ಬಡವರಿಗೆ ಸಾವ ಕೊಡಬೇಡೊ

Leave a comment

ಒಡಲ ಬೆಂಕಿ

ಚಿಂತನ ಪುಸ್ತಕ ಪ್ರಕಟಿಸಿರುವ ವಿಠ್ಠಲ ಭಂಡಾರಿ ಸಂಪಾದಿಸಿರುವ “ಒಡಲ ಬೆಂಕಿ – ಕನ್ನಡ ಕವಿಗಳು ಕಂಡಂತೆ ಹಸಿವು” ಪುಸ್ತಕ ಮೊನ್ನೆ ಬೆಂಗಳೂರಿನಲ್ಲಿ ಬಿಡುಗಡೆಯಾಯಿತು. ಪುಸ್ತಕದಲ್ಲಿ ಜಾನಪದ ಕವಿಯೋರ್ವ ಹಸಿವನ್ನು ಕಂಡ ಬಗೆ ಹೀಗಿದೆ.

ಬಡವರು ಸತ್ತರೆ…

ಬಡವರು ಸತ್ತರೆ ಸುಡಲೀಕೆ ಸೌದಿಲ್ಲೋ

ಒಡಲ ಬೆಂಕೀಲಿ ಹೆಣ ಬೆಂದೊ ದೇವರೆ

ಬಡವರಿಗೆ ಸಾವ ಕೊಡಬೇಡೊ

ದೊಡ್ಡೋರ ಮಕ್ಳೋಗೆ ಬೆಲ್ಲ ಬಾಳಿಯ ಹಣ್ಣು

ಏನು ಇಲ್ಲದ ಬಡವೇಯ ಮಕ್ಳೋಗೆ

ಹೆತ್ತಬ್ಬೆ ಬತ್ತ ಮೊಲೆ ಹಾಲು

ಕಣಜ ಬೆಳೆದ ಮನೆಗೆ ಉಣಲಾಕ ಕೂಳಿಲ್ಲ

ಬೀಸಾಕ ಕವಣೆ ಬಲವಿಲ್ಲ ಕೂಲ್ಯವರ

ಸುಡಬೇಕ ಜನುಮ ಸುಖವಿಲ್ಲ

ಅನ್ನೇಕಾರ ಅರಸು ನಿನ್ನ ಸಂಬಳ ಸಾಕು

ಹನ್ನೆರಡು ವರುಷಲ ಹಳೆ ಅಕ್ಕಿ ಅನ್ನ ಉಂಡು

ಚನ್ನಿಗ ನನ್ನ ತಮ್ಮ ಬಡವಾದ.

I, she and Society.

Leave a comment

2

I’m really shocked

In the way she looks.

Also to her talk and also to her walk.

Her twinkling eyes I always like

Her soft lips I always wish

I want her with all her brain and beauty, except

The fact that she also becomes old one day.

Very soon an opportunity arose

When I met her alone.

I didn’t speak anything, But I

Thought she understood everything.

She came so near to me that

I experienced the breeze of my fair lady.

The distance between us was just of three words.

As we both came nearer, suddenly

A voice barked from the west

Where sun always sets.

We looked at west and there he was,

The society.

He had a stay order,

In which our age, caste, qualification, parent’s taste etc.

Were mentioned as the obstacles for our temporary meeting.

I cried and cried and she did the same.

But in the hands of society,

Liberty was just a dream.

Lastly we kissed and she left.

Now for the first time in life,

I experienced the pain of love,

In her soft and shaking lips.

ಮಳೆಗೆ ಅನೇಕ ಮುಖಗಳಿವೆ

2 Comments

1

ಮುಖ -1

ಮಳೆ ಅಂದ್ರೆ ಉಸಿರು, ಮಳೆ ಅಂದ್ರೆ ಬೆಳೆ ಮತ್ತು ಬೆಲೆ

ಮಳೆ ಅಂದ್ರೆ ಹಸಿರು, ಹೊಸ ಚಿಗುರು, ಹಬೆ ಆಡ್ತಾ ಇರೋ ಕಾಫಿ

ನೆಟ್ಟಿ ಕಾಲ, ಎತ್ತುಗಳಿಗೆ ಪೂರ್ತಿ ಕೆಲಸ

ಹಲಸಿನ ಕಾಯಿ ಹಪ್ಪಳ ಜೊತೆಗೆ ರುಚಿರುಚಿ ಮಿರ್ಚಿ ಭಜಿ

ಜಾನುವಾರುಗಳಿಗೆ ಅಚ್ಚ ಹಸಿರಿನ ಊಟ

ನದಿ ಕೆರೆ ಮೇಲೆಲ್ಲ ನೀರಿಂದೇ ಆಟ

ಮೀನುಗಳಿಗೆ ಮಿನಲದ ಸಂಭ್ರಮ

ಮಳೆ ಅಂದ್ರೆ ಸ್ವಚ್ಛ ರಸ್ತೆ

ಬಹಿರಂಗದ ಜೊತೆ ಅಂತರಂಗವೂ ತಂಪು ತಂಪು.

ಆದರೆ ದುರಾದೃಷ್ಟ ಮಳೆಗೆ ಅನೇಕ ಮುಖಗಳಿವೆ

2

ಮುಖ -2

ಮಳೆ ಅಂದ್ರೆ ಬಿರುಗಾಳಿ, ಮಳೆ ಅಂದ್ರೆ ಗುಡುಗು, ಸಿಡಿಲು, ಮಿಂಚು.

ಮಳೆ ಅಂದ್ರೆ ಮರ ಬೀಳುತ್ತೆ, ವಾಹನಗಳು ಓಡಾಡಲ್ಲ

ಪ್ರವಾಹ ಬರುತ್ತೆ

ಮನೆಗಳ ಜೊತೆ ಕಣ್ಣುಗಳಲ್ಲೂ ನೀರು ತುಂಬುತ್ತೆ

ಸುಮ್ನೆ ಇದ್ದ ಕಡಲು ಕೊರೆಯಲು ಆರಂಭಿಸುತ್ತೆ

ದಡಕ್ಕಳಿಸುವ ಅಲೆಗಳು ವಾಪಸ್ ಹೋಗವಾಗ ಕನಸುಗಳನ್ನೂ ಕಿತ್ಕೊಂಡ್ ಹೋಗುತ್ತೆ.

ಅಪಘಾತಗಳು ಹೆಚ್ಚಾಗುತ್ತೆ, ವಿದ್ಯುತ್ ಕೈಕೊಡುತ್ತೆ.

ಮಳೆಗೆ ಅನೇಕ ಮುಖಗಳಿವೆ

3

ಮುಖ -3

ನೆನೆಸ್ಕೋ ಒಂದ್ಸಲ….

ಆ ದರಿದ್ರ ಬಿಸಿಲು, ಮೂಗ ಮೇಲಿನ ಬೆವರು, ಪೊಲ್ಯುಷನ್ನು, ಗಿಡಗಳಿಲ್ಲ ಮೆಟ್ರೋ ರಸ್ತೆಗಳು

ಗುಬ್ಬಚ್ಚಿಗಳಿಲ್ಲದ ಮನೆ-ಓಣಿಗಳು

ಡಂಪಿಂಗ್ ಯಾರ್ಡ್ ಆಗಿರುವ, ಆಪಾರ್ಟ್ ಮೆಂಟ್ ಗಳೆದ್ದಿರುವ ಸುಂದರ ಕೆರೆಗಳು

ಖಾಲಿ ಮನಸ್ಸು, ಕೊಡಗಳ ಜೊತೆ ನೀರಿಗಾಗಿ ದಿನಗಟ್ಟಲೆ ಕಾಯುವ ನೀರೆಯರು

ಕಾವೇರಿ ನೀರಿಗಾಗಿ ನಡೆದ ಅತ್ಯಾಚಾರಗಳು

ವಿದೇಶಿ ಕಂಪನಿಗಳು ಮಾರುತ್ತಿರುವ ದುಬಾರಿ ಬೆಲೆಯ ಮಿನಿರಲ್ ವಾಟರ್ ಬಾಟಲಿಗಳು

ಪ್ರತಿವರ್ಷ ಹೆಚ್ಚುತ್ತಿರುವ ಬಿಸಿಲು

ಸಿಟಿಯಲ್ಲಿ ಮಳೆಯಾದರೆ ಮುಖ ಸಿಂಡರಿಸುವ ಜನರು

ಗೆಳೆಯ, ಮಳೆಗೆ ಅನೇಕ ಮುಖಗಳಿಗವೆ.

ಪರದೆ ಇನ್ನೇನು ಏಳಲಿದೆ

ಯಾವ ಮುಖವನ್ನು ಮಳೆಗೆ ನೀಡುವ ಹೇಳು?

ಹಿಂಗ್ಯಾಕ್ ಆಡ್ತಿ?

1 Comment

321

ಚುಕ್ ಬುಕ್ ಚುಕ್ ಬುಕ್ ರೈಲು ಬಂಡಿ

ಪೆಟ್ರೋಲ್ ಉಗ್ಗಿ ಕೊಂದೆ ಮಂದಿ

ಜಾತಿಯ ಸೇಂದಿ ಕುಡಿದೂ ಕುಣಿದಿ

ನಿನಗೇನ್ ಸಿಕ್ತೋ, ಅವಂಗೇನ್ ಸಿಕ್ತೋ.

ಹಾದ್ಯಾಗ್ ಮೈಕು, ಬೀದ್ಯಾಗ್ ಭಾಷ್ಣ

ಸೌಹಾರ್ದತೆ ಅಂತ ಏನೇಲ್ಲ ತೋರಣ

ಕೋಮುಗಲಭಿಯೊಳಗ ಮಾತ್ರ ನಿನ್ನ್ ಮಂದಿ ಸಾಯ್ಬಾರ್ದು

ಹೃದಯ ಆದ್ರೂ ಉರೀಲಿ, ಕನಸಾದ್ರೂ ಮುರೀಲಿ.

ನಮ್ಮನಿ ಹುಡುಗ ಭಾಳ ಶಾಣ್ಯಾ

ಅಮೇರಿಕದಾಗ ಎಣಸ್ತಾನು ಡಾಲರ್ ಕಾಂಚಾಣ

ಆದ್ರೂ ಮದಿವಿಗೆ ಹುಡಗಿ ನಮ್ಮ ಪೈಕೀನ ಬೇಕು

ಗೊಡ್ಡ್ ಇದ್ರೂ ಪರವಾಯಿಲ್ಲ, ಮಡ್ಡ್ ಇದ್ರೂ ಹರಕತ್ತಿಲ್ಲ.

ತಿನ್ನಾಕ್ ತಂಗಳಿಲ್ಲ, ಹೊದ್ಯಾಕ್ ಅರಿವಿಲ್ಲ

ನೀರಿಲ್ಲ, ಲೈಟಿಲ್ಲ, ತಿಂಗ್ಳಾತು ರಾಷನ್ ಇಲ್ಲ

ಏನ್ ಇಲ್ದ ಇದ್ರೂ ಜಾತಿ ಸಂಘರ್ಷಕ್ಕಂತೂ

ಕೊರತಿ ಇಲ್ಲ.

ಉಣ್ಣು ಅನ್ನ ಒಂದ ಆದ್ರೂ ಜಾತಿ ಮಾತ್ರ ಬ್ಯಾರೆ ಬ್ಯಾರೆ

ಬಾಸ್ಮತಿ ಅಂತ, ಕುಮುದ ಅಂತ, ಮಾವಿನ ಹಣ್ಣೂ ಹಂಗ ಅಂತ

ಆಪೂಸ್ ಅಂತ, ರತ್ನಾಗಿರಿ ಅಂತ

ಎಲ್ಲಾದ್ರೊಳ್ಗೂ ವೆರೈಟಿ ಜಾತಿ

ಮನಷಾಗಾ ಸಾಕಾಗ್ಲಿಲ್ಲಂತ ಒಂದ ಜಾತಿ

ಯಾಕೋ ಮನಷ್ಯಾ ಹಿಂಗ್ಯಾಕ್ ಆಡ್ತಿ

ಕಣ್ಣೀರಿನ್ನೂ ಸಾಕಲ್ಲೇನೋ, ರಕ್ತ ಹರ್ಸೋದ್ ನಿಲ್ಸೋಲ್ಲೇನೋ

ರಾಮಂಗ ಹರಕಿ ಕೇಳ್ಕೋತಿನಿ

ಅಲ್ಲಾಗ ಸಕ್ರೀ ಊದಸ್ತೀನಿ

ಜಾತಿ ನಶಾ ಕರಗಿ ಹೋಗಿ, ಪ್ರೀತಿ ಹೂವ್ ಅರಳಿತಂದ್ರ

ಆ ಹೂವಿನ ಬೀಜ ನೆಟ್ಟೊಕ್ಕೀನಿ.

(ಫೆಬ್ರುವರಿ 2003)

Follow

Get every new post delivered to your Inbox.

Join 87 other followers