳುವುದು, ಹಾಗೆಯೇ ಅಡಿಗೆ ಮನೆಯಲ್ಲಿ ದುಡಿದುಡಿದು ಹೈರಾಣಾಗಿರುವ ಹೆಂಡತಿ ಒದ್ದೆ ಕೈಯನ್ನು ಒರೆಸಿಕೊಳ್ಳುತ್ತ ಬಂದು ಪುಟ್ಟನ ಒಂದಾ ಒರೆಸಿ, ಚಡ್ಡಿ ಬದಲಿಸುವುದು – ಅನೇಕ ಮನೆಗಳಲ್ಲಿ ಕಂಡುಬರುತ್ತದೆ. ಮಕ್ಕಳಿಗೆ ಸ್ನಾನಮಾಡಿಸುವುದು, ತುತ್ತು ತಿನ್ನಿಸುವುದು, ತಲೆ ಬಾಚುವುದು, ಬ್ರಷ್ ಮಾಡಿಸುವುದು, ಎಲ್ಲವೂ ತಾಯಿಯೇ. ಆದರೆ ವೈದ್ಯರ ಪ್ರಕಾರ ಮಗುವಿನ ಬೆಳವಣಿಗೆಯಲ್ಲಿ ‘ಸ್ಪರ್ಶ’ ಮಹತ್ವದ ಪಾತ್ರವಹಿಸುತ್ತದೆ. ಈ ಸ್ಪರ್ಶವೇ ವಾಸ್ತವವಾಗಿ ಚಿಕಿತ್ಸೆಯಂತೆ ಕೆಲಸ ಮಾಡುತ್ತದೆ. ಪ್ರೀತಿಯಿಂದ ಮಗುವನ್ನು ಸ್ಪರ್ಶಿಸಿದಾಗ ಸ್ವಾಭಾವಿಕವಾಗಿಯೇ ಮಗುವಿನ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಸಹಾಯಮಾಡಿದಂತಾಗುತ್ತದೆ. ಮಗುವನ್ನೇ ಸ್ಪರ್ಶಿಸದಿರುವ ತಂದೆ ಯಾವುದೇ ರೀತಿಯಲ್ಲಿಯೂ ಆ ಮಗುವಿನ ಮಾನಸಿಕ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಲಾರ. ಆತ ಸಮಾಜದಲ್ಲಿ ಓರ್ವ ಜವಾಬ್ದಾರಿಯುತ ಅಪ್ಪ ಎನಿಸಿಕೊಳ್ಳಬಹುದು. ಆದರೆ ಮಗುವಿನ ಮನಸ್ಸಿನ ಮೂಲೆಯಲ್ಲೆಲ್ಲೋ ಅಪ್ಪನ ಕುರಿತಂತೆ ಒಂದು ಅಂತರ ಉಳಿದುಕೊಂಡುಬಿಡುತ್ತದೆ. ಈ ಅಂತರವೇ ಮುಂದೆ ಮಗ ದೊಡ್ಡವನಾಗಿ ಕಾಲೇಜು ಮೆಟ್ಟಿಲೇರಿದಾಗ ಸ್ಲಾಮ್ ಬುಕ್ ಗಳ ‘ಮೈ ಎನಿಮಿ’ ಕಾಲಂನಲ್ಲಿ ‘ಮೈ ಫಾದರ್’ ಎಂದು ತುಂಬುವಂತೆ ಮಾಡುತ್ತದೆ. ಹೀಗಾಗಿ ಅಪ್ಪನಿಗೆ ಅಗತ್ಯ ಇರಲಿ, ಇಲ್ಲದಿರಲಿ ಆತ ತಾಯಿಯ ಪಾತ್ರವನ್ನೂ ನಿರ್ವಹಿಸಿದರೆ ಮಗು ನಿಜವಾಗಿಯೂ ಮೈ ಡ್ಯಾಡಿ ಸ್ಟ್ರಾಂಗೆಸ್ಟ್ ಎಂದು ಹೇಳಬಹುದು.

ಈ ಹಿಂದೆ ಅಪ್ಪ ನಿಜವಾಗಿಯೂ ಭಯ ಹುಟ್ಟಿಸುವ, ಶಿಕ್ಷಿಸುವ, ತಪ್ಪು ಮಾಡಿದಾಗ ನಾಲ್ಕು ಬಾರಿಸುವ, ತನ್ನ ಮಗನನ್ನೇ ‘ಮಂಗ್ಯಾನ ಮಗನೇ’ ಎಂದು ಬೈಯುವುದುಕ್ಕಷ್ಟೇ ಸೀಮಿತನಾಗಿದ್ದ. ಆದರೆ ಇದನ್ನೆಲ್ಲ ಮಾಡುತ್ತಿದ್ದ ಅಪ್ಪ ಒಳಗಿನಲ್ಲಿ ಕರುಣಾಮಯಿಯೇ ಆಗಿರುತ್ತಿದ್ದ. ಸಡಿಲ ಬಿಟ್ಟರೆ ಎಲ್ಲಿ ಮಗ ಹಾಳಾಗಿಬಿಡುತ್ತಾನೋ ಎಂಬ ಆತಂಕ ಅಪ್ಪನನ್ನು, ಸದಾ ಗಂಟು ಮೂತಿ ಹಾಕಿಕೊಂಡು, ಒಂದು ಕೈಯಲ್ಲಿ ಬರಲು ಮತ್ತೊಂದು ಕೈಯಲ್ಲಿ ಮಗನ ಪ್ರೋಗ್ರೆಸ್ ರಿಪೋರ್ಟ್ ಹಿಡಿದುಕೊಂಡು ಮಗ ಮನೆಗೆ ಬಂದಕೂಡಲೆ ಆತನಿಗೆ ಹೊಡೆಯಲು ಸನ್ನದ್ಧನಾಗಿಯೇ ನಿಂತಿರುವಂತೆ ಮಾಡುತ್ತಿತ್ತು. ಕುಂ. ವೀರಭದ್ರಪ್ಪನನವರ ಆತ್ಮಕಥೆ ‘ಗಾಂಧಿ ಕ್ಲಾಸು’ ನಲ್ಲಿ ಅವರು ತಮ್ಮ ತಂದೆಯನ್ನು ಎಷ್ಟು ಚೆನ್ನಾಗಿ ವರ್ಣಿಸಿದ್ದಾರೆಂದರೆ, ಆ ತಂದೆ ಹಿಂದಿನ ಕಾಲದ ಎಲ್ಲ ತಂದೆಯರ ಪ್ರತಿನಿಧಿಯಂತೆ ನಮಗೆ ತೋರುತ್ತಾರೆ. ಕುಂವಿ ತಂದೆಯ ಬಗ್ಗೆ ನಮಗೆ ನಿಜಕ್ಕೂ ಗೌರವ ಭಾವನೆ ಮೂಡತ್ತದೆ. ಹೊಡೆಯುವ, ಶಿಕ್ಷಿಸುವ ತಂದೆಯನ್ನೇ ಮುಂದೆ ಮಗ ದೊಡ್ಡವನಾದ ಮೇಲೆ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ. ಅಪ್ಪ ತನ್ನ ಒಳ್ಳೆಯದಕ್ಕಾಗಿಯೇ ಹೀಗೆ ಮಾಡಿದ್ದು ಎಂದು ಮಗನಿಗೂ ಗೊತ್ತಿರುತ್ತಿತ್ತು. ಮನೆಯಲ್ಲಿ ನಾಲ್ಕು ಮಕ್ಕಳಿದ್ದರೆ ನಾಲ್ಕೂ ಮಕ್ಕಳಿಗೆ ಒಟ್ಟಿಗೆ ಒಂದೇ ಬಣ್ಣದ ಜವಳಿ ತೆಗೆದುಕೊಂಡು ಬಂದು, “ಸ್ವಲ್ಪ ದೊಡ್ಡದಾಗಿಯೇ ಹೊಲಿಯಪ್ಪ. ಬೆಳೆಯುವ ಹುಡುಗರು” ಎಂದು ಸಿಂಪಿಗೆ ಹೇಳಿ ಅಸಡ್ಡಾಳ ದೊಗಳೆ ಚಡ್ಡಿಗಳನ್ನು ಹೊಲಿಸಿಕೊಂಡು ಬರುತ್ತಿದ್ದ ಅಪ್ಪ, ಅಂದಿನ ಮಕ್ಕಳಿಗೆ ಅಚ್ಚುಮೆಚ್ಚಿನವನಾಗಿರುತ್ತಿದ್ದ. ‘ಮೈ ಆಟೋಗ್ರಾಫ್’ ಚಿತ್ರದಲ್ಲಿ ಹತ್ತನೇ ಕ್ಲಾಸಿನ ಹುಡುಗ ತಂದೆಯ ಕ್ಷೌರದಲಗನ್ನು ಬಳಸಿದಾಗ ತಂದೆ ಮಗನನ್ನು “ಓಹೋ ದೋಡ್ಡೋವ್ನಾಗಿ ಬಿಟ್ಯೇನೋ…ಕತ್ತೆ ಭಡವ” ಎಂದು ಬೈಯ್ಯುತ್ತ ಕೋಲು ತೆಗೆದುಕೊಂಡು ಮಗನಿಗೆ ಬಾರಿಸುತ್ತಾನೆ. ಆದರೆ ಅಂತಹ ತಂದೆಯೇ ಮುಂದೆ ಅದೇ ಮಗನಿಗೆ ಆತ್ಮೀಯ ಗೆಳೆಯನಾಗುತ್ತಾನೆ.

ಆದರೆ ವಿಚಿತ್ರ ನೋಡಿ, ಇಂದು ಮಗುವಿಗೆ ಎಲ್ಲ ಸೌಲಭ್ಯಗಳನ್ನು ತಂದುಕೊಡುವ ಅಪ್ಪಂದಿರ ‘ಉದಯ’ವಾಗಿದ್ದರೂ ವೃದ್ಧಾಶ್ರಮಗಳ ಸಂಖ್ಯೆ ಏರಿದೆ. ಅಲ್ಲಿ ಸೇರಿಸಲ್ಪಡುತ್ತಿರುವ ಅಪ್ಪ-ಅಮ್ಮಂದಿರ ಸಂಖ್ಯೆಯೂ ಏರುತ್ತಿದೆ. ವೃದ್ಧಾಶ್ರಮದಲ್ಲಿರುವ ಒಬ್ಬೊಬ್ಬ ಅಜ್ಜ-ಅಜ್ಜಿಯರ ಕಥೆ ಕೇಳಿದರೆ ಮನುಷ್ಯತ್ವ, ಮಾನವೀಯತೆಯ ಬಗ್ಗೆ ನಂಬಿಕೆಯೇ ಹೊರಟುಹೋಗುತ್ತದೆ. ಹಾಗಾದರೆ ಇಂತಹ ಸ್ಥಿತಿ ಏಕೆ ನಿರ್ಮಾಣವಾಗಿದೆ? ಲಕ್ಷ ಲಕ್ಷ ಗಳಿಸುವ ಮಕ್ಕಳು ಏಕೆ ತಮ್ಮ ಅಪ್ಪನನ್ನೋ-ಅಮ್ಮನನ್ನೋ ವೃದ್ಧಾಶ್ರಮಗಳಿಗೆ ಸೇರಿಸುತ್ತಿದ್ದಾರೆ? ಇದು ಮಕ್ಕಳನ್ನು ಸರಿಯಾಗಿ ಬೆಳೆಸದಿರುವ ಪರಿಣಾಮವೇ? ಅಥವಾ ವೃದ್ಧಾಶ್ರಮಗಳು ಈ ಕಾಲದ, ಬದಲಾದ ಸನ್ನಿವೇಶದ, ಬದಲಾದ ಪರಿಸ್ಥಿತಿಯ ಅನಿವಾರ್ಯ ಅವಿಭಾಜ್ಯ ಅಂಗಗಳೇ?

ಒಂದಂತೂ ಸತ್ಯ. ಅಪ್ಪನ ಜವಾಬ್ದಾರಿ ಕೇವಲ ಭೌತಿಕ ಸಂಗತಿಗಳ ಪೂರೈಕೆಗಷ್ಟೇ ಮುಕ್ತಾಯವಾಗುವುದಿಲ್ಲ. ಒಳಗೆ ಪ್ರೀತಿಯಿಟ್ಟುಕೊಂಡು ಬಾಹ್ಯದಲ್ಲಿ ಬರಲು ಹಿಡಿದು ಶಿಕ್ಷಿಸುವುದು ಇಂದಿನ ಪರಿಸ್ಥಿತಿಗೆ ಹೊಂದುವುದೂ ಇಲ್ಲ. ಏಕೆಂದರೆ ಮಕ್ಕಳ ರಕ್ಷಣೆಗೆಂದು ಮಾನವ ಹಕ್ಕು ಆಯೋಗಗಳಿವೆ, ಸರ್ಕಾರೇತರ ಸಂಸ್ಥೆಗಳಿವೆ. ಹಾಗೆಂದು ಹೇಳಿ, ಮಗ ಹಟ ಮಾಡುತ್ತಾನೆಂದು ಅದನ್ನು ಸಮಾಧಾನಪಡಿಸಲೊಸುಗ ಬೇಕುಬೇಕೆಂದಾಗಲೆಲ್ಲ ಪಿಝಾ ತಿನ್ನಿಸಿದರೆ, ಆತ 12-13 ವರ್ಷಕ್ಕೆಲ್ಲ 70 ಕೆಜಿ ತೂಗುತ್ತಾನೆ. ಅದನ್ನು ಕಡಿಮೆ ಮಾಡುವ ಜವಾಬ್ದಾರಿ ಅಪ್ಪನೇ ಹೊರಬೇಕಾಗುತ್ತದೆಯೇ ಹೊರತು, ಮಾನವ ಹಕ್ಕುಗಳ ಆಯೋಗ ಅಥವಾ ಸರ್ಕಾರೇತರ ಸಂಸ್ಥೆ ಸಹಾಯಕ್ಕೆ ಬರುವುದಿಲ್ಲ! ಇಂದಿನ ಕಾಲದ ಅಪ್ಪಂದಿರು ತೀರ ಸೂಕ್ಷ್ಮವಾಗಿ ತಮ್ಮ ಕಾಯಿಯನ್ನು ಚಲಿಸಬೇಕಾಗಿದೆ. ಒಂದು ಗುಲಗುಂಜಿ ಬಿದ್ದರೆ ಹೆಚ್ಚಾಯಿತು, ತೆಗೆದರೆ ಕಮ್ಮಿಯಾಯಿತು ಎಂಬಂತಹ ಪರಿಸ್ಥಿತಿ. ಕುಪುತ್ರೋ ಜಾಯತೇ ಕ್ವಚಿದಪಿ ಕುಮಾತಾ ನಭವತಿ ಎಂಬುದು ಮಕ್ಕಳಿಗೂ ಗೊತ್ತು. ಹೀಗಾಗಿ ಅಪ್ಪನ ಮೇಲೆ ಗೂಬೆ ಕೂರಿಸುವುದು ಸುಲಭ ಕೂಡ. ಬೆಳೆದ ಮಕ್ಕಳು ಪರೀಕ್ಷೆಯಲ್ಲಿ ಫೇಲಾದರೆಂದು ಆತ್ಮಹತ್ಯೆ ಮಾಡಿಕೊಳ್ಳಬಾರದೆಂದರೆ, ಮುದುಕರಾದಾಗ ತಮ್ಮ ಮಗ ತಮ್ಮನ್ನು ವೃದ್ಧಾಶ್ರಮಕ್ಕೆ ಸೇರಿಸಬಾರದೆಂದರೆ, ಇಂದಿನ ಅಪ್ಪ ‘ದೇವೋಭವ’ ಆಗಬೇಕೆಂದೇನಿಲ್ಲ. ಬರೀ “ಅಪ್ಪ” ನಾದರೆ ಅಷ್ಟೇ ಸಾಕು.

(ಈ ಬಾರಿಯ ಉತ್ಥಾನ ಮಾಸ ಪತ್ರಿಕೆಯಲ್ಲಿ ಪ್ರಕಟವಾಗಿರುವ ಲೇಖನ)

‘ಸುಧಾ’ದಲ್ಲಿ ಸೆಟ್ ವೆಟ್ ಸೆಕ್ಸಿ

7 Comments

ಈ ವಾರದ ಸುಧಾದ ಜಾಣರ ಪೆಟ್ಟಿಗೆಯಲ್ಲಿ ಪ್ರಕಟವಾಗಿರುವ ನನ್ನ ಪತ್ರ.

...............

ಐಸಿಐಸಿಐ ಬ್ಯಾಂಕ್ ನಿಂದ ಮನೆ ವಿರುದ್ಧ ಸಾಲ

8 Comments

ಯಾಕಪ್ಪಾ ಮನೆ ಮೇಲೆ ದ್ವೇಷ?

ಜಗತ್ತಿನ ಏಕೈಕ ಸಂಸ್ಕೃತ ನ್ಯೂಸ್ ಪೇಪರ್ – ಸುಧರ್ಮಾ

2 Comments

ಭೇಟಿ ಕೊಡಿ – ಸುಧರ್ಮಾ

ಸಮ್ಯಕ್ ಅಸ್ತಿ...

ವಿಪ್ರಭಸು…

3 Comments

ಅನಾಮಿಕತೆಯ ಷರತ್ತಿನ ಮೇಲೆ ಈ ಚಿತ್ರವನ್ನು ಕಳಿಸಿಕೊಟ್ಟಿರುವ ಗೆಳತಿ….

© ಸುರಕ್ಷಿತ

ಇದ್ಯಾಕೋ ತುಂಬಾ ಡೈರೆಕ್ಟ್ ರಿಪೋರ್ಟಿಂಗ್ ಅನ್ನಿಸಿತು

9 Comments

ಕೃಪೆ - ವಿಕ

ಬಳಸಿದ ಭಾಷೆ ತುಂಬಾ ಡೈರೆಕ್ಟ್ ಎನ್ನಿಸಿತು. ವಿಷಯವನ್ನು ಹಾಗೆಯೇ ಇಟ್ಟು ಧರ್ಮಸೂಕ್ಷ್ಮ ಪದಗಳನ್ನು ಇನ್ನೂ ವಿವೇಚನೆಯಿಂದ ಬಳಸಬಹುದಿತ್ತಾ?

Older Entries

Follow

Get every new post delivered to your Inbox.

Join 2,051 other followers

%d bloggers like this: