ತಮಸೋಮಾ ಜ್ಯೋತಿರ್ಗಮಯ…

1 Comment

1243

ಚಿತ್ರ – ನಾನು

ಸತ್ತವನೆದುರೂ ಗಣಪನೆದುರೂ ಒಂದೇ ಮ್ಯೂಸಿಕ್….

2 Comments

ganesh

ನಾ ಭಾಳ ವರ್ಷ ಬೆಳಗಾವ್ಯಾಗಿದ್ದೆ. ಅದಕ್ಕ ಅಲ್ಲಿನ ಗಣಪತಿ ಉತ್ಸವಾ ಸೂಕ್ಷ್ಮವಾಗಿ ಗಮನಿಸಕೋತ್ ಅದರಾಗ್ ಭಾಗವಹಿಸಗೋತ್ ಬಂದೇನಿ. ಈ ಕೆಲ ವರ್ಸದಾಗ ಬೆಂಗಳೂರ್ ನ್ಯಾಗ್ ಆಗೋ ಗಣೇಶ ಉತ್ಸವಾನೂ ನೋಡೇನಿ.

ಬೆಳಗಾವಿ, ಬಿಜಾಪುರ, ಹುಬ್ಬಳ್ಳಿ-ಧಾರವಾಡ, ಗುಲ್ಬರ್ಗಾಗಳ ಗಣೇಶ ಉತ್ಸವiಗಳ ಮ್ಯಾಗ ಮಹಾರಾಷ್ಟ್ರದ ಪ್ರಭಾವಾ ಭಾಳ ಐತಿ. ಬೆಳಗಾವ್ಯಾಗಂತೂ ಭಾಳ ಮೊದಲ ಉತ್ಸವದ ತಯಾರಿ ಸುರುಆಕ್ಕೇತಿ. ಗಣೇಶೋತ್ಸವ ಯುವಕ ಮಂಡಳದ ಯುವಕರೆಲ್ಲ ಕೂಡಕೊಂಡು ಇಡೀ ಊರು ತಿರುಗಿ ಮೊದಲ ಪಟ್ಟಿ(ಚಂದಾ) ಎತ್ತತಾರ. ಎಲ್ಲಾ ಮನಿಗೊಳಿಗ ಹೋಗಿ ಹಿಂದಿನ ವರ್ಸ ಪಟ್ಟಿ  ನೀಡಿದವರ ಹೆಸರು, ಕೊಟ್ಟ ರೋಖ, ಗಣಪತಿ ಮೂರ್ತಿ ಸಲುವಾಗಿ ಖರ್ಚಾದ ರೊಕ್ಕ, ಭಡಜಿ (ಪುರೋಹಿತ), ಹೂವಾ, ಹಣ್ಣ, ನಾರಳ(ತೆಂಗು), ನೈವೇದ್ಯ, ಪೆಂಡಾಲ್, ಮೈಕ್, ಝಾಂಝ್ ಪಥಕ್(ಬೆಳಗಾವಿಯ ವಿಶೇಷ್ ಬ್ಯಾಂಡ್), ಮೆರವಣಿಗಿ ಬಾಬ್ತು, ಕರಂಟ್, ಒಟ್ಟ ಪಟ್ಟಿ ಮತ್ತ ಒಟ್ಟ ಖರ್ಚು, ಉಳಿದ ಶಿಲ್ಲಕ ಹಿಂಗ ಎಲ್ಲಾ ಮಾಹಿತಿ ಇರೋ ಸಣ್ಣ ಬುಕ್ ಕೊಡ್ತಾರ. ಪೆಂಡಾಲಂತೂ ಬರೋಬರ್ ಒಂದ್ ವಾರ್ ಮೊದಲ ತಯಾರ ಆಕ್ಕೇತಿ. ಗಣೇಶ ಚತುರ್ಥಿ ದಿವಸ ದೊಡ್ಡದಾದ 1210 ಅಶೋಕ್ ಲೇಲ್ಯಾಂಡ್ ಟ್ರಕ್ ನ ನೆತ್ತಿ ಮ್ಯಾಗ್ ಕಮಿತ್ ಕಮಿ ಅಂದ್ರ ಧಾ ಫೂಟ್ ಇರೊ ಗಣಪತಿನ ಕುಂಡ್ರಸ್ ಕ್ಯಾಸ್ ಗಲ್ಲಿ ತುಂಬೆಲ್ಲ ಮೆರವಣಿಗಿ ಮಾಡ್ತಾರ. ಗಲ್ಯಾಗ ಗಣೇಶನನ್ನ ನೆತ್ತಿ ಮ್ಯಾಲಿಟ್ ಕೊಂಡ ಟ್ರಕ್, ಜಬರ್ದಸ್ತ್ ಹೊಕ್ಕಿದ್ದರ ಟ್ರಕ್ ಹಿಂದ ಸಣ್ಣು ಹುಡುಗ್ರು, ಟ್ರಕ್ ಮುಂದ ಯೂವಕ್ರೂ ಡ್ಯಾನ್ಸ್ ಆಡತಿರ್ತಾರ. ಗಣಪತಿ ಬಪ್ಪಾ ಮೋರಯಾ, ಏಕ್ ದೋನ್ ತೀನ್ ಚಾರ್-ಗಣಪತೀಚಾ ಜಯ್ ಜಯ್ ಕಾರ್ ಘೋಷಣಾ ಕೇಳಿ ಬರ್ತಾವ. ಆಲ್ ಮೋಸ್ಟ್, ಪ್ರತಿಮನಿ ಮುಂದೂ ಗಣಪಗ ಪೂಜಿ ಸಲ್ಲಿಕೆ ಆಗ್ತದ. ಹಿಂತಾ ಹೊತ್ತನ್ಯಾಗ ಮೂರ್ತಿ ಬಾಜೂಕಿರೋ ಯುವಕರಿಗೂ ಮತ್ತ ಮನಿ ಮುಂದ ನಿಂತಿರೊ ಯುವತಿಯರ ಕಣ್ಣಗೊಳಿಗೂ ಮಿಲಾಕತ್ ಆಗ್ತದ. ಯುವಕ ಕಣ್ಣಗೊಳು ಹೆಮ್ಮೆಯಿಂದ ಬೀಗಿದರ, ಯುವತಿ ಕಣ್ಗೋಳು ನಾಚಿಕೊಳ್ತಾವ.

ಬರೋಬರ್ ಹನ್ನೊಂದು ದಿವಸ ಪ್ರತಿನಿತ್ಯ ಗಣಪತಿಗೆ ಸುಖಕರ್ತಾ ದುಃಖಹರ್ತಾ ವಾರ್ತಾ ವಿಘ್ನಾಚಿ ಮೂಲಕ ಆರತಿಯಾಗ್ತದ. ಹನ್ನೊಂದು ದಿನಾನೂ ರಾಂಗೋಳಿ(ರಂಗೋಲಿ) ಸ್ಪರ್ಧಾ, ಸ್ಲೋಸೈಕ್ಲಿಂಗ್ ಸ್ಪರ್ಧಾ, ದೇವಾಚೆ ಗೀತ(ದೇವರ ನಾಮ) ಸ್ಪರ್ಧಾ ಹೀಂಗ ನಾನಾರೀತಿಯ ಸ್ಪರ್ಧಾ ನಡೀತಾವು. ಹತ್ತನೆ ದಿವಸ ಗಣಪತಿ ಸಮ್ಮುಖದಾಗ, ತನ್ನ ತಲಿಗಿಂತ ಕಮ್ಮಿತ್ ಕಮ್ಮಿ ಅಂದ್ರ ಮೂರು ಪಟ್ಟು ದೊಡ್ಡದಾಗಿ ಹಳದಿ ಪಟಕಾ ಸುತ್ತಿಕೊಂಡ  ಪಂಚಾಯತಿ ಚೇರಮನ್ ರಿಂದ ಗೆದ್ದಾವರಿಗೆ ಬಹುಮಾನ ಕೊಡ್ತಾರ.

ಹನ್ನೊಂದನೆ ದಿವಸ ಮತ್ತ ಗಣಪತಿನ ಟ್ರಕ್ ನ ನೆತ್ತಿ ಮ್ಯಾಗ ಕುಂಡ್ರಿಶಿ ಊರು ಸುತ್ತು ಹಾಕಿ ಗಣಪತಿ ಬಪ್ಪಾ ಮೋರಯಾ, ಫುಡಚಾ ವರ್ಶಿ ಲೌಕರ್ ಯಾ ಅಂತ ಘೋಷಣಾ ಹಾಕಿ ಅರ್ಗಂತಳಾ ಇಲ್ಲಾಂದ್ರ ಕಿಲ್ಲಾ ಕೆರಿಯೊಳಗ ಕಳಿಸಿಕೊಡ್ತಾರು.

ಆದರೆ ಬೆಂಗಳೂರಿನಲ್ಲಿ ಮಾತ್ರ ಗಣೇಶ ಉತ್ಸವದ ರೀತಿಯ ಬೇರೆ. ಇಲ್ಲಿ ಗಣೇಶ ಚತುರ್ಥಿಯಂದೇ ಗಣೇಶ ತರಬೇಕೆಂದೆನೂ ಇಲ್ಲ. ಚತುರ್ಥಿಯ ನಂತರ ಅವರವರ ಅನುಕೂಲಕ್ಕೆ ತಕ್ಕ ಅಚ್ಚಿನ ಮೂರ್ತಿಗಳನ್ನು ತರುತ್ತಾರೆ. ಸತ್ತವರೆದುರು ಬಾರಿಸುವ ತಮಟೆಯ ಮ್ಯೂಸಿಕ್ಕನ್ನೇ ಗಣೇಶನೆದೂರು ಬಾರಿಸುತ್ತಾರೆ. ಲೀಟರ್ ಗಟ್ಟಲೆ ಕಂಟ್ರಿ ಕುಡಿದು ವಿಕಾರವಾಗಿ ಕಿರುಚುತ್ತಾರೆ. ದೆವ್ವ ಹಿಡಿದವರಂತೆ ಡ್ಯಾನ್ಸ್ ಮಾಡುತ್ತಾರೆ. ಮತ್ತೆ ಅನುಕೂಲಕ್ಕೆ ತಕ್ಕ ಹಾಗೆ ಗಣೇಶನನ್ನು ಅಲಸೂರು ಕೆರೆಯಲ್ಲಿ ಮುಳುಗಿಸುತ್ತಾರೆ.

ಗಣೇಶ ಉತ್ಸವದ ಸಂದರ್ಭದಲ್ಲಿ ಗಾಂಧಿ ಬಜಾರ್ ಸಮೀಪದ ವಿದ್ಯಾರಣ್ಯ ಸಂಘ, ಎನ್ ಆರ್ ಕಾಲೋನಿಯ ಕಾಂಗ್ರೆಸ್ ಮರಿನಾಯಕನೊಬ್ಬ ವ್ಯವಸ್ಥೆ ಮಾಡುತ್ತ ಬಂದಿರುವ ಗಣೇಶ, ವಿಜಯನಗರದ ಒಂದೆರಡು ಯುವಕ ಸಂಘಗಳು ಸೇರಿದಂತೆ ಬೆರಳೆಣಿಕೆಯಷ್ಟು ಸಂಘಗಳು ಮಾತ್ರ ಸಾಂಸ್ಕೃತಿಕವಾಗಿ ಹಾಗೂ ತುಂಬ ಚೆಂದವಾಗಿ ಗಣೇಶ ಉತ್ಸವವನ್ನು ಆಚರಿಸುತ್ತವೆ.

ಆದರೆ ಇದೀಗ ಬೆಳಗಾವಿಯಲ್ಲಿಯೂ ಸಾಕಷ್ಟು ನೀರು ಹರಿದು ಹೋಗಿದೆ. “ಅತಾ ಗಣಪತಿ ಆದಿ ಸರ್ಕ ನೈರೆ” (ಈಗ ಗಣಪತಿ ಸಂಭ್ರಮ ಮೊದಲಿನಂತೆ ಇಲ್ಲ ಮಾರಾಯಾ) ಎಂದು ಅಲ್ಲಿನ ಗೆಳೆಯನೊಬ್ಬ ಹೇಳುತ್ತಿದ್ದ. ಈ ಬಾರಿಯೂ ನನಗೆ ಗಣಪತಿ ಹಬ್ಬಕ್ಕೆ ಬೆಳಗಾವಿಗೆ ಹೋಗಲಿಕ್ಕಾಗಿಲ್ಲ. ಮುಂದಿನ ಬಾರಿಯಾದರೂ ಹೋಗಬೇಕು….ಗಣಪತಿ ಬಪ್ಪಾ ಮೋರಯಾ….

ಗಣಪತಿ ಬಪ್ಪಾ ಮೋರಯಾ…

Leave a comment

image006

Follow

Get every new post delivered to your Inbox.

Join 2,048 other followers

%d bloggers like this: