ನನ್ನ ತಂದೆಯವರ ಹಾಡು

ನನ್ನ ತಂದೆ ಶ್ರೀ. ಎಚ್. ಎನ್. ಸದಾಶಿವ ರಾವ್ ಅವರದ್ದು ಕಂಚಿನ ಕಂಠ. ಸಂಗೀತವನ್ನು ಶಾಸ್ತ್ರೀಯವಾಗಿ ಕಲಿತಿಲ್ಲ. ಆದರೆ ಅವರ ಕಂಠ ಆಪ್ಯಾಯಮಾನವಾಗಿದೆ. ಅವರ ಹಾಡೊಂದು ಇಲ್ಲಿದೆ.

22 ದಿನಗಳಲ್ಲಿ ಕಾಡು ಬಾದಾಮಿ ಅರಳಿದ್ದು ಹೀಗೆ

ಇದು ನಮ್ಮ ಮನೆಯ ಮುಂದಿರುವ ಕಾಡು ಬಾದಾಮಿ – Indian Almond – ಗಿಡ. ಮಾಘದಲ್ಲಿ ಎಲೆ ಉದುರಿಸಿ ಮತ್ತೆ ಚಿಗುರುತ್ತದೆ. ದಿನಕ್ಕೊಂದರಂತೆ 22 ದಿನ ಫೋಟೋ ತೆಗೆದಾಗ, ಗಿಡದ ಪರಿವರ್ತನೆ ಕಂಡದ್ದು ಹೀಗೆ.

ನಮ್ಮ ಮನೆಯ ಕೃಷಿ ಕಾರ್ಯಾಗಾರ ಹೀಗಿತ್ತು

ಸುಸ್ಥಿರ ಕೃಷಿಯಲ್ಲಿ ನಂಬಿಕೆಯಿಟ್ಟಿರುವ ನನ್ನ ಅಣ್ಣ ಹಾಗೂ ಅತ್ತಿಗೆ, ಫೆಬ್ರವರು 6 ಮತ್ತು 7 ರಂದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ಎರಡು ದಿನಗಳ ಕೃಷಿ ಕಾರ್ಯಾಗಾರ ಆಯೋಜಿಸಿದ್ದರು. ಅದರ ವರದಿ ಇಲ್ಲಿದೆ. ದಯವಿಟ್ಟು ನೋಡಿ.