ಜುಲೈ 10, ಯುವ ರಂಗತೋರಣ
July 6, 2010
ನಾಟಕ, ನಿಮಗಿದೋ ಆಮಂತ್ರಣ abvp, bellary, yuva rantorana Leave a comment
ನಾನು ಮೊನ್ನೆ ಬಳ್ಳಾರಿ ಕೋಟೆಯ ಮೇಲೆ ತೆಗೆದ ಕ್ಯಾಮರಾಮನ್ ಫೋಟೋ
June 23, 2010
ಫೋಟೋ ಫಿನಿಶ್ bellary, cameraman photo, photo by me, sughosh 2 Comments
ನಮ್ಮಲ್ಲಿ ದೇವಿಯರ ಎಷ್ಟು ವೈವಿಧ್ಯಮಯ ಹೆಸರುಗಳು…
June 20, 2010
ಫೋಟೋ ಫಿನಿಶ್, ವಿಚಾರ bellary, kitguttammana krupe, qualis Leave a comment
ಮುಜುಗರ ಬಿಟ್ಟು ಕೇಳಿದೆ, ಸಾರ್ ಇಲ್ಲಿ ಟಾಯ್ಲೆಟ್ ಇದ್ಯಾ?
June 18, 2010
ಅನುಭವ (ಕಾಶೀನಾಥಂದು ಅಲ್ಲ ಕಣ್ರೀ..), ಮುಕ್ತ...ಮುಕ್ತ...ಮುಕ್ತ.... bellary, mukta mukta, muncipal ground, nature call, toilet, vajpayee arogya shree 6 Comments
ಆರೋಗ್ಯ ಇಲಾಖೆಯ ವಾಜಪೇಯಿ ಆರೋಗ್ಯಶ್ರೀ ಕಾರ್ಯಕ್ರಮದ ಕುರಿತು ಶಾರ್ಟ್ ಫಿಲ್ಮ್ ಮಾಡಲೆಂದು ಮೊನ್ನೆ ಬಳ್ಳಾರಿಗೆ ಹೋಗಿದ್ದೆ. ಅಲ್ಲಿ ಆರೋಗ್ಯಶ್ರೀ ಕ್ಯಾಂಪ್ ಇತ್ತು. ಬಳ್ಳಾರಿಯ ಮುನ್ಸಿಪಲ್ ಮೈದಾನದಲ್ಲಿ ಕಾರ್ಯಕ್ರಮ. ಬಳ್ಳಾರಿಯ ರಣಬಿಸಿಲು ನೆನೆಸಿಕೊಂಡು ಮುಂಜಾನೆಯೇ ತಂಬಿಬೆಗಟ್ಟಲೆ ನೀರು ಕುಡಿದು ಕ್ಯಾಮೆರಾ ಯೂನಿಟ್ ನೊಂದಿಗೆ ಮುನ್ಸಿಪಲ್ ಮೈದಾನಕ್ಕೆ ಹೋಗಿದ್ದೆ. ಆದರೆ ಅದೃಷ್ಟ…ವರುಣ ದೇವ ಪ್ರಸನ್ನನಾಗಿ ಇಡೀ ಮೈದಾನದ ತುಂಬ ಮೋಡ ಕವಿದ ವಾತಾವರಣವನ್ನು ನಿರ್ಮಿಸಿದ್ದ. ಹೀಗಾಗಿ 10 ಗಂಟೆಯ ಸುಮಾರಿಗೆ ನನಗೆ ನೇಚರ್ ಕಾಲ್ ಬಂದುಬಿಟ್ಟಿತು. ಅದಾಗಲೇ ಪ್ರಕೃತಿಯ ಕರೆಗೆ ಓಗೋಟ್ಟು ಬಂದಿದ್ದ ಕ್ಯಾಮರಾಮನ್ ಆಂಜಿ ಅವರಿಗೆ ಕೇಳಿದೆ. “ಟಾಯ್ಲೆಟ್ ಎಲ್ಲಿದೆ ಗೊತ್ತಾ?”
“ಅಯ್ಯೋ ನಾನೂ ತುಂಬಾ ಹುಡುಕಿದೆ ಸಾರ್. ಇಡೀ ಗ್ರೌಂಡ್ ನಲ್ಲಿ ಸಿಗಲಿಲ್ಲ. ಕೊನೆಗೆ ಹೊರಗೆ ಸುಮಾರು ಅರ್ಧ ಕಿಮಿ ದೂರ ನಡೆದುಕೊಂಡು ಹೋಗಿ ಕಾರ್ಯಕ್ರಮ ಮುಗಿಸಿದೆ” ಎಂದರು ಆಂಜಿ.
ಸರಿ, ಎಂದು ನಾನೂ ‘ಆಪರೇಷನ್ ನೇಚರ್ ಕಾಲ್’ ಗೆ ಮುಂದಾದೆ. ಗ್ರೌಂಡ್ ಗೆ ತಾಕಿದಂತೆ ಮತ್ತೊಂದು ಗ್ರೌಂಡ್ ಇತ್ತು. ಆ ಗ್ರೌಂಡ್ ನ ಮೂಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕಚೇರಿಯಿತ್ತು. ಅಲ್ಲಿ ಟಾಯ್ಲೆಟ್ ಇರಬಹುದು ಎಂದು ಅಂದುಕೊಂಡು ಹೋದೆ. ಆದರೆ ನನಗೆ ನಿರಾಸೆ ಕಾದಿತ್ತು. ಎಲ್ಲ ರೂಮ್ ಗಳಿಗೂ ಬೀಗ ಜಡಿಯಲಾಗಿತ್ತು. ಅಷ್ಟರಲ್ಲಿ ನನಗೆ ನೇಚರ್ ಕಾಲ್ ತಡೆದುಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ. ಇನ್ನೇನು ನಾನೂ ಅರ್ಧ ಕಿಮಿ ನಡೆದುಕೊಂಡು ಹೋಗಬೇಕು ಎನ್ನುವಷ್ಟರಲ್ಲಿ, ವ್ಯಕ್ತಿಯೊಬ್ಬರು ಬಂದು ಕೈಕುಲುಕಿದರು. ನಮ್ಮ ಮುಂದಿನ ಸಂಭಾಷಣೆ ಹೀಗಿತ್ತು.
“ಸರ್, ನೀವು ಮುಕ್ತ ಮುಕ್ತ ದಲ್ಲಿ ಮಾಡುತ್ತೀರಿ ಅಲ್ವಾ? ”
“ಹೌದು”
“ದೇವಾನಂದಸ್ವಾಮಿ, ಮುಖ್ಯಮಂತ್ರಿಗಳ ಮಗ ಅಲ್ವಾ?”
“ಹೌದು”
“ನಾನು ನಾಗರಾಜ್ ಅಂತ. ನೀವು ತುಂಬಾ ಚೆನ್ನಾಗಿ ಆಕ್ಟ್ ಮಾಡ್ತೀರಿ ಸರ್”
“ಥ್ಯಾಂಕ್ಯು ಸರ್”
“ನಿಮ್ಮ ಸೀರಿಯಲ್ ತುಂಬಾ ಚೆನ್ನಾಗಿದೆ”
“ಥ್ಯಾಂಕ್ಯು ಸರ್”
“ಎಲ್ಲರ ಆಕ್ಟಿಂಗ್ ತುಂಬಾ ಚೆನ್ನಾಗಿದೆ”
“ಥ್ಯಾಂಕ್ಯು ಸರ್”
“ಇಲ್ಲೇನು ಸಾರ್ ಬಂದಿದ್ದು?”
“ವಾಜಪೇಯಿ ಆರೋಗ್ಯಶ್ರೀ ಕ್ಯಾಂಪ್ ಬಗ್ಗೆ ಶಾರ್ಟ್ ಫಿಲ್ಮ್ ಮಾಡಲು ಬಂದಿದ್ದೇನೆ”
“ಓಹ್ ಹೌದಾ ಸರ್…”
“ಸರ್, ನನಗೆ ಟಾಯ್ಲೆಟ್ ಗೆ ಹೋಗಬೇಕಿತ್ತು. ಇಲ್ಲಿ ಎಲ್ಲಾದ್ರೂ ಟಾಯ್ಲೆಟ್ ಇದ್ಯಾ?”
“ಅಯ್ಯೋ ಬನ್ನಿ ಸಾರ್…”
ಎನ್ನುತ್ತಾ ನಾಗರಾಜ್ ಅವರು ಸ್ಕೌಟ್ಸ್ ಬಿಲ್ಡಿಂಗ್ ನ ಒಂದು ರೂಂನ ಬೀಗ ತೆಗೆಸಿದರು. ಒಳಗೆ ಕರೆದುಕೊಂಡು ಹೋಗಿ ಮತ್ತೊಂದು ರೂಂನ ಬೀಗ ತೆಗೆಸಿದರು. ಒಳಗೆ ಹೋಗಿ ಮತ್ತೊಂದು ಬಾಗಿಲು ತೆರೆದರು. ಟಾಯ್ಲೆಟ್ ಬಾಗಿಲು ನನ್ನ ಭಾಗ್ಯದ ಬಾಗಿಲಿನಂತೆ ಕಂಡಿತು ನನಗೆ. ಟಾಯ್ಲೆಟ್ ನಲ್ಲಿ ನೀರಿಲ್ಲದ ಕಾರಣ ಮೋಟರ್ ಆನ್ ಮಾಡಿಸಿದರು. ನಾನು ನನ್ನ ನೇಚರ್ ಕಾಲ್ ಪೂರೈಸಿ, ಹೊರಗೆ ಬಂದು ನಾಗರಾಜ್ ಅವರಿಗೆ ಮನಃಪೂರ್ವಕವಾಗಿ ವಂದಿಸಿದೆ.
ಎಂತೆಂತಹ ಅನುಭವ ಮಾರಾಯ್ರೆ…..














ಚಿಠ್ಠೀ ಆಯೀ ಹೈ…