ನಮಸ್ಕಾರ,
ನಮ್ಮ ಪ್ರೀತಿಪಾತ್ರರು, ಬಂಧುಗಳು, ಪರಿಚಯದವರು ತೀರಿಕೊಂಡಾಗ ದುಃಖವಾಗುವುದು ಸಹಜ. ಪ್ರತಿಯೊಬ್ಬರೂ ಶೋಕದಲ್ಲಿ ಮುಳುಗಿರುವಾಗ ಎಲ್ಲರ ಗಮನವಿರುವುದು, ಆದಷ್ಟು ಬೇಗ ಅಂತ್ಯಕ್ರಿಯೆ ನಡೆಸಬೇಕೆಂದು. ಆದರೆ ಇದೇ ಸಂದರ್ಭದಲ್ಲಿ ನೇತ್ರದಾನ-ದೇಹದಾನ ಮಾಡಲು ತೀರಿಕೊಂಡವರ ಮಕ್ಕಳಿಗೆ, ವಾರಸುದಾರರಿಗೆ ಮನಸ್ಸಿರುತ್ತದೆ. ಆದರೆ ದುಃಖದ ಹೊಡೆತದಲ್ಲಿ ಎಲ್ಲವೂ ಮರೆತುಹೋಗುತ್ತದೆ. ಯಾರಿಗಾದರೂ ಇಂತಹ ಸಂದರ್ಭದಲ್ಲಿ ನೇತ್ರದಾನ-ದೇಹದಾನ ಮಾಡಬೇಕೆಂದಿದ್ದರೆ ದಯವಿಟ್ಟು ನನ್ನನ್ನು ಸಂಪರ್ಕಿಸಿ. ಕೂಡಲೇ ಎಲ್ಲ ವ್ಯವಸ್ಥೆಯನ್ನು ಮಾಡಲಾಗುವುದು.
ವಿಶ್ವಾಸಿ
ಸುಘೋಷ್ ಎಸ್. ನಿಗಳೆ.