ಕನಿಷ್ಠ ಶಿಷ್ಟಾಚಾರವೂ ಇಲ್ಲದ ರಾಜಕಾರಣಿಗಳು

Leave a comment

 

ರಾಜಕಾರಣಿಗಳಿಗೆನೂ ಕಡಿಮೆ ಕೊಬ್ಬು ಇರುವುದಿಲ್ಲ. ಅಫ್ ಕೋರ್ಸ್ ಹಲವರಿಗೆ ಮೈ ತುಂಬ ತುಂಬಿಕೊಂಡಿರುವುದು ಬರೀ ಕೊಬ್ಬೇ. ಸುದ್ದಿ ವಾಹಿನಿಯೊಂದರಲ್ಲಿ ಸಾಮಾನ್ಯವಾಗಿ ಮಹತ್ವದ ಬೆಳವಣಿಗೆಗಳು ನಡೆದಾಗ ಸಂಬಂಧಪಟ್ಟವರ ಫೋನ್ ಇನ್ ತೆಗೆದುಕೊಳ್ಳುವುದು ಸಾಮಾನ್ಯ. ಅಂತಹ ಸಂದರ್ಭದಲ್ಲಿ ಕೆಡಿಎಸ್ ಎಂಬ ರಾಜಕಾರಣಿಯ ಫೋನೋ ತೆಗೆದುಕೊಳ್ಳಬೇಕಾಗಿತ್ತು. ಕೆಡಿಎಸ್ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಕೈ ರಾಜಕಾರಣಿ. ರಿಯಲ್ ಎಸ್ಟೇಟ್, ಕಲ್ಲು ಗಣಿಗಾರಿಕೆ, ಭೂಮಿ ಡಿನೋಟಿಫಿಕೇಷನ್ ಎಲ್ಲದರಲ್ಲಿಯೂ ಎತ್ತಿದ ಕೈ. ಹಿಟ್ ಫಿಲ್ಮ್ ಗಳ ಹಿರೋಯಿನ್ ಗಳು ಈತನ ಹಾಸಿಗೆಗೆ ಬರಲೇಬೇಕು. ಈಗ ಪ್ರಸಿದ್ಧ ನಟಿಯಾಗಿರುವ ಒಬ್ಬಾಕೆ ಈತನ ಬೇಡಿಕೆಗೆ ಒಪ್ಪದಿದ್ದಾಗ, ಆಕೆಯ ಮೇಲೆ ದೈಹಿಕ ಹಲ್ಲೆ ನಡೆಸಿದ ಕಿರಾತಕ ಈ ಕೆಡಿಎಸ್.

ಮೊನ್ನೆ ಯಾವುದೋ ಸುದ್ದಿ ವಾಹಿನಿಯೊಂದರಲ್ಲಿ ನೋಡಿದ್ದು. ಈತ ಆನ್ ಏರ್ ಗೆ ಬಂದ ಕೂಡಲೇ, ಸುದ್ದಿ ವಾಚಕಿ, “ಕೆಡಿಎಸ್ ಅವರೇ ನಮಸ್ಕಾರ” ಎಂದಿದ್ದಾರೆ. ಆದರೆ ಕೆಡಿಎಸ್ ಗೆ ಕೊಬ್ಬು ಎಷ್ಟೆಂದರೆ, ಪ್ರತಿ ನಮಸ್ಕಾರ ಹೇಳದೆ, “ಹಂ….” ಅಂತ ಅಷ್ಟೇ ಹೇಳಿದ್ದಾನೆ. ಆದರೂ ಸುದ್ದಿ ವಾಚಕಿ ಕನಿಷ್ಠ ಶಿಷ್ಟಾಚಾರವನ್ನೂ ಬಯಸದೇ ಮುಂದಿನ ಪ್ರಶ್ನೆಯನ್ನು ಕೇಳಿದ್ದಾರೆ. ಆಗ ನೆನಪಾಗಿದ್ದು, “When you were only asked to bend, many of you chose to crawl”

 

ಆರ್ ಎಸ್ ಎಸ್, ಮಾಧ್ಯಮ ಹಾಗೂ ಪ್ರವೀಣ್ ಪಟವರ್ಧನ್ ಅವರ ಪ್ರಕಟಗೊಳ್ಳದ ಪ್ರತಿಕ್ರಿಯೆ

2 Comments

ಪ್ರವೀಣ್ ಪಟವರ್ಧನ್ ಬರೆಯುತ್ತಾರೆ…..
ವ್ಯಕ್ತಿತ್ವ ವಿಕಸನದ  ಶಿಬಿರಗಳಲ್ಲಿ communication ಬಗ್ಗೆ ಒಂದು ಪ್ರಕ್ರಿಯೆ ಇಂತಿದೆ. ಶಿಕ್ಷಕನು ಸಭಿಕನೋರ್ವನಿಗೆ ಕಿವಿಯಲ್ಲ್ಲಿ ಒಂದು ಕತೆ ಹೇಳುತ್ತಾನೆ. ನಿಯಮಾನುಸಾರ ಆ ಕತೆಯನ್ನು ಒಮ್ಮೆಯಷ್ಟೇ ಹೇಳುತ್ತಾನೆ. ಈ ಸಭಿಕ ಅದೇ ರೀತಿಯಲ್ಲಿ ತನ್ನ ಪಕ್ಕದಲ್ಲಿ ಇರುವ ತನ್ನ ಸ್ನೇಹಿತನಿಗೆ ಅದೇ ಕತೆಯನ್ನು ಕಿವಿಯಲ್ಲ್ಲಿ ಹೇಳಬೇಕು. ಈ ರೀತಿಯಾಗಿ (ಸಾಲಿನ) ಮುಂದಿನವನು ತನ್ನ ಹಿಂದಿನವನಿಗೆ ತಾನು ತನ್ನ ಹಿಂದಿನವನಿಂದ ತಿಳಿದುಕೊಂಡ ಆ ಸಂಗತಿಯನ್ನು ಹೇಳುವುದೇ ಆಟ. ಕಡೆಯಲ್ಲಿ ಉಳಿಯುವವ ಆ ಸಂಗತಿಯನ್ನು ಇಡಿಯ ಸಭೆಯಲ್ಲಿ ಜೋರಾಗಿ ಹೇಳಿದಾಗ ಆ ಶಿಕ್ಷಕನು ಬೆರಗಾಗಿಬಿಡುತ್ತಾನೆ. ಕಾರಣ ಪ್ರತಿಯೊಬ್ಬನೂ ತನ್ನ Version ಹೇಳುತ್ತಾ ಹೋದಹಾಗೆ ಕತೆ ಬದಲಾಗುತ್ತಾ, ತಮ್ಮದೇ ಉಪಕಥೆಗಳು ಸೇರಿಕೊಂಡು ಮೂಲ ಕಥೆಗಿಂತ ವಿಭಿನ್ನವಾಗಿರುತ್ತದೆ. ಇಂದಿನ ಮಧ್ಯಮದವರು ಮಾಡಿದ್ದೂ ಅದೆ. ಮೋಹನ್ ಭಾಗವತ್ ರವರ ಭಾಷಣವನ್ನು ಕೇಳಿದವನು ಮಸಾಲೆ ಅರಿದು ಜಗತ್ತಿಗೆ ಅವರೊಬ್ಬ ದುಷ್ಟ ಎಂದು ಹೇಳುತ್ತಾ ಕಿರುಚಾಡಿದರು. ಉಳಿದವರು ಅವರದ್ದೇ ಕತೆ ಹೆಣೆದರು. ಕತೆ ಕಟ್ಟಲು ಸಮಯವಿಲ್ಲದವರು ಪ್ರಮುಖ ಸುದ್ದಿಯಲ್ಲಿ ಬಂದ ವಿವರವನ್ನೇ ತರ್ಜುಮೆ ಮಾಡಿದರು. ಅಸಲಿಗೆ ಯಾರೂ ಏನಾಗಿರಬಹುದೆಂದು ಓದಲಿಲ್ಲ. ಕೇಳಲಿಲ್ಲ. ಅಂತಿಮದಲ್ಲಿ ಮೋಹನ್ ಭಾಗವತರಿಗೆ, ಆರ್ ಎಸ್ ಎಸ್  ಗೆ ಕೆಟ್ಟ ಹೆಸರು ಬರುವಂತೆ ಮಾಡಿದರು. ಜನವರಿ 8ರ “ಬಿಗ್ ಡಿಬೇಟ್” ನಲ್ಲಿ ಹಲವರ ಹೇಳಿಕೆಗಳನ್ನು ಹಮೀದ್ ಪಾಳ್ಯ ತೋರಿಸಿದರಾದರೂ ಎಲ್ಲರೂ ಮಾತನಾಡಿದ್ದು ಆರ್ ಎಸ್ ಎಸ್ ಬಗ್ಗೆ. ಮೊಹನ್ ಭಾಗವತರ ಬಗ್ಗೆ. ಆರ್ ಎಸ್ ಎಸ್ಸ್ ಒಳ್ಳೆಯ ಕೆಲಸ ಮಾಡಿದಾಗ ಹೊಗಳದೆ ತಟಸ್ತರಾಗಿ ಇರುವ ಈ ಮಿತ್ರ ವೃಂದ ತಮ್ಮ Hidden Agendaಗೋಸ್ಕರ ಸೂರು ಕಳಚಿ ಬೀಳುವಂತೆ ಹರಿಹಾಯ್ದರು.
ಲೇಖನವನ್ನು ಓದುವುದಕ್ಕಿಂತಲೂ ಮುಂಚೆ Youtube ನಲ್ಲಿ ಮೋಹನ್ ಭಾಗವತರ ಭಾಷಣ, ಸುವರ್ಣ ನ್ಯೂಸ್ ವಾಹಿನಿಯ ಜನವರಿ ೮ ರ “ಬಿಗ್ ಡಿಬೇಟ್” ಕಾರ್ಯಕ್ರಮವನ್ನೂ ನೋಡಿರಿ. ನಿಮಗೆ ಪ್ರಸ್ತುತವೆನಿಸಬಹುದು
ಮೋಹನ್ ಭಾಗವತರು ಮಾತನಾಡಿದ ಪೂರ್ಣ ವಿವರಕ್ಕೆ ಇಲ್ಲಿ ನೋಡಿ. www.samvada.org ಇದನ್ನು ನೋಡದೇ ವಿವರ ತಿಳಿಯದೇ ಮಾತನಾಡಿದ 3ಖರನ್ನು (ವಿಮಲಾ, ಅಗ್ನಿ ಶ್ರೀಧರ್, ಸಿ. ಎಸ್. ದ್ವಾರಕಾನಾಥ್) ಹೀಯಾಳಿಸದೇ ಇರಲು ಆಗುವುದೇ? ಮೊಹನ್ ಭಾಗವತರ ಎರಡೂ ಭಾಷಣಗಳನ್ನು ಕೇಳಿಸಿಕೊಳ್ಳಿ. ಈ ಎರಡು ಭಾಷಣಗಳು ಒಟ್ಟು ನಿಮ್ಮ ೫೦ ನಿಮಿಷಗಳನ್ನು ತೆಗೆದುಕೊಳ್ಳುತ್ತವೆ. ಮೊದಲಿಗೆ ಮಾಧ್ಯಮಗಳಲ್ಲಿ ಬಂದ ವಿಷಯಗಳ ಪೂರ್ವಗ್ರಹದಿಂದ ಹೊರಬಂದು ಈ ಭಾಷಣಗಳನ್ನ ಕೇಳಿಸಿಕೊಳ್ಳಿ. ಅಲ್ಲೆಲ್ಲೂ ಇವರುಗಳು ಅರಚುವಂತೆ ಪ್ರಚೋದನಾಕಾರಿ ಮಾತುಗಳನ್ನು ಆಡಿರುವುದಾಗಿ ನಿಮಗೂ ಅನ್ನಿಸುವುದಿಲ್ಲ. ಇದರ ಬಗ್ಗೆ ನಂಬಿಕೆ ನನಗಿದೆ. ಮೋಹನ್ ಭಾಗವತರು ತಮ್ಮ ಭಾಷಣದ ಆದಿಯಲ್ಲಿ “ಸರ್ವೇ ಭವಂತು ಸುಖಿನಃ, ಸರ್ವೇ ಸಂತು ನಿರಾಮಯಾಃ” ದಿಂದ ಪ್ರಾರಂಭಗೊಳಿಸಿ, ಭಾರತೀಯರು ಎಲ್ಲರ ಒಳಿತನ್ನು ಅಪೇಕ್ಷಿಸುತ್ತಾರೆ. ನಮಗೆ ತಿಳಿಯದ ಯಾರೋ ಒಬ್ಬ ದುಃಖ ಪಡುತ್ತಿದ್ದಾನೆಂದರೂ ನಮ್ಮ ಮನಸ್ಸು ಮಿಡಿಯುತ್ತದೆ. ಇದು ಭಾರತೀಯತೆ ಎಂಡು ಹೇಳುತ್ತಾ, ನಮ್ಮಲ್ಲಿ ಇರುವ ಸಂಬಂಧಗಳ ಬೆಲೆ, ಅದಕ್ಕೆ ತೋರುವ ಮರ್ಯಾದೆಯನ್ನು  ಪಾಶ್ಚಾತ್ಯರೊಂದಿಗೆ ಹೋಲಿಸಿ ಅವರದ್ದು(ಪಾಶ್ಚಾತ್ಯರ) “Theory of Social Contract” ಎಂದು ಹೇಳಿದ್ದಾರೆ. ಮುಂದುವರೆಸುತ್ತಾ, ನಮ್ಮ ದೇಶದಲ್ಲಿ ಈ ಸಂಬಂಧಗಳ ದೃಷ್ಟಿ ಬದಲಾಗುತ್ತಾ, ನಮ್ಮ ವೃತ್ತಿ ಬದಲಾಗುತ್ತಿದೆ, ಆದ್ದರಿಂದ ಸಂಸ್ಕಾರ ಬದಲಾಗುತ್ತಿದೆ. ಬದಲಾದ ನಮ್ಮ ಸಂಸ್ಕಾರ ಎಲ್ಲರಲ್ಲೂ ದುಃಖ ತರಿಸುವಂತಹ ಯೋಜನೆಯಾಗಿ ಮಾರ್ಪಡುತ್ತಿವೆ ಎಂದು. ಇನ್ನು, ಮತ್ತೊಂದು ಭಾಷಣದಲ್ಲಿ ಪ್ರೇಕ್ಷಕರ ಪ್ರಶ್ನೆಗೆ ಉತ್ತರಿಸುತ್ತಾ, ಅತ್ಯಾಚಾರಗಳನ್ನು ಖಂಡಿಸುತ್ತಾ “ಹೆಣ್ಣಿನ ಮೇಲಿನ ದೌರ್ಜನ್ಯ ನಡೆಯುತ್ತಿರುವುದು ಸಂಸ್ಕಾರಗಳ ಕೊರತೆಯಿಂದಾಗಿ, ಶಿಕ್ಷಣದ ಕೊರತೆಯಿಂದಾಗಿ. ನಮ್ಮ ಮೂಲಗಳನ್ನು ಮರೆಯುತ್ತಾ ಪಾಶ್ಚಾತೀಕರಣದಿಂದಾಗುತ್ತಿರುವುದರ ಪರಿಣಾಮ. ಆದಕಾರಣದಿಂದ ಗ್ರಾಮೀಣ ಭಾರತದಲ್ಲಿ ಕಡಿಮೆ ಅತ್ಯಾಚಾರಗಳು ಕಾಣುತ್ತಿವೆ.
ಅಗ್ನಿ ಶ್ರೀಧರರೇ, ಆ ಕಾರ್ಯಕ್ರಮದಲ್ಲಿ ಮೋಹನ್ ಭಾಗವತರನ್ನು ಏಕವಚನದಲ್ಲಿ ಸಂಭೋದಿಸಿ ಅದನ್ನು ಸಮರ್ಥಿಸಿಕೊಂಡಿರಲ್ಲ ನೆನಪಿದೆಯಾ? “ನಾನು ಅವಿವೇಕದ ಮಾತನಾಡಿದರೆ ನನ್ನನ್ನು ಏಕವಚನದಲ್ಲಿ ಸಂಬೋಧಿಸಲಿ”ಎಂದು, ಆ ದೃಷ್ಟಿಯಿಂದ ನಿಮ್ಮನ್ನು ನಾನು ಅದೇ ಧಾಟಿಯಲ್ಲಿ ಬಯ್ಯಬಹುದು. ಆದರೆ ನನ್ನ ಸಂಸ್ಕಾರ ಎಲ್ಲರಿಗೂ ಮರ್ಯಾದೆ ಕೊಡುವಂತೆ ಸೂಚಿಸುತ್ತದೆ, ಯಾರಾದರೂ ತಪ್ಪು ಮಾಡಿದರೆ ಎತ್ತಿ ಹಿಡಿ ಅಂತಲೂ ಹೇಳಿಕೊಟ್ಟಿದೆ. ನಿಮಗೆ ಗೊತ್ತಿಲ್ಲದ ವಿಷಯಗಳು ಬಹಳಷ್ಟು ಇದ್ದರೂ ಮಾತಿಗೋಸ್ಕರ ಒಂದು ಗಂಟೆ ಹರಟೆ ಮಾಡಿದಿರಲ್ಲ “ಬಿಗ್ ಡಿಬೇಟ್” ಅನ್ನೊ ಕಾರ್ಯಕ್ರಮದಲ್ಲಿ ನಿಮ್ಮನ್ನು ನೋಡಿದರೆ ನಗು ಬರುತ್ತೆ. ಸ್ಕಾಂಡಿನೇವಿಯಾ ದೇಶಗಳಲ್ಲಿ, ಯೂರೋಪ್ ನಲ್ಲಿ, ಮುಂದುವರೆದ ರಾಷ್ಟ್ರಗಳಲ್ಲಿ ಅತ್ಯಾಚಾರ ನಡೆಯುವುದೇ ಇಲ್ಲ ಅಂದಿರಿ. ಒಮ್ಮೆ ಅಂಕಿ ಅಂಶಗಳನ್ನು ನೋಡಿ ನಂತರ ನಿಮ್ಮ ಸಿದ್ಧಾಂತಕ್ಕೆ ಜೋತು ಬೀಳಿರಿ.
ಅಮೇರಿಕಾ ದೇಶ ಮುಂದುವರೆದ ದೇಶ ಎಂದು ನಾನು ಹಾಗು ನನ್ನಂತೆ ಹಲವರು ನಂಬಿದ್ದೇವೆ. ಅಲ್ಲಿ ಆಗುವ ಅತ್ಯಾಚಾರಗಲ ಸಂಖ್ಯೆ ನಿಮಗೆ ತಿಳಿದಿದೆಯೆ? ಫ್ಯಾಷನ್ ರಾಜಧಾನಿ ಎಂದು ಕರೆದುಕೊಳ್ಳುವ ಪ್ಯಾರಿಸ್ ನಲ್ಲಿ ಎಷ್ಟು ಅತ್ಯಾಚಾರಗಳು ನಡೆಯುತ್ತವೆ ತಿಳಿದಿದೆಯೇ? ಇಗೋ ಒಂದಷ್ಟು ಕೊಂಡಿಗಳು. ಓದಿಕೊಳ್ಳಿ. Wikipediaದಲ್ಲಿ Rape statistics by countryಎಂದು ಹುಡುಕಿ ನಿಮಗೆ ಗೊತ್ತಿಲ್ಲದ ಸಂಗತಿಗಳು ಹಲವಷ್ಟಿವೆ.
 ಅತ್ಯಾಚಾರಗಳು ಕಂದಾಚಾರದ ಪದ್ಧತಿಯಲ್ಲಿರುವ ದೇಶಗಳಾದ ಪಾಕಿಸ್ತಾನ್, ಬಾರಥ (ನೀವು ಮಾತನಾಡಿದ್ದು ಹಾಗೆಯೇ) ಎಂದರಲ್ಲ. ಮುಂದುವರೆಸಿ, ಇಂಡಿಯಾ ಹೆಸರಿಗೆ ಹೆಚ್ಚಿನ ಸಾಂಸ್ಕೃತಿಕ ಬೆಲೆಯಿದೆ ಅಂತಲೂ ಅಂದಿರಲ್ಲಾ….. ಭಾರತದಲ್ಲಿ ಹರಿಯುತ್ತಿದ್ದ ಸಿಂಧು ನದಿಯಿಂದ ನಮ್ಮನ್ನು ಹಿಂದು ಎಂದು ಕರೆದರು. ಅದನ್ನು ಹಾಗೆ ಕರೆಯಲಾಗದೆ ಪಾರ್ಸಿಯರು ಇಂದಸ್ ಎಂದು ಕರೆದು ಬಾಯಿಂದ ಬಾಯಿಗೆ  ಹೋಗುತ್ತಾ ಅದು ಇಂಡಿಯಾ ಆಗಿದೆ. ಇಂಡಿಯ ಎಂಬ ಪದ ಹುಟ್ಟಲು ನಮ್ಮ ದೇಶದ ಸಿಂಧು ನದಿಯ ಹೆಸರೇ ಸ್ಪೂರ್ತಿ. ಇನ್ನು ಭಾರತ ಎಂಬ ಹೆಸರು ಹೇಗೆ ಬಂತೆಂದು ಕುಲಕರ್ಣಿಯವರು ಹೇಳಿದ್ದಾರೆ. ಅದು ನಿಮಗೆ ಅರ್ಥವಾಗಿದೆ ಎಂದು ಕೊಂಡಿದ್ದೇನೆ. ಅದಿರಲಿ, ವಿಮಲಾ ಮತ್ತು ಶ್ರೀಧರ್, ಎಂದಾದರೂ ನಮ್ಮ ದೇಶದ ನೋಟನ್ನು ನೋಡಿದ್ದೀರಾ?Reserve Bank of India ಎಂಬ ಇಂಗ್ಲಿಷ್ ಬರಹದ ಮೇಲ್ಗಡೆ ಹಿಂದಿಯಲ್ಲಿ “ಭಾರತೀಯ ರಿಸರ್ವ್ ಬ್ಯಾಂಕ್” ಎಂದು ಬರೆದಿದೆಯೋ ಅಥವಾ ಬೇರೇನಾದರೂ ಇದೆಯಾ? ಭಾರತ, ಇಂಡಿಯಾ ಎಂದು ದೇಶವನ್ನು ವಿಭಜಿಸುತ್ತಿದ್ದಾರೆ ಎಂದು ರಚ್ಚೆ ಹಿಡಿದಿದ್ದಿರಲ್ಲಾ, ನಮ್ಮ ದೇಶದ ಹೆಸರು, ಸರ್ಕಾರಿ ಫಲಕಗಳನ್ನು ನೋಡಿದ್ದೀರಾ? ನಿಮ್ಮ ಕುತರ್ಕ, ಪೊಳ್ಳುವಾದ ಅಂತ ಅನ್ನಿಸುವುದೇ ಇಲ್ಲವೇ?
ದ್ವಾರಕಾನಾಥ್ ಅಗ್ನಿ ಶ್ರೀಧರ ರ ಮಾತನ್ನು ಒಪ್ಪಿದರು. ಅಂದು ದೆಹಲಿಯಲ್ಲಿ ಆದ ಅತ್ಯಾಚಾರ ಒಂದು ಹೆಣ್ಣು ಮಗಳ ಮೇಲೆ. ಇಂದು ಇಂಥ ಹೇಳಿಕೆಗಳು ನೀಡುತ್ತಿರುವ ಮೋಹನ್ ಭಾಗವತ್ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದಾರೆ ಎಂದು ನೀಚರ ತರಹ ಮಾತನಾಡಿದಿರಲ್ಲಾ, ಅತ್ಯಾಚಾರಿಗಳಿಗೂ, ಭಾಗವತರಿಗೂ ವ್ಯತ್ಯಾಸವೇ ಇಲ್ಲ ಎಂದರಲ್ಲ, ಹಾಗಾದರೆ ಅಗ್ನಿ ಶ್ರೀಧರರು ತಮ್ಮ ಪೂರ್ವಾಶ್ರಮ(!!)ದಲ್ಲಿ ರೌಡಿ, ಡಾನ್. ಅಗ್ನಿ ಶ್ರೀಧರರನ್ನು ಅವರ ಹೇಳಿಕೆಯನ್ನು ಒಪ್ಪುವ ನೀವು, ನೀವೂ ರೌಡಿ, ಡಾನ್ ಮನಸ್ಥಿತಿಯವರು ಎಂದು ಪಾಮರರು ನಾವು ನಿರ್ಧರಿಸಬಹುದೇ? ಸಾಮಾನ್ಯವಾಗಿ ಯಾವುದೇ ಅರ್ ಎಸ್ ಎಸ್ ಭಾಷಣದಂತೆ ಮೋಹನ್ ಭಾಗವತ್ ರವರು ತಮ್ಮ ಭಾಷಣದಲ್ಲಿ, “ಮಾತಾ ಭಗಿನೀ” ಎಂದು ಸಂಬೋಧಿಸಿದ್ದು ನಿಮ್ಮ ಕೆಪ್ಪು ಕಿವಿಗಳಿಗೆ ಬೀಳಲಿ. ಆರ್ ಎಸ್ ಎಸ್, ಹೆಣ್ಣಿಗೆ ಎಷ್ಟು ಒಳ್ಳೆಯ ಸ್ಥಾನ ನೀಡಿದೆ, ಹೇಗೆ ತನ್ನ ಶಿಕ್ಷಣದಲ್ಲಿ ಹೆಣ್ಣಿನ ಬಗ್ಗೆ ಪೂಜ್ಯ ಭಾವನೆ ಮೂಡಿಸುತ್ತದೆ ಎಂಬುದನ್ನು ಮನನ ಮಾಡಿಕೊಳ್ಳಿರಿ. ಅದನ್ನೆಲ್ಲಾ ಬಿಟ್ಟು ಅಂಡೆ ಪಿರ್ಕಿಯ ತರಹ ಮಾತನಾಡುವುದು, ನಿಮಗೆ ಶೋಭಿಸಿದರೂ ಅದು ಸುಸಂಸ್ಕಾರವಲ್ಲ.
ಶ್ರೀಧರ್ ರವರೇ, ಆರ್ ಎಸ್ ಎಸ್ ಬಗ್ಗೆ ಮತ್ತೊಂದು ಗುರುತರ ಆರೋಪ ಮಾಡಿದ್ದರ ಬಗ್ಗೆ ನನ್ನ ಆಕ್ಷೇಪವಿದೆ. ಆರ್ ಎಸ್ ಎಸ್ Moral rapists ಗಳ ತರಹ ವರ್ತಿಸುತ್ತಿದ್ದಾರೆ ಹಾಗೂ ಅವರೂ ಇಂತಹ ಅಹಿತಕರ ಘಟನೆಯಲ್ಲಿ ಭಾಗಿ ಆಗಿರಲೂಬಹುದು ಎಂದು… ಸ್ವಲ್ಪ ಯೋಚಿಸಿ ವರ್ಷಗಳಿಂದಲೂ ಈ ಸಂಘ ಅಸ್ತಿತ್ವದಲ್ಲಿ ಇದ್ದು, ಇಂದಿಗೂ ಲಕ್ಷಗಟ್ಟಲೆ ಸ್ವಯಂಸೇವಕರು, ಹಿತೈಷಿ ಬಂಧುಗಳು ಇರಲು ಸಾಧ್ಯವಿತ್ತೇ? ನೀವು ಹೇಳಿದ ಹಾಗೆ ಆರ್ ಎಸ್ ಎಸ್ ಇದ್ದಿದ್ದರೆ ಇಷ್ಟು ಹೊತ್ತಿಗಾಗಲೇ ಸಂಘ ಕುಸಿದು ಹೋಗಿರುತ್ತಿತ್ತು. ಸಂಘದ ideologies, values ತಿಳಿಯದ ನಿಮ್ಮಂತಹ ಹಲವು immoral s unethical s ನಿಂದಾಗಿ ಅದಕ್ಕೆ ಕೆಟ್ಟ ಹೆಸರೇ ಹೊರತು ಸಂಘದವರು ಮಾಡುವ ಸಮಾಜಮುಖಿ ಕೆಲಸಗಳಿಂದಲ್ಲ!!
ಶ್ರೀಧರ, ನಿಮ್ಮನ್ನು ನೀವು ಚಿಂತಕರು, ಲೇಖಕರು, ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರು ಎಂದು ಹೇಳುತ್ತೀರ. ಪತ್ರಕರ್ತರು ಎಂದು “ಕೊಚ್ಚಿ”ಕೊಳ್ಳುತ್ತೀರ ಪತ್ರಿಕೋದ್ಯಮದ ಜವಾಬುದಾರಿ ಅರಿಯದೆ, ಸಂಕುಚಿತ ಮನಸ್ಸಿನ ನಿಮ್ಮ ವರ್ತನೆಗೆ ನನ್ನ ಧಿಕ್ಕಾರ. ಅದಿರಲಿ, ನಿಮ್ಮ “ಎದೆಗಾರಿಗೆ” ಕಾದಂಬರಿಯಲ್ಲಿ ಬರೆಯುತ್ತೀರಲ್ಲ ಸಾವನ್ನು ಎದುರಿಸುವ ಬಗ್ಗೆ, ಭಾಗವತರ ಭಾಷಣವನ್ನು ಪೂರ್ಣ ಕೇಳಿಸಿಕೊಳ್ಳಿ ಮೃತ್ಯುವನ್ನು ಎದುರಿಸುವುದರ ಬಗ್ಗೆ ಅವರು ಇನ್ನೂ ಚೆನ್ನಾಗಿ ಮಾತನಾಡಿದ್ದಾರೆ.

ಇಲೆಕ್ಟ್ರಾನಿಕ್ ಮೀಡಿಯಾದ ಸಂವೇದನೆಗಳು ಬದಲಾಗತೊಡಗಿವೆ

Leave a comment

….

ಕೆಲ ವರ್ಷಗಳ ಹಿಂದೆ ನಡೆದ ಘಟನೆ. ಓರಿಸ್ಸಾದ ಪೋಲಿಸ್ ಮಹಾನಿರ್ದೇಶಕನೊಬ್ಬ ನ್ಯಾಯ ಒದಗಿಸುವ ನಾಟವನ್ನಾಡಿ ಆದಿವಾಸಿ ಹುಡುಗಿಯೊಬ್ಬಳನ್ನು ತನ್ನ ತೆವಲಿಗೆ ಬಳಸಿಕೊಂಡಿದ್ದ. ಆಕೆಯನ್ನು ಮತ್ತೆ ಮತ್ತೆ ಬಳಸಿಕೊಂಡೂ, ಆಕೆಗೆ ಯಾವುದೇ ರೀತಿಯ ಸಹಾಯವನ್ನು ಮಾಡಲಿಲ್ಲ. ಕೊನೆಗೆ ರೋಸಿ ಹೋದ ಹುಡುಗಿ, ಸ್ಥಳೀಯ ಇಲೆಕ್ಟ್ರಾನಿಕ್ ಮಾಧ್ಯಮದ ಪತ್ರಕರ್ತನೊಬ್ಬನನ್ನು ಸಂಪರ್ಕಿಸಿದಳು. ಆ ಪತ್ರಕರ್ತ ಹುಡುಗಿಯೊಂದಿಗೆ ಉಪಾಯವಾಗಿ ಹಿಡನ್ ಕ್ಯಾಮೆರಾ ಕಳಿಸಿ ಡಿಜಿಯ ಕಾಮಕೇಳಿಯ ದೃಶ್ಯಗಳನ್ನು ಸೆರೆಹಿಡಿದ. ಆ ದೃಶ್ಯಗಳು ತೀರ ಹಸಿಹಸಿಯಾಗಿದ್ದವು. ಆ ವಿಶುವಲ್ಸ್ ಗಳನ್ನು ಹೆಡ್ ಆಫೀಸ್ ಗೆ ಕಳಿಸಲಾ ಎಂದು ಕೇಳಿದ್ದಕ್ಕೆ, ವಿಶುವಲ್ಸ್ ನ ತೀವ್ರತೆ ಅರಿಯದ ಹೆಡ್ ಆಫೀಸ್ ನವರು, ಕಳಿಸು, ಅಂದಿದ್ದಾರೆ. ಆದರೆ ಯಾವಾಗ ವಿಶುವಲ್ಸ್ ಗಳು ಎಲ್ಲರೂ ಆಕ್ಸೆಸ್ ಮಾಡಬಹುದಾದ ಫೋಲ್ಡರ್ ಗೆ ಬಂದು ಬಿತ್ತೊ, ಇಡೀ ಆಫೀಸಿನವರು ಆ ವಿಶುವಲ್ಸ್ ಗಳನ್ನು ಕದ್ದು ಮುಚ್ಚಿ ನೋಡತೊಡಗಿದ್ದಾರೆ. ತಕ್ಷಣ ಜಾಗೃತಗೊಂಡ ಐಟಿ ತಂಡ, ಆ ವಿಶುವಲ್ಸ್ ಗಳನ್ನು ಸೀಕ್ರೇಟ್ ಫೋಲ್ಡರ್ ಗೆ ಹಾಕಿ ನಿಟ್ಟುಸಿರು ಬಿಟ್ಟಿದೆ. ಆಫೀಸಿನಲ್ಲಿದ್ದ ಮಹಿಳಾ ಉದ್ಯೋಗಿಗಳಿಗೆ ಈ ಘಟನೆ ತೀರ ಮುಜುಗರ ತಂದಿದೆ.

ಕೆಲ ವರ್ಷಗಳ ಬಳಿಕ, ಅಂದರೆ ಇತ್ತಿತ್ತಲಾಗಿ, ಇದೇ ತರಹದ ಘಟನೆಯೊಂದು ಬಾಗಲಕೋಟೆಯಿಂದ ವರದಿಯಾಗಿದೆ. ಎಂದಿನಂತೆ ವಿಶುವಲ್ಸ್ ಗಳು ಹೆಡ್ ಆಫೀಸಿಗೆ ಬಂದಿವೆ. ವಿಶುವಲ್ಸ್ ಗಳು ಬಹಿರಂಗವಾಗಿ ನೋಡಲಾಗದ ಮಟ್ಟಿಗಿವೆ. ಆದರೆ ಆಫೀಸಿನಲ್ಲಿ ಎಲ್ಲರೂ ರಾಜಾರೋಷವಾಗಿ ಅವನ್ನು ನೋಡಿದ್ದಾರೆ.

ಈ ಎರಡೂ ಘಟನೆಗಳನ್ನು ಇಟ್ಟು ನೋಡಿದಾಗ, ಇವುಗಳ ವಿಶ್ಲೇಷಣೆ ಹೇಗೆ ಎಂಬ ಪ್ರಶ್ನೆ ಮೂಡುತ್ತದೆ. ಮಾಧ್ಯಮದ ಸಿಬ್ಬಂದಿ ಪ್ರಾಕ್ಟಿಕಲ್ ಆಗುತ್ತಿದ್ದಾರೆಯೆ ಅಥವಾ ಸಂವೇದನೆಯನ್ನು ಕಳೆದುಕೊಳ್ಳುತ್ತಿದ್ದಾರೆಯೆ? ನೀವೇನನ್ನುತ್ತೀರಿ?

ಆಕಾಶವಾಣಿ: ಸಂಪ್ರತಿ ವಾರ್ತಾಃ ಶ್ರೂಯಂತಾಂ…

Leave a comment

ಆಕಾಶವಾಣಿ...

ಆಕಾಶವಾಣಿ...

ಕೃಪೆ – ವಿಜಯ ಕರ್ನಾಟಕ.

ಕಾರ್ಲ್ಟನ್ ಟಾವರ್ ದುರಂತ; ಮಾಧ್ಯಮದವರ ಕಿರಿಕಿರಿ

Leave a comment

ಕೃಪೆ – ವಿಜಯ ಕರ್ನಾಟಕ

ಕೊನೆಗೂ ಅವನು ಬಾಡಿ ಸುಡೋದಕ್ಕೆ ಲಂಚ ತಗೊಂಡ ಸಾರ್

5 Comments

ಇಲೆಕ್ಟ್ರಾನಿಕ್ ಮೀಡಿಯಾದಲ್ಲಿ ಹಲವು ಬಾರಿ ಒಳ್ಳೆಯ ಕಾರ್ಯಕ್ರಮಗಳನ್ನ, ಜನರ ನಿಜವಾದ ಸಮಸ್ಯೆಗಳನ್ನ ಕವರ್ ಮಾಡಲು ಆಗುವುದೇ ಇಲ್ಲ. ಮುಖ್ಯ ಕಾರಣ – ಲಿಮಿಟೆಡ್ ರಿಪೋರ್ಟರ್ಸ್ ಹಾಗೂ ಲಿಮಿಟೆಡ್ ಕ್ಯಾಮರಾಗಳು. ಪ್ರತಿಯೊಂದನ್ನು ‘ತೋರಿಸಬೇಕಾದ’ ಅನಿವಾರ್ಯತೆ ಇರುವ ಇಲೆಕ್ಟ್ರಾನಿಕ್ ಮೀಡಿಯಾದಲ್ಲಿ ಕ್ಯಾಮೆರಾ ಇಲ್ಲದಿದ್ದರೆ, ಪಿಳಿಪಿಳಿ ಕಣ್ಣುಬಿಡುತ್ತ ಬೇರೆ ಅಸೈನ್ ಮೆಂಟ್ ಗೆ ಹೋದ ಕ್ಯಾಮೆರಾ ಕಾಯುತ್ತ ಕೂರಬೇಕಾಗುತ್ತದೆ. ಒಮ್ಮೊಮ್ಮೆ ತೀವ್ರ ಒತ್ತಡದಲ್ಲಿ ನಿಜವಾದ ಇಶ್ಯೂಗಳನ್ನು ಕವರ್ ಮಾಡಲಾಗುವುದಿಲ್ಲ.

ಅಂದು ಯಾವುದೋ ಈವೆಂಟ್ ಕವರ್ ಮಾಡುತ್ತಿದ್ದೆ. ಯಾವುದೋ ರಾಜಕಾರಣಿಯ ಕಾರ್ಯಕ್ರಮ. ಒಂದಾದ ಮೇಲೊಂದರಂತೆ ನನಗಂದು ಅಸೈನ್ ಮೆಂಟ್ ಗಳಿದ್ದವು. ವೀರಾವೇಶದಿಂದ ಹೋರಾಡುತ್ತ, ಕ್ಯಾಮೆರಾಮನ್ ನನ್ನು ಸುಸ್ತು ಹೊಡೆಸುತ್ತ, ಡ್ರೈವರ್ ನಿಗೆ ಫಾಸ್ಟ್ ಹೋಗುವಂತೆ ಒತ್ತಾಯಿಸುತ್ತ ಬೆಂಗಳೂರು ನಗರ ತುಂಬ ಸಂಚರಿಸುತ್ತಿದ್ದೆ. ಈ ಮಧ್ಯೆ ಮೊಬೈಲ್ ಕರೆಯೊಂದು ಬಂತು.

“ಸಾರ್, ನಮ್ಮ ಚಿಕ್ಕಮ್ಮ ಒಬ್ರು ತೀರ್ಕೊಂಡು ಬಿಟ್ಟಿದ್ದಾರೆ. ಈಗ ಬಾಡಿಯನ್ನು ಸ್ಮಶಾನಕ್ಕೆ ತಂದರೆ ಇಲ್ಲಿ, ವಿದ್ಯುತ್ ಚಿತಾಗಾರದಲ್ಲಿ ಸುಡಲು ಲಂಚ ಕೇಳುತ್ತಿದ್ದಾರೆ. ಕಾರ್ಪೋರೇಷನ್ ನವರು ಫಿಕ್ಸ್ ಮಾಡಿರೋವಷ್ಟು ದುಡ್ಡು ಕೊಡ್ತೀವಿ ಅಂದ್ರೆ, ಕೇಳ್ತಾ ಇಲ್ಲ. ನಾಲ್ಕೂವರೆ ಸಾವಿರ ರೂಪಾಯಿ ಕೇಳ್ತಾ ಇದಾರೆ ಸಾರ್. ನಾವು ಬಡವ್ರು. ಅಷ್ಟೋ ಕೋಡೋದಕ್ಕೆ ಆಗೋದಿಲ್ಲ. ನೀವು ಬಂದು ಸಹಾಯ ಮಾಡಿ ಸಾರ್” ಅಂದಿತು ಅತ್ತ ಕಡೆಯ ಧ್ವನಿ.

“ಓ ಹೌದಾ…”ಅಂದ ನಾನು 5W1H ಪ್ರಶ್ನೆಗಳನ್ನೆಲ್ಲ ಕೇಳಿ, “ನಿಮಗೆ ಒಂದೆರಡು ನಿಮಿಷದಲ್ಲಿ ನಮ್ಮ ಕ್ರೈಮ್ ರಿಪೋರ್ಟರ್ ನಿಂದ ಫೋನ್ ಮಾಡಿಸುತ್ತೇನೆ. ವೇಟ್ ಮಾಡಿ” ಎಂದು ಹೇಳಿ ಫೋನಿಟ್ಟೆ. ತಕ್ಷಣ ನಮ್ಮ ಕ್ರೈಮ್ ರಿಪೋರ್ಟರ್ ಗೆ ಫೋನ್ ಮಾಡಿದರೆ, ಆತ ಅದ್ಯಾವುದೋ ಅವಳಿ ಕೊಲೆಯೋ, ಜವಳಿ ಕೊಲೆಯೋ ಕವರ್ ಮಾಡುವುದರಲ್ಲಿ ಬಿಝಿಯಾಗಿದ್ದ. ಹೀಗಾಗಿ ಚೀಫ್ (ಈ ಘಟನೆ ನಡೆದಾಗ ಈ ಟಿವಿಯ ಬೆಂಗಳೂರು ಚೀಫ್ ಯಾರಿದ್ದರೆಂದು ನೆನಪಿಲ್ಲ) ಗೆ ಫೋನ್ ಮಾಡಿ ಸರ್ ಹಿಂಗಿಂಗೆ ಹಿಂಗಿಂಗೆ ಎಂದು ಹೇಳಿ, ಆ ವ್ಯಕ್ತಿಯ ನಂಬರ್ ಫಾರ್ವರ್ಡ್ ಮಾಡಿದೆ.

ಸುಮಾರು ಅರ್ಧಗಂಟೆ ಕಳೆದಿರಬೇಕು. ಮತ್ತೆ ಆ ವ್ಯಕ್ತಿಯ ಫೋನು. “ಸಾರ್ ಯಾರೂ ಕಾಲ್ ಮಾಡಿಲ್ಲ ಸಾರ್. ದಯವಿಟ್ಟು ನೀವೇ ಬಂದ್ಬಿಡಿ ಸಾರ್. ಇಲ್ಲಿ ಬಾಡಿ ಇಟ್ಕೊಂಡು ಕುತೀದಿವಿ ಸಾರ್. ಇಲ್ಲಿಯ ಸ್ಟಾಫ್ ಈಗ ರೋಪ್ ಹಾಕ್ತಾ ಇದಾರೆ. ಏನ್ ಪ್ರೆಸ್ನೋವ್ರನ್ನ ಕರೀತೀರಾ? ಕರೀರಿ ನೋಡೋಣ ಅಂತೆಲ್ಲ ಮಾತಾಡ್ತಾ ಇದಾರೆ ಸಾರ್. ನೀವೇ ಬಂದ್ಬಿಡಿ ಸಾರ್ ಪ್ಲೀಸ್” ಎಂದು ತುಂಬಾ ವಿನಂತಿಸಿತು ಧ್ವನಿ. ನನಗೋ ನನ್ನ ಅಸೈನ್ ಮೆಂಟ್ ಗಳ ಒತ್ತಡ. ಚೀಫ್ ಗೆ ಫೋನ್ ಮಾಡಿದರೆ, “ಎಲ್ಲರೂ ಬಿಝಿ, ಎಲ್ಲ ಕ್ಯಾಮರಾಗಳೂ ಬಿಝಿ” ಎಂಬ ರೆಡಿಮೇಡ್ ಉತ್ತರ. ನಾನೇ ಕಾಲ್ ಮಾಡುತ್ತೇನೆ ಎಂದು ಆ ವ್ಯಕ್ತಿಗೆ ಹೇಳಿದ್ದರೂ, ಮತ್ತೆ ಕಾಲ್ ಮಾಡಲಾಗಲಿಲ್ಲ.

ಸುಮಾರು ಎರಡು ಗಂಟೆ ಬಳಿಕ ಮತ್ತೆ ಕಾಲ್. ಮತ್ತೇ ಅದೇ ರಿಕ್ವೆಸ್ಟ್. ನಾನು ನಾಲ್ಕೈದು ಅಸೈನ್ ಮೆಂಟ್ ಗಳನ್ನು ಕವರ್ ಮಾಡಿ ಅವುಗಳನ್ನು ಫೈಲ್ ಮಾಡುವ ತರಾತುರಿಯಲ್ಲಿದ್ದೆ. ನಾನು ಮತ್ತೆ ಪ್ರಯತ್ನಿಸುತ್ತೇನೆ ಅಂತ ಹೇಳಿ ಫೋನಿಟ್ಟೆ.

ಸುಮಾರು ಹೊತ್ತು ಕಳೆದರೂ ಫೋನ್ ಬರಲಿಲ್ಲ. ವಿಷಯ ಸಾಲ್ವ್ ಆಗಿರಬೇಕು ಎಂದುಕೊಂಡು ಸುಮ್ಮನಾದೆ. ಸಂಜೆಯ ವೇಳೆಗೆ ಮತ್ತೆ ಆ ವ್ಯಕ್ತಿಯ ಫೋನ್ ಬಂತು. “ಸಾರ್ ಒಳ್ಳೆ ಮರ್ಯಾದೆ ಮಾಡಿದ್ರಲ್ಲಾ ಸಾರ್ ನಮಗೆ. ಬರ್ತಿವಿ ಬರ್ತಿವಿ ಅಂತ ಬರ್ಲೇ ಇಲ್ವಲ್ಲ ಸಾರ್. ಕೊನೆಗೂ ಅವನು ಬಾಡಿ ಸುಡೋದಕ್ಕೆ ಲಂಚ ತಗೊಂಡ ಸಾರ್. ಬೇರೆ ಯಾರಿಗೂ ಹೀಗೆ ಮಾಡ್ಬೇಡಿ ಸಾರ್” ಎಂದು ಫೋನಿಟ್ಟ.

ನನಗೆ ನನ್ನ ಬಗ್ಗೆಯೇ ಸಿಟ್ಟು ಬಂದಿತ್ತು;ಮಾಧ್ಯಮವೆಂಬ ಆಯುಧ ನನ್ನ ಕೈಯಲ್ಲಿದ್ದರೂ ಅಸಹಾಯಕನಾಗಿದ್ದಕ್ಕೆ…..

ಅದನ್ನು ಪುಸ್ತಕ ಬಿಡುಗಡೆ ಕಾರ್ಯಕ್ರಮ ಎನ್ನವುದಕ್ಕಿಂತ….

Leave a comment

ಅದನ್ನು ಪುಸ್ತಕ ಬಿಡುಗಡೆ ಕಾರ್ಯಕ್ರಮ ಎನ್ನವುದಕ್ಕಿಂತ ಪತ್ರಕರ್ತರು ಹಾಗೂ ರಾಜಕಾರಣಿಗಳ ಆತ್ಮಾವಲೋಕನ ಕಾರ್ಯಕ್ರಮ ಎಂದರೆ ಹೆಚ್ಚು ಸೂಕ್ತವಾದೀತು. ‘ವಿಜಯ ಕರ್ನಾಟಕ’ದ ಚೀಫ್ ರಿಪೋರ್ಟರ್ ಪಿ. ತ್ಯಾಗರಾಜ್ ಅವರ ಮೂರು ಪುಸ್ತಕಗಳು ಒಳಸುಳಿ, ದಂಡಪಿಂಡಗಳು ಹಾಗೂ ಚಾಟಿಚಟಾಕಿ ನಿನ್ನೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಬಿಡುಗಡೆಗೊಂಡವು. ಪುಸ್ತಕಗಳನ್ನ ಬಿಡುಗಡೆ ಮಾಡಿದವರು, ರಾಜಕೀಯದಲ್ಲಿದ್ದೂ ಇನ್ನೂ ಮಾನ-ಮರ್ಯಾದೆ ಇಟ್ಟುಕೊಂಡಿರುವ ಕಾಂಗ್ರೆಸ್ ನ ಸಿದ್ದರಾಮಯ್ಯ, ಬಿಜೆಪಿಯ ಸುರೇಶ್ ಕುಮಾರ್ ಹಾಗೂ ಜೆಡಿಎಸ್ ನ ನಾಣಯ್ಯ. ಕವಿವರ್ಯ ಸಿದ್ದಲಿಂಗಯ್ಯ ಮಾತನಾಡಿದ ಬಳಿಕ ಅಖಾಡಾಕ್ಕೆ ಇಳಿದ್ದದು ವಿಕ ಸಂಪಾದಕ ವಿಶ್ವೇಶ್ವರ ಭಟ್.

ಸದಾ ನಗುಮೊಗದ, ಸುತ್ತಲಿದ್ದವರನ್ನು ನಕ್ಕುನಗಿಸುವ, ತಮ್ಮ ಮಾತಿನಲ್ಲಿ ಜ್ಞಾನಸುಧೆಯನ್ನೇ ಹರಿಸುವ ವಿಶ್ವೇಶ್ವರ್ ಭಟ್ ಮಾತ್ರ ನಿನ್ನೆ ಮಾಡಿದ ಭಾಷಣದಲ್ಲಿ ಭ್ರಷ್ಟ ರಾಜಕಾರಣಿಗಳ ಹಚಡಾ ತೆಗೆದಿಟ್ಟರು. ಕಳೆದ ಐದು ವರ್ಷಗಳ ರಾಜಕಾರಣ – ಧರ್ಮಸಿಂಗ್-ಸಿದ್ದು ಕಾಂಬಿನೇಷನ್ ಸರ್ಕಾರ – ದಿಂದ ಆರಂಭಿಸಿ ಪ್ರಸಕ್ತ ಬಿಜೆಪಿ ಸರ್ಕಾರದಲ್ಲಿ ನಡೆಯುತ್ತಿರುವ ರಾಜಕೀಯ ಹಾದರವನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ಚುನಾವಣೆಯಲ್ಲಿ ಕುಡಗೋಲು ತೆಗೆದುಕೊಂಡು, ಕೋಟಿಗಟ್ಟಲೆ ಸುರಿದು ಹೊಡೆದಾಡಿ, ಚುನಾವಣೆ ಬಳಿಕ ಅಧಿಕಾರಕ್ಕಾಗಿ ಒಂದಾದ ಕಾಂಗ್ರೆಸ್-ಜೆಡಿಎಸ್, ನಂತರ ಬಿಜೆಪಿ-ಜೆಡಿಎಸ್, ಸಂಪಂಗಿ ಪ್ರಹಸನ, ಅರ್ಧ ಕರ್ನಾಟಕ ಅತಿವೃಷ್ಟಿಯಿಂದಾಗಿ ನೀರಿನಲ್ಲಿ ಮುಳುಗಿದ್ದರೆ ಕುರ್ಚಿಗಾಗಿ ರೆಸಾರ್ಟ್ ಗಳಲ್ಲಿ ಈಜುಹೊಡೆಯುತ್ತಿದ್ದ ಶಾಸಕರು, ಬಿಜೆಪಿಯ ನೀತಿಗೆಟ್ಟ ಆಪರೇಷನ್ ಕಮಲ, ರೇಣುಕಾ ಮಹಾತ್ಮೆ ಎಲ್ಲವನ್ನೂ ಭಟ್ ವಿವರಿಸಿದರು. ಇಷ್ಟೆಲ್ಲ ಮಾಡಲು ಈ ರಾಜಕಾರಣಿಗಳಿಗೆ ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿದಾಗ ರವೀಂದ್ರ ಕಲಾಕ್ಷೇತ್ರದಲ್ಲಿ ಫುಲ್ ಕರತಾಡನ.

“ರಾಜ್ಯವೆಂದರೆ ಮನೆಯಿದ್ದಂತೆ. ಕುರ್ಚಿ ಉಳಿಸಿಕೊಳ್ಳಲು ಮುಖ್ಯಮಂತ್ರಿ ಯಡಿಯೂರಪ್ಪ ಅಯೋಗ್ಯರನ್ನು ಮಂತ್ರಿ ಮಾಡುತ್ತಿದ್ದಾರಲ್ಲ…ಮನೆ ನಡೆಸಬೇಕೆಂದು ನಾವು ಮನೆಮಗಳನ್ನು ಹಾದರಕ್ಕೆ ಕಳಿಸುತ್ತೇವೆಯೆ?” ಎಂದು ಭಟ್ ಕೇಳಿದಾಗ ಪ್ರೇಕ್ಷಕರಿಂದ ಸಂಪೂರ್ಣ ಸಪೋರ್ಟ್. ‘ರೇಣುಕಾ ಮಹಾತ್ಮೆ’ಯನ್ನು ಟೀಕಿಸಲಾರಂಭಿಸಿದ್ದ ಕಾಂಗ್ರೆಸ್, ಎನ್ ಡಿ ತಿವಾರಿ ಪ್ರಕರಣ ಹೊರಬಂದ ಕೂಡಲೇ ಬಾಲ ಮುದುರಿಕೊಂಡದ್ದು, ಸುಭಾಷ್ ಭರಣಿ ಸಾಹೇಬರು ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಒಂದೇ ದಿನ ಮೂರು ಪಾರ್ಟಿಗಳನ್ನು ಬದಲಿಸಿದ್ದು, ನಿನ್ನೆ ಕಾಂಗ್ರೆಸ್-ಜೆಡಿಎಸ್ ನಲ್ಲಿದ್ದು ಮುಖ್ಯಮಂತ್ರಿ ಯಡಿಯೂರಪ್ಪ ನಾಲಾಯಕ್ ಎಂದು ಬಣ್ಣಿಸುತ್ತಿದ್ದವರು, ಇಂದು ಅದೇ ಯಡಿಯೂರಪ್ಪ ಮಂತ್ರಿಮಂಡಲದಲ್ಲಿ ರಾತ್ರೋರಾತ್ರಿ ಮಂತ್ರಿಗಳಾಗಿ ಮೆರೆದಿದ್ದು – ಹೀಗೆ ಪ್ರತಿಯೊಂದನ್ನು ಕೆದಕುತ್ತ ಹೋದಾಗ ಸುರೇಶ್ ಕುಮಾರ್, ಸಿದ್ದರಾಮಯ್ಯ, ನಾಣಯ್ಯ ‘ಮೌನವೇ ನಮ ತಾಯಿ-ತಂದೆ, ಮೌನವೇ ನಮ ಬಂಧು ಬಳಗ’ ಎಂಬಂತೆ ಕುಳಿತಿದ್ದರು.

ಭಟ್ಟರ ನಂತರ ಬ್ಯಾಟಿಂಗ್ ಗೆ ಇಳಿದದ್ದು ನಾಣಯ್ಯ. ವಿಶ್ವೇಶ್ವರ್ ಭಟ್, ನಾಣಯ್ಯನವರನ್ನು ಬಣ್ಣಿಸಿದ್ದು ಪ್ರಸ್ತುತ ರಾಜಕಾರಣದ ಸಾಕ್ಷಿಪ್ರಜ್ಞೆ ಎಂದು. ಅದು ನಿಜವೂ ಹೌದು. ನಾಣಯ್ಯ ಮಾತನಾಡುತ್ತ ತಾವು ಮುಂದಿನ ಬಾರಿ ಚುನಾವಣೆ ಎದುರಿಸುವುದಿಲ್ಲ. ಕಾರಣ ತಮ್ಮ ಬಳಿ ದುಡ್ಡಿಲ್ಲ. ಅಸೆಂಬ್ಲಿ ಚುನಾವಣೆ ಎದುರಿಸಲು ಕನಿಷ್ಠ 10 ಕೋಟಿ ಬೇಕು. ನಾನೆಲ್ಲಿಂದ ತರಲಿ ಎಂದು ಪ್ರಶ್ನಿಸಿದರು. ರಾಜಕಾರಣಿಗಳಷ್ಟೇ ಅಲ್ಲ ಪತ್ರಕರ್ತರೇನೂ ಸಾಚಾಗಳಾಗಿ ಉಳಿದಿಲ್ಲ. ಅವರಲ್ಲಿ ಕೂಡ ಪ್ರಾಮಾಣಿಕತೆ ಮತ್ತು ನಿಷ್ಠುರತೆ ಕಡಿಮೆಯಾಗುತ್ತಿದೆ. “ರಾಜಕಾರಣಿಗಳಿಂದ ಸೈಟ್ ಗಿಟ್ಟಿಸಿಕೊಂಡರೆ ಟೀಕೆ ಮಾಡುವುದು ಹೇಗೆ?” ಎಂದಾಗ, ವಿಶ್ವೇಶ್ವರ್ ಭಟ್, ವಿಕದ ಯಾವುದೇ ಪತ್ರಕರ್ತ ಸೈಟ್ ಪಡೆದಿಲ್ಲ ಎಂದು ಜವಾಬು ನೀಡಿದರು. ಅಪವಾದಗಳಿದ್ದೇ ಇರುತ್ತವೆ ಎಂದ ನಾಣಯ್ಯ, “ರಾಜಕಾರಣಿಗಳನ್ನು ಆರಿಸುವುದು ಜನರೇ. ಜನರೇ ಆರಿಸಿ, ಇದೀಗ ನೀವು ಭ್ರಷ್ಟರು ಎಂದರೆ ಹೇಗೆ? ಹೀಗಾಗಿ ಚುನಾವಣೆಯಲ್ಲಿ ಸರಿಯಾದವರನ್ನು ಆರಿಸಿ” ಎಂದು ಮನವಿ ಮಾಡಿಕೊಂಡರು.

ನಂತರ ಮಾತನಾಡಿದ್ದು ಸುರೇಶ್ ಕುಮಾರ್. ವಿಶ್ವೇಶ್ವರ್ ಭಟ್, ಸುರೇಶ್ ಕುಮಾರರನ್ನು ಬಣ್ಣಿಸಿದ್ದು ಲಿಟರೇಟ್ ರಾಜಕಾರಣಿ ಎಂದು. ಅದೂ ಕೂಡ ನಿಜ. ಸುರೇಶ್ ಕುಮಾರ್ ಮೊದಲ ಚುನಾವಣೆ ಎದುರಿಸಿದ್ದು 1983 ರಲ್ಲಿ ಅಂತೆ. ಆಗ ಅವರಿಗೆ ಖರ್ಚಾಗಿದ್ದು 2400 ರೂಪಾಯಿ. ಅದನ್ನು ಕೂಡ ನೀಡಿದ್ದು ಅವರ ಮಿತ್ರರು. “ಮುಂದಿನ ಚುನಾವಣೆ ನಾನೂ ಎದುರಿಸುವುದಿಲ್ಲ. ಏಕೆಂದರೆ ಅದಕ್ಕೆ ಬೇಕಾದಷ್ಟು ಹಣ ನನ್ನ ಬಳಿಯೂ ಇಲ್ಲ” ಎಂದು ಅಲವತ್ತುಕೊಂಡದ್ದು ಸಾತ್ವಿಕ ಸುರೇಶ್ ಕುಮಾರ್. ಅವರು ಕೂಡ ರಾಜಕಾರಣದ ಹಲವು ಮೂವ್ ಮೆಂಟ್ ಗಳನ್ನು ಹೇಳಿದರೂ, ತಮಗೆ ಎಲ್ಲ ಮಾತನಾಡಲು ಸ್ವಾತಂತ್ರ್ಯವಿಲ್ಲ. ಹೀಗಾಗಿ ಎಲ್ಲ ಮಾತನಾಡಲು ಬಯಸಿದರೂ, ಎಲ್ಲ ಮಾತನಾಡಲಾಗುವುದಿಲ್ಲ ಎಂದರು.

ಎಂದಿನಂತೆ ಸಿದ್ದರಾಮಯ್ಯ ಮಾತನಾಡಿದ್ದು ಮನಬಿಚ್ಚಿ. ಮಧ್ಯೆ ಮಧ್ಯೆ ಹಾಸ್ಯ ಚಟಾಕಿಯನ್ನು ಹಾರಿಸುತ್ತ, ಪತ್ರಕರ್ತರನ್ನೂ ಪೇಚಿಗೆ ಸಿಲುಕಿಸುತ್ತ, ತಾವು ಸಂಪೂರ್ಣವಾಗಿ ಕೈ, ಬಾಯಿ ಕೆಡಿಸಿಕೊಳ್ಳದೇ ಇರುವುದಕ್ಕೆ ತಾವೇ ಸಮಾಧಾನಪಡುತ್ತ, ಜಾತೀಯತೆ ಎಂಬುದು ಹೇಗೆ ಅನಕ್ಷರಸ್ಥರಿಗಿಂತ ಅಕ್ಷರಸ್ಥರಲ್ಲಿ ವ್ಯಾಪಕವಾಗಿದೆ, ಸೋ ಕಾಲ್ಡ್ ಮೇಲ್ಜಾತಿಯವರ ಮುಂದೆ ಸಿಗರೇಟು ಸೇದಿದಕ್ಕೆ, ಮೇಲ್ಜಾತಿಯವರು ನಿಮಗೆ ಮತ ನೀಡುವುದಿಲ್ಲ ಎಂದು ಮುಖಕ್ಕೆ ಹೊಡೆದ ಹಾಗೆ ಹೇಳಿದ್ದನ್ನ ಜ್ಞಾಪಿಸಿಕೊಳ್ಳುತ್ತ, 15 ರಿಂದ 20 ಶೇಕಡಾ ಮತದಾನವಾಗುವ ಬೆಂಗಳೂರಿನ ಎಕ್ಸಟೆನ್ ಶನ್ ಏರಿಯಾಗಳ ಜನರ ಬಗ್ಗೆ ಆಕ್ರೋಶಪಡುತ್ತಾ, ವಿಕ ದ ಪತ್ರಕರ್ತರು ಸೈಟ್ ಪಡೆದಿಲ್ಲವಾದರೆ ಏನಾಯ್ತು, ಇತರರು ಪಡೆದಿದ್ದಾರಲ್ಲ ಎಂದು ಕೇಳಿ ಭಟ್ಟರನ್ನು ನೋಡುತ್ತ, ಹಳ್ಳಿಗಳಲ್ಲಿ ತಮ್ಮ ಕುರಿಯನ್ನೋ ಕೋಳಿಯನ್ನೋ ಯಾರೋ ಕದ್ದುಕೊಂಡು ಹೋದಾಗ ಮಹಿಳೆಯರು ಮನೆಯ ಮುಂದೆ ಕುಳಿತು ಅವನ್ ಬಾಯ್ ಸೀದ್ ಹೋಗಾ, ಅವನ ಮಕ್ಕ್ಳು ಸಾಯಾ, ಎಂದು ಶಾಪಹಾಕುವಂತೆ, ಅದೇ ಭಾಷೆಯನ್ನು ಇಂದಿನ ರಾಜಕಾರಣಿಗಳು ಬಳಸುತ್ತಿರುವುದರ ಬಗ್ಗೆ ಬೇಸರಿಸುತ್ತ, ಅತ್ಯುತ್ತಮ ಅನ್ನಬಹುದಾದ ಭಾಷಣ ಮಾಡಿದರು ಸಿದ್ದು.

ಕೊನೆ ಡವಡvk…

ಅಂದ ಹಾಗೆ ಇಡೀ ಕಾರ್ಯಕ್ರಮದಲ್ಲಿ ಯಾರೊಬ್ಬರ ಬಾಯಿಂದಲೂ ಎರಡು ಶಬ್ದಗಳು ಮಾತ್ರ ಬರಲೇ ಇಲ್ಲ. ಅವು ‘ಗಣಿ’ ಮತ್ತು ‘ರೆಡ್ಡಿ’.

ಸರ್ವಂ ಶ್ರೀ ವಾಸುದೇವಾರ್ಪಣಮಸ್ತು….

ಇಂದಿನ ವಿದ್ಯಾರ್ಥಿಗಳೇ, ಇಂದಿನ ಜರ್ನಲಿಸ್ಟ್ ಗಳು…

Leave a comment

ಬೆಂಗಳೂರು ವಿಶ್ವವಿದ್ಯಾನಿಲಯದ ಇಲೆಕ್ಟ್ರಾನಿಕ್ ಮೀಡಿಯಾ ವಿಭಾಗದ ವಿದ್ಯಾರ್ಥಿಗಳನ್ನುದ್ದೇಶಿ ಇಂದು ಮಾತನಾಡಿದೆ. ಒಂದು ತಾಸು ಎಂದು ನಿಗದಿಯಾಗಿದ್ದ ಸಂವಾದ ಮೂರು ಗಂಟೆಯವರೆಗೆ ನಡೆಯಿತು. ಸಂವಾದದ ಕೆಲ ಕ್ಷಣಗಳು ಇಲ್ಲಿವೆ.

1

2

3

4

5

6

7

9

10

ಮಾಧ್ಯಮ ಪರಿಸ್ಥಿತಿ ಹೇಗಿದೆ? ಮತ ಚಲಾಯಿಸಿ…

Leave a comment

ರಾಜ್ಯದಲ್ಲಿ ಮಾಧ್ಯಮಗಳ ಪರಿಸ್ಥಿತಿ ಹೇಗಿದೆ ಎಂಬ ಬಗ್ಗೆ ಪೋಲ್ ಆರಂಭಿಸಿದ್ದೇನೆ. ನೀವೂ ವೋಟ್ ಮಾಡಿ…

ಆ ದಿನಗಳು ಭಾಗ – 2

Leave a comment

vijay times

ಪತ್ರಿಕೋದ್ಯಮವೆಂಬ ಪತ್ರಿಕೋದ್ಯಮದ ಪಿತ್ತ ನೆತ್ತಿಯಲ್ಲಿನ ಬ್ರಹ್ಮರಂಧ್ರದಲ್ಲಿ ಭವ್ಯ ಬಂಗಲೆ ಕಟ್ಟಿಕೊಂಡಿದ್ದ ಸಮಯ. ಭಾರತ ಮಾತೆಯ ಸ್ವಾತಂತ್ರ್ಯಕ್ಕಾಗಿ ಕ್ರಾಂತಿಕಾರಿಗಳಲ್ಲಿರುತ್ತಿದ್ದ ಉತ್ಸಾಹಕ್ಕಿಂತ ಗುಲಗುಂಜಿಯಷ್ಟು ಕಮ್ಮಿ ಉತ್ಸಾಹದೊಂದಿಗೆ ಅಸೈನ್ ಮೆಂಟ್ ಗಳಿಗೆ ಹೋಗುತ್ತಿದ್ದೆ.

ಕೆಪಿಟಿಸಿಎಲ್ ನ ಕಾರ್ಯಕ್ರಮ. ವಿದ್ಯುತ್ ಉತ್ಪಾದನಾ ಘಟಕವೊಂದನ್ನು ಅಂದಿನ ಹೈಟೆಕ್ ಮುಖ್ಯಮಂತ್ರಿ ಎಸ್. ಎಂ. ಕಿಷ್ನ ದೂರದರ್ಶನದಲ್ಲಿದ್ದ ಅಡಿಟೋರಿಯಂನಿಂದ ರೀಮೋಟ್ ಕಂಟ್ರೋಲ್ ಮೂಲಕ ಉದ್ಘಾಟನೆ ಮಾಡುವವರಿದ್ದರು. ನಮ್ಮೂರಿನ ಪಂಚಾಯತಿ ಮೆಂಬರನ್ನೂ ಸರಿಯಾಗಿ ನೋಡಿರದಿದ್ದ ನಾನು ಮುಖ್ಯಮಂತ್ರಿಗಳ ಕಾರ್ಯಕ್ರಮವನ್ನು ಕವರ್ ಮಾಡಲು ಹೊರಟಿದ್ದೆನಾದ್ದರಿಂದ ಭಯ, ಭಕ್ತಿ, ಉತ್ಸಾಹಗಳೆಲ್ಲ ಯದ್ವಾ ತದ್ವಾ ತುಂಬಿಕೊಂಡಿದ್ದವು. ಕಾರ್ಯಕ್ರಮಕ್ಕೆ ಸಾಕಷ್ಟು ಮೊದಲೇ ಹೋಗಿ ಪತ್ರಕರ್ತರ ನಡುವೆ ಆಸೀನನಾದೆ. ಕೆಲವೇ ಹೊತ್ತಿನಲ್ಲಿ ಮುಖ್ಯಮಂತ್ರಿ ಕಿಷ್ನ ಗಂಭೀರವಾಗಿ ಮುಗುಳ್ನಗುತ್ತ ಆಗಮಿಸಿ ಬಟನ್ ಒತ್ತಿ  ವಿದ್ಯುತ್ ಉತ್ಪಾದನಾ ಘಟಕವನ್ನು ಉದ್ಘಾಟಿಸಿದರು. ಉದ್ಘಾಟನೆ ಮುಗಿದ ತಕ್ಷಣ ಪತ್ರಕರ್ತರು ಪ್ರಶ್ನೆ ಕೇಳಲು ಆರಂಭಿಸಿದರು. ಆಗ ಕೆಪಿಟಿಸಿಎಲ್ ಅಧಿಕಾರಿಗಳು ಪತ್ರಿಕಾಗೋಷ್ಠಿಗೆ ಮತ್ತೊಂದು ರೂಮಿನಲ್ಲಿ ವ್ಯವಸ್ಥೆ ಮಾಡಿರುವುದಾಗಿ ಹೇಳಿ,  ನಮ್ಮನ್ನು ಕರೆದುಕೊಂಡು ಹೋಗಲು ಅನುವಾದರು. ಇದಕ್ಕಾಗಿಯೇ ಕಾಯುತ್ತಿದ್ದ ಪತ್ರಕರ್ತರು ನೀಹಿಂದು ನಾಮುಂದು ಎಂದು ಭಯಂಕರ ಸ್ಪೀಡಿನೊಡನೆ ರೂಮಿನತ್ತ ಓಡಲು ಆರಂಭಿಸಿದರು. ಇವರೇಕೆ ಹೀಗೆ ಓಡುತ್ತಿದ್ದಾರೆ ಎಂದು ಮೊದಲಿಗೆ ಅರ್ಥವಾಗಲಿಲ್ಲ. ಎಲ್ಲರೂ ಹೋಗುವ ಗಡಿಬಿಡಿಯಲ್ಲಿ ಎಸ್ಎಂಕೆ ನನ್ನ ಸಮೀಪವೇ ಇದ್ದುದರಿಂದ ತೀವ್ರ ಪುಳಕಿತನಾಗಿ ಅವೊರೊಂದಿಗೆ ನಿಧಾನವಾಗಿಯೇ ರೂಮ್ ಪ್ರವೇಶಿಸಿದೆ. ನೋಡಿದರೆ ಏನಿದೆ ಅಲ್ಲಿ….ಇರೋ ಬರೋ ಕುರ್ಚಿ, ಟೇಬಲ್, ಸ್ಟೂಲ್ ಹೀಗೆ ಪತ್ರಕರ್ತರು ಪ್ರಷ್ಠವಿಡಬಹುದಾದಂತಹ ಜಾಗಗಳನ್ನೆಲ್ಲ ಆಕ್ರಮಿಸಿಕೊಂಡಿದ್ದಾರೆ. ಕೊನೆಗೆ ಹೇಗೋ ಮಾಡಿ ಚೂರು ಜಾಗ ಸಂಪಾದಿಸಿಕೊಂಡು ಕುಳಿತುಕೊಂಡೆ.

ಪತ್ರಕರ್ತರ ಪ್ರಶ್ನೆಗಳು ಆರಂಭವಾದವು. ಎಂದಿನಂತೆ ವಿದ್ಯುತ್ ಕಾರ್ಯಕ್ರಮದಲ್ಲಿ ಅತೀ ಹೆಚ್ಚು ಹಾಗೂ ಅತೀ ಮೌಲ್ಯಯುತ ಪ್ರಶ್ನೆಗಳನ್ನು ಕೇಳಿದ್ದು ವಿಜಯ ಕರ್ನಾಟಕದ ಶ್ರೀಶ ಸರ್. ಪತ್ರಕರ್ತರು ಪ್ರಶ್ನೆ ಕೇಳಿದ್ದು, ಸಿಎಂ ಕಿಷ್ನ ಉತ್ತರಿಸಿದ್ದು ನನಗೆ ಸಾಧಾರಣ ಅರ್ಥವಾಗಿತ್ತು. ಆದರೆ ಮೆಗಾವ್ಯಾಟ್, ಲೋಡ್ ಶೆಡ್ಡಿಂಗ್, ಎಮ್ಓಯು, ಟ್ರಾನ್ಸಮಿಶನ್ ಲಾಸ್ ಎಂದೆಲ್ಲ ಮಾತನಾಡಿದ್ದು ಸೀದಾ ಬೌನ್ಸ್ ಹೊಡೆದಿತ್ತು.

ಕೊಂಚ ಆತಂಕದಿಂದಲೇ ಆಫೀಸಿಗೆ ಬಂದು ಸ್ಟೋರಿ ಫೈಲ್ ಮಾಡಲು ಕುಳಿತೆ. ನಾನು ಬರೆದುಕೊಂಡಿದ್ದ ನೋಟ್ಸ್ ಗಳನ್ನೆಲ್ಲ ಕಷ್ಟಪಟ್ಟು ಒಂಚೂರು ಬಿಡದೇ ಕಂಪ್ಯೂಟರ್ ಗೆ ತುಂಬಿಸಿದೆ. ಆದರೆ ಫೈಲ್ ಮಾಡಿದ ಸ್ಟೋರಿ ಬಗ್ಗೆ ಕಾನ್ಫಿಡನ್ಸೇ ಇರಲಿಲ್ಲ. ಬರೆದ ಪ್ರತಿ ಸೆಂಟೆನ್ಸೂ ಕೂಡ,” ನಾನು ಹೇಳುತ್ತಿರುವ ಮಾಹಿತಿ ಸರಿಯಾಗಿದೆಯಾ?” ಎಂದು ನನ್ನನ್ನು ಪ್ರಶ್ನಿಸತೊಡಗಿದಂತೆ ಭಾಸವಾಯಿತು. ಅವಿಶ್ವಾಸ ಏರುತ್ತ ಹೋಯಿತು. ಕೊನೆಕೊನೆಗೆ ಎಸ್ ಎಂ ಕೃಷ್ಣ ಸರಿಯೋ ಅಥವಾ ಎಂ ಎಸ್. ಕೃಷ್ಣ ಸರಿಯೋ ಎಂಬಂತಹ ಗೊಂದಲ ಆರಂಭವಾಯಿತು. ಯಾರಾದರೂ ನನ್ನನ್ನು ಈ ಪರಿಸ್ಥಿತಿಯಿಂದ ಪಾರಾಮಾಡಬಾರದೆ ಎನಿಸಿತು. ದೇವರಿಗೆ ಮೊರೆಯಿಟ್ಟೆ. ಮೊರೆ ಕೇಳಿಸಿತು ಅಂತ ಕಾಣುತ್ತದೆ.

ಸುದ್ದಿಯನ್ನು ಚೀಫ್ ಗೆ ನೀಡಬೇಕು ಎನ್ನುವಷ್ಟರಲ್ಲಿ ಆಫೀಸ್ ಬಾಯ್ ಬಿಳಿಹಾಳೆಯ ಮೇಲೆ ಮುದ್ದಾಗಿ ಟೈಪ್ ಮಾಡಿದ್ದ ಕನ್ನಡ ಅಕ್ಷರಗಳನ್ನು ನನ್ನ ಪಕ್ಕದ ಕುರ್ಚಿಯ ಮೇಲೆ ಕುಳಿತಿದ್ದ ನನಗಿಂತ ಹಿರಿಯ ವರದಿಗಾರರಿಗೆ ನೀಡಿ, “ಸಾರ್… ಟ್ರಾನ್ಸಲೆಷನ್ ಅಂತೆ. ವಿಟಿಗೂ ಇಂಪಾರ್ಟಂಟ್ ಸ್ಟೋರಿ ಅಂತ ಹೇಳಿದ್ದಾರೆ” ಅಂದ. ಆ ಹಿರಿಯ ವರದಿಗಾರರು ಹಾಗೂ ನಾನು ಸೇರಿಕೊಂಡು ಅದನ್ನು ಇಂಗ್ಲೀಷಿಗೆ ಟ್ರಾನ್ಸಲೇಟ್ ಮಾಡಿದೆವು. ಎಸ್. ಎಂ. ಕಿಷ್ನ ಕಾರ್ಯಕ್ರಮದ ವರದಿಯನ್ನು ವಿಕ ಗೆ ಬರೆದಿದ್ದ ಶ್ರೀಶ ಸರ್,  ಅದನ್ನು ವಿಟಿಗೂ ಕಳಿಸಿಕೊಟ್ಟಿದ್ದ ಪ್ರತಿ ಅದಾಗಿತ್ತು.

ಆ ದಿನಗಳು

4 Comments

145

ಅಂದಿಗೂ ಇಂದಿಗೂ ಬಹುಶಃ ಎಂದಿಗೂ, ಕನ್ನಡ ಚಾನೆಲ್ ಗಳಲ್ಲಿ ನುಗ್ಗಲು ‘ಈ ಟಿವಿ’ ಲಾಂಚ್ ಪ್ಯಾಡ್ ಆಗಿರುವಂತೆ ಪ್ರಿಂಟ್ ಮೀಡಿಯಾದಲ್ಲಿ ನುಗ್ಗಲು ವಿಜಯ ಟೈಮ್ಸ್ ಅದ್ಭುತ ವೇದಿಕೆ ಒದಗಿಸಿಕೊಡುತ್ತಿದ್ದ ಸಂದರ್ಭ. ವಿಜಯ ಟೈಮ್ಸ್ ನಲ್ಲಿ ಪ್ರಕಟಿತ ಪ್ರತಿ ಪದಕ್ಕೆ ಎಂಟಾಣೆ ಲೆಕ್ಕದಲ್ಲಿ ಸ್ಟ್ರಿಂಗರ್ ಆಗಿ ಸೇರಿದ್ದೆ. (ಪ್ರತಿ ಪದಕ್ಕೆ ಎಂಟು ಆಣೆ ಹಾಗೂ ಫೋಟೋ ಗೆ ಇದಕ್ಕಿಂತ ಜಾಸ್ತಿ. ಎಷ್ಟು ಎಂದು ಸರಿಯಾಗಿ ನೆನಪಿಲ್ಲ. ಆಶ್ಚರ್ಯವಾಯಿತೆ?) ನನ್ನ ಗೆಳೆಯರೆಲ್ಲ ನಾನು ಬಂದ ಕೂಡಲೇ ‘ಎಂಟಾಣೆಗೊಂದ್ ಎಂಟಾಣೆಗೊಂದ್’ ಎಂದು ಕಾಲೆಳೆಯುತ್ತಿದ್ದರು.

ಆದರೆ ಅದಾಗಿ ಮೂರೇ ದಿನಕ್ಕೆ ಅದೇ ವಿಜಯ ಟೈಮ್ಸ್ ನಲ್ಲಿ ಟ್ರೇನಿ ಜರ್ನಲಿಸ್ಟ್ ಆಗಿ ಸೇರಿದ್ದೆ. ವಾರ ಕಳೆಯುತ್ತಿದ್ದಂತೆ ಯುದ್ಧಭೂಮಿಗೆ ಕಳಿಸಲಾರಂಭಿಸಿದರು. ಭಾರೀ ಸಿದ್ಧತೆಯೊಂದಿಗೆ, ಶ್ರದ್ಧೆಯೊಂದಿಗೆ, ಭಯ-ಭಕ್ತಿಯೊಂದಿಗೆ ಪ್ರತಿನಿತ್ಯವೂ ಬೆಳಗಾ ಬೆಳಗಾ ಪ್ರೆಸ್ ಕ್ಲಬ್ಬಿಗೆ ಹೋಗಿ ಮಧ್ಯಾಹ್ನದವರೆಗೂ ಅಲ್ಲಿದ್ದು, ಬೇಕಾಗಿದ್ದ ಬೇಡವಾಗಿದ್ದ ಕನಿಷ್ಠ ಎಂಟು ಹತ್ತು ಪ್ರೆಸ್ ಕಾನ್ಫರೆನ್ಸ್ ಗಳನ್ನು ಕವರ್ ಮಾಡಿಕೊಂಡು ಆಫೀಸಿಗೆ ಮರಳಿ ಎಲ್ಲವನ್ನೂ ಶ್ರದ್ಧೆಯಿಂದ ಫೈಲ್ ಮಾಡುತ್ತಿದ್ದೆ. ಮಾರನೆ ದಿನ ಪೇಪರ್ ನಲ್ಲಿ ಒಂದೋ ಎರಡೋ ವರದಿಗಳು ಪ್ರಕಟವಾಗಿರುತ್ತಿದ್ದವು. ಇಂತಿಪ್ಪ ಸನ್ನಿವೇಶದಲ್ಲಿ ಪ್ರೇಸ್ ಕ್ಲಬ್ ಅಲ್ಲದೆ ಇತರ ಕಾರ್ಯಕ್ರಮಗಳಿಗೂ ನನ್ನನ್ನು ಕಳಿಸಿಕೊಡಲು ಆರಂಭಿಸಿದರು.

ಜಸ್ಟಿಸ್ ವೆಂಕಟಾಚಲಯ್ಯ ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದ ಕಾರ್ಯಕ್ರಮವೊಂದು ಹೋಟೆಲ್ ಏಟ್ರಿಯಾದಲ್ಲಿ ಸಂಜೆ ಏರ್ಪಾಡಾಗಿತ್ತು. ಸಮಯ ಕೊಂಚ ಏರುಪೇರಾಗಿ ಸ್ವಲ್ಪ ಲೇಟಾಗಿ ಸಭಾಂಗಣ ಪ್ರವೇಶಿಸಿದೆ. ಬೆಳಗಾವಿಯಂತಹ ಪ್ಯೂರ್ ಗ್ರಾಮೀಣ ಸೊಗಡಿನ ಪ್ರದೇಶದಲ್ಲಿ ಬೆಳೆದಿದ್ದ ನನಗೆ ಬೆಂಗಳೂರಿನ ಝಾಂಗ್ ಪ್ಯಾಂಗ್ ಅಚ್ಚರಿ ಮೂಡಿಸಿತ್ತು. ಹೀಗಾಗಿ ಹೋಟೆಲ್ ಏಟ್ರಿಯಾ ಸ್ವರ್ಗದಂತೆಯೂ ಅಲ್ಲಿರುವ ರಿಸೆಪ್ಶನಿಸ್ಟ್ ಗಳು ರಂಭೆ, ಊರ್ವಶಿಯಂತೆಯೂ ಕಂಡರು. ಅವರನ್ನೆಲ್ಲ ದಾಟಿಕೊಂಡು ಪತ್ರಕರ್ತರು ಕುಳಿತಿದ್ದ ಗುಂಪನ್ನು ಸೇರಿಕೊಂಡೆ. ಸ್ಟೇಜ್ ಮೇಲೆ ಆಗಷ್ಟೇ ಸ್ವಾಗತ ಭಾಷಣ ಮುಗಿದಿತ್ತು. ಹೀಗಾಗಿ ಜಸ್ಚಿಸ್ ವೆಂಕಟಾಚಲಯ್ಯ ಭಾಷಣ ಇನ್ನೂ ಆಗಿಲ್ಲ ಎಂದು ಸಮಾಧಾನವಾಯಿತು. ಆದರೆ ಸ್ಟೇಜ್ ಮೇಲೆ ಕಣ್ಣಾಡಿಸುತ್ತಿದ್ದಂತೆ ನನಗೆ ವೆಂಕಟಾಚಲಯ್ಯ ಕಂಡುಬರಲಿಲ್ಲ. ಅದು ಹೇಗೆ ಕಾರ್ಯಕ್ರಮ ಆರಂಭಿಸಿಬಿಟ್ಟರು ಎಂದು ಅಚ್ಚರಿಯಾದರೂ ಸುಮ್ಮನಿದ್ದೆ. ಈ ಮಧ್ಯೆ ನನ್ನ ಕಣ್ಣುಗಳು ಈ ಹುಡುಗಾಟ ನಡೆಸಿದ್ದಾಗಲೇ ಸ್ಟೇಜ್ ಮೇಲೆ ಯಾರದೋ ಹೆಸರು ಅನೌನ್ಸ್ ಆಗಿ ಅವರು ಬಂದು ಭಾಷಣ ಆರಂಭಿಸಿಬಿಟ್ಟರು. ಹೋಗಿದ್ದೇನೆ ಕರ್ತವ್ಯ ಎಂದುಕೊಂಡು ಅವರ ಭಾಷಣವನ್ನೂ ಗೀಚಿಕೊಳ್ಳತೊಡಗಿದೆ. ಆದರೆ ಅವರ ಇಂಗ್ಲಿಷ್ ಪ್ರತಿಭೆಯೂ, ಅವರ ಸೆಂಟೆನ್ಸ್ ಗಳೂ ನನ್ನ ನೋಟ್ ಪ್ಯಾಡ್ ಮೇಲೆ ಇಳಿಯಲು ಒಲ್ಲೆ ಎನ್ನುತ್ತಿದ್ದವು. ಹೇಗೂ ವೆಂಕಟಾಚಲಯ್ಯ ಅಲ್ಲವಲ್ಲ ಎಂದು ನಾನೂ ಕಾಟಾಚಾರಕ್ಕೆ ಗೊತ್ತಾದಷ್ಟು ಬರೆದುಕೊಳ್ಳತೊಡಗಿದೆ. ಸ್ಟೇಜ್ ಮೇಲಿನ ವ್ಯಕ್ತಿ ಮುಕ್ಕಾಲು ಗಂಟೆ ಮಾತನಾಡಿ ಭಾಷಣ ಮುಗಿಸಿದಾಗ ಸಭೆಯಲ್ಲಿ ಜೋರಾಗಿ ಕರತಾಡನ. ನಿರೂಪಕ ಬಂದು ಭಯಂಕರ ಆಕ್ಸೆಂಟ್ ಭರಿತ ಇಂಗ್ಲೀಷಿನಲ್ಲಿ “ಥ್ಯಾಂಕ್ಸ್ ಫಾರ್ ಎನ್ ಲೈಂಟ್ನಿಂಗ್ ಅಸ್ ಜಸ್ಟಿಸ್ ವೆಂಕಟಾಚಲಯ್ಯ” ಎಂದು ಅಭಿನಂದನೆ ಸಲ್ಲಿಸಿದ. ನನಗೆ ಕಾಲ ಕೆಳಗಿನ ಭೂಮಿಯ ಮೇಲಿನ ಕಾರ್ಪೆಟ್ ಸರಿದ ಅನುಭವ. ವೆಂಕಟಾಚಲಯ್ಯ ಮಾತನಾಡಿಬಿಟ್ಟಿದ್ದಾರೆ. ನಾನೂ ಏನೂ ಬರೆದುಕೊಂಡಿಲ್ಲ. ಏನು ಮಾಡಬೇಕು ಗೊತ್ತಾಗುತ್ತಿಲ್ಲ. ಪೂರ್ಣ ತಲೆ ಕೆಟ್ಟು ಹೋಯಿತು.

ಹಾಗೆಯೇ ಆಫೀಸಿಗೆ ಬಂದೆ. ಸ್ಟೋರಿ ಫೈಲ್ ಮಾಡಲು ಕುಳಿತರೆ ನಾನು ಬರೆದುಕೊಂಡಿದ್ದ ನೋಟ್ಸ್ ನ ತಲೆಬುಡ ಅರ್ಥವಾಗುತ್ತಿಲ್ಲ. ಡೆಡ್ ಲೈನ್ ಬೇರೆ ಸಮೀಪಿಸುತ್ತಿದೆ. ಹೊಸದಾಗಿ ಕೆಲಸಕ್ಕೆ ಬೇರೆ ಸೇರಿದ್ದೇನೆ. ಹೀಗೆ ಮಾಡಿಕೊಂಡಿದ್ದೇನೆ ಎಂದು ಗೊತ್ತಾದರೆ ಚೀಫ್ ಬಿಟ್ಟಾರೆಯೆ. ಯೋಚಿಸಿ ಯೋಚಿಸಿ ಅಳುಬರುವಂತಾಯಿತು. (ಥೂ ಅಳುಮುಂಜಿ…ಹುಡುಗ್ರು ಯಾವಾಗಾದ್ರೂ ಅಳ್ತಾರಾ)

ಆಗ ನನಗೆ ದೇವರಾಗಿ ಒದಗಿದ್ದು ಒಬ್ಬ ಹಿರಿಯ ಪತ್ರಕರ್ತ. ಅವರೂ ಈ ಕಾರ್ಯಕ್ರಮಕ್ಕೆ ಬಂದಿದ್ದರು. ಈ ಮೊದಲೇ ಅವರನ್ನು ಪರಿಚಯಮಾಡಿಕೊಂಡಿದ್ದೆನಾದ್ದರಿಂದ ಅವರಿಗೆ ನೇರವಾಗಿ ಫೋನಾಯಿಸಿದೆ. ಕಷ್ಟ ಹೇಳಿಕೊಂಡೆ. “ಹೆದರಬೇಡಪ್ಪಾ, ನಿನ್ನ ಈಮೇಲ್ ಐಡಿ ಕೊಡು. ನಾನು ಫೈಲ್ ಮಾಡಿರುವ ಸ್ಟೋರಿಯನ್ನು ಮೇಲ್ ಮಾಡುತ್ತೇನೆ. ಅದನ್ನು ನೋಡಿಕೊಂಡು ನಿನ್ನ ಸ್ಟೋರಿ ಬರೆ. ಆದರೆ ವರ್ಡ್ ಟು ವರ್ಡ್ ಕಾಪಿ ಮಾಡಬೇಡ ಆಯ್ತಾ” ಎಂದರು. ಬಿಪಿ ನಾರ್ಮಲ್ ಗೆ ಬಂತು. ದೇಹದ ಜೀವಕೋಶಗಳು ಶಾಂತಗೊಂಡವು. ಐದು ನಿಮಿಷದಲ್ಲಿ ಅವರ ಮೇಲ್ ಬಂತು. ಅದನ್ನು ನೋಡಿ ನನ್ನ ಕಾಪಿ ತಯಾರಿಸಿದೆ. ಫೈಲ್ ಮಾಡಿದೆ. ಅಂದು ಸಹಾಯ ಮಾಡಿದ್ದ ಅವರು ಇಂದಿಗೂ ನನ್ನ ಹಲವು ಸ್ಟೋರಿಗಳಿಗೆ ಮಾರ್ಗದರ್ಶಕರಾಗಿದ್ದಾರೆ.

(ಆಮೇಲೆ ನನ್ನ ಅಚಾತುರ್ಯ ಗೊತ್ತಾಗಿದ್ದು. ಜಸ್ಟಿಸ್ ವೆಂಕಟಾಚಲಯ್ಯ ಹಾಗೂ ಲೋಕಾಯುಕ್ತ ಜಸ್ಟಿಸ್ ವೆಂಕಟಾಚಲ ನಡುವೆ ಕನ್ ಫ್ಯೂಸ್ ಮಾಡಿಕೊಂಡಿದ್ದೆ. ಹೀಗಾಗಿಯೇ ಎಲ್ಲ ಅವಾಂತರವಾಗಿದ್ದು…)

ಇನ್ಸಿಡೆಂಟ್ಸ್ @ 100

Leave a comment

100

“ಗೋಧಿ ಮೈ ಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು….”

“ಸರ್ ಅಲ್ಲ…ಅದು …ಆಕರ್ಷಕವಾಗಿಯೇ ಇದ್ದಾಳೆ….”

“ನೋಡಮ್ಮ…. ಎಲ್ಲ ಮಕ್ಕಳು ತಮ್ಮ ತಂದೆ ತಾಯಿಗಳಿಗೆ ಆಕರ್ಷಕವಾಗಿಯೇ ಕಾಣಿಸುತ್ತಾರೆ. ಹೆತ್ತವರಿಗೆ ಅದೇನೋ ಮುದ್ದು ಅಂತಾರಲ್ಲ ಹಾಗೆ….ನೀವು ಹೇಳಿದ ಹಾಗೆ ನಾವು ಬರೆಯುತ್ತ ಹೋದರೆ, ಕಾಣೆಯಾದ ವ್ಯಕ್ತಿಗಳ ಬಗ್ಗೆ ಒಂದೊಂದು ಕಾದಂಬರಿಯನ್ನೇ ಬರೆಯಬೇಕಷ್ಟೇ.ಹಾಂ..ಮುಂದಕ್ಕೆ ಬರ್ಕೊಳಪ್ಪ. ಐದಡಿ ಎರಡಿಂಚು ಎತ್ತರ. ದಿನಾಂಕ …….ರಿಂದ ತ್ಯಾಗರಾಜನಗರ ಪೋಲಿಸ್ ಠಾಣಾ ವ್ಯಾಪ್ತಿಯಿಂದ ಕಾಣೆಯಾಗಿರುತ್ತಾರೆ”.

“ಸರ್ ಹೋಗುವಾಗ ಇಪ್ಪತ್ತು ಸಾವಿರ ರೂಪಾಯಿ ಎಟಿಎಂನಿಂದ ವಿತ್ ಡ್ರಾ ಮಾಡಿದ್ದಾಳೆ. ನಾನ್ ಹೇಳಿದ್ನಲ್ಲ ಸರ್ ಬೇಡ ಬೇಡ ಅಂದ್ರೂ ಆ ಹುಡುಗನ ಜೊತೆ ತಿರಗ್ ತಿದ್ಲು. ಬಹುಶಃ ಅವನ ಜೊತೆಯೇ…..”

“ನೋಡಿಮ್ಮ…ನಾವು ಎಲ್ಲಾ ಸಾಧ್ಯತೆನೂ ಪರಿಶೀಲಸ್ ತೀವಿ. ಅವ್ಳು ನಿಮ್ಮ ಮಗಳು. ನಾವು ಹಾಗೆಲ್ಲ ಈಗ್ಲೇ ಕನ್ಕ್ಲೂಷನ್ ಗೆ ಬರಬಾರ್ದು. ಹೋಗಿದ್ರೆ ಎಲ್ಲ ಹೋಗಿರ್ತಾರೆ ಹೇಳಿ…ತಿರುಪತಿ, ಧರ್ಮಸ್ಥಳ, ಉಡುಪಿ ಅಷ್ಟೇ. ಮೊಬೈಲ್ ಪ್ರಿಂಟ್ ಔಟ್ ಬಂದ ಮೇಲೆ ಟ್ರೇಸ್ ಮಾಡಲು ಈಝಿ ಆಗುತ್ತೆ. ಆದ್ರೆ ನಿಮ್ಮ ಮಗಳು ಮೊಬೈಲ್ ಆನ್ ಮಾಡಿಟ್ಟುಕೊಂಡಿರಬೇಕು ಅಷ್ಟೇ”.

ಎಸ್ ಐ ಡಿಕ್ಟೆಷನ್ ಮುಂದುವರೆಸಿದ. ರೈಟರ್ ಬರೆದುಕೊಳ್ಳುವುದನ್ನು ಮುಂದುವರೆಸಿದ.

———————————————————–

ಮತ್ತೊಂದು ಕೋಣೆಯಲ್ಲಿ ….

“ಆಗೋದಿಲ್ಲ ಸಾರ್….ಯಾರು ಪಾಸ್ ಪೋರ್ಟ್ ಅಪ್ಲಿಕೇಷನ್ ಕೊಟ್ಟಿದಾರೋ ಅವರು ಪರ್ಸನಲ್ ಆಗಿ ಬಂದು ಸಾಹೇಬ್ರನ್ನ ಮೀಟ್ ಮಾಡ್ಬೇಕು. ಪಕ್ಕದ ಮನೆಯಿಂದ್ಲೇ ಯಾವಾಗ ಟೆರರಿಸ್ಟುಗಳು ಅರೆಸ್ಟು ಆಗಲು ಆರಂಭಿಸಿದ್ದಾರೋ ಅಂದಿನಿಂದ ನಾವು ಸಹ ಫುಲ್ ಸೇಫ್ ಆಗಿ ಡೀಲ್ ಮಾಡ್ತಾ ಇದೀವಿ. ಬೇಜಾರು ಮಾಡ್ಕೋಬೇಡಿ. ನೀವು ಜರ್ನಲಿಸ್ಟ್ ಇದೀರಿ ಅಂತೀರಾ…ನೀವೇ ನಮ್ಮ ಕಷ್ಟ ಅರ್ಥ ಮಾಡ್ಕೊಳ್ದಿದ್ರೆ ಇನ್ಯಾರು ಮಾಡ್ಕೋಳ್ ಬೇಕು ಹೇಳಿ…”

—————————————————————

ಸ್ವಲ್ಪ ಹೊತ್ತಿನ ನಂತರ ಹೆಡ್ ಕಾನ್ಸಟೇಬಲ್ ಗೊಣಗುತ್ತಿದ್ದ….

“ಪೋಲಿಸ್ ಠಾಣೆಯಲ್ಲಿ ಕಾಸು ತೋರಿಸಿದ್ರೆ ಕೆಲಸ ಆಗಿ ಬಿಡುತ್ತೆ ಅಂತ ತಿಳ್ಕೊಂಡ್ ಬಿಟ್ಟಿದ್ದಾರೆ. ಏನ್ ಜನಾನೋ ಏನೋ. ಅಲ್ರೀ ಸಬ್ ರಿಜಿಸ್ಟ್ರಾರ್ ಆಫೀಸಿಗೆ ಹೋಗಿ ಕೆಲಸ ಮಾಡಿಕೊಂಡು ಬನ್ನಿ ನೋಡೋಣ. ನನ್ನದೇ ಜಮೀನು ವಿಷಯದಲ್ಲಿ ಡಾಕ್ಯುಮೆಂಟ್ ಎಲ್ಲಾ ಪಕ್ಕಾ ಇದ್ದರೂ ಕಣ್ಣಿನಲ್ಲಿ ನೀರು ಬರಿಸಿಕೊಂಡು ಒಂದು ತಿಂಗಳ ಸಂಬಳ ಐದು ಸಾವಿರ ರೂಪಾಯಿ ಸಬ್ ರಿಜಿಸ್ಟ್ರಿ ಕೈಯಲ್ಲಿಡುವಾಗ ಹೇಗಾಗಿತ್ತು ಗೊತ್ತ…?ನನ್ನ ಇಪ್ಪತ್ತೈದು ವರ್ಷಗಳ ಸರ್ವೀಸಿನಲ್ಲಿ ಇಲ್ಲಿವರೆಗೂ ಒಂದೇ ಒಂದು ಪೈಸೆ ಲಂಚ ತಗೊಂಡಿಲ್ಲ ಗೊತ್ತಾ?”

————————————————————–

ಅಷ್ಟರಲ್ಲಿ ವಾಕಿ ಟಾಕಿ ಚೀರಿತು…..

ಸುಮಾರು 26 ವರ್ಷದ ತರುಣ ಹಾಗೂ ಸುಮಾರು 20 ವರ್ಷದ ತರುಣಿಯ ಮೃತ ದೇಹ ಕಾಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಬಳಿ ಪತ್ತೆಯಾಗಿರುತ್ತದೆ. ಹುಡುಗ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಹಾಗೂ ಕಪ್ಪು ಅಂಗಿ ಧರಿಸಿರುತ್ತಾನೆ. ತರುಣಿಯು ಕೆಂಪು ಬಣ್ಣದ ಸಲ್ವಾರ್ ಕುರ್ತಾ ಧರಿಸಿರುತ್ತಾಳೆ. ಇಂದು ಮುಂಜಾನೆ ಈ ಇಬ್ಬರು ರೈಲ್ವೆ ನಿಲ್ದಾಣದಲ್ಲಿ ತಿರುಗಾಡುತ್ತಿದ್ದರು ಎನ್ನಲಾಗಿದೆ. ಇವರು ಪ್ರೇಮಿಗಳಿರಬಹುದು ಎಂದು ಶಂಕಿಸಲಾಗಿದೆ. ಮುಖ ರೈಲಿಗೆ ಸಿಕ್ಕು ಸಂಪೂರ್ಣ…..ಹೋಗಿರುವುದರಿಂದ ಗುರುತು ಪತ್ತೆ ಕಷ್ಟವಾಗಿದೆ. ಯಾರಾದರೂ ವಾರಸುದಾರರಿದ್ದಲ್ಲಿ ವಿಕ್ಟೋರಿಯಾ ಆಸ್ಪತ್ರೆಯನ್ನು ಸಂಪರ್ಕಿಸಬಹುದು.

———————————————————

ಪಿಸಿ ಮತ್ತೊಬ್ಬನಿಗೆ ಹೇಳುತ್ತಿದ್ದ….

“ಬೋ…..ಮಗ ಹೇಳಿಕೊಳ್ಳಾಕೆ ಡಾಕ್ಟರು. ಮಾಡೋದು ಮಾತ್ರ ಹಲ್ಕಾ ಕೆಲಸ. ಪಾಸ್ ಪೋರ್ಟ್ ಹೇಗಾದ್ರೂ ಆಗುತ್ತೆ ಅಂತ ಏಜೆಂಟನ್ನ ಹಿಡ್ಕೊಂಡಿದ್ದ. ಈಗ ನೋಡಿ ಹಲ್ಕಟ್ ಪ್ಯಾಲೆ ಥರ ಆಡ್ತಾ ಇದಾನೆ. ಕಳೆದ ಎರಡು ವರ್ಷದಿಂದ ಆ ಮನೆಯಲ್ಲೇ ಇದೀನಿ ಅಂತ ಪತ್ರ ಬರೆದುಕೊಂಡು ಓನರ್ ಸೈನ್ ಫೋರ್ಜರಿ ಮಾಡಿದ್ದ. ಇಪ್ಪತ್ತೈದು ವರ್ಷದ ಸರ್ವಿಸ್ ನಂದು. ಇಂಥ ನೂರಾರು ಕೇಸ್ ನೋಡಿದೀನಿ….”

—————————————————————-

ಠಾಣೆಯಲ್ಲಿದ್ದ ಟಿವಿ ಬೊಂಬಡ ಬಜಾಯಿಸಿತು…

“ಭಾರೀ ತಿಮಿಂಗಿಲಗಳು ಲೋಕಾಯುಕ್ತ ಬಲೆಗೆ.

ಲೋಕಾಯುಕ್ತ ಪೋಲಿಸರು ಇಂದು ಬೆಳಗಿನ ಜಾವ ಹತ್ತು ಜನ ಸಬ್ ರಿಜಿಸ್ಟ್ರಾರ್ ಗಳು ಹಾಗೂ ಇಬ್ಬರು ಎಸ್ ಪಿ ಗಳ ಮನೆಗಳ ಮೇಲೆ ಮಿಂಚಿನ ದಾಳಿ ನಡೆಸಿ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವುದನ್ನು ಪತ್ತೆ ಹಚ್ಚಿದ್ದಾರೆ. ಈ ಎಲ್ಲರೂ ನಿವೃತ್ತಿ ವಯಸ್ಸನ್ನು ಸಮೀಪಿಸುತ್ತಿದ್ದು, ನಗರದ ಪ್ರತಿಷ್ಥಿತ ಬಡಾವಣೆಗಳಲ್ಲಿ ಅಪಾರ್ಟಮೆಂಟ್, ರೆಸಾರ್ಟ್ ಹಾಗೂ ಹೋಟೆಲ್ ಗಳನ್ನು ಹೊಂದಿದ್ದಾರೆ. ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿ ಪಡೆಯೋಣ ನಮ್ಮ ಪ್ರತಿನಿಧಿ ಮೇಕ್ ಮನಿ ಅವರಿಂದ….

“ಮೇಕ್ ಮನಿ, ಹೇಳಿ ಇವ್ರು ಇಷ್ಟೆಲ್ಲ ಹಣ ಮಾಡ್ಕೊಂಡಿದ್ದು ಹೇಗೆ?”

“ಏನೊಂದು ಇವತ್ತು ಏನೊಂದು ಈ ದಾಳಿ ನಡೆದಿದೆ. ಏನೊಂದು ಈ ದಾಳಿಯಲ್ಲಿ ಲೋಕಾಯುಕ್ತರು ಏನೊಂದು ಈ ಹತ್ತು ಜನ ಸಬ್ ರಿಜಿಸ್ಟ್ರಿಗಳ ಮನೆ ಮೇಲೆ ಏನೊಏಓನಏನೊಂದು ದಾಳಿ ನಡೆಸಿ ಏನೊಂದು ಇಬ್ರು ಎಸ್ ಪಿಗಳ ಮನೆ ಏನೊಂದು ಈ…. ಆ….ಉ…ಎ……”

ಒಂಬತ್ತರ ಗಮ್ಮತ್ತು

Leave a comment

9

ಕನ್ನಡದ ಖ್ಯಾತ ಟಿವಿ ಚಾನಲ್ ಒಂದು ಹಲವಾರು ತಿಂಗಳುಗಳಿಂದ ಈ ಸ್ಕ್ರಾಲ್ ಬಿಡುತ್ತಿದೆ.

“ನಮ್ಮ ಚಾನೆಲ್ ಹೆಸರು ಹೇಳಿಕೊಂಡು ಯಾರಾದರೂ ನಿಮ್ಮ ಹತ್ತಿರ ಹಣ ಕೇಳಿದರೆ ಅಥವಾ ಬೆದರಿಸಿದರೆ 080———- ಈ ನಂಬರ್ ಗೆ ಕಾಲ್ ಮಾಡಿ ನಮಗೆ ತಿಳಿಸಿ”.

ಆ ಚಾನೆಲ್ ನ ಪತ್ರಕರ್ತರೇ ಜನರಿಂದ ನೇರಾನೇರ ಹಣಪಡೆದು ಕೆಲಸ ಬಿಟ್ಟು (ಅಥವಾ ಕೆಲಸ ಬಿಡಿಸಿ) ಹೋಗುತ್ತಿರುವಾಗ ಮೇಲಿನ ಹೇಳಿಕೆ ವಿಪರ್ಯಾಸವೆನಿಸುವುದಿಲ್ಲವೆ?

Electronic journalism is purely a …………

Leave a comment

ETV

Electronic journalism is purely a team work. The driver who takes us to the assignment, the maid who cleans the office dust and protects the computers from virus, I feel, contribute in their own way to our stories. In the team chain, coordination between reporter and cameraman is absolute necessary to carve a wonderful story. In my experience many a times I felt a pinch just because I didn’t bother to look upon the cameraman.

When I moved from print media to electronic few years ago, heading a group of four people (including driver and camera assistant) was little uncomfortable for me. I had to take into confidence all the three – the cameraman, the assistant and the driver to make story. And this was highly irritating experience as there used to be communication and ego problems between the three. When the camera assistant post was scrapped and they were made as junior cameramen, though some of my colleagues were uncomfortable, I was the happiest reporter for this management decision, as my problem was solved automatically to some extent.

But there was no change in the actual problem.

My relationship with the camera persons in the initial days included quite a lot bitter experiences. On one hand there was a sudden change of my profession to electronic pattern of journalism from print and on the other, the camera team was skeptical about me as I was a cub scribe. Both the things were hindrances to develop a good rapport with the camera unit. And without developing a smooth relationship with cameraman, it was practically difficult to evolve a good story. Half of my brain cells used to die, thinking of which cameraman I’m going to get today on field, how to communicate well if I get a cameraman who is not of my choice, what if I get “Mr. Ego Raja” (the nickname I gave to particular cameraman who was too egoistic or I thought him to be) and so on and so forth. All these problems were reflected in the stories I did.

But soon I realized that though the professional skills of the cameramen were different, one thing was common among them. And it was that almost all of them were ‘Good’ people. I had to just tune them according to my professional needs. For this I made some rules to be followed by myself and started behaving in accordance with the rules. (After all, I was dealing with human brains).

Rule No.1

Greet first, work next or Haalchaal poochhana……….

Whenever I saw a cameraman in the office campus, my reflex action was “Hi, how are you?” Before going for an assignment, I wished the cameraman and then boarded the vehicle. This was just an ice-breaking.

Rule No. 2

Brief about the assignment or Usko Bhi Batade…………..

I found in the due course that one of the major reasons that the cameramen were getting irritated and annoyed was that they were not being briefed by the reporter about the assignment. My first action after boarding the vehicle was to communicate in detail to cameraman about assignment, the shots he needs to take, the things he needs to be cautious etc. Some cameramen were even interested in having a glance at the press invitation card or letter. And this act of mine yielded positive results.

Rule No. 3

Never try to ride or Daadaagiri………………

Cameramen and reporters should be complimentary and not contradictory to each other. In number of cases I experienced that the negative egos of both cameramen and reporter lead to disputes. So, I decided o be polite and humble. I never tried to do bossing over the lens men and this proved to be a success. The things which never happened with command were fixed by request. Some of the cameramen who initially didn’t bend to Gaandhigiri, couldn’t continue with their attitude and soon became followers of Mahatma Gandhi!!

Rule No. 4

Communication or Chal, Bol De Yaar……………………..

Most of the problems between reporters and cameramen used to take place due to poor communication from both sides. Calling the name in singular, unintended or intended voice modulation, behavior and body language in the field – each was counted. To solve this problem I made some changes in my way of speaking. I never said, “Take that shot”. But said, “I need that shot.” There was lot of difference between both the sentences. Introducing my cameramen to the source, was one more gesture that made the cameramen to involve themselves in the story.

Rule No. -5

Duniya Jhukti Hai Lekin Jhukanevala Chahiye……………………….

“Sir, the light is a dull. Shooting is not possible”. “This pan is impossible.” “That tilt down is not permitted”. “The politician left before I could adjust my camera. So, I missed the visuals”. These were some of the common statements I used to receive from few cameramen, which drove me crazy. I used to feel that the cameraman is saying this purposefully just to cover his inability to shoot. In some of the cases my belief was to be true and in some it wasn’t. It was practically difficult for me to judge whether the cameramen are lying or not. To check this I had to willingly or unwillingly know the basics of camera. And knowing basic camera operations didn’t take much time. This helped not only to understand the situation of cameramen but also to make prior arrangements for shooting, taking bites and plan my story ideas accordingly. (I have seen incidents where reporters have taken PTCs under scorching sun at 12 noon when there was opportunity to take the same at 7 am).  I could also understand the limitations and advantages of the camera.

All these rules are neither great ‘IdEas’, nor difficult to follow. But they proved to be the best. Soon I became the blue eyed boy for camera section.  You may give a try to these Choti Batain……

Follow

Get every new post delivered to your Inbox.

Join 2,050 other followers

%d bloggers like this: