ಕಾವೇರಿ ಗಲಾಟೆಯ ಸಂದರ್ಭದಲ್ಲಿ ಮಾಡಿದ ಸ್ಟೋರಿ.
ನನ್ನ ಕಿತಾಪತಿಗಳ ಜಗತ್ತು…
May 25, 2013
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೊಟ್ಟ ಮೊದಲು ಕರೆದುಕೊಂಡು ಹೋಗಿದ್ದು ಪತ್ರಕರ್ತರನ್ನು. ಪ್ರಯಾಣ ಬೆಳೆಸಿದ್ದು ಎಚ್ಎಎಲ್ ವಿಮಾನ ನಿಲ್ದಾಣದಿಂದ. ಅದರ ಸ್ಟೋರಿ ಹೀಗಿತ್ತು.
May 23, 2013
Media cautiousmind creations, e tv story Leave a comment
ಈ ಟಿವಿಯಲ್ಲಿ ಕೆಲಸ ಮಾಡುತ್ತಿದ್ದಾಗ ಮಾಡಿದ್ದ ಸ್ಟೋರಿ ಹಾಗೂ ಪಿಟಿಸಿ.
May 6, 2013
ಮೊನ್ನೆ ನನ್ನ ಮಿತ್ರರೊಬ್ಬರು ಭೇಟಿಯಾಗಿದ್ದರು. ಅವರ ತಮ್ಮ, ಖಾಸಗಿ ಶಾಲೆಯೊಂದರಲ್ಲಿ ಸಂಸ್ಕೃತ ಶಿಕ್ಷಕರು. ತಮ್ಮನಿಗೆ ಯಾವುದಾದರೂ ಚಾನಲ್ ನಲ್ಲಿ ನ್ಯೂಸ್ ಆಂಕರ್ ಆಗಬೇಕೆನ್ನುವ ಬಯಕೆ. ಆದರೆ ಆಸೆ ಇನ್ನೂ ಈಡೇರಿಲ್ಲ. ಲೋಕಭಿರಾಮವಾಗಿ ಮಾತನಾಡುತ್ತಿರುವಾಗ ಮಿತ್ರರು ಹೇಳಿದರು, ಅವರ ತಮ್ಮ ಹೀಗೇ ತಮಾಷೆ ಮಾಡುತ್ತಿರುತ್ತಾನಂತೆ, “ನಾನು ನ್ಯೂಸ್ ಆಂಕರ್ ಆಗಲು ಸಾಧ್ಯವೇ ಇಲ್ಲ ಬಿಡಿ, ಯಾಕೆಂದರೆ ನನ್ನ ಕನ್ನಡದ ಉಚ್ಚಾರಣೆ ಶುದ್ಧವಿದೆ” ಅಂತ. ಇಂದಿನ ಬಹುಪಾಲು ಆಂಕರ್ ಗಳ ದುಸ್ಥಿತಿ ಹೇಗಿದೆ ಎಂಬುದಕ್ಕೆ ಕನ್ನಡಿಯಂತೆ ಇದೆ ಅಲ್ವೆ ನನ್ನ ಮಿತ್ರರ ಹೇಳಿಕೆ?
April 30, 2013
ಅವರೇನು ಮಾಡಿದರು?, ಪ್ರಜಾಪ್ರಭುತ್ವ ಕೊಟ್ಟ ಕೊಡುಗೆಯು, Media police, politics Leave a comment
ಇತ್ತೀಚೆಗೆ ನಿವೃತ್ತ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ರಾಜಕೀಯ ಪಕ್ಷವೊಂದನ್ನು ಸೇರಿ ರಾಜಕಾರಣ ಪ್ರವೇಶ ಮಾಡಿದರು. ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮದ ನಂತರ, ಖಾಸಗಿ ಚಾನಲ್ ನ ಪತ್ರಕರ್ತರೊಬ್ಬರು ಅವರನ್ನು ಸಂದರ್ಶನ ಮಾಡಿದರು. ಭ್ರಷ್ಟಾಚಾರದ ಆರೋಪವಿರುವ ಆ ಮಹಿಳಾ ಅಧಿಕಾರಿಗೆ ಕನ್ನಡ ಬರುವುದು ಅಷ್ಟಕಷ್ಟೇ. “ರಾಜಕೀಯ ಸೇರಲು ಕಾರಣವೇನು?” ಎಂಬ ಪತ್ರಕರ್ತನ ಮೊದಲ ಪ್ರಶ್ನೆಗೆ ಆಕೆ ಉತ್ತರಿಸಿದ್ದು, “ಪೋಲಿಸ್ ಡಿಪಾರ್ಡ್ ಮೆಂಡ್ ಣಲ್ಲಿದ್ದಾಗ ಸೇವನೆ ಮಾಡಲು ಆಗ್ಲಿಲ್ಲ…ರಾಜಕೀಯ ಸೇರಿ ಸೇವನೆ ಮಾಡುವುದೇ ನನ್ನ ಉದ್ದೇಶ”.
ಪತ್ರಕ್ರರ್ತ ಸುಸ್ತು….
April 9, 2013
ವಿಚಾರ, Media cipher's space, pramod Leave a comment
ತ್ರಾಸದಿ೦ದಲೇ ಅಸ೦ಬದ್ಧ ಪ್ರಾಸಕ್ಕಾಗಿ ಶಬ್ದ ತಿರುಚಿ ನ್ಯೂಸ್ ಹೆಡ್ ಲೈನ್ಸ್ ಮಾಡೋದು ಒ೦ದು ಟ್ರೆ೦ಡ್. ವಿಜಯ ಕರ್ನಾಟಕದಲ್ಲಿ ಶುರುವಾದ ಇದು ಕ್ಲೀಷೆಯಾಗಿ ಎಲ್ಲ ಕಡೇ ತು೦ಬಿ ಕನ್ನಡ ನರಳುತ್ತಿದೆ. ಅರೆ ಬೆ೦ದ ಕನ್ನಡದ ಚಾನೆಲ್ ಗಳು ಪು೦ಖಾನುಪು೦ಖವಾಗಿ ತಮ್ಮ ಪ್ರತಿಭೆಯನ್ನು ಕನ್ನಡಿಗರ ಮು೦ದೆ ತೋರಿಸಿ ಬೆತ್ತಲಾಗಿದ್ದಾರೆ. ಕನ್ನಡಿಗರೇನು ಕಮ್ಮಿ. ಉದಾರಿಗಳು. ಬೇಕಾದಷ್ಟು ಹಿ೦ದಿ, ತೆಲುಗು, ತಮಿಳು ಚಾನೆಲ್ ಇದ್ದಾವೆ. ಅದನ್ನು ನೋಡಿಕೊ೦ಡು ಹಾಯಾಗಿ ಬಿದ್ದಿರುತ್ತಾರೆ.
ಆದರೆ ಬರಿಯ ಕನ್ನಡ ಗೊತ್ತಿದ್ದವರು ಏನು ಮಾಡೋದು!!
ಇದು ಟೀವಿಯ ಒ೦ದು ತುದಿ. ಇನ್ನೊ೦ದು ತುದಿಗೆ ಹೋದಾಗ..
ಒ೦ದಾನೊ೦ದು ಕಾಲದಲ್ಲಿ ಸರಕಾರಿ ಕೆಲಸದ ಬಿದ್ದಿದ್ದ ಮಿಡಲ್ ಕ್ಲಾಸ್, ರಿಯಲ್ ಎಸ್ಟೇಟ್, ಷೇರು ಪೇಟೆ, ಐಟಿ ಇತ್ಯಾದಿಗಳ ಹಿ೦ದೆ ಬಿತ್ತು. ಸದ್ಯಕ್ಕೆ ಅವೆಲ್ಲವೂ ಬಿದ್ದಿವೆ. ರಿಯಲ್ ಎಸ್ಟೇಟ್ ಮಾಫಿಯದಿ೦ದ ಬಚಾವಾಗಳು ಮಿಡಲ್ ಕ್ಲಾಸ್ ಗೆ ಕಷ್ಟವಾಗಿದ್ದರಿ೦ದ ಮಿಡಲ್ ಕ್ಲಾಸ್ ಯಾವುದಾದರೂ ಒಳ್ಳೆಯ ಫಸಲು ಕೊಡುವ ಪ್ರೊಫೆಷನ್ ಹುಡುಕುತ್ತಿದೆ.ಮು೦ದಕ್ಕೇನು ಮಾಡುವುದು ಎ೦ಬುದಾಗಿ ಪ್ರಶ್ನೆ ಹುಟ್ಟಿಕೊ೦ಡಿದೆ.
ಇಡೀ ದಿನ ಟೀವಿ ಮು೦ದೆ ಅ೦ಗಾಲಾಚಿ ಬಿದ್ದಿರುವ ಮಿಡಲ್ ಕ್ಲಾಸ್ ಗೆ ಟೀವಿ ಸೇರಿದರೆ ಮನೆಮಾತಾಗಬಹುದು.ಟ್ಯಾಲೆ೦ಟ್ ಇಲ್ಲದೆ ದುಡ್ಡು ಮಾಡುವ ಇನ್ನೊ೦ದು ವಿಧಾನ ಟೀವಿ ಚಾನೆಲ್ ಗಳು, ನ್ಯೂಸ್, ಸೀರಿಯಲ್ ಗಳು. ಅಸ೦ಬದ್ಧಕ್ಕೆ ಹೊಸ ಔನ್ನತ್ಯ ಕೊಟ್ಟ ಧಾರವಾಹಿಗಳಿಗೆ ಕೂಡ ಬಹಳಷ್ಟು ಕತ್ತೆಗಳು ಕ್ಷಮಿಸಿ ಮನುಷ್ಯರು ಬೇಕಾಗುತ್ತಾರೆ. ಈ ಧಾರವಾಹಿಗಳ ಬಗ್ಗೆ ಒ೦ದಲ್ಲ ಮೆಗಾ ಬ್ಲಾಗಿನಲ್ಲಿ ಬರೆಯಬಹುದು. ಸದ್ಯಕ್ಕೆ ನ್ಯೂಸ್ ಚಾನೆಲ್ ಗಳ ಬಗ್ಗೆ ಅವಲೋಕಿಸೋಣ.
ಸೊಟ್ಟ ನಿರ೦ತರ, ಹುತ್ತಮ ತೆಲುಗು ಸಮಾಜಕ್ಕಾಗಿ, ಇಪ್ಪತ್ನಾಲ್ಕು ಕ್ಯಾರೆಟ್ ಹಿತ್ತಾಲೆ ಚೊ೦ಬು ಇತ್ಯಾದಿ ವಿಧ ವಿಧವಾಗಿ ಟ್ಯಾಗ್ ಹಾಕಿ ಮಿನುಗುತ್ತಿರುವ ಚಾನೆಲ್ ಗಳಿಗೆ ಸೇರಲು ಈ ಕೆಲವು ಅರ್ಹತೆಗಳು ಇದ್ದರೆ ನಿಮಗೆ ಕೆಲಸ ಸಿಗುವುದು ಖ೦ಡಿತ.
ವೀಕ್ಷಕ ಮಹಾಶಯನ ಬಗ್ಗೆ ಜಾಸ್ತಿ ತಲೆಗೆಡಿಸಿಕೊಳ್ಳಬೇಡಿ. ಭಾರತದಲ್ಲಿ ನೂರಿಪ್ಪತ್ತು ಕೋಟಿ ಜನ ಇದ್ದಾರೆ. ಎಷ್ಟೊ೦ದು ಜನ ಪರ್ಪಸ್ ಇಲ್ದೇ ಹುಟ್ಟಿದ್ದಾರೆ. ಯಾವುದೇ ಪ್ರೋಗ್ರಾಮ್ ಇರಲಿ, ಎಷ್ಟೇ ಕೆಟ್ಟ ಕೀಳು ಅಭಿರುಚಿಯ ಪ್ರೋಗ್ರಾಮ್ ಇರಲಿ ನೋಡೋರು ಸಿಗ್ತಾರೆ. ಆಫ್ಟರ್ ಆಲ್ ಅವನು ಯಾವುದಾದರೂ ಚಾನೆಲ್ ನೋಡಲೇಬೇಕು. ಟೀವಿಯ ಮು೦ದೆ ಕೂರುವರೆಲ್ಲಾ ಮೂರ್ಖರೆ೦ಬ ಆಪ್ತ ಭಾವನೆಯಿ೦ದ ಪ್ರೋಗ್ರಾಮ್ ನಡೆಸಿಕೊಡಿ. ತಲೆ ನಮ್ಮದು ಯಶಸ್ಸು, ಟಿಆರ್ ಪಿ ನಿಮ್ಮದು.
ಜಾಸ್ತಿ ಟಿಆರ್ ಪಿ ಎ೦ದರೆ ಚೆನ್ನಾಗಿರಲೇಬೇಕು ಎ೦ಬುದು ಮಾಸ್ ಹಿಸ್ಟೀರಿಯ. ಜಾಸ್ತಿ ಪೇಪರ್ ಸರ್ಕುಲೇಷನ್ ಅ೦ದರೆ ಚೆನ್ನಾಗಿರಲೇಬೇಕು ಅಲ್ಲವೇ. ಉದಾ. ಟೈ೦ಸ್ ಆಫ್ ಇ೦ಡಿಯಾ ದ೦ತಹ ಪೇಪರ್ ತಮ್ಮನ್ನು ತಾವು ಹಾಡಿ ಕೊ೦ಡಾಡಿಕೊ೦ಡು ಮಾರಿ, ಜನರನ್ನು ಯಾಮರಿಸುತ್ತಿರುವುದು ಹೆಚ್ಚಿನವರಿಗೆ ಗೊತ್ತಿಲ್ಲದ ವಿಷಯ. ನೆಟ್ಟಗೆ ಯಾವತ್ತಾದರೂ ಹೆಡ್ ಲೈನ್ ಬರೆದವರಲ್ಲ. ಮನೆ ಮ೦ದಿ ಕುಳಿತು ಓದುವ ಪೇಪರಲ್ಲ. ಲಜ್ಜೆಗೆಟ್ಟ ನ್ಯೂಸ್ ನ್ನು ಬಿಡದೆ ಆರಿಸಿ ಪ್ರಿ೦ಟ್ ಮಾಡಿದವರು. ಲಾಸ್ಟ್ ಸ್ಟಾಪ್ ಜಾಸ್ತಿ ಸರ್ಕುಲೇಷನ್. ಅದಕ್ಕೆ ಏನೂ ಮಾಡಲು ರೆಡಿ.
ಜಾಸ್ತಿ ಕ್ಲಿಕ್ ಗಳೆ೦ದರೆ ಬೆಸ್ಟ್ ವೆಬ್ ಸೈಟ್. ಇದೂ ಮೇಲೆ ಹೇಳಿ೦ದತೆ ಸ್ವ೦ತ ಸರ್ಟಿಫೀಕೇಟ್. ಟೈ೦ಸ್, ಹಿ೦ದೂಸ್ತಾನ್ ಟೈಮ್ಸ್ ಇತ್ಯಾದಿ ಕಾ೦ಗ್ರೆಸ್ ಕೃಪಾ ಪೋಷಿತ ಸುದ್ಧಿ ಮನೆಗಳು ಧಾರಾಳವಾಗಿ ಅಶ್ಲೀಲತೆಯನ್ನು ನಾಭೀಕರಿಸಿ ತೋರಿಸುತ್ತಾರೆ. ಇದರ ಹಿ೦ದಿನ ಉದ್ದೇಶ ಜಾಸ್ತಿ ಕ್ಲಿಕ್ಕ್ ಗಳು. ಅಶ್ಲೀಲ ವೆಬ್ ಸೈಟ್ ಗಳಿಗೂ ಈ ವೆಬ್ ಸೈಟ್ ಗಳಿಗೂ ಜಾಸ್ತಿ ವ್ಯತ್ಯಾಸವಿಲ್ಲ. ಬರಿಯ 18 ವಯಸ್ಸಿನ ಡಿಸ್ಕ್ಲೈಮರ್ ಮಾತ್ರ.
ಜಾಸ್ತಿ ಹಣಗಳಿಸಿದೆಯೆ೦ದರೆ ಒಳ್ಳೆಯ ಚಿತ್ರ ಎ೦ದು ಮಾಧ್ಯಮದವರು ಸೃಷ್ಟಿಸಿದ ಮಿಥ್ಯತೆ ಎಲ್ಲಾ ಕಡೆ ವ್ಯಾಪಿಸಿ ಅದೇ ಸತ್ಯವಾಗಿ ತೋರಿಸಿ ಜನರನ್ನು ಮರಳುಗೊಳಿಸುತ್ತಿದ್ದಾರೆ. ನೂರು ಕೋಟಿ ಕ್ಲಬ್ ನಲ್ಲಿರುವ ಬಾಲಿವುಡ್ ಚಿತ್ರಗಳ ಪಟ್ಟಿ ನೋಡಿ. ಟೀವಿ ಹಾಗು ನ್ಯೂಸ್ ಪೇಪರ್ ನವರು “ಮಸ್ಟ್ ವಾಚ್”, “ಡೋ೦ಟ್ ಮಿಸ್” ಅ೦ತಾ ಬರೆದು, ಸಿಲೆಬ್ರಿಟಿ ಪು೦ಗಿ ಊದಿ ಊದಿ ಚೆನ್ನಾಗಿ “ರಿವ್ಯೂ” ಬರುವ೦ತೆ ನೋಡಿಕೊಳ್ಳುತ್ತಾರೆ. ಶಾರುಕ್, ಯಶ್ ರಾಜ್ ಪ್ರೊಡಕ್ಷನ್ ಇ೦ಡಸ್ಟ್ರಿ ಭಯದಿ೦ದ ಕ೦ಪಲ್ಸರಿ 3.5-4 ಸ್ಟಾರ್ ರೇಟಿ೦ಗ್ ಚಿತ್ರಗಳಾಗುತ್ತವೆ. ಪ್ರತಿ ಸಾರಿಯೂ ಮೋಸ ಹೋಗುವವರ ದುಡ್ಡು ಅದೇ ದೊಡ್ಡ ಫ್ರಾಡ್ಯೂಸರ್ ಗಳ ಕಿಸೆಗೆ ಸೇರುತ್ತವೆ.
ಹೆಚ್ಚಿನವರಿಗೆ ದಿನ ಬೆಳಗಾಗುವುದು ಟೀವಿಯಿ೦ದಲೇ. ಎಲ್ಲರಿಗೂ ದಿನ ಮುಗಿಯುವುದು ಟೀವಿಯಿ೦ದ. ಟೀವಿ ಮೂರ್ಖರ ಪೆಟ್ಟಿಗೆ ಅನ್ನುತ್ತಿದ್ದರು. ಅದು ಮೂರ್ಖರನ್ನು ಹುಟ್ಟು ಹಾಕುತ್ತದೆ. ಮೂರ್ಖರನ್ನು ತನ್ನ ತೆಕ್ಕೆಗೆಳೆದು ನಿಯ೦ತ್ರಿಸುತ್ತದೆ ಕೂಡ.
February 23, 2013
ಮುದ್ರಣ ಮಾಧ್ಯಮ, Media, sales news pint, sapna online Leave a comment
January 16, 2013
ಪ್ರಜಾಪ್ರಭುತ್ವ ಕೊಟ್ಟ ಕೊಡುಗೆಯು, ವಿಚಾರ, Media kds, Media, news acnhor Leave a comment
ರಾಜಕಾರಣಿಗಳಿಗೆನೂ ಕಡಿಮೆ ಕೊಬ್ಬು ಇರುವುದಿಲ್ಲ. ಅಫ್ ಕೋರ್ಸ್ ಹಲವರಿಗೆ ಮೈ ತುಂಬ ತುಂಬಿಕೊಂಡಿರುವುದು ಬರೀ ಕೊಬ್ಬೇ. ಸುದ್ದಿ ವಾಹಿನಿಯೊಂದರಲ್ಲಿ ಸಾಮಾನ್ಯವಾಗಿ ಮಹತ್ವದ ಬೆಳವಣಿಗೆಗಳು ನಡೆದಾಗ ಸಂಬಂಧಪಟ್ಟವರ ಫೋನ್ ಇನ್ ತೆಗೆದುಕೊಳ್ಳುವುದು ಸಾಮಾನ್ಯ. ಅಂತಹ ಸಂದರ್ಭದಲ್ಲಿ ಕೆಡಿಎಸ್ ಎಂಬ ರಾಜಕಾರಣಿಯ ಫೋನೋ ತೆಗೆದುಕೊಳ್ಳಬೇಕಾಗಿತ್ತು. ಕೆಡಿಎಸ್ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಕೈ ರಾಜಕಾರಣಿ. ರಿಯಲ್ ಎಸ್ಟೇಟ್, ಕಲ್ಲು ಗಣಿಗಾರಿಕೆ, ಭೂಮಿ ಡಿನೋಟಿಫಿಕೇಷನ್ ಎಲ್ಲದರಲ್ಲಿಯೂ ಎತ್ತಿದ ಕೈ. ಹಿಟ್ ಫಿಲ್ಮ್ ಗಳ ಹಿರೋಯಿನ್ ಗಳು ಈತನ ಹಾಸಿಗೆಗೆ ಬರಲೇಬೇಕು. ಈಗ ಪ್ರಸಿದ್ಧ ನಟಿಯಾಗಿರುವ ಒಬ್ಬಾಕೆ ಈತನ ಬೇಡಿಕೆಗೆ ಒಪ್ಪದಿದ್ದಾಗ, ಆಕೆಯ ಮೇಲೆ ದೈಹಿಕ ಹಲ್ಲೆ ನಡೆಸಿದ ಕಿರಾತಕ ಈ ಕೆಡಿಎಸ್.
ಮೊನ್ನೆ ಯಾವುದೋ ಸುದ್ದಿ ವಾಹಿನಿಯೊಂದರಲ್ಲಿ ನೋಡಿದ್ದು. ಈತ ಆನ್ ಏರ್ ಗೆ ಬಂದ ಕೂಡಲೇ, ಸುದ್ದಿ ವಾಚಕಿ, “ಕೆಡಿಎಸ್ ಅವರೇ ನಮಸ್ಕಾರ” ಎಂದಿದ್ದಾರೆ. ಆದರೆ ಕೆಡಿಎಸ್ ಗೆ ಕೊಬ್ಬು ಎಷ್ಟೆಂದರೆ, ಪ್ರತಿ ನಮಸ್ಕಾರ ಹೇಳದೆ, “ಹಂ….” ಅಂತ ಅಷ್ಟೇ ಹೇಳಿದ್ದಾನೆ. ಆದರೂ ಸುದ್ದಿ ವಾಚಕಿ ಕನಿಷ್ಠ ಶಿಷ್ಟಾಚಾರವನ್ನೂ ಬಯಸದೇ ಮುಂದಿನ ಪ್ರಶ್ನೆಯನ್ನು ಕೇಳಿದ್ದಾರೆ. ಆಗ ನೆನಪಾಗಿದ್ದು, “When you were only asked to bend, many of you chose to crawl”
November 26, 2012
Media abc7, breaking news, news anchors, resignation 1 Comment
ಇತ್ತೀಚೆಗೆ ಎಬಿಸಿ7 ಎಂಬ ಸುದ್ದಿ ವಾಹಿನಿಯ ಇಬ್ಬರು ಸುದ್ದಿ ವಾಚಕರು ತಮ್ಮ ರಾಜೀನಾಮೆಯನ್ನು ಲೈವ್ ಆಗಿ ಬ್ರೇಕ್ ಮಾಡಿದ್ದು ಹೀಗೆ…
November 24, 2012
Media e tv, Media, sensitivity Leave a comment
ಕೆಲ ವರ್ಷಗಳ ಹಿಂದೆ ನಡೆದ ಘಟನೆ. ಓರಿಸ್ಸಾದ ಪೋಲಿಸ್ ಮಹಾನಿರ್ದೇಶಕನೊಬ್ಬ ನ್ಯಾಯ ಒದಗಿಸುವ ನಾಟವನ್ನಾಡಿ ಆದಿವಾಸಿ ಹುಡುಗಿಯೊಬ್ಬಳನ್ನು ತನ್ನ ತೆವಲಿಗೆ ಬಳಸಿಕೊಂಡಿದ್ದ. ಆಕೆಯನ್ನು ಮತ್ತೆ ಮತ್ತೆ ಬಳಸಿಕೊಂಡೂ, ಆಕೆಗೆ ಯಾವುದೇ ರೀತಿಯ ಸಹಾಯವನ್ನು ಮಾಡಲಿಲ್ಲ. ಕೊನೆಗೆ ರೋಸಿ ಹೋದ ಹುಡುಗಿ, ಸ್ಥಳೀಯ ಇಲೆಕ್ಟ್ರಾನಿಕ್ ಮಾಧ್ಯಮದ ಪತ್ರಕರ್ತನೊಬ್ಬನನ್ನು ಸಂಪರ್ಕಿಸಿದಳು. ಆ ಪತ್ರಕರ್ತ ಹುಡುಗಿಯೊಂದಿಗೆ ಉಪಾಯವಾಗಿ ಹಿಡನ್ ಕ್ಯಾಮೆರಾ ಕಳಿಸಿ ಡಿಜಿಯ ಕಾಮಕೇಳಿಯ ದೃಶ್ಯಗಳನ್ನು ಸೆರೆಹಿಡಿದ. ಆ ದೃಶ್ಯಗಳು ತೀರ ಹಸಿಹಸಿಯಾಗಿದ್ದವು. ಆ ವಿಶುವಲ್ಸ್ ಗಳನ್ನು ಹೆಡ್ ಆಫೀಸ್ ಗೆ ಕಳಿಸಲಾ ಎಂದು ಕೇಳಿದ್ದಕ್ಕೆ, ವಿಶುವಲ್ಸ್ ನ ತೀವ್ರತೆ ಅರಿಯದ ಹೆಡ್ ಆಫೀಸ್ ನವರು, ಕಳಿಸು, ಅಂದಿದ್ದಾರೆ. ಆದರೆ ಯಾವಾಗ ವಿಶುವಲ್ಸ್ ಗಳು ಎಲ್ಲರೂ ಆಕ್ಸೆಸ್ ಮಾಡಬಹುದಾದ ಫೋಲ್ಡರ್ ಗೆ ಬಂದು ಬಿತ್ತೊ, ಇಡೀ ಆಫೀಸಿನವರು ಆ ವಿಶುವಲ್ಸ್ ಗಳನ್ನು ಕದ್ದು ಮುಚ್ಚಿ ನೋಡತೊಡಗಿದ್ದಾರೆ. ತಕ್ಷಣ ಜಾಗೃತಗೊಂಡ ಐಟಿ ತಂಡ, ಆ ವಿಶುವಲ್ಸ್ ಗಳನ್ನು ಸೀಕ್ರೇಟ್ ಫೋಲ್ಡರ್ ಗೆ ಹಾಕಿ ನಿಟ್ಟುಸಿರು ಬಿಟ್ಟಿದೆ. ಆಫೀಸಿನಲ್ಲಿದ್ದ ಮಹಿಳಾ ಉದ್ಯೋಗಿಗಳಿಗೆ ಈ ಘಟನೆ ತೀರ ಮುಜುಗರ ತಂದಿದೆ.
ಕೆಲ ವರ್ಷಗಳ ಬಳಿಕ, ಅಂದರೆ ಇತ್ತಿತ್ತಲಾಗಿ, ಇದೇ ತರಹದ ಘಟನೆಯೊಂದು ಬಾಗಲಕೋಟೆಯಿಂದ ವರದಿಯಾಗಿದೆ. ಎಂದಿನಂತೆ ವಿಶುವಲ್ಸ್ ಗಳು ಹೆಡ್ ಆಫೀಸಿಗೆ ಬಂದಿವೆ. ವಿಶುವಲ್ಸ್ ಗಳು ಬಹಿರಂಗವಾಗಿ ನೋಡಲಾಗದ ಮಟ್ಟಿಗಿವೆ. ಆದರೆ ಆಫೀಸಿನಲ್ಲಿ ಎಲ್ಲರೂ ರಾಜಾರೋಷವಾಗಿ ಅವನ್ನು ನೋಡಿದ್ದಾರೆ.
ಈ ಎರಡೂ ಘಟನೆಗಳನ್ನು ಇಟ್ಟು ನೋಡಿದಾಗ, ಇವುಗಳ ವಿಶ್ಲೇಷಣೆ ಹೇಗೆ ಎಂಬ ಪ್ರಶ್ನೆ ಮೂಡುತ್ತದೆ. ಮಾಧ್ಯಮದ ಸಿಬ್ಬಂದಿ ಪ್ರಾಕ್ಟಿಕಲ್ ಆಗುತ್ತಿದ್ದಾರೆಯೆ ಅಥವಾ ಸಂವೇದನೆಯನ್ನು ಕಳೆದುಕೊಳ್ಳುತ್ತಿದ್ದಾರೆಯೆ? ನೀವೇನನ್ನುತ್ತೀರಿ?
November 15, 2012
Media google translation 3 Comments
ಯಾರೇ ಮಾಧ್ಯಮ ರಂಗ ಪ್ರವೇಶಿಸಿದರೂ, ಡೆಸ್ಕ್ ನಲ್ಲಿ ಮೊದಲು ಕೊಡುವ ಕೆಲಸವೇ ಇಂಗ್ಲೀಷ್ ಕಾಪಿಗಳನ್ನ ಕನ್ನಡಕ್ಕೆ ಅನುವಾದ ಮಾಡುವುದು. ಇಂಗ್ಲೀಷ್ ಹಾಗೂ ಕನ್ನಡ ಭಾಷೆ ಸುಧಾರಿಸಲಿ ಎಂಬ ಉದ್ದೇಶದ ಜೊತೆಗೆ, ಡೆಸ್ಕ್ ನ ಅವಿಭಾಜ್ಯ ಕೆಲಸಗಳಲ್ಲಿ ಇದು ಒಂದಾಗಿದೆ. ತುಂಬಾ ಮುಖ್ಯವಾದ ಅಥವಾ ತಾಂತ್ರಿಕ, ವೈಜ್ಞಾನಿಕ, ಆರ್ಥಿಕ ವರದಿಗಳನ್ನ ಮುಖ್ಯಸ್ಥರೇ ಅನುವಾದಿಸುತ್ತಾರೆ.
ಆದರೆ ಇತ್ತೀಚೆಗೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಹೊಸ ರಕ್ತಕ್ಕೆ ರೋಗವೊಂದು ಅಂಟಿಕೊಂಡಿದೆ. ಇಂಗ್ಲೀಷ್ ಕಾಪಿ ಕೊಟ್ಟ ತಕ್ಷಣ, google ಟ್ರಾನ್ಸ್ ಲೇಷನ್ ಗೆ ಹೋಗಿ ಛಕ್ಕಂತ ಅನುವಾದ ಮಾಡಿಬಿಡುವುದು. ಸಣ್ಣ ಪುಟ್ಟ ತಪ್ಪುಗಳನ್ನ ನಂತರ ಸರಿಪಡಿಸುವುದು. ಆದರೆ ಈ ರೀತಿ ಮಾಡುವುದರಿಂದ ತಲೆಗೇನೂ ಕೆಲಸವಿಲ್ಲ. ಇಂತಹ ತಲೆಗಳಿಗೆ ಮುಂದೆ ಭವಿಷ್ಯವೂ ಇಲ್ಲ ಬಿಡಿ.
ಕೃಷ್ಣಾರ್ಪಣಮಸ್ತು…
October 18, 2012
ಅವರೇನು ಮಾಡಿದರು?, ವಿಚಾರ, Media astrology, blood, koppal Leave a comment
ಮಾಧ್ಯಮಗಳು ಸಹಾಯ ಮಾಡಲು ಮುಂದೆ ಬರುತ್ತವೆ ಅಂದರೂ ಜನರಿಗೆ ಅದು ಬೇಡವಾಗಿರುತ್ತದೆ ಅನ್ನುವುದಕ್ಕೆ ಮೊನ್ನೆ ನಡೆದ ಘಟನೆ ಉದಾಹರಣೆ.
ಕೊಪ್ಪಳದಿಂದ ಒಂದು ಸ್ಟೋರಿ ಬಿತ್ತರವಾಯಿತು. 12 ವರ್ಷದ ಹುಡುಗನೊಬ್ಬನ ಕೈ ಹಾಗೂ ದೇಹದ ಕೆಲ ಭಾಗಗಳಿಂದ ಇದ್ದಕ್ಕಿದ್ದ ಹಾಗೆ ರಕ್ತ ಹರಿಯಲಾರಂಭಿಸುತ್ತದೆ. ಯಾವ ಪೂರ್ವ ಸೂಚನೆಯೂ ಇರುವುದಿಲ್ಲ. ಡಾಕ್ಟರ್ ಆಯ್ತು, ಹಕೀಮರಾಯಿತು, ದೇವರು-ದಿಂಡರು ಆಯಿತು, ಮಾಟ-ಮಂತ್ರ ಮಾಡಿಸಿದ್ದಾಯ್ತು, ಭಾನಾಮತಿ ಕಾಟ ತೆಗೆಸಿದ್ದೂ ಆಯ್ತು. ಏನೂ ಮಾಡಿದ್ರೂ ಹುಡುಗ ಮಾತ್ರ ಹುಷಾರಗಲೊಲ್ಲ.
ಆದರೆ ಈ ಸ್ಟೋರಿಯನ್ನು ನೋಡಿದ ಬೆಂಗಳೂರಿನ ಖ್ಯಾತ ವೈದ್ಯರೊಬ್ಬರು ತಕ್ಷಣ ಚಾನಲ್ ಸಂಪರ್ಕಿಸಿ ಆ ಕಾಯಿಲೆಯ ವೈಜ್ಞಾನಿಕ ಹೆಸರು, ಅದಕ್ಕೆ ಬೇಕಾದ ಚಿಕಿತ್ಸೆಯನ್ನು ಸೂಚಿಸಿ, ಬೇಕಿದ್ದರೇ ತಾವೇ ಉಚಿತವಾಗಿ ಆಪರೇಷನ್ ಮಾಡಿಸುವುದಾಗಿಯೂ ಹೇಳಿದರು. ಚಾನಲ್ ನವರು ಆ ಹುಡುಗ, ಹುಡುಗನ ತಂದೆ, ವೈದ್ಯರನ್ನು ಕೂರಿಸಿ ಪ್ಯಾನಲ್ ಡಿಸ್ಕಷನ್ ಮಾಡಿಸಿದ್ದೂ ಆಯಿತು. ಸ್ಟೋರಿ ಮಾಡಿದ ರಿಪೋರ್ಟರ್ ನಲ್ಲಿ ಸಾರ್ಥಕ ಭಾವ.
ಕೆಲ ದಿನಗಳ ನಂತರ ಗೊತ್ತಾಗಿದ್ದು, ಆ ಹುಡುಗನ ಕಡೆಯವರು ಆಪರೇಷನ್ ಮಾಡಿಸಲೇ ಇಲ್ಲವಂತೆ. ಈ ಸ್ಟೋರಿ ನೋಡಿದ ಹುಬ್ಬಳ್ಳಿ ಕಡೆಯ ಖ್ಯಾತ ಜ್ಯೋತಿಷಿಗಳ್ಯಾರೋ, ಇದು ಯಾವುದರದ್ದೊ ಕಾಟ. ತಾವು ಅದನ್ನು ತೆಗೆಸುತ್ತೇವೆ. ಕೆಲವು ಸಿಂಪಲ್ ಪೂಜೆ ಮಾಡಿದರಾಯಿತು ಅಂತ ತಂದೆಗೆ ಫೋನ್ ಮಾಡಿದರಂತೆ. ತಂದೆ, ಈಗ ಆ ಜ್ಯೋತಿಷಿಯನ್ನು ಎಡತಾಕುತ್ತಿದ್ದಾರಂತೆ. ಹುಡುಗನ ರಕ್ತ ಹರಿಯುತ್ತಲೇ ಇದೆ.
ಏನು ಮಾಡಬೇಕು ಇಂತಹ ಜನರಿಗೆ?
October 2, 2012
Media Kevin Carter, vulture Leave a comment
Courtesy – Iconic Photos
In March 1993, photographer Kevin Carter made a trip to southern Sudan, where he took now iconic photo of a vulture preying upon an emaciated Sudanese toddler near the village of Ayod. Carter said he waited about 20 minutes, hoping that the vulture would spread its wings. It didn’t. Carter snapped the haunting photograph and chased the vulture away. (The parents of the girl were busy taking food from the same UN plane Carter took to Ayod).
The photograph was sold to The New York Times where it appeared for the first time on March 26, 1993 as ‘metaphor for Africa’s despair’. Practically overnight hundreds of people contacted the newspaper to ask whether the child had survived, leading the newspaper to run an unusual special editor’s note saying the girl had enough strength to walk away from the vulture, but that her ultimate fate was unknown. Journalists in the Sudan were told not to touch the famine victims, because of the risk of transmitting disease, but Carter came under criticism for not helping the girl. ”The man adjusting his lens to take just the right frame of her suffering might just as well be a predator, another vulture on the scene,” read one editorial.
Carter eventually won the Pulitzer Prize for this photo, but he couldn’t enjoy it. “I’m really, really sorry I didn’t pick the child up,” he confided in a friend. Consumed with the violence he’d witnessed, and haunted by the questions as to the little girl’s fate, he committed suicide three months later.
September 26, 2012
ಅವರೇನು ಮಾಡಿದರು?, Media jayalalitha, karan thapar Leave a comment
ಈ ವಿಡಿಯೋವನ್ನು ಬಹುತೇಕ ಎಲ್ಲ ಮಾಧ್ಯಮ ಟ್ಲೈನಿಂಗ್ ಗಳಲ್ಲಿ ಬಳಸಲಾಗುತ್ತದೆ. ನಾನು ಕೂಡ ನನ್ನ ಟ್ರೈನಿಂಗ್ ಕ್ಲಾಸ್ ಗಳಲ್ಲಿ ಇದನ್ನು ಹಲವಾರು ಬಾರಿ ಬಳಸಿದ್ದೇನೆ. ಈ ವಿಡಿಯೋ ಬಗ್ಗೆ ಸಾಕಷ್ಟು ಚರ್ಚೆಗಳಾಗಿವೆ.
September 18, 2012
ಅವರೇನು ಮಾಡಿದರು?, Media nigale paritoshaka prashasti 2012, pratap 1 Comment
ನನ್ನೂರು ಕೊಪ್ಪದಲ್ಲಿ ಪ್ರತಿವರ್ಷ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದವರಿಗೆ ವಿದ್ಯಾನಿಧಿ (ಧನ ಸಹಾಯ) ಹಾಗೂ ಪ್ರಶಸ್ತಿ ನೀಡಲಾಗುತ್ತದೆ. ಈ ಬಾರಿ ಒಂದು ಪ್ರಶಸ್ತಿಯನ್ನು ನಾನು ನೀಡಿದೆ. ಆದರೆ ನನ್ನ ಪ್ರಶಸ್ತಿಯ ಮಾನದಂಡ ಬೇರೆ ಇತ್ತು.
ಕೇವಲ ಅಂಕಗಳು ಬದುಕನ್ನು ರೂಪಿಸುವುದಿಲ್ಲ. ಕೇವಲ ಅಂಕಗಳು ಬದುಕಿನಲ್ಲಿ ಎಲ್ಲವೂ ಅಲ್ಲ ಎಂಬುದು ನನ್ನ ನಂಬಿಕೆ.
ಹೀಗಾಗಿ, ಎಸ್ಎಸ್ಎಲ್ಸಿ ಅಥವಾ ಪಿಯುಸಿಯಲ್ಲಿ ಕನಿಷ್ಠ ಶೇ.70 ಅಂಕ ಹಾಗೂ ಕನಿಷ್ಠ ನಾಲ್ಕು ಕ್ಷೇತ್ರಗಳಲ್ಲಿ (ಪಠ್ಯೇತರ ಚಟುವಟಿಕೆ- ಭಾಷಣ, ಸಂಗೀತ, ಕ್ರೀಡೆ ಇತ್ಯಾದಿ) ತೊಡಗಿಸಿಕೊಂಡಿರುವ ವಿದ್ಯಾರ್ಥಿ/ನಿಗೆ “ನಿಗಳೆ ಪಾರಿತೋಷಕ ಪ್ರಶಸ್ತಿ – 2012″ ಹಾಗೂ ರೂ. 501/- ಯೋಜಿಸಿದ್ದೆ. ಈ ಬಾರಿಯ ನಿಗಳೆ ಪಾರಿತೋಷಕ ಪ್ರಶಸ್ತಿಯನ್ನ ಪ್ರತಾಪನಿಗೆ ನೀಡಲಾಗಿದೆ. ಪ್ರತಾಪ ಓದಿನಲ್ಲಷ್ಟೇ ಅಲ್ಲ, ಪಠ್ಯೇತರ ಚಟುವಟಿಕೆಗಳಲ್ಲಿ ಕೂಡ ಎತ್ತಿದ ಕೈ.
ಆಲ್ ದಿ ಬೆಸ್ಟ್ ಪ್ರತಾಪ್….
September 18, 2012
September 15, 2012
ವಿಡಿಯೋ, Media nityananda interview Leave a comment
ಕೆಲ ತಿಂಗಳ ಹಿಂದೆ ನಿತ್ಯಾನಂದ ಸಂದರ್ಶನ ಮಾಡಿದ್ದೆ. ಅದರ ವಿಡಿಯೋ ಇಲ್ಲಿದೆ.
September 13, 2012
Media media college, oscar pistorious, vidhana soudha 1 Comment
ಕೆಲ ದಿನಗಳ ಹಿಂದೆ ಪ್ರತಿಷ್ಠಿತ ಮಾಧ್ಯಮ ಕಾಲೇಜೊಂದರಲ್ಲಿ ಪಾಠ ಮಾಡಲು ಹೋಗಿದ್ದೆ. ಸಾಕಷ್ಟು ಹೆಸರು ಮಾಡಿರುವ ಮಾಧ್ಯಮ ಕಾಲೇಜು ಅದು. ಪಾಠಕ್ಕಿಂತ ಮೊದಲು ವಿದ್ಯಾರ್ಥಿಗಳಿಗೆ ಕೆಲ ಪ್ರಶ್ನೆಗಳನ್ನು ಕೇಳಿದೆ. ಆಗ ನಡೆದ ಘಟನೆ ಇದು.
ನಾನು – “ಇವತ್ತಿನ ನ್ಯೂಸ್ ಪೇಪರ್ ಹೆಡ್ ಲೈನ್ಸ್ ಏನೇನಿದೆ?”
“…………………….(ಯಾರಿಗೂ ಗೊತ್ತಿಲ್ಲ)”
“ಇವತ್ತಿನ ನ್ಯೂಸ್ ಪೇಪರ್ ಓದೀದ್ದೀರಾ?”
“…………………….(ಯಾರಿಗೂ ಗೊತ್ತಿಲ್ಲ)”
“ಸರಿ, ನೀವು ಕೊನೆಯ ಬಾರಿ ನ್ಯೂಸ್ ಪೇಪರ್ ಓದಿ ಎಷ್ಟು ದಿನವಾಗಿದೆ?”
ಈ ಪ್ರಶ್ನೆಗೆ ಅಂತೂ ಇಂತೂ ಮೂರು ದಿನಗಳ ಹಿಂದಿನ ಹೆಡ್ ಲೈನ್ ಅನ್ನು ಹೇಳಿದರು.
“ಆಸ್ಸಾಂ ನಲ್ಲಿ ಯಾಕೆ ಗಲಾಟೆ ನಡೆಯುತ್ತಿದೆ?”
“…………………….(ಯಾರಿಗೂ ಗೊತ್ತಿಲ್ಲ)”
“ಬೆಂಗಳೂರಿನಲ್ಲಿ ನಿನ್ನೆಯಷ್ಟೇ ಭಯೋತ್ಪಾದನೆಗೆ ಸಂಬಂಧಿಸಿದ ಬೆಳವಣಿಗೆ ನಡೆದಿದೆ. ಏನದು?”
“…………………….(ಯಾರಿಗೂ ಗೊತ್ತಿಲ್ಲ)”
“ವಿಧಾನ ಸೌಧದ ಕೋಣೆಯೊಂದರಲ್ಲಿ ನಡೆದ ಕಾಮಗಾರಿ ವಿವಾದಕ್ಕೆ ಕಾರಣವಾಗಿದೆ. ಯಾವ ಕಾಮಗಾರಿ?”
“…………………….(ಯಾರಿಗೂ ಗೊತ್ತಿಲ್ಲ)”
“ಆಸ್ಕರ್ ಪಿಸ್ಟೋರಿಯಸ್ ಯಾರು?”
“…………………….(ಯಾರಿಗೂ ಗೊತ್ತಿಲ್ಲ)”
“ಸರಿ ಹೋಗ್ಲಿ, ಬಿಡಿ, ವಿಧಾನ ಸೌಧ ಕಟ್ಟಿಸಿದ್ದು ಯಾರು ಅಂತ ಗೊತ್ತಾ?”
ಈ ಪ್ರಶ್ನೆಗೆ ಅಂತೂ ಇಂತೂ ವಿದ್ಯಾರ್ಥಿನಿಯೊಬ್ಬಳು ಕೈ ಎತ್ತಿದಳು. ಇಷ್ಟಾದರೂ ಗೊತ್ತಲ್ಲ ಎಂದು ನನಗೆ ಖುಷಿಯಾಯಿತು. ಹೇಳಮ್ಮ ಅಂದೆ.
“ಆಸ್ಕರ್ ಪಿಸ್ಟೋರಿಯಸ್”
ನಾನು ಮೂರ್ಛೆ ತಪ್ಪಲಿಲ್ಲ. ಯಾಕೆಂದರೆ, ಇದಕ್ಕಿಂತ ಹೆಚ್ಚು ಪ್ರತಿಭಾನ್ವಿತವರು ಫೀಲ್ಡ್ ನಲ್ಲೇ ಇದ್ದಾರೆ.
July 20, 2012
ವಿಡಿಯೋ, Media samaya tv, sughosh s nigale, veena malik Leave a comment
ಚಿಠ್ಠೀ ಆಯೀ ಹೈ…