ನಿನಗೆ ನನ್ನ ಬರ್ತ್ ಡೇ ನೆನಪಿದ್ಯಾ? ಸೋ ಸ್ವೀಟ್ ಆಫ್ ಯೂ…

ನನ್ನದೊಂದು ಪುಟ್ಟ ಡೈರಿಯಿತ್ತು. ಅದರಲ್ಲಿ ನನ್ನ ಪ್ರೀತಿ ಪಾತ್ರರಾದವರ ಜನ್ಮದಿನಾಂಕ, ಮದುವೆ ವಾರ್ಷಿಕೋತ್ಸವಗಳನ್ನು ನೋಟ್ ಮಾಡಿಕೊಳ್ಳುತ್ತಿದ್ದೆ. ಇದು ನಾನು ಶಾಲಾ ದಿನಗಳಿಂದಲೂ ಇಟ್ಟುಕೊಂಡಿದ್ದ ಡೈರಿಯಾಗಿತ್ತು. ಪ್ರತಿವರ್ಷವೂ ನಾನು ಈ ಡೈರಿಯ ರೆಫರೆನ್ಸ್ ಇಟ್ಟುಕೊಂಡು ವಿಶ್ ಮಾಡುತ್ತಿದ್ದೆ. “ಓಹ್, ನಿನಗೆ ನೆನಪಿದ್ಯಾ ನನ್ನ ಬರ್ತ್ ಡೇ…ಸೋ ಸ್ವೀಟ್ ಆಫ್ ಯೂ…ಥ್ಯಾಂಕ್ಸ್ ಎ ಲಾಟ್….ನೀನೊಬ್ನೆ ನೋಡು ನನ್ನ ಬರ್ತ್ ಡೇ ನೆನಪಿಟ್ಟುಕೊಂಡು ವಿಶ್ ಮಾಡಿದ್ದು” ಎಂದೆಲ್ಲ, ನಾನು ವಿಶ್ ಮಾಡಿದವರು ಹೇಳುತ್ತಿದ್ದರು. ಅವರಿಗೆ ನಿಜಕ್ಕೂ ಸಂತಸವಾಗಿರುತ್ತಿತ್ತು. ಅವರ ಸಂತಸ ನೋಡಿ ನನಗೂ ಆನಂದವಾಗುತ್ತಿತ್ತು.

ಆದರೆ ಈಗ ಕಾಲ ಬದಲಾಗಿದೆ. ನನ್ನ ಬಳಿ ಈಗಲೂ ಆ ಪುಟ್ಟ ಡೈರಿ ಇದೆ. ಅದರಲ್ಲಿನ ಹೆಸರುಗಳ ಸಂಖ್ಯೆಯೂ ಹೆಚ್ಚಾಗಿದೆ. ಆದರೆ ನಾನು ಈಗ ವಿಶ್ ಮಾಡಿದಾಗ, ಎಲ್ಲರೂ ಕೇಳುವುದು, “ಓಹ್   ಥ್ಯಾಂಕ್ಸ್….ಹೇಗೆ ಗೊತ್ತಾಯ್ತು ನನ್ನ ಬರ್ತ್ ಡೇ ಅಂತ….ಫೇಸ್ ಬುಕ್ ನಲ್ಲಿ ನೋಡಿದೆ ಅಲ್ವಾ?…..”

ನನ್ನ ಪುಟ್ಟ ಡೈರಿ ಅಳುತ್ತಿರುವುದು ಯಾರಿಗೂ ಕೇಳಿಸುತ್ತಿಲ್ಲ.

ಎಲ್ಲೊ ಒಂದು ಕಡೆ ಫೇಸ್ ಬುಕ್ ಮನುಷ್ಯರ ನಡುವಿನ ಸಂಬಂಧಗಳನ್ನ ಯಾಂತ್ರೀಕೃತವಾಗಿಸುತ್ತಿದೆಯಾ?

‘ಉದಯವಾಣಿ’ಯಲ್ಲಿ ನನ್ನ ಕಥೆ ‘ಓ ಧನಾತ್ಮಕ’

...

ಇಂದಿನ ಉದಯವಾಣಿಯ ಸಾಪ್ತಾಹಿಕ ಸಂಪದದಲ್ಲಿ ಪ್ರಕಟವಾಗಿರುವ ನನ್ನ ಕಥೆ ‘ಓ ಧನಾತ್ಮಕ

ಕಥೆ ಇಲ್ಲಿದೆ….

ಸಮಾಹಿತ ಹಾಗೂ ಸುಗುಣಿಗೆ ಸಾಕಾಗಿ ಬಿಟ್ಟಿತ್ತು. ಮೊದಮೊದಲು ಅದನ್ನೆಲ್ಲ ತುಂಬಾ ಲಘುವಾಗಿ ತೆಗೆದುಕೊಂಡಿದ್ದರು. ಇತ್ತೀಚೆಗೆ ನೀರು ಮೂಗಿನ ಮಟ್ಟಕ್ಕೆ ಬಂದಿತ್ತು. ದಿನಾಗ್ಲೂ ಸುಮಿತ್ರಮ್ಮನ ಅದೇ ಮಾತು ಕೇಳಿ ಕೇಳಿ ತಲೆ ಚಿಟ್ಟುಹಿಡಿದು, ತಾವು ನಿತ್ಯವೂ ಇಂಪೋರ್ಟೇಡ್ ಶ್ಯಾಂಪೂ ಹಾಕಿ ತೊಳೆಯುವ, ಫಳಫಳ ಹೊಳೆಯುವ, ರೇಷ್ಮೆಯಂತಹ ಕೂದಲುಗಳು ಉದುರಿಬಿಡುತ್ತವೆಯೋ ಎಂದು ಇಬ್ಬರಿಗೂ ಆತಂಕ ಶುರುವಾಗಿತ್ತು. ಮೊನ್ನೆ ಸಮಾಹಿತನ ತಲೆಯಲ್ಲಿ ಬೆಳ್ಳಿ ಕೂದಲೊಂದನ್ನು ನೋಡಿ ಹೌಹಾರಿದ್ದ ಸುಗುಣಿ, ತನ್ನ ಗಂಡನ ಶೀರ್ಷದಲ್ಲಿನ ಈ ಬೆಳ್ಳಿ ಕೂದಲಿನ ಚೊಚ್ಚಲ ಜನನಕ್ಕೆ ಸುಮಿತ್ರಮ್ಮನ ಕಿರುಕುಳವೇ ಕಾರಣ ಎಂದು ನಿರ್ಧರಿಸಿಬಿಟ್ಟಿದ್ದಳು. ತನ್ನ ತಲೆಯಲ್ಲಿ ಬೆಳ್ಳಿ ಕೂದಲಿನ ಬಾಣಂತನ ಮಾಡಲು ಇಷ್ಟವಿಲ್ಲದ ಆಕೆಗೆ, ಈ ಸಮಸ್ಯೆಗೆ ಉಪಾಯ ಹುಡುಕಲೇ ಬೇಕಾದ ಅನಿವಾರ್ಯತೆ ಬಂದೊದಗಿತ್ತು. ಆದರೆ ಏನೇ ಮಾಡಿದರೂ ಈ ಸಮಸ್ಯೆಯಿಂದ ಪಾರಾಗುವ ಬಗ್ಗೆ ಮಾತ್ರ ದಂಪತಿಗಳು ‘ದಂ’ ಬರುವವರೆಗೆ ಯೋಚಿಸಿದರೂ ಗೊತ್ತಾಗಿರಲಿಲ್ಲ. ಒಟ್ಟಿನಲ್ಲಿ ಆಡುವ ಹಾಗಿಲ್ಲ, ಅನುಭವಿಸುವ ಹಾಗಿಲ್ಲ ಅನ್ನೋ ಪರಿಸ್ಥಿತಿ.

ಆಗಿದ್ದಿಷ್ಟೇ….ಸಮಾಹಿತ ಹಾಗೂ ಸುಗುಣಿ ಮದುವೆಯಾಗಿ, ಮೊದಲ ಮಹಡಿಯಲ್ಲಿದ್ದ ಈ ಹೊಸ ಮನೆಗೆ ಬಾಡಿಗೆಗೆ ಬಂದು ಆರು ತಿಂಗಳು ಕಳೆದಿತ್ತು. ಬಾಡಿಗೆ ಮನೆಯನ್ನು ತೋರಿಸಲು ಬ್ರೋಕರ್ ಕರೆದುಕೊಂಡು ಬಂದಾಗ ಇಬ್ಬರಿಗೂ ಮನೆ ತುಂಬಾ ಇಷ್ಟವಾಗಿಬಿಟ್ಟಿತ್ತು. ಜೊತೆಗೆ ಬ್ರೋಕರ್ ಎಂಬ ಮನೆಮುರುಕನ ಹಿಂದೆ ನಾಲ್ಕು ದಿನಗಳಿಂದ ಮನೆ ಬಾಡಿಗೆ ಮನೆ ನೋಡಲು ಸುತ್ತಾಡಿದ್ದರಿಂದ, ಇನ್ನೂ ಹೆಚ್ಚು ಮನೆಗಳನ್ನು ನೋಡುವ ತ್ರಾಣವಾಗಲಿ, ಸಮಯವಾಗಲಿ ಇಬ್ಬರಿಗೂ ಇರಲಿಲ್ಲ. ಹೀಗಾಗಿ ಇದೇ ಮನೆಯನ್ನು ಬಾಡಿಗೆಗೆ ಹಿಡಿಯುವುದೆಂದು ನಿರ್ಧರಿಸಿದರು.  ಓನರ್ ಜೊತೆ ಮಾತನಾಡಲು ಕುಳಿತಾಗಲಂತೂ, ಓನರ್ ಗೋಪಾಲಯ್ಯ ಹಾಗೂ ಅವರ ಧರ್ಮಪತ್ನಿ ಸುಮಿತ್ರಮ್ಮ ತುಂಬ ಪ್ರೀತಿಯಿಂದ ಮಾತನಾಡಿಸಿದರು. ಗೋಪಾಲಯ್ಯನವರ ಮನೆಯ ಟೀಪಾಯ್ ಮೇಲಿದ್ದ ಒಂದು ಇಂಗ್ಲೀಷ್, ಒಂದು ಕನ್ನಡ ದಿನಪತ್ರಿಕೆ, ಕನ್ನಡದ ಎರಡು ಪ್ರಮುಖ ವಾರ ಪತ್ರಿಕೆಗಳು, ಇತ್ತೀಚೆಗಷ್ಟೇ ಪ್ರಕಟವಾಗಿದ್ದ ಖ್ಯಾತ ಸಾಹಿತಿಯೊಬ್ಬರ ಬೋಗಸ್ ಕಾದಂಬರಿ –ಈ ಎಲ್ಲ ಪರಮೋಚ್ಚ ಕನ್ನಡ ಸಾಹಿತ್ಯವು ಓನರ್ ಸಾಕಷ್ಟು ಓದಿಕೊಂಡವರು ಎಂಬುದನ್ನು ಸಾರಿ ಸಾರಿ ಹೇಳುತ್ತಿದ್ದವು. ಗೋಪಾಲಯ್ಯ ಮನೆಮುರುಕನಿಗೆ ಬಾಡಿಗೆ ಮನೆಯ ಕೀ ಕೊಡದೆ, ಹಸಿರು ಕ್ರಾಂತಿ ಆದಾಗ ಭಾರತದಲ್ಲಿ ಬಂದ ಬಂಪರ್ ಬೆಳೆಯನ್ನು ನೆನಪಿಸುವ ತಮ್ಮ ಎದೆಯ ಮೇಲಿನ ಕಪ್ಪು-ಬಿಳಿ ಮಿಶ್ರಿತ ಕೂದಲುಗಳನ್ನು ಪ್ರದರ್ಶಿಸುತ್ತ, ಗುಂಡುಗುಂಡಾದ ಶರೀರವನ್ನು ಹೊತ್ತುಕೊಂಡು ದುಡುದುಡು ಫಸ್ಟ್ ಫ್ಲೋರ್ ಗೆ ಹೋಗಿ, ಇಡೀ ಮನೆಯಲ್ಲಿ ಅಡ್ಡಾಡಿ ದಂಪತಿಗಳಿಗೆ ಮನೆ ತೋರಿಸಿದ್ದರು. ಮನೆಯಲ್ಲಿ ಯಥೇಚ್ಛವಾಗಿದ್ದ ಗಾಳಿ ಬೆಳಕು, ಮನೆಯ ಲೊಕೇಷನ್ ಎಲ್ಲವೂ ತುಂಬಾ ಚೆನ್ನಾಗಿತ್ತು. ಕೆಳಗೆ ಓನರ್, ಮೇಲೆ ಬಾಡಿಗೆದಾರರು. ಕಾವೇರಿ ಕನೆಕ್ಷನ್ ಜೊತೆಗೆ ಬೋರ್ವೆಲ್ ನೀರು. ಪ್ರತ್ಯೇಕ ಮೀಟರ್. ವಿಶಾಲವಾದ ಟೆರೆಸ್…..ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ. ಎಲ್ಲರೂ ಮನೆ ನೋಡಿಕೊಂಡು ಕೆಳಗೆ ಬರುವಷ್ಟರಲ್ಲಿ ಗೋಪಾಲಯ್ಯನವರ ಧರ್ಮಪತ್ನಿ ಮಾ.ಸ.ಸೌ. (ಮಾತೋಶ್ರಿ ಸಮಾನರಾದ ಸೌಭಾಗ್ಯವತಿ ಅಲ್ಲ, ಮಾತಿನಿಂದ ಸಡ್ಡುಹೊಡೆಯುವ ಸೌಭಾಗ್ಯವತಿ) ಸುಮಿತ್ರಮ್ಮ ಬೆಳ್ಳಿ ಬಟ್ಟಲನ್ನು ನಾಚಿಸುವ ಸ್ಟೀಲ್ ಬಟ್ಟಲುಗಳಲ್ಲಿ ಎಲ್ಲರಿಗೂ ಬಿಸಿ ಬಿಸಿ ಕಾಫಿ ತಂದಿರಿಸಿದ್ದರು. ಕಾಫಿ ಹೀರುತ್ತ ಬಾಡಿಗೆ ವಿಷಯ ಚರ್ಚೆಯಾಯಿತು.

“ಒಂಭತ್ತೂವರೆ ಸಾವಿರ ರೂಪಾಯಿ, ಹತ್ತು ತಿಂಗಳ ಬಾಡಿಗೆ ಅಡ್ವಾನ್ಸ್” ಗೋಪಾಲಯ್ಯ ಹೇಳಿದರು.

“ಸಾರ್, ನಾವು ಈಗಷ್ಟೇ ಮದುವೆಯಾಗಿದ್ದೇವೆ. ನಿಮಗೂ ಗೊತ್ತು….ಆರಂಭದಲ್ಲಿ ಸಂಸಾರ ಎಷ್ಟು ಕಷ್ಟ ಅಂತ. ಹೀಗಾಗಿ ಎಂಟೂವರೆ ಸಾವಿರ, ಹತ್ತು ತಿಂಗಳ ಬಾಡಿಗೆಯಾದರೆ ನಮಗೆ ಅನುಕೂಲವಾಗುತ್ತಿತ್ತು” ಎಂದ ಸಮಾಹಿತ. ಗೋಪಾಲಯ್ಯ ಏನೋ ಮಾತಾಡಬೇಕು ಅನ್ನುವಷ್ಟರಲ್ಲಿ ಮತ್ತೆ ಮಾ.ಸ.ಸೌ ಅವರು ಮಧ್ಯೆಯೇ ಮೂಗು ತೂರಿಸಿ “ನಮ್ದೂ ಬೇಡ. ನಿಮ್ದೂ ಬೇಡ. ಒಂಬತ್ತು ಸಾವಿರ. ಹತ್ತು ತಿಂಗಳ ಅಡ್ವಾನ್ಸ್. ಆಗ್ಬಹುದಾ?” ಅಂದರು. ಸಮಾಹಿತ-ಸುಗುಣಿಗೂ ಅಷ್ಟೇ ಬೇಕಾಗಿತ್ತು. ಇನ್ನೇನು ಟೋಕನ್ ಅಡ್ವಾನ್ಸ್ ಕೊಡಬೇಕು ಅನ್ನುವಷ್ಟರಲ್ಲಿ ಥಟ್ಟನೆ ಸುಮಿತ್ರಮ್ಮ ಕೇಳಿದ ಪ್ರಶ್ನೆಗೆ ಸಮಾಹಿತ ಬೆಚ್ಚಿದ್ದ.

“ಅಂದಹಾಗೆ, ನಿಮ್ಮದು ಯಾವ ಕಡೆ?”

ಈ ಪ್ರಶ್ನೆಗೆ ಹೇಗೆ ಉತ್ತರಿಸಬೇಕೆಂದು ಸಮಾಹಿತನಿಗೆ ಗೊತ್ತಾಗಲಿಲ್ಲ. ಮೇಡಂ ತಮ್ಮ ಊರು ಕೇಳುತ್ತಿದ್ದಾರೋ, ಜಾತಿ ಕೇಳುತ್ತಿದ್ದಾರೋ, ಅಥವಾ ಬೇರೆನನ್ನೋ ಕೇಳುತ್ತಿದ್ದಾರೋ ತಿಳಿಯದೆ ಗೊಂದಲಕ್ಕೊಳಗಾದ. ರಕ್ಷಣಾತ್ಮಕವಾಗಿ ಆಡಲು ನಿರ್ಧರಿಸಿದವನೇ, “ನಮ್ಮದು ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಯ ವಡಗಾಂವ್ ಬುದ್ರುಕ್ ಊರು” ಎಂದಿದ್ದ.

“ಛೆ ಛೆ ನಾನು ಊರು ಕೇಳ್ಳಿಲ್ಲ…..ಅಂದ್ರೆ ನೀಮ್ಮದು ಯಾವ ಕಮ್ಯುನಿಟಿ ಅಂತ?” ಎಂದು ರಾಗವಾಗಿ, ಕನ್ನಡದ ಖ್ಯಾತ ಸೀರಿಯಲ್ ಒಂದರಲ್ಲಿನ ಪೆದ್ದು ಶಾರದಮ್ಮನ ಪಾತ್ರ ಕೇಳುವ ಹಾಗೆ ತಾನ್ ಪುರಾ ಇಲ್ಲದೆ ರಾಗವಾಗಿ ಸುಮಿತ್ರಮ್ಮ ಕೇಳಿದರು.

ಸಮಾಹಿತ ಸುಲಭವಾಗಿ ಸುಳ್ಳು ಹೇಳಬಹುದಾಗಿದ್ದರೂ, ಆತನಿಗಾಗಲಿ ಸುಗುಣಿಗಾಗಲಿ ಸುಳ್ಳು ಹೇಳುವುದು ಇಷ್ಟವಿರಲಿಲ್ಲ. ಗೋಪಾಲಯ್ಯ-ಸುಮಿತ್ರಮ್ಮ ಸಾಕಷ್ಟು ಸಂಪ್ರದಾಯಸ್ಥರಂತೆ ಕಾಣುತ್ತಿದ್ದುದರಿಂದ ಅವರಿಂದ ಸತ್ಯ ಮುಚ್ಚಿಟ್ಟು ಚೀಟ್ ಮಾಡುವುದು ಬೇಡ ಅನ್ನಿಸಿತು.

“ನನ್ನದು ……………ಕಮ್ಯುನಿಟಿ. ಸುಗುಣಿಯದ್ದು…………….ಕಮ್ಯುನಿಟಿ. ನಮ್ಮದು ಇಂಟರ್ ಕಾಸ್ಟ್ ಮ್ಯಾರೇಜ್” ಅಂದ..

“ಲವ್ ಮ್ಯಾರೇಜ್ಜಾ?” ಧಟ್ಟನೆ ಕೇಳಿದ್ದರು ಮಾ.ಸ.ಸೌ.

ಹೌದೆಂದು ಇಬ್ಬರೂ ತಲೆಯಾಡಿಸಿದರು. ತಮ್ಮದು ಇಂಟರ್ ಕಾಸ್ಟ್ ಮ್ಯಾರೇಜ್ ಅಂದ ತಕ್ಷಣ ಈ ಮನೆ ತಮ್ಮಿಂದ ಕೈಬಿಟ್ಟಿತು ಅಂದುಕೊಂಡಿದ್ದ ಸಮಾಹಿತ. ಏಕೆಂದರೆ ಈ ಹಿಂದೆ ಕೂಡ ನಾಲ್ಕೈದು ಕಡೆ ಮನೆ ಓನರ್ ಗಳು ಎಲ್ಲದಕ್ಕೂ ಒಪ್ಪಿ ಕೊನೆಗೆ ಇವರು ತಮ್ಮ ಕಮ್ಯುನಿಟಿಯಲ್ಲ ಎಂದ ತಕ್ಷಣ, ಏನೋ ಕಾರಣ ಹೇಳಿ ಮನೆ ಬಾಡಿಗೆಗೆ ನೀಡಿರಲಿಲ್ಲ. ಇಲ್ಲಿ ಮಾತ್ರ ನಡೆದದ್ದೇ ಬೇರೆ. ಸುಮಿತ್ರಮ್ಮ ಸರಿಯಾಗಿ ಹನ್ನೊಂದು ನಿಮಿಷ 21 ಸೆಕೆಂಡು 17 ಮೈಕ್ರೋ ಸೆಕೆಂಡು ಯಾರಿಗೂ ಮಧ್ಯ ಪ್ರವೇಶಿಸಲು ಅನುವಾಗದಂತೆ ನಿರಂತರವಾಗಿ, ಪಕ್ಕಾ ಪ್ರಗತಿಪರ ನಾಯಕರಂತೆ “ಜಾತಿಯೆಲ್ಲ ಮಿಥ್ಯ, ಮನುಷ್ಯತ್ವವೊಂದೇ ಸತ್ಯ, ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ, ಮನುಷ್ಯ ಜಾತಿ ತಾನೊಂದೇ ವಲಂ, ನೂರ ದೇವರನೆಲ್ಲ ನೂಕಾಚೆ ದೂರ, ತಮಗಂತೂ ಜಾತಿ ವ್ಯವಸ್ಥೆಯಲ್ಲಿ ನಂಬಿಕೆಯೇ ಇಲ್ಲ,…”ಎಂದೆಲ್ಲ ಯದ್ವಾತದ್ವಾ ಮಾತಾಡಿ ನವದಂಪತಿಗಳಿಗೆ ಆನಂದವನ್ನುಂಟುಮಾಡಿದ್ದರು. ಅಂದೇ ಸಾಯಂಕಾಲ ರೆಂಟ್ ಅಗ್ರಿಮೆಂಟ್ ಗೆ ಸಹಿ ಬಿದ್ದಿತ್ತು. ಬ್ರೋಕರ್ ತನ್ನ ಹರುಕು ಮುರುಕು ಇಂಗ್ಲೀಷ್ ನಲ್ಲಿ ಕಾಗೆ ಕಾಲು ಗುಬ್ಬಿ ಕಾಲು ಕೆತ್ತಿ ಸಹಿ…….ಓ ಸಾರಿ……ಸಿಗ್ನೇಚರ್ ಮಾಡಿದ್ದ.

ಒಂದು ಶುಭ ದಿನ ಮಿನಿ ಲಾರಿಯೊಂದರಲ್ಲಿ ಎಲ್ಲ ಸಾಮಾನುಗಳನ್ನು ಹೊಸ ಮನೆಗೆ ಶಿಫ್ಟ್ ಮಾಡಲಾಯಿತು. ನೂತನ ದಂಪತಿಗಳ ಸಂಸಾರ ಶುರುವಾಯಿತು. ಸುಮಿತ್ರಮ್ಮ ಹಾಗೂ ಗೋಪಾಲಯ್ಯನವರಿಗೆ ಮಕ್ಕಳಿರಲಿಲ್ಲ ಎಂದು ನಿಧಾನವಾಗಿ ಸುಗುಣಿ-ಸಮಾಹಿತರಿಗೆ ತಿಳಿದಿತ್ತು. ಸುಮಿತ್ರಮ್ಮನೇ ಪರೋಕ್ಷವಾಗಿ ಈ ವಿಷಯ ತಿಳಿಸಿದ್ದರು. ಮಕ್ಕಳಿರುತ್ತಿದ್ದರೆ ಬಹುಶಃ ಸಮಾಹಿತ, ಸುಗುಣಿಯ ವಯಸ್ಸಿನವರೇ ಆಗಿರುತ್ತಿದ್ದರು. ಆದರೆ ಈಗ ಈ ಇಬ್ಬರೂ ಆ ಇಬ್ಬರಿಗೆ ಮಕ್ಕಳಂತಾಗಿದ್ದರು. ಮನೆಗ ಬಂದ ಎರಡನೆಯ ದಿನವೇ ತಮ್ಮನ್ನು ಸರ್ ಎಂದು ಕರೆಯದೆ ಅಂಕಲ್ ಹಾಗೂ ಆಂಟಿ ಎಂದು ಕರೆಯಬೇಕೆಂದು ಗೋಪಾಲಯ್ಯ ತಾಕೀತು ಮಾಡಿದ್ದರು. ತನ್ನ ಮನೆಯಲ್ಲಿ ವಿರೋಧ ಕಟ್ಟಿಕೊಂಡು ಮದುವೆಯಾಗಿದ್ದ ಸುಗುಣಿಯನ್ನು ಆಕೆಯ ತಂದೆ, ತಾಯಿ, ಅಣ್ಣಂದಿರು, ನೆಂಟರು ಬಾಯಿಕಾಟು ಮಾಡಿದ್ದರು. ಹೀಗಾಗಿ ಆಕೆಯಂತೂ ಆಂಟಿ-ಅಂಕಲ್ ಎಂದು ಕರೆಯುವ ಬದಲಾಗಿ ಮಮ್ಮಿ-ಡ್ಯಾಡಿ ಎಂದು ಕರೆಯುವುದೊಂದು ಬಾಕಿಯಿತ್ತು. ಸುಗುಣಿ, ಸುಮಿತ್ರಮ್ಮನವರ ಜಾತಿಯವಳೇ ಆಗಿದ್ದ ಕಾರಣ ಸ್ವಲ್ಪ ಹೆಚ್ಚೇ ಅನಿಸುವಷ್ಟು ವಾತ್ಸಲ್ಯ ನಾಲ್ಕೇ ದಿನದಲ್ಲಿ ಬೆಳೆದು ಬಿಟ್ಟಿತ್ತು. ಗೋಪಾಲಯ್ಯ ರಿಟೈರ್ ಆಗಿದ್ದರಿಂದ ಧಾರಾಳವಾಗಿ ವಾತ್ಸಲ್ಯ ಹರಿಸುತ್ತ ಕೂರುವಷ್ಟು ಸಮಯ ಅವರ ಬಳಿಯೂ ಇತ್ತು.

ಆದರೆ ಸಮಸ್ಯೆ ಶುರುವಾಗಿದ್ದು ಕೆಲ ದಿನಗಳ ಕಳೆದ ಬಳಿಕ. ನವ ದಂಪತಿಗಳು ಜಗತ್ಪ್ರಸಿದ್ಧ ಸಾಫ್ಟ್ ವೇರ್ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರು. ಜಗತ್ಪ್ರಸಿದ್ದ ಕಂಪನಿ ಎಂದ ಮೇಲೆ ಕೇಳಬೇಕೆ?, ಇಬ್ಬರಿಗೂ ಲಕ್ಷಕ್ಕೂ ಮೇಲ್ಪಟ್ಟು ಸಂಬಳ. ಹಾಗೆಯೇ ಸ್ವಾತಂತ್ರ್ಯ ಪೂರ್ವದಲ್ಲಿ ಅಂಡಮಾನ್ ಜೈಲಿನ ಕಾಲಾಪಾನಿಯ ಕೈದಿಗಳಿಗೆ ನೀಡಲಾಗುತ್ತಿದ್ದ ಕೆಲಸಕ್ಕಿಂತ ಹೆಚ್ಚು ಕೆಲಸ ಇಬ್ಬರ ಪಾಲಿಗೂ ಇರುತ್ತಿತ್ತು. ಹೀಗಾಗಿ ಗಂಡ-ಹೆಂಡತಿ ನಿತ್ಯವೂ ದುಡಿದುಡಿದು, ಸ್ಟಾರ್ಚ್ ಹಾಕಿರುತ್ತಿದ್ದ ಬಟ್ಟೆಗಳನ್ನು ಹಿಗ್ಗಾಮುಗ್ಗಾ ಸುಕ್ಕು ಮಾಡಿಕೊಂಡು ಹೈರಾಣಾಗಿ ಮನೆಗೆ ಬರುತ್ತಿದ್ದರು. ಮನೆಗೆ ಬಂದ ಮೇಲೆ ಸುಗುಣಿಗೆ ಅಡಿಗೆ ಮಾಡುವುದು ಹೋಗಲಿ, ಟೀ ಮಾಡುವಷ್ಟು ಕೂಡ ತ್ರಾಣ ಇರುತ್ತಿರಲಿಲ್ಲ. ಒಂದು ದಿನ ಡೋಮಿನೋಸಂ, ಮತ್ತೊಂದು ದಿನ ಪಿಝಾ ಹಟ್ಟಂ, ಮಗದೊಂದು ದಿನ ಮಯೂರಿಯಂ, ಅದರ ನೆಕ್ಸ್ಟ್ ದಿನ ನಂದಿನಿ ಡೀಲಕ್ಸಂ ಹೀಗೆ ಹೋಟಲ್ ನಿಂದ ಊಟ-ತಿಂಡಿ ಬರುವುದು ಸಾಮಾನ್ಯವಾಗಿತ್ತು. ಇಂತಹ ಒತ್ತಡದ ಬದುಕಿನಲ್ಲೇ ಸುಗುಣಿ ಸಾಧ್ಯವಾದಗಲೆಲ್ಲ ಮನೆಯ ಹೊರಗೆ ರಂಗೋಲಿ ಹಾಕುವುದು, ದೇವರ ಪೂಜೆ ಮಾಡುವುದು ಮಾಡುತ್ತಿದ್ದಳು.

ನಿಜವಾದ ಸಮಸ್ಯೆ ಇಲ್ಲಿಂದ ಶುರುವಾಯಿತು ಅನ್ನಬಹುದು.ಸುಮಿತ್ರಮ್ಮ ಅಂದು ಮಾಡಿದ ಪ್ರಗತಿಪರ ಭಾಷಣಕ್ಕೂ ಅವರ ವರ್ತನೆಗೂ ಸಂಬಂಧವೇ ಇಲ್ಲ ಎಂಬುದು ಸುಗುಣಿಗೆ ನಿಧಾನವಾಗಿ ತಿಳಿಯುತ್ತ ಹೋಗಿತ್ತು. ನಾಗರ ಪಂಚಮಿಯಿಂದ ವಿಜಯದಶಮಿಯವರೆಗಿನ ಅವಧಿಯಲ್ಲಿ ನವದಂಪತಿಗಳು ಪಟ್ಟ ಪಾಡು ಅಷ್ಟಿಷ್ಟಲ್ಲ. “ನೀನು ದಿನಾಲೂ ಯಾಕೆ ಮನೆ ಮುಂದೆ ರಂಗೋಲಿ ಹಾಕಲ್ಲ?”, “ಇವತ್ತು ಗ್ರಹಣ. ಮನೆಗೆ ವಾಪಸ್ ಬಂದ್ಮೇಲೆ ಸ್ನಾನ ಮಾಡಿಲ್ವಾ?”, “ಇವತ್ತು ಗಣೇಶ ಚತುರ್ಥಿ. ಮನೇಲಿ ಮೋದಕ ಮಾಡಿದಿಯಾ ತಾನೆ?”, “ನಿಮ್ಮ ಕಡೆ (ನಿಮ್ಮ ಜಾತಿಯಲ್ಲಿ) ವರಮಹಾಲಕ್ಷ್ಮಿ ಹಬ್ಬ ಮಾಡಲ್ವಾ?”, ಹೀಗೆ ಆಯಾಯಾ ಸಂದರ್ಭಕ್ಕೆ, ಹಬ್ಬಕ್ಕೆ ತಕ್ಕಂತೆ ಮಿಲಿಯನ್ ಗಟ್ಟಲೆ ಪ್ರಶ್ನೆ ಕೇಳಿ ಸುಗುಣಿಯನ್ನು ಸುಸ್ತು ಮಾಡಿದ್ದರು ಸುಮಿತ್ರಮ್ಮ. ಬರೀ ಪ್ರಶ್ನೆ ಕೇಳಿದ್ದರೆ ಪರವಾಗಿರಲಿಲ್ಲ. ಆದರೆ ಅವರು ಕೇಳುತ್ತಿದ್ದ ರೀತಿ ಹೇಗಿರುತ್ತಿತ್ತೆಂದರೆ “ಎಂಥ ಜನಾನಪ್ಪ ನೀವು? ಒಂಚೂರು ಸಂಪ್ರದಾಯ, ನೇಮ ನಿಷ್ಠೆ ಅಂತ ಬೇಡ್ವ. ಸಮಾಹಿತಂದು ಬಿಡು. ಅವನು ಬೇರೆ ಜಾತಿ. ನೀನಾದ್ರೂ ಮಾಡ್ಬಾರ್ದಾ? ನಿಂದು ನಮ್ದು ಒಂದೇ ಜಾತಿ ಅಲ್ವ?” – ಈ ಎಲ್ಲ ಭಾವಗಳನ್ನು ಸುಮಿತ್ರಮ್ಮ ತಮ್ಮ ಪ್ರಶ್ನೆಯಲ್ಲಿ ಧ್ವನಿಸುತ್ತಿದ್ದರು. ಒಂದೆರಡು ಬಾರಿಯಂತೂ ಪರೋಕ್ಷವಾಗಿ ಸುಮಿತ್ರಮ್ಮ ಹೀಗೆ ಹೇಳಿಯೂ ಇದ್ದರು. ಮನೆಯ ಎದುರು ರಂಗೋಲಿ ಹಾಕಲು ಸಮಯವಿಲ್ಲದ ಸುಗುಣಿ, ಗೌರಿ ಹಬ್ಬಕ್ಕೆ ಮೋದಕ ಮಾಡುವುದು, ಆಚಾರ್ಯರೇಣುಕರು ರಾಜ್ಯದ ಡಿಸಿಎಂ ಆಗುವಷ್ಟೇ ಅಸಾಧ್ಯವಾಗಿತ್ತು. ಈ ಚೊರೆ ಎಷ್ಟು ಹೆಚ್ಚಿತೆಂದರೆ ಹಬ್ಬ-ಹರಿದಿನ-ಸೂರ್ಯಗ್ರಹಣ-ಚಂದ್ರಗ್ರಹಣಕ್ಕೆ ಎರಡು ದಿನ ಮೊದಲೇ ಸುಗುಣಿಯ ರಕ್ತದೊತ್ತಡ ಜಾಸ್ತಿಯಾಗಿ, ಮೂಡ್ ಆಫ್ ಆಗಿ, ಅದರಿಂದಾಗಿ ಸಮಾಹಿತನ ಜೊತೆ ವಿನಾಕಾರಣ ಜಗಳ ಆಗಿ ಇನ್ನೇನೇನೆಲ್ಲ ಆಗಿ, ಆಗಬಾರದ್ದೆಲ್ಲ ಆಗಿ ಬಿಡುತ್ತಿತ್ತು.

ಮೊದಲೆಲ್ಲ ಬರೀ ಪ್ರಶ್ನೆಯಾಗಿ ಕಾಡಲಾರಂಭಿಸಿದ್ದು, ನಂತರ ಆದೇಶಗಳಾಗಿ ಮಾರ್ಪಟ್ಟವು. ಪ್ರಶ್ನಾರ್ಥಕ ಚಿಹ್ನೆಗಳು ಮಾಯವಾದವು. “ರಂಗೋಲಿ ಹಾಕು, ತೋರಣ ಕಟ್ಟು, ಅರಿಷಿನ ದಾರ ಕಟ್ಕೋ, ಇವತ್ತು ರಾತ್ರಿ ಸಮಾಹಿತನ ಜೊತೆ ಮಲಗ್ಬೇಡ, ದಿನ ಚನ್ನಾಗಿಲ್ಲ…..”ಹೀಗೆಲ್ಲ ಸುಮಿತ್ರಮ್ಮ ಮಾತಾನಾಡಲಾರಂಭಿಸಿದ್ದರು. ಸುಗುಣಿ ಸಿಕ್ಕಾಗಲೆಲ್ಲ ತಮ್ಮದು ಶ್ರೇಷ್ಠ ಜಾತಿ. ಅಷ್ಟೇ ಅಲ್ಲ ಆ ಶ್ರೇಷ್ಠ ಜಾತಿಯ ಸಬ್ ಕಾಸ್ಟ್ ಗಳಲ್ಲಿರುವ ಮತ್ತೂ ಶ್ರೇಷ್ಠವಾಗಿರುವ ಜಾತಿ ತಮ್ಮದು. ತಮ್ಮ ಜಾತಿಯ ವಿಶಿಷ್ಟತೆ, ಆಚಾರ, ಪದ್ಧತಿ ಇತ್ಯಾದಿಗಳ ಬಗ್ಗೆ ಸಮಾ ಕೊರೆಯುತ್ತಿದ್ದರು. ಆಗಾಗ ಸಮಾಹಿತನ ಜಾತಿಯ ಬಗ್ಗೆ ನೇರವಾಗಿಯೇ ಕೀಳಾಗಿ ಮಾತಾಡುತ್ತಿದ್ದರು ಕೂಡ.

ಪರಿಸ್ಥಿತಿ ಹೀಗಿರುತ್ತ ಒಂದು ದಿನ……

ವಿದೇಶದಲ್ಲಿ ಯಾವುದೋ ಫೀಸ್ಟ್ ಇದ್ದದ್ದರಿಂದ ಭಾರತದಲ್ಲಿನ ಸುಗುಣಿ ಕೆಲಸ ಮಾಡುತ್ತಿದ್ದ ಜಗತ್ಪ್ರಸಿದ್ಧ ಎಂಎನ್ಸಿ ಕಂಪನಿಗೆ ರಜಾ ಇತ್ತು. ಸುಮಿತ್ರಮ್ಮನಿಂದ ತಪ್ಪಿಸಿಕೊಳ್ಳಲು ಸುಗುಣಿ, ಪಕ್ಕದ ಮನೆಗೆ ಹೋಗಿ ಮಾತನಾಡುತ್ತ ಕುಳಿತಿದ್ದಳು. ಹೀಗೆ ಮಾತುಮಾತಲ್ಲೇ ಸುಗುಣಿ, ಸುಮಿತ್ರಮ್ಮನವರಿಗೆ ಮಕ್ಕಳಿಲ್ಲದರ ಬಗ್ಗೆ ಬೇಸರ ವ್ಯಕ್ತಪಡಿಸಿದಳು. ಆಗ ಪಕ್ಕದ ಮನೆಯಾಕೆ ಹೌಹಾರಿ, “ಅಯ್ಯೋ ಅವರಿಗೇನ್ ಬಂತ್ರಿ ರೋಗ… ನಿಮ್ಮ ಹತ್ರ ತಮಗ ಮಕ್ಳಿಲ್ಲ ಅಂತ ಹೇಳಿದ್ರಾ…? ರಾಮ ರಾಮ…!! ಏನು ಕಾಲ ಬಂತು ನೋಡ್ರಿ…ಅವರಿಗೆ ಮಗ ಸೊಸೆ ಎಲ್ಲಾ ಇದಾರೆ ಕಣ್ರೀ. ಆದರೆ ಇವರ ಜೊತೆ ಇರಲ್ಲ. ಬೇರೆ ಮನೆ ಮಾಡ್ಕೊಂಡು ಇರ್ತಾರೆ ಅಷ್ಟೆ” ಎಂದರು. ಸುಗುಣಿಗೆ ಒಂದು ಕ್ಷಣ ಏನೂ ಗೊತ್ತಾಗಲಿಲ್ಲ.

“ಮತ್ತೆ ನಮ್ಮ ಹತ್ರ ಹಾಗ್ಯಾಕೆ ಹೇಳಿದರು?” ಅಂತ ಕೇಳಿದಳು. ಡ್ರಾಯಿಂಗ್ ರೂಮಿನಲ್ಲಿ ಕುಳಿತಿದ್ದರೂ, ಅಭ್ಯಾಸ ಬಲದಂತೆ ಆ ಕಡೆ ಈ ಕಡೆ ನೋಡಿದ ಪಕ್ಕದ ಮನೆಯಾಕೆ, ತೀರ ಮೆಲುದನಿಯಲ್ಲಿ “ಅಯ್ಯೋ ಅವರ ಮಗಂದು ಲವ್ ಮ್ಯಾರೇಜು. ಲವ್ವಲ್ಲಿ ಜಾತಿ ಯಾರಾದ್ರೂ ನೋಡ್ತಾರಾ? ಸರಿ, ಅವರ ಮಗಾನೂ ಜಾತಿ ನೋಡ್ತೇ ಲವ್ ಮಾಡ್ದ. ಹುಡುಗಿದು ಯಾವುದೋ ಕೆಳಗಿನ ಜಾತಿ ಅಂತ ಸುಮಿತ್ರಮ್ಮಂಗೆ ಗೊತ್ತಾಯ್ತು. ನೀವು ನಂಬಲ್ಲ ಆದ್ರೂ ಹೇಳ್ತಿನಿ. ಈ ಸುಮಿತ್ರಮ್ಮ ತಮ್ಮ ಸೊಸೆಗೆ ಮನೆ ಹೊಸಿಲು ತುಳಿಯೋದಕ್ಕೂ ಬಿಡ್ಲಿಲ್ಲ. ಗೋಪಾಲಯ್ಯ ಮಗನ ಮದುವೆನ ಒಪ್ಕೊಂಡ್ರೂ ಸುಮಿತ್ರಮ್ಮ ರಂಪ ರಾಮಾಯಣ ಮಾಡಿ ಸೊಸೆನ ಮನೆ ಒಳಗೆ ಬಿಟ್ಟಕೊಳ್ಳಲೇ ಇಲ್ಲ. ಅದಕ್ಕೆ ಮಗ ಬೇರೆ ಮನೆ ಮಾಡಿ ಇದ್ದಾನೆ. ಜಾತಿ ಅಂದ್ರೆ ಅಷ್ಟು ಮುಖ್ಯ ಆ ಯಮ್ಮಂಗೆ” ಅಂದರು ಪಕ್ಕದ ಮನೆಯಾಕೆ.

ಗಿರ್ ಎಂದು ಸುತ್ತುತ್ತಿದ್ದ ಸುಗುಣಿಯ ತಲೆ ಸಮಸ್ಥಿತಿಗೆ ಬರಲು ಕೆಲವು ನಿಮಿಷಗಳೇ ಹಿಡಿದವು. ವಾಪಸ್ ಮನೆಗೆ ಬಂದಳವಳೇ ಸಮಾಹಿತನಿಗೆ ಹಿಂಗಿಂಗೆ ಹಿಂಗಿಂಗೆ ಎಂದು ಹೇಳಿ, ಸುಮಿತ್ರಮ್ಮನ ಕಾಟದಿಂದ ತಪ್ಪಿಸಿಕೊಳ್ಳಬೇಕಾದರೆ ಹಾಗೂ ತಮ್ಮ ತಲೆ ಕೂದಲುಗಳು ಬಿಳಿಯಾಗುವುದನ್ನು ತಡೆಯಬೇಕಾದರೆ, ಬೇರೆ ಮನೆ ನೋಡುವುದೇ ಉತ್ತಮ ಎಂದು ಹೇಳಿದಳು. ಸಮಾಹಿತ ತುಂಬ ಹರ್ಷದಿಂದ ಇದನ್ನು ಒಪ್ಪಿದ. ಸುಮಿತ್ರಮ್ಮನ ಮಾತಿನ ಟಾರ್ಚರ್ ನಿಂದಾಗಿ ಸುಗುಣಿ ಅನಗತ್ಯವಾಗಿ ತನ್ನ ಫ್ರಸ್ಟ್ರೇಷನ್ನನ್ನು ಸಮಾಹಿತನ ಮೇಲೆ ತೀರಿಸಿಕೊಳ್ಳುತ್ತಿದ್ದಳು. ಹೀಗಾಗಿ ಇಬ್ಬರ ನಡುವೆ ಅನಗತ್ಯವಾಗಿ ಮಾತಿನ ಚಕಮಕಿ ನಡೆಯುತ್ತಿದ್ದವು. ಜಾತಿಗಾಗಿ ಸ್ವಂತ ಸೊಸೆಯನ್ನೇ ಒಪ್ಪದ ಸುಮಿತ್ರಮ್ಮ ತಮ್ಮ ನಡುವೆ ಡಿವೋರ್ಸ್ ಮಾಡಿಸಲೂ ಹಿಂಜರಿಯುವುದಿಲ್ಲ ಎಂದು ಸುಗುಣಿಗೆ ಅನ್ನಿಸಿತ್ತು. ಬರೀ ಜಾತಿ ಜಾತಿ ಎಂದು 24 ಗಂಟೆಯೂ ಬಡಿದುಕೊಳ್ಳುವ ಜನಕ್ಕೆ ಬುದ್ಧಿ ಬರುವಾದದರೂ ಯಾವಾಗ ಎಂದು ಆಕೆ ಯೋಚಿಸುತ್ತಿದ್ದಳು. ಫುಲೆ, ಕಬೀರ್, ಬಸವಣ್ಣ, ಮತ್ತೆ ಹುಟ್ಟಿಬರಬಾರದೇ ಎನಿಸುತ್ತಿತ್ತು.

ಸಮಾಹಿತ ಅದಾಗಲೇ ಹೊಸ ಬಾಡಿಗೆ ಮನೆ ನೋಡಿ ಬಂದಿದ್ದ. ಹೊಸ ಮನೆ ಯಾವ ರೀತಿಯಲ್ಲಿಯೂ ಅವರು ಈಗಿದ್ದ ಮನೆಗೆ ಸಮವಾಗಿಲ್ಲದಿದ್ದರೂ ಮನೆ ಬದಲಾಯಿಸಲು ದಂಪತಿಗಳು ನಿರ್ಧರಿಸಿಯಾಗಿತ್ತು.

ಇನ್ನೇನು ಒಂದೆರಡು ದಿನದಲ್ಲೇ ಮನೆ ಬದಲಾಯಿಸುಬೇಕು ಅನ್ನುವಷ್ಟರಲ್ಲಿ…..

ತಮ್ಮ 1987 ಮಾಡೆಲ್ ಬಜಾಜ್ ಸ್ಕೂಟರ್ ಮೇಲೆ ಹೋಗುತ್ತಿದ್ದ ಗೋಪಾಲಯ್ಯನವರಿಗೆ ಆಟೋರಿಕ್ಷಾ ಬಂದು ಗುದ್ದಿತು. ಗೋಪಾಲಯ್ಯನವರನ್ನು ಆಸ್ಪತ್ರೆ ಸೇರಿಸಲು ಸುತ್ತಲಿದ್ದ ಸೊಫಿಸ್ಟಿಕೇಟೆಡ್ ಜನ ಮುಂದಾಗದ ಕಾರಣ, ಕೊನೆಗೆ ಪೋಲಿಸರೇ ಬಂದು ಹತ್ತಿರದ ಖಾಸಗಿ ಆಸ್ಪತ್ರೆಗೆ ಸೇರಿಸಿದರು. ಸುಮಿತ್ರಮ್ಮನವರಿಗೆ ಸುದ್ಧಿ ತಿಳಿದು ಆಸ್ಪತ್ರೆ ತಲುಪಿದಾಗ ಗೋಪಾಲಯ್ಯನವರ ತಲೆ, ಕಾಲು, ಭುಜಕ್ಕೆ ಬ್ಯಾಂಡೇಜ್ ಸುತ್ತಿ ಮಲಗಿಸಲಾಗಿತ್ತು. ಅವರಿಗೆ ತುರ್ತು ಆಪರೇಷನ್ ಮಾಡಬೇಕಿತ್ತು. ಸುಮಿತ್ರಮ್ಮನ ಪರ್ಸಿನಲ್ಲಿ ಎರಡು ಕ್ರೆಡಿಟ್ ಕಾರ್ಡ್ ಹಾಗೂ ಒಂದು ಡೆಬಿಟ್ ಕಾರ್ಡ್ ನೋಡಿದ ಖಾಸಗಿ ಆಸ್ಪತ್ರೆಯವರು ಗೋಪಾಲಯ್ಯನವರನ್ನು ತಕ್ಷಣ ಆಪರೇಷನ್ ಥೇಟರ್ ನೊಳಕ್ಕೆ ಕರೆದೊಯ್ದರು. ಅಷ್ಟರಲ್ಲಿ ಅಪಘಾತದ ಸುದ್ಧಿ ತಿಳಿದು ಸುಗುಣಿ-ಸಮಾಹಿತ ಕೂಡ ಬಂದು ಸುಮಿತ್ರಮ್ಮನವರನ್ನು ಕೂಡಿಕೊಂಡರು. ಕೆಲ ಹೊತ್ತಿನಲ್ಲಿ ಆಪರೇಷನ್ ಥೇಟರ್ ನೊಳಗಿಂದ ಹೊರ ಬಂದ ಜೂನಿಯರ್  ಡಾಕ್ಟರ್ ಪಾಶ್ಚಾಪುರೆ, “ಮೇಡಂ, ನಿಮ್ಮ ಹಸ್ಬೆಂಡ್ ಗೆ ಅರ್ಜೆಂಟಾಗಿ ಬ್ಲಡ್ ಕೊಡಬೇಕು. ನಮ್ಮಲ್ಲಿ ಬ್ಲಡ್ ಇಲ್ಲ. ಅರೇಂಜ್ ಮಾಡಿ. ಕ್ವಿಕ್” ಎಂದು ಹೇಳಿ ಮಾಯವಾದರು. ಕ್ರೆಡಿಟ್ ಕಾರ್ಡ್ ಇದ್ದರೆ ಎಲ್ಲವೂ ಸಾಧ್ಯ ಅಂದುಕೊಂಡಿದ್ದ ಸುಮಿತ್ರಮ್ಮ ತಕ್ಷಣ ತಮ್ಮ ಮೊಬೈಲ್ ನಿಂದ ನೆಂಟರಿಗೆಲ್ಲ ಫೋನ್ ಮಾಡಲಾರಂಭಿಸಿದರು. ಇಪ್ಪತ್ತು ನಿಮಿಷ ಕಳೆದರೂ ಸುಮಿತ್ರಮ್ಮನವರಿಗೆ ತಮ್ಮ ಯಾವೊಬ್ಬ ನೆಂಟರಿಂದಲೂ ರಕ್ತ ನೀಡಲು ಕರೆಸಲಾಗಲಿಲ್ಲ. ಅಷ್ಟರಲ್ಲಾಗಲೇ ಡಾ. ಪಾಶ್ಚಾಪುರೆ ಎರಡು ಬಾರಿ ಬಂದು “ಅರೇಂಜ್ ಆಯ್ತಾ?” ಎಂದು ಕೇಳಿ ಸುಮಿತ್ರಮ್ಮನವರ ಹೆಚ್ಚುತ್ತಿರುವ ರಕ್ತದೊತ್ತಡಕ್ಕೆ ತಮ್ಮ ಅಮೂಲ್ಯ ಕೊಡುಗೆ ನೀಡಿ ಹೋಗಿದ್ದರು. ಬ್ಲಡ್ ಬ್ಯಾಂಕ್ ಗಳಿಗೆ ಸುಮಿತ್ರಮ್ಮ ಏಕೆ ಫೋನ್ ಮಾಡುತ್ತಿಲ್ಲ ಎಂಬುದು ಸುಗುಣಿ ಸಮಾಹಿತರಿಗೆ ಅರ್ಥವಾಗಿತ್ತು. ಕೊನೆಗೂ ತಮ್ಮ ನೆಂಟರು ಯಾರೊಬ್ಬರೂ ಸಿಗದೇ ಸುಮಿತ್ರಮ್ಮ ಕೈಚೆಲ್ಲಿ ಕುಳಿತಾಗ ಸುಗುಣಿಗೆ ಕೆಡುಕೆನಿಸಿತು. ಸುಮಿತ್ರಮ್ಮನ ಬಳಿ ಹೋದವಳೇ, “ಆಂಟಿ, ಸಮಾಹಿತಂದು ‘ಓ’ ಪಾಸಿಟಿವ್ ಬ್ಲಡ್ ಗ್ರೂಪ್. ಅಂದ್ರೆ ಯೂನಿವರ್ಸಲ್ ಡೋನರ್. ನಿಮಗೆ ಪರ್ವಾಗಿಲ್ಲ ಅಂದ್ರೆ, ಸಮಾಹಿತಾನೇ ಬ್ಲಡ್ ಡೊನೇಟ್ ಮಾಡ್ತಾರೆ. ಆದ್ರೆ ಅವರು ನಿಮ್ಮ ಜಾತಿ ಅಲ್ಲ. ಗೊತ್ತಲ್ವ? ನಿಮಗೆ ನಡೆಯತ್ತಾ?” ಎಂದು ಕೇಳಿದಳು.

ಕೆಲ ಹೊತ್ತಿನ ನಂತರ ಸುಗುಣಿ-ಸಮಾಹಿತ ಆಸ್ಪತ್ರೆಯಿಂದ ಹೊರಟರು. ಸಮಾಹಿತ, ಕೈಮೇಲೆ ಸೂಜಿ ಚುಚ್ಚಿದ್ದ ಜಾಗವನ್ನು ಹತ್ತಿಯಲ್ಲಿ ಒರೆಸಿಕೊಂಡು, ರಕ್ತವಂಟಿದ್ದ ಹತ್ತಿಯನ್ನು ಡಸ್ಟ್ ಬಿನ್ ನಲ್ಲಿ ಒಗೆದು ಸುಗುಣಿಯ ಕೈಹಿಡಿದು ನಡೆಯತೊಡಗಿದ.

……

 

ಚೋಲಿ ಕೆ ಪೀಛೆ ಕ್ಯಾ ಹೈ ಹಾಗೂ ಸೆಕ್ಸಿ ಸೆಕ್ಸಿ ಸೆಕ್ಸಿ ಮುಝೆ ಲೋಗ್ ಬೋಲೆ….

ಕೃಪೆ – ದಿ ಟೈಮ್ಸ್ ಆಫ್ ಇಂಡಿಯಾ

123

ವಾಚಕರ ವಿಜಯದಲ್ಲಿ ಬೈಕ್ ಗಳ ಹಾವಳಿ

.........
………

ನಿನ್ನೆಯ ವಿಜಯ ಕರ್ನಾಟಕದ ವಾಚಕರ ವಿಜಯದಲ್ಲಿ ಪ್ರಕಟವಾಗಿರುವ ನನ್ನ ಪತ್ರ

 

ಕನಿಷ್ಠ ಶಿಷ್ಟಾಚಾರವೂ ಇಲ್ಲದ ರಾಜಕಾರಣಿಗಳು

 

ರಾಜಕಾರಣಿಗಳಿಗೆನೂ ಕಡಿಮೆ ಕೊಬ್ಬು ಇರುವುದಿಲ್ಲ. ಅಫ್ ಕೋರ್ಸ್ ಹಲವರಿಗೆ ಮೈ ತುಂಬ ತುಂಬಿಕೊಂಡಿರುವುದು ಬರೀ ಕೊಬ್ಬೇ. ಸುದ್ದಿ ವಾಹಿನಿಯೊಂದರಲ್ಲಿ ಸಾಮಾನ್ಯವಾಗಿ ಮಹತ್ವದ ಬೆಳವಣಿಗೆಗಳು ನಡೆದಾಗ ಸಂಬಂಧಪಟ್ಟವರ ಫೋನ್ ಇನ್ ತೆಗೆದುಕೊಳ್ಳುವುದು ಸಾಮಾನ್ಯ. ಅಂತಹ ಸಂದರ್ಭದಲ್ಲಿ ಕೆಡಿಎಸ್ ಎಂಬ ರಾಜಕಾರಣಿಯ ಫೋನೋ ತೆಗೆದುಕೊಳ್ಳಬೇಕಾಗಿತ್ತು. ಕೆಡಿಎಸ್ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಕೈ ರಾಜಕಾರಣಿ. ರಿಯಲ್ ಎಸ್ಟೇಟ್, ಕಲ್ಲು ಗಣಿಗಾರಿಕೆ, ಭೂಮಿ ಡಿನೋಟಿಫಿಕೇಷನ್ ಎಲ್ಲದರಲ್ಲಿಯೂ ಎತ್ತಿದ ಕೈ. ಹಿಟ್ ಫಿಲ್ಮ್ ಗಳ ಹಿರೋಯಿನ್ ಗಳು ಈತನ ಹಾಸಿಗೆಗೆ ಬರಲೇಬೇಕು. ಈಗ ಪ್ರಸಿದ್ಧ ನಟಿಯಾಗಿರುವ ಒಬ್ಬಾಕೆ ಈತನ ಬೇಡಿಕೆಗೆ ಒಪ್ಪದಿದ್ದಾಗ, ಆಕೆಯ ಮೇಲೆ ದೈಹಿಕ ಹಲ್ಲೆ ನಡೆಸಿದ ಕಿರಾತಕ ಈ ಕೆಡಿಎಸ್.

ಮೊನ್ನೆ ಯಾವುದೋ ಸುದ್ದಿ ವಾಹಿನಿಯೊಂದರಲ್ಲಿ ನೋಡಿದ್ದು. ಈತ ಆನ್ ಏರ್ ಗೆ ಬಂದ ಕೂಡಲೇ, ಸುದ್ದಿ ವಾಚಕಿ, “ಕೆಡಿಎಸ್ ಅವರೇ ನಮಸ್ಕಾರ” ಎಂದಿದ್ದಾರೆ. ಆದರೆ ಕೆಡಿಎಸ್ ಗೆ ಕೊಬ್ಬು ಎಷ್ಟೆಂದರೆ, ಪ್ರತಿ ನಮಸ್ಕಾರ ಹೇಳದೆ, “ಹಂ….” ಅಂತ ಅಷ್ಟೇ ಹೇಳಿದ್ದಾನೆ. ಆದರೂ ಸುದ್ದಿ ವಾಚಕಿ ಕನಿಷ್ಠ ಶಿಷ್ಟಾಚಾರವನ್ನೂ ಬಯಸದೇ ಮುಂದಿನ ಪ್ರಶ್ನೆಯನ್ನು ಕೇಳಿದ್ದಾರೆ. ಆಗ ನೆನಪಾಗಿದ್ದು, “When you were only asked to bend, many of you chose to crawl”

 

ಆರ್ ಎಸ್ ಎಸ್, ಮಾಧ್ಯಮ ಹಾಗೂ ಪ್ರವೀಣ್ ಪಟವರ್ಧನ್ ಅವರ ಪ್ರಕಟಗೊಳ್ಳದ ಪ್ರತಿಕ್ರಿಯೆ

ಪ್ರವೀಣ್ ಪಟವರ್ಧನ್ ಬರೆಯುತ್ತಾರೆ…..
ವ್ಯಕ್ತಿತ್ವ ವಿಕಸನದ  ಶಿಬಿರಗಳಲ್ಲಿ communication ಬಗ್ಗೆ ಒಂದು ಪ್ರಕ್ರಿಯೆ ಇಂತಿದೆ. ಶಿಕ್ಷಕನು ಸಭಿಕನೋರ್ವನಿಗೆ ಕಿವಿಯಲ್ಲ್ಲಿ ಒಂದು ಕತೆ ಹೇಳುತ್ತಾನೆ. ನಿಯಮಾನುಸಾರ ಆ ಕತೆಯನ್ನು ಒಮ್ಮೆಯಷ್ಟೇ ಹೇಳುತ್ತಾನೆ. ಈ ಸಭಿಕ ಅದೇ ರೀತಿಯಲ್ಲಿ ತನ್ನ ಪಕ್ಕದಲ್ಲಿ ಇರುವ ತನ್ನ ಸ್ನೇಹಿತನಿಗೆ ಅದೇ ಕತೆಯನ್ನು ಕಿವಿಯಲ್ಲ್ಲಿ ಹೇಳಬೇಕು. ಈ ರೀತಿಯಾಗಿ (ಸಾಲಿನ) ಮುಂದಿನವನು ತನ್ನ ಹಿಂದಿನವನಿಗೆ ತಾನು ತನ್ನ ಹಿಂದಿನವನಿಂದ ತಿಳಿದುಕೊಂಡ ಆ ಸಂಗತಿಯನ್ನು ಹೇಳುವುದೇ ಆಟ. ಕಡೆಯಲ್ಲಿ ಉಳಿಯುವವ ಆ ಸಂಗತಿಯನ್ನು ಇಡಿಯ ಸಭೆಯಲ್ಲಿ ಜೋರಾಗಿ ಹೇಳಿದಾಗ ಆ ಶಿಕ್ಷಕನು ಬೆರಗಾಗಿಬಿಡುತ್ತಾನೆ. ಕಾರಣ ಪ್ರತಿಯೊಬ್ಬನೂ ತನ್ನ Version ಹೇಳುತ್ತಾ ಹೋದಹಾಗೆ ಕತೆ ಬದಲಾಗುತ್ತಾ, ತಮ್ಮದೇ ಉಪಕಥೆಗಳು ಸೇರಿಕೊಂಡು ಮೂಲ ಕಥೆಗಿಂತ ವಿಭಿನ್ನವಾಗಿರುತ್ತದೆ. ಇಂದಿನ ಮಧ್ಯಮದವರು ಮಾಡಿದ್ದೂ ಅದೆ. ಮೋಹನ್ ಭಾಗವತ್ ರವರ ಭಾಷಣವನ್ನು ಕೇಳಿದವನು ಮಸಾಲೆ ಅರಿದು ಜಗತ್ತಿಗೆ ಅವರೊಬ್ಬ ದುಷ್ಟ ಎಂದು ಹೇಳುತ್ತಾ ಕಿರುಚಾಡಿದರು. ಉಳಿದವರು ಅವರದ್ದೇ ಕತೆ ಹೆಣೆದರು. ಕತೆ ಕಟ್ಟಲು ಸಮಯವಿಲ್ಲದವರು ಪ್ರಮುಖ ಸುದ್ದಿಯಲ್ಲಿ ಬಂದ ವಿವರವನ್ನೇ ತರ್ಜುಮೆ ಮಾಡಿದರು. ಅಸಲಿಗೆ ಯಾರೂ ಏನಾಗಿರಬಹುದೆಂದು ಓದಲಿಲ್ಲ. ಕೇಳಲಿಲ್ಲ. ಅಂತಿಮದಲ್ಲಿ ಮೋಹನ್ ಭಾಗವತರಿಗೆ, ಆರ್ ಎಸ್ ಎಸ್  ಗೆ ಕೆಟ್ಟ ಹೆಸರು ಬರುವಂತೆ ಮಾಡಿದರು. ಜನವರಿ 8ರ “ಬಿಗ್ ಡಿಬೇಟ್” ನಲ್ಲಿ ಹಲವರ ಹೇಳಿಕೆಗಳನ್ನು ಹಮೀದ್ ಪಾಳ್ಯ ತೋರಿಸಿದರಾದರೂ ಎಲ್ಲರೂ ಮಾತನಾಡಿದ್ದು ಆರ್ ಎಸ್ ಎಸ್ ಬಗ್ಗೆ. ಮೊಹನ್ ಭಾಗವತರ ಬಗ್ಗೆ. ಆರ್ ಎಸ್ ಎಸ್ಸ್ ಒಳ್ಳೆಯ ಕೆಲಸ ಮಾಡಿದಾಗ ಹೊಗಳದೆ ತಟಸ್ತರಾಗಿ ಇರುವ ಈ ಮಿತ್ರ ವೃಂದ ತಮ್ಮ Hidden Agendaಗೋಸ್ಕರ ಸೂರು ಕಳಚಿ ಬೀಳುವಂತೆ ಹರಿಹಾಯ್ದರು.
ಲೇಖನವನ್ನು ಓದುವುದಕ್ಕಿಂತಲೂ ಮುಂಚೆ Youtube ನಲ್ಲಿ ಮೋಹನ್ ಭಾಗವತರ ಭಾಷಣ, ಸುವರ್ಣ ನ್ಯೂಸ್ ವಾಹಿನಿಯ ಜನವರಿ ೮ ರ “ಬಿಗ್ ಡಿಬೇಟ್” ಕಾರ್ಯಕ್ರಮವನ್ನೂ ನೋಡಿರಿ. ನಿಮಗೆ ಪ್ರಸ್ತುತವೆನಿಸಬಹುದು
ಮೋಹನ್ ಭಾಗವತರು ಮಾತನಾಡಿದ ಪೂರ್ಣ ವಿವರಕ್ಕೆ ಇಲ್ಲಿ ನೋಡಿ. www.samvada.org ಇದನ್ನು ನೋಡದೇ ವಿವರ ತಿಳಿಯದೇ ಮಾತನಾಡಿದ 3ಖರನ್ನು (ವಿಮಲಾ, ಅಗ್ನಿ ಶ್ರೀಧರ್, ಸಿ. ಎಸ್. ದ್ವಾರಕಾನಾಥ್) ಹೀಯಾಳಿಸದೇ ಇರಲು ಆಗುವುದೇ? ಮೊಹನ್ ಭಾಗವತರ ಎರಡೂ ಭಾಷಣಗಳನ್ನು ಕೇಳಿಸಿಕೊಳ್ಳಿ. ಈ ಎರಡು ಭಾಷಣಗಳು ಒಟ್ಟು ನಿಮ್ಮ ೫೦ ನಿಮಿಷಗಳನ್ನು ತೆಗೆದುಕೊಳ್ಳುತ್ತವೆ. ಮೊದಲಿಗೆ ಮಾಧ್ಯಮಗಳಲ್ಲಿ ಬಂದ ವಿಷಯಗಳ ಪೂರ್ವಗ್ರಹದಿಂದ ಹೊರಬಂದು ಈ ಭಾಷಣಗಳನ್ನ ಕೇಳಿಸಿಕೊಳ್ಳಿ. ಅಲ್ಲೆಲ್ಲೂ ಇವರುಗಳು ಅರಚುವಂತೆ ಪ್ರಚೋದನಾಕಾರಿ ಮಾತುಗಳನ್ನು ಆಡಿರುವುದಾಗಿ ನಿಮಗೂ ಅನ್ನಿಸುವುದಿಲ್ಲ. ಇದರ ಬಗ್ಗೆ ನಂಬಿಕೆ ನನಗಿದೆ. ಮೋಹನ್ ಭಾಗವತರು ತಮ್ಮ ಭಾಷಣದ ಆದಿಯಲ್ಲಿ “ಸರ್ವೇ ಭವಂತು ಸುಖಿನಃ, ಸರ್ವೇ ಸಂತು ನಿರಾಮಯಾಃ” ದಿಂದ ಪ್ರಾರಂಭಗೊಳಿಸಿ, ಭಾರತೀಯರು ಎಲ್ಲರ ಒಳಿತನ್ನು ಅಪೇಕ್ಷಿಸುತ್ತಾರೆ. ನಮಗೆ ತಿಳಿಯದ ಯಾರೋ ಒಬ್ಬ ದುಃಖ ಪಡುತ್ತಿದ್ದಾನೆಂದರೂ ನಮ್ಮ ಮನಸ್ಸು ಮಿಡಿಯುತ್ತದೆ. ಇದು ಭಾರತೀಯತೆ ಎಂಡು ಹೇಳುತ್ತಾ, ನಮ್ಮಲ್ಲಿ ಇರುವ ಸಂಬಂಧಗಳ ಬೆಲೆ, ಅದಕ್ಕೆ ತೋರುವ ಮರ್ಯಾದೆಯನ್ನು  ಪಾಶ್ಚಾತ್ಯರೊಂದಿಗೆ ಹೋಲಿಸಿ ಅವರದ್ದು(ಪಾಶ್ಚಾತ್ಯರ) “Theory of Social Contract” ಎಂದು ಹೇಳಿದ್ದಾರೆ. ಮುಂದುವರೆಸುತ್ತಾ, ನಮ್ಮ ದೇಶದಲ್ಲಿ ಈ ಸಂಬಂಧಗಳ ದೃಷ್ಟಿ ಬದಲಾಗುತ್ತಾ, ನಮ್ಮ ವೃತ್ತಿ ಬದಲಾಗುತ್ತಿದೆ, ಆದ್ದರಿಂದ ಸಂಸ್ಕಾರ ಬದಲಾಗುತ್ತಿದೆ. ಬದಲಾದ ನಮ್ಮ ಸಂಸ್ಕಾರ ಎಲ್ಲರಲ್ಲೂ ದುಃಖ ತರಿಸುವಂತಹ ಯೋಜನೆಯಾಗಿ ಮಾರ್ಪಡುತ್ತಿವೆ ಎಂದು. ಇನ್ನು, ಮತ್ತೊಂದು ಭಾಷಣದಲ್ಲಿ ಪ್ರೇಕ್ಷಕರ ಪ್ರಶ್ನೆಗೆ ಉತ್ತರಿಸುತ್ತಾ, ಅತ್ಯಾಚಾರಗಳನ್ನು ಖಂಡಿಸುತ್ತಾ “ಹೆಣ್ಣಿನ ಮೇಲಿನ ದೌರ್ಜನ್ಯ ನಡೆಯುತ್ತಿರುವುದು ಸಂಸ್ಕಾರಗಳ ಕೊರತೆಯಿಂದಾಗಿ, ಶಿಕ್ಷಣದ ಕೊರತೆಯಿಂದಾಗಿ. ನಮ್ಮ ಮೂಲಗಳನ್ನು ಮರೆಯುತ್ತಾ ಪಾಶ್ಚಾತೀಕರಣದಿಂದಾಗುತ್ತಿರುವುದರ ಪರಿಣಾಮ. ಆದಕಾರಣದಿಂದ ಗ್ರಾಮೀಣ ಭಾರತದಲ್ಲಿ ಕಡಿಮೆ ಅತ್ಯಾಚಾರಗಳು ಕಾಣುತ್ತಿವೆ.
ಅಗ್ನಿ ಶ್ರೀಧರರೇ, ಆ ಕಾರ್ಯಕ್ರಮದಲ್ಲಿ ಮೋಹನ್ ಭಾಗವತರನ್ನು ಏಕವಚನದಲ್ಲಿ ಸಂಭೋದಿಸಿ ಅದನ್ನು ಸಮರ್ಥಿಸಿಕೊಂಡಿರಲ್ಲ ನೆನಪಿದೆಯಾ? “ನಾನು ಅವಿವೇಕದ ಮಾತನಾಡಿದರೆ ನನ್ನನ್ನು ಏಕವಚನದಲ್ಲಿ ಸಂಬೋಧಿಸಲಿ”ಎಂದು, ಆ ದೃಷ್ಟಿಯಿಂದ ನಿಮ್ಮನ್ನು ನಾನು ಅದೇ ಧಾಟಿಯಲ್ಲಿ ಬಯ್ಯಬಹುದು. ಆದರೆ ನನ್ನ ಸಂಸ್ಕಾರ ಎಲ್ಲರಿಗೂ ಮರ್ಯಾದೆ ಕೊಡುವಂತೆ ಸೂಚಿಸುತ್ತದೆ, ಯಾರಾದರೂ ತಪ್ಪು ಮಾಡಿದರೆ ಎತ್ತಿ ಹಿಡಿ ಅಂತಲೂ ಹೇಳಿಕೊಟ್ಟಿದೆ. ನಿಮಗೆ ಗೊತ್ತಿಲ್ಲದ ವಿಷಯಗಳು ಬಹಳಷ್ಟು ಇದ್ದರೂ ಮಾತಿಗೋಸ್ಕರ ಒಂದು ಗಂಟೆ ಹರಟೆ ಮಾಡಿದಿರಲ್ಲ “ಬಿಗ್ ಡಿಬೇಟ್” ಅನ್ನೊ ಕಾರ್ಯಕ್ರಮದಲ್ಲಿ ನಿಮ್ಮನ್ನು ನೋಡಿದರೆ ನಗು ಬರುತ್ತೆ. ಸ್ಕಾಂಡಿನೇವಿಯಾ ದೇಶಗಳಲ್ಲಿ, ಯೂರೋಪ್ ನಲ್ಲಿ, ಮುಂದುವರೆದ ರಾಷ್ಟ್ರಗಳಲ್ಲಿ ಅತ್ಯಾಚಾರ ನಡೆಯುವುದೇ ಇಲ್ಲ ಅಂದಿರಿ. ಒಮ್ಮೆ ಅಂಕಿ ಅಂಶಗಳನ್ನು ನೋಡಿ ನಂತರ ನಿಮ್ಮ ಸಿದ್ಧಾಂತಕ್ಕೆ ಜೋತು ಬೀಳಿರಿ.
ಅಮೇರಿಕಾ ದೇಶ ಮುಂದುವರೆದ ದೇಶ ಎಂದು ನಾನು ಹಾಗು ನನ್ನಂತೆ ಹಲವರು ನಂಬಿದ್ದೇವೆ. ಅಲ್ಲಿ ಆಗುವ ಅತ್ಯಾಚಾರಗಲ ಸಂಖ್ಯೆ ನಿಮಗೆ ತಿಳಿದಿದೆಯೆ? ಫ್ಯಾಷನ್ ರಾಜಧಾನಿ ಎಂದು ಕರೆದುಕೊಳ್ಳುವ ಪ್ಯಾರಿಸ್ ನಲ್ಲಿ ಎಷ್ಟು ಅತ್ಯಾಚಾರಗಳು ನಡೆಯುತ್ತವೆ ತಿಳಿದಿದೆಯೇ? ಇಗೋ ಒಂದಷ್ಟು ಕೊಂಡಿಗಳು. ಓದಿಕೊಳ್ಳಿ. Wikipediaದಲ್ಲಿ Rape statistics by countryಎಂದು ಹುಡುಕಿ ನಿಮಗೆ ಗೊತ್ತಿಲ್ಲದ ಸಂಗತಿಗಳು ಹಲವಷ್ಟಿವೆ.
 ಅತ್ಯಾಚಾರಗಳು ಕಂದಾಚಾರದ ಪದ್ಧತಿಯಲ್ಲಿರುವ ದೇಶಗಳಾದ ಪಾಕಿಸ್ತಾನ್, ಬಾರಥ (ನೀವು ಮಾತನಾಡಿದ್ದು ಹಾಗೆಯೇ) ಎಂದರಲ್ಲ. ಮುಂದುವರೆಸಿ, ಇಂಡಿಯಾ ಹೆಸರಿಗೆ ಹೆಚ್ಚಿನ ಸಾಂಸ್ಕೃತಿಕ ಬೆಲೆಯಿದೆ ಅಂತಲೂ ಅಂದಿರಲ್ಲಾ….. ಭಾರತದಲ್ಲಿ ಹರಿಯುತ್ತಿದ್ದ ಸಿಂಧು ನದಿಯಿಂದ ನಮ್ಮನ್ನು ಹಿಂದು ಎಂದು ಕರೆದರು. ಅದನ್ನು ಹಾಗೆ ಕರೆಯಲಾಗದೆ ಪಾರ್ಸಿಯರು ಇಂದಸ್ ಎಂದು ಕರೆದು ಬಾಯಿಂದ ಬಾಯಿಗೆ  ಹೋಗುತ್ತಾ ಅದು ಇಂಡಿಯಾ ಆಗಿದೆ. ಇಂಡಿಯ ಎಂಬ ಪದ ಹುಟ್ಟಲು ನಮ್ಮ ದೇಶದ ಸಿಂಧು ನದಿಯ ಹೆಸರೇ ಸ್ಪೂರ್ತಿ. ಇನ್ನು ಭಾರತ ಎಂಬ ಹೆಸರು ಹೇಗೆ ಬಂತೆಂದು ಕುಲಕರ್ಣಿಯವರು ಹೇಳಿದ್ದಾರೆ. ಅದು ನಿಮಗೆ ಅರ್ಥವಾಗಿದೆ ಎಂದು ಕೊಂಡಿದ್ದೇನೆ. ಅದಿರಲಿ, ವಿಮಲಾ ಮತ್ತು ಶ್ರೀಧರ್, ಎಂದಾದರೂ ನಮ್ಮ ದೇಶದ ನೋಟನ್ನು ನೋಡಿದ್ದೀರಾ?Reserve Bank of India ಎಂಬ ಇಂಗ್ಲಿಷ್ ಬರಹದ ಮೇಲ್ಗಡೆ ಹಿಂದಿಯಲ್ಲಿ “ಭಾರತೀಯ ರಿಸರ್ವ್ ಬ್ಯಾಂಕ್” ಎಂದು ಬರೆದಿದೆಯೋ ಅಥವಾ ಬೇರೇನಾದರೂ ಇದೆಯಾ? ಭಾರತ, ಇಂಡಿಯಾ ಎಂದು ದೇಶವನ್ನು ವಿಭಜಿಸುತ್ತಿದ್ದಾರೆ ಎಂದು ರಚ್ಚೆ ಹಿಡಿದಿದ್ದಿರಲ್ಲಾ, ನಮ್ಮ ದೇಶದ ಹೆಸರು, ಸರ್ಕಾರಿ ಫಲಕಗಳನ್ನು ನೋಡಿದ್ದೀರಾ? ನಿಮ್ಮ ಕುತರ್ಕ, ಪೊಳ್ಳುವಾದ ಅಂತ ಅನ್ನಿಸುವುದೇ ಇಲ್ಲವೇ?
ದ್ವಾರಕಾನಾಥ್ ಅಗ್ನಿ ಶ್ರೀಧರ ರ ಮಾತನ್ನು ಒಪ್ಪಿದರು. ಅಂದು ದೆಹಲಿಯಲ್ಲಿ ಆದ ಅತ್ಯಾಚಾರ ಒಂದು ಹೆಣ್ಣು ಮಗಳ ಮೇಲೆ. ಇಂದು ಇಂಥ ಹೇಳಿಕೆಗಳು ನೀಡುತ್ತಿರುವ ಮೋಹನ್ ಭಾಗವತ್ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದಾರೆ ಎಂದು ನೀಚರ ತರಹ ಮಾತನಾಡಿದಿರಲ್ಲಾ, ಅತ್ಯಾಚಾರಿಗಳಿಗೂ, ಭಾಗವತರಿಗೂ ವ್ಯತ್ಯಾಸವೇ ಇಲ್ಲ ಎಂದರಲ್ಲ, ಹಾಗಾದರೆ ಅಗ್ನಿ ಶ್ರೀಧರರು ತಮ್ಮ ಪೂರ್ವಾಶ್ರಮ(!!)ದಲ್ಲಿ ರೌಡಿ, ಡಾನ್. ಅಗ್ನಿ ಶ್ರೀಧರರನ್ನು ಅವರ ಹೇಳಿಕೆಯನ್ನು ಒಪ್ಪುವ ನೀವು, ನೀವೂ ರೌಡಿ, ಡಾನ್ ಮನಸ್ಥಿತಿಯವರು ಎಂದು ಪಾಮರರು ನಾವು ನಿರ್ಧರಿಸಬಹುದೇ? ಸಾಮಾನ್ಯವಾಗಿ ಯಾವುದೇ ಅರ್ ಎಸ್ ಎಸ್ ಭಾಷಣದಂತೆ ಮೋಹನ್ ಭಾಗವತ್ ರವರು ತಮ್ಮ ಭಾಷಣದಲ್ಲಿ, “ಮಾತಾ ಭಗಿನೀ” ಎಂದು ಸಂಬೋಧಿಸಿದ್ದು ನಿಮ್ಮ ಕೆಪ್ಪು ಕಿವಿಗಳಿಗೆ ಬೀಳಲಿ. ಆರ್ ಎಸ್ ಎಸ್, ಹೆಣ್ಣಿಗೆ ಎಷ್ಟು ಒಳ್ಳೆಯ ಸ್ಥಾನ ನೀಡಿದೆ, ಹೇಗೆ ತನ್ನ ಶಿಕ್ಷಣದಲ್ಲಿ ಹೆಣ್ಣಿನ ಬಗ್ಗೆ ಪೂಜ್ಯ ಭಾವನೆ ಮೂಡಿಸುತ್ತದೆ ಎಂಬುದನ್ನು ಮನನ ಮಾಡಿಕೊಳ್ಳಿರಿ. ಅದನ್ನೆಲ್ಲಾ ಬಿಟ್ಟು ಅಂಡೆ ಪಿರ್ಕಿಯ ತರಹ ಮಾತನಾಡುವುದು, ನಿಮಗೆ ಶೋಭಿಸಿದರೂ ಅದು ಸುಸಂಸ್ಕಾರವಲ್ಲ.
ಶ್ರೀಧರ್ ರವರೇ, ಆರ್ ಎಸ್ ಎಸ್ ಬಗ್ಗೆ ಮತ್ತೊಂದು ಗುರುತರ ಆರೋಪ ಮಾಡಿದ್ದರ ಬಗ್ಗೆ ನನ್ನ ಆಕ್ಷೇಪವಿದೆ. ಆರ್ ಎಸ್ ಎಸ್ Moral rapists ಗಳ ತರಹ ವರ್ತಿಸುತ್ತಿದ್ದಾರೆ ಹಾಗೂ ಅವರೂ ಇಂತಹ ಅಹಿತಕರ ಘಟನೆಯಲ್ಲಿ ಭಾಗಿ ಆಗಿರಲೂಬಹುದು ಎಂದು… ಸ್ವಲ್ಪ ಯೋಚಿಸಿ ವರ್ಷಗಳಿಂದಲೂ ಈ ಸಂಘ ಅಸ್ತಿತ್ವದಲ್ಲಿ ಇದ್ದು, ಇಂದಿಗೂ ಲಕ್ಷಗಟ್ಟಲೆ ಸ್ವಯಂಸೇವಕರು, ಹಿತೈಷಿ ಬಂಧುಗಳು ಇರಲು ಸಾಧ್ಯವಿತ್ತೇ? ನೀವು ಹೇಳಿದ ಹಾಗೆ ಆರ್ ಎಸ್ ಎಸ್ ಇದ್ದಿದ್ದರೆ ಇಷ್ಟು ಹೊತ್ತಿಗಾಗಲೇ ಸಂಘ ಕುಸಿದು ಹೋಗಿರುತ್ತಿತ್ತು. ಸಂಘದ ideologies, values ತಿಳಿಯದ ನಿಮ್ಮಂತಹ ಹಲವು immoral s unethical s ನಿಂದಾಗಿ ಅದಕ್ಕೆ ಕೆಟ್ಟ ಹೆಸರೇ ಹೊರತು ಸಂಘದವರು ಮಾಡುವ ಸಮಾಜಮುಖಿ ಕೆಲಸಗಳಿಂದಲ್ಲ!!
ಶ್ರೀಧರ, ನಿಮ್ಮನ್ನು ನೀವು ಚಿಂತಕರು, ಲೇಖಕರು, ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರು ಎಂದು ಹೇಳುತ್ತೀರ. ಪತ್ರಕರ್ತರು ಎಂದು “ಕೊಚ್ಚಿ”ಕೊಳ್ಳುತ್ತೀರ ಪತ್ರಿಕೋದ್ಯಮದ ಜವಾಬುದಾರಿ ಅರಿಯದೆ, ಸಂಕುಚಿತ ಮನಸ್ಸಿನ ನಿಮ್ಮ ವರ್ತನೆಗೆ ನನ್ನ ಧಿಕ್ಕಾರ. ಅದಿರಲಿ, ನಿಮ್ಮ “ಎದೆಗಾರಿಗೆ” ಕಾದಂಬರಿಯಲ್ಲಿ ಬರೆಯುತ್ತೀರಲ್ಲ ಸಾವನ್ನು ಎದುರಿಸುವ ಬಗ್ಗೆ, ಭಾಗವತರ ಭಾಷಣವನ್ನು ಪೂರ್ಣ ಕೇಳಿಸಿಕೊಳ್ಳಿ ಮೃತ್ಯುವನ್ನು ಎದುರಿಸುವುದರ ಬಗ್ಗೆ ಅವರು ಇನ್ನೂ ಚೆನ್ನಾಗಿ ಮಾತನಾಡಿದ್ದಾರೆ.

ಉಗುಳಿ ಓಡಿ ಹೋಗುವ ಪತ್ರಿಕೋದ್ಯಮ ಹಾಗೂ ಆರ್ ಎಸ್ ಎಸ್

ಲೇಖನ ಕೃಪೆ – ಸಂದೀಪ ಬಾಲಕೃಷ್ಣ. 
By Sandeep Balakrishna, Bangalore

My dictum that the Indian English media is a whore with none of the ethics of a whore has been proven correct again. And so the latest proof of its venal whoredom happens to be a barefaced lie, a shameless hoax, which in the pre-Internet era would’ve gone unnoticed. Perchance that it was noticed, its exposure would’ve been buried by everybody starting with the gatekeepers all the way up to the CEO of the brothel. And this piece would’ve never been written.

That the media crossed all limits was proved by Radiagate. But when you abandon shame just once, you only want to better your previous record. I suppose it’s like drug addiction but I really don’t know. You need to ask Barkha Dutt, et al. The latest entrant into this Media Hall of Shame happens to be Asian News International (ANI), whose doctored and heavily editorialized reportage of RSS Chief Mohan Bhagwat’s speech at Indore on 6 January 2013 was portrayed as the actual view of the Sarasanghachalak. In other words: lying.

Of course, predictable consequences followed. The English media spontaneously erupted in simultaneousmultiple orgasms nationwide. Here’s a sample from the uber spinmeister NDTV, which spun an already-twisted report (by ANI) as follows:

‘Women meant to do household chores’: another shocker from RSS chief…right-wing Rashtriya Swayamsevak Sangh’s (RSS) chief Mohan Bhagwat has done it again…

But what did Mohan Bhagwat actually say? Thanks to Newslaundry for the loose translation (the original Hindi transcript is here):

[Mohan Bhagwat] was commenting on the Western model of modernity. And in that context, he was articulating his view of their view. Get it? He said in the “modern” interpretation of marriage (not his), women are bound by contract to serve their husbands. He also said that husbands were bound to look after their wives. Much like women are supposed to look after household chores and keep their husbands satisfied, men are expected to provide for their wives and look after them, as per the modern version of the marriage contract. And if either the wife or husband didn’t manage to do so, the dissatisfied party breaks the contract and contracts a second or third, as per the modern version of the marriage contract. Get it?

Notice how it was reported. And how quickly it went viral in the media. Notice also how RSS spokesperson Ram Madhav’s defence of Mohan Bhagwat was carefully buried under layers of paragraphs by these news-twisters. Typical. Spit and run journalism thrives on this to survive. Moreover, since the RSS chief is himself directly involved, it’s the Golden Chance for journalists and reporters to inject more poison into the already toxic reporting.

However, what they didn’t bargain for is the avalanche of outrage that steamrolled against them on Twitter and elsewhere online. For once, these RSS-blood-baying news hounds were forced to lick their wounds. Even the normally giggly, dumb high-school girl like Old Monk Boy’s wife was forced to apologize.

CNN-IBN’s Sagarika Ghose tweets an apology.

That the English media vampires hate the RSS because of their Maculayite background is just a partial explanation. The truthful explanation is the fact that they are people with no integrity. You present them with mountains of evidence to the contrary, yet they chose to willfully ignore it. Their hatred of the RSS is not irrational. It is depraved. And like all hatred, it is rooted in fear.

The depravity begins with how they have historically characterized the RSS, again, taking a leaf out of Nehru’s book. The fact that the media has consistently ignored the exemplary social work that RSS has done since its inception is a measure of the media’s intentionally blinkered vision. It’s as if the RSS exists only to foment violence and make the ultra-pampered minorities shiver in their shoes. It’s as if the RSS is just waiting for tomorrow to declare India as a dreaded Hindu Rashtra complete with doomsday visions of unchecked tyranny and violent repression. But this kind of branding has indeed served the media well. The mention of RSS evokes derisive ridicule and laughter in large pockets of urban India today. And this ridicule isn’t based even on a cursory study of the RSS’ stellar contribution throughout its existence. The naked lie accepted as gospel truth, is actually handed down second hand by third-rate writers with a spurious agenda to push.

Yet, what is the actual record of the RSS?

Name a natural calamity. Floods, earthquakes, tsunamis…RSS workers reach the affected spot first and dive right in to help the victims. They care nothing for their own comfort, eating little and sleeping even less. They ask nothing in return unlike the Christian missionary vultures whose ugly soul-trading was on full display during the 2004 Tsunami that hit India. Yet what does the media report? Nothing. They simply bury the story of the work done by the RSS. What does that show? That the media is aware of the good work but chooses only to report some statements made by the RSS that are perceived to be regressive or inflammatory. If this doesn’t show a lack of integrity, what else does?

But perhaps the greatest strength of the RSS is its staggering number of voluntary workers orkaryakartas. These are people who give up everything in life to serve the nation. They go where the RSS orders them to go and undertake any task, however arduous. And thousands of these karyakartas are qualified, intelligent and competent enough to earn six figure salaries had they not opted to serve India. Yet they go out to remote locations, to places where people desperately need help or to serve the nation in numerous other ways. They train and educate other people’s children by willingly forgoing the opportunity to start their own families. They put even their lives at risk in places like the violently Stalinist Kannur, Kerala. Indeed, I’ve even stopped reading news that reports the death of yet another Swayamsevak in that morbid State. Yet they are undeterred, and tirelessly lead such a near-ascetic life of national service propelled by the only hope that their efforts will bear fruit some day in the form of an India that had once led the world in high culture, refinement, arts, philosophy, and material riches.

It is this commitment that has earned it the goodwill and a firm place in the hearts of millions of Hindus (and thousands of non-Hindus) worldwide. A goodwill that has sustained and remained in tact over seven decades and continues to grow. It is this goodwill that unleashed the torrent of rage on social media yesterday against ANI and likeminded media charlatans. It is this goodwill that has made the RSS the largest network of its kind in the world. Name just one other voluntary organization in the world which has this awe-inspiring network of people dedicated only to serve a nation. Just one. What’s more, the kind of harassment meted out by the Dynasty to RSS at regular intervals, the kind of atrocities perpetrated against RSS workers by various Congress and Communist Governments would have broken the back of a lesser organization. The Emergency was truly the darkest period in the life of the RSS. An organization with even 1/10th of the RSS in terms of size, network, and influence in any other country would’ve reacted very differently. Yet how did the RSS respond? Its then Sarasanghachalak instructed thekaryakartas to forgive Indira Gandhi and the Congress party because “after all, they are one of our own. They are fellow Indians.”

And yet, what kind of sick minds find humour in vulgar descriptions of the effects of wearing “khaki shorts? The same Newslaundry that chided ANI & co for motivated reportage of Mohan Bhagwat’s speech also says this:

Bhagwat – whose main sin appears to be that he wears khaki bermudas despite the effect the vision might have on unsuspecting viewers

How would the reporter feel if I wrote something similar about the panties his/her mother or sister wear? Would he/she write the same thing about his father’s bermudas or whatever other shorts? Oh! I’ll write that in all good humour, of course. But knowing this breed, they’d say “ah! I knew you’d say this kind of stuff about my mother and sister.” This kind of response is the direct outcome of shamelessness becoming the norm. But I digress.

But yet, what kind of moral and mental pollution prompts the media sleazebags to depict nuns and fathers and brothers as saints—the actual parasites on the ground who prey on unsuspecting non-Christian souls and lead to civil wars—while they portray the genuine and selfless workers who serve the nation as dreaded goons?

One answer to all these questions is just one word: fear. The media fears the RSS. Here’s a vast organization made entirely of voluntary workers intent only on serving the country that has stood its ground amidst severe adversities and which takes the most strident criticism in its stride. Here’s an organization which has sustained for more than seven decades and despite best efforts, hasn’t budged or accepted defeat much less been broken. Courts have consistently taken its side. Every effort to tarnish its reputation has failed. All these are eminently plausible reasons for someone to fear its moral strength.

But look at the record of the lives, behaviour and character of the selfsame media men and women who’ve demonized RSS both through force and fraud. There’s nothing but filth there. From putting out doctored news reports, from making crass accusations, from indulging in vulgar jokes, there’s no depths of depravity the media has plumbed where the RSS is concerned. Even if we overlook this, what’s the kind of ethics and professionalism the media has displayed? Radiagate? Openly campaigning for the Congress party? Land grabbing? Paid news? Killing stories? Calling for the “sudden removal” of Narendra Modi?  What is the wager that these guys can’t lead the lifestyle of Mohan Bhagwat for even half a day? And yet they occupy some kind of a self-righteous moral high ground and criticize the RSS and Bhagwat. What world do they live in? More importantly, what bizarre nightmare are we living in, to tolerate this all-round sickness?

Everybody has the right to criticize the RSS but such criticism must be rooted in truth, honesty, and a thorough knowledge of what it stands for. But then we have a media that’s incurably allergic to such concepts. Whatever be the ideological or intellectual failures of the RSS, they are patriots of the highest order and their record of national service is both unparalleled and unbeatable anywhere in the world. And I say this as an outsider.

No wonder the media is full of people like the likes of Old Monk Boy who can’t sleep without alcohol.

———————————-

ಆರೆಸ್ಸೆಸ್ ಮುಖಂಡ ಭಾಗವತ್ ಹೇಳಿಕೆ: ಬೇಜವಾಬ್ದಾರಿ ನಡೆ ಮಾಧ್ಯಮಗಳದ್ದಲ್ಲವೇ?

 ಮೋಹನ್ ಭಾಗವತ್ ಅವರ ಪ್ರಕರಣ, ಭಾರತದ ಮಾಧ್ಯಮಗಳೂ ಕೂಡ ಅನೈತಿಕ ಮಾರ್ಗದಲ್ಲಿ ನಡೆಯುತ್ತಿವೆ ಎನ್ನುವುದನ್ನು ಇನ್ನೊಮ್ಮೆ ಸಾಬೀತು ಮಾಡಿದೆ. ರಾಡಿಯಾಗೇಟ್ ವಿಷಯದ ಬಗ್ಗೆ ಅವು ನಡೆದುಕೊಂಡ ರೀತಿ ನೋಡಿದಾಗ, ಅವು ಹದ್ದು ಮೀರಿ ವರ್ತಿಸುತ್ತಿವೆ ಎನ್ನುವುದು ಸಾಬೀತಾಗಿತ್ತು. ಒಂದು ಬಾರಿ ನಾಚಿಕೆ ಬಿಟ್ಟ ವ್ಯಕ್ತಿ, ಮುಂದಿನ ಬಾರಿ ಅದಕ್ಕಿಂತಲೂ ಹೀನ ಕೆಲಸಕ್ಕೆ ಮುಂದಾಗುತ್ತಾನೆ ಎನ್ನುವುದಕ್ಕೆ ಇವುಗಳ ವರ್ತನೆಯೇ ಸಾಕ್ಷಿ. ಇದೂ ಒಂದು ರೀತಿಯಲ್ಲಿ ಮಾದಕ ವ್ಯಸನದಂತೆಯೇ? ನನಗೂ ಸ್ಪಷ್ಟವಾಗಿ ಗೊತ್ತಿಲ್ಲ. ಬರ್ಖಾದತ್‌ರಂಥವರನ್ನು ಕೇಳಿದರೆ ಉತ್ತರ ದೊರಕೀತು!. ಈಗ ಮಾಧ್ಯಮಗಳ ’ಹಾಲ್ ಆಫ್ ಶೇಮ್’ನಲ್ಲಿ ಹೊಸತಾಗಿ ಸೇರ್ಪಡೆಯಾಗಿರುವುದು ಏಷಿಯನ್ ನ್ಯೂಸ್ ಇಂಟರ್ನ್ಯಾಷನಲ್ (ಎಎನ್‌ಐ) ಸಂಸ್ಥೆ. ಮೋಹನ್ ಭಾಗವತ್‌ರ ಭಾಷಣವನ್ನು ತಿರುಚಿ, ತಾನು ತೋರಿಸಿದ್ದೇ ಭಾಗವತ್‌ರ ನೈಜ ದೃಷ್ಟಿಕೋನ ಎಂಬಂತೆ ಬಿಂಬಿಸಿಬಿಟ್ಟಿತು.

ಸಹಜವಾಗಿಯೇ ನಿರೀಕ್ಷಿತ ಪರಿಣಾಮಗಳು ಎದುರಾದವು. ಇಂಗ್ಲಿಷ್ ಸುದ್ದಿವಾಹಿನಿಗಳೆಲ್ಲವೂ ಈ ಸುದ್ದಿಯನ್ನು ಹಿಡಿದುಕೊಂಡು ಹುಚ್ಚೆದ್ದು ಕುಣಿದವು. ಮೊದಲೇ ತಿರುಚಲಾಗಿದ್ದ ಸುದ್ದಿಯಲ್ಲಿ ಎನ್‌ಡಿಟಿವಿ ಎನ್ನುವ ’ತಿರುಚು ತಜ್ಞ’ ಯಾವ ರೀತಿಯಲ್ಲಿ ಕೈಯಾಡಿಸಿತು ಎನ್ನುವುದಕ್ಕೆ ಇಲ್ಲೊಂದು ಚಿಕ್ಕ ಉದಾಹರಣೆ: ’ಮಹಿಳೆಯರು ಇರುವುದು ಮನೆಗೆಲಸ ಮಾಡುವುದಕ್ಕೆ’: ಆರ್‌ಎಸ್‌ಎಸ್ ಮುಖಂಡನಿಂದ ಆಘಾತಕಾರಿ ಹೇಳಿಕೆ… ಬಲಪಂಥೀಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಮತ್ತೊಮ್ಮೆ ತಮ್ಮ ಹಳೆಚಾಳಿಯನ್ನು ಮುಂದುವರಿಸಿದ್ದಾರೆ. .. ಹಾಗಿದ್ದರೆ ನಿಜಕ್ಕೂ ಭಾಗವತ್ ಹೇಳಿದ್ದಾದರೂ ಏನು? ಅವರು ಪಾಶ್ಚಿಮಾತ್ಯ ಮಾದರಿಯ ಆಧುನಿಕತೆಯ ಬಗ್ಗೆ ಮಾತನಾಡುತ್ತಾ, ’ಮದುವೆಯ (ಅವರ ಅಭಿಪ್ರಾಯವಲ್ಲ) ’ಆಧುನಿಕ’ ವ್ಯಾಖ್ಯಾನದಲ್ಲಿ, ಹೆಂಡತಿಯಾದವಳು ಗಂಡನ ಸೇವೆ ಮಾಡಿಕೊಂಡಿರುವ ಒಪ್ಪಂದಕ್ಕೆ ಒಳಪಟ್ಟಿರುತ್ತಾಳೆ. ಗಂಡ ಆಕೆಯ ಯೋಗಕ್ಷೇಮ ನೋಡಿಕೊಳ್ಳಬೇಕು. ಒಂದು ವೇಳೆ ಇಬ್ಬರಲ್ಲಿ ಒಬ್ಬರು ತಮ್ಮ ಜವಾಬ್ದಾರಿ ನಿರ್ವಹಿಸುವಲ್ಲಿ ಸೋತರೆ, ಆಧುನಿಕ ಮದುವೆ ಒಪ್ಪಂದದ ಪ್ರಕಾರ ಅತೃಪ್ತರು ಈ ಒಪ್ಪಂದವನ್ನು ಮುರಿದು, ಇನ್ನೊಬ್ಬರೊಂದಿಗೆ ಒಪ್ಪಂದ ಮಾಡಿಕೊಳ್ಳಬಹುದು’ ಎಂದಿದ್ದರು.

ಆದರೆ ಈ ಸುದ್ದಿಯನ್ನು ಹೇಗೆ ವರದಿ ಮಾಡಲಾಯಿತು ಮತ್ತು ಮಾಧ್ಯಮಗಳಲ್ಲಿ ಈ ಸುದ್ದಿ ಎಷ್ಟೊಂದು ವೇಗವಾಗಿ ಹರಿದಾಡತೊಡಗಿತು ಎನ್ನುವುದನ್ನೊಮ್ಮೆ ನೆನಪಿಸಿಕೊಳ್ಳಿ. ಅಲ್ಲದೆ ಮೋಹನ್ ಭಾಗವತ್‌ರ ಪರವಾಗಿ ಮಾತನಾಡಿದ ಆರ್‌ಎಸ್‌ಎಸ್‌ನ ವಕ್ತಾರ ರಾಮ್‌ಮಾಧವ್ ಹೇಳಿಕೆಯನ್ನು ಎಷ್ಟೊಂದು ಜಾಗೃತಿಯಿಂದ ಈ ಮಾಧ್ಯಮಗಳು ತಮ್ಮ ಸುಳ್ಳು ಸುದ್ದಿಯ ವಾಕ್ಯವೃಂದದಡಿಯಲ್ಲಿ ಹೂತುಹಾಕಿಬಿಟ್ಟವೋ ನೋಡಿ. ’ಉಗುಳಿ ಓಡಿಹೋಗುವ ಪತ್ರಿಕೋದ್ಯಮ’ ಇಂತಹ ಕೆಲಸ ಮಾಡಿಕೊಂಡೇ ಬದುಕುಳಿದಿದೆ. ಆದರೆ ತಮ್ಮ ವಿರುದ್ಧ ಟ್ವಿಟರ್ ಮತ್ತು ಮತ್ತಿನ್ನಿತರ ಸಾಮಾಜಿಕ ಜಾಲತಾಣದಲ್ಲಿ ವಿರೋಧದ ಜ್ವಾಲಾಮುಖಿ ಏಳಲಿದೆ ಎನ್ನುವುದು ಮಾಧ್ಯಮ ಮಂದಿಗೆ ಗೊತ್ತಿರಲಿಲ್ಲ. ಈ ಮೀಡಿಯಾ ರಾಕ್ಷಸರು ಆರ್‌ಎಸ್‌ಎಸ್ ಅನ್ನು ಏಕಿಷ್ಟು ದ್ವೇಷಿಸುತ್ತಾರೆ ಎನ್ನುವುದನ್ನು ಕೇವಲ ಅವರ ಹಿನ್ನೆಲೆಯನ್ನು ನೋಡಿ ತಿಳಿದುಕೊಳ್ಳಲಾಗದು. ಸತ್ಯವೇನೆಂದರೆ ಈ ನ್ಯೂಸ್ ಚಾನೆಲ್ಲುಗಳಿಗೆ ನಿಯತ್ತೆಂಬುದೇ ಇಲ್ಲ. ಪರ್ವತದಷ್ಟು ಸಾಕ್ಷಿಯನ್ನು ನೀವು ಅವರೆದುರಿಗಿಡಿ, ಆದರೂ ಅವರ ಕಣ್ಣು ಅದನ್ನು ನಿರ್ಲಕ್ಷಿಸುತ್ತದೆ. ಆರ್‌ಎಸ್‌ಎಸ್‌ನ ವಿರುದ್ಧದ ಅವರ ದ್ವೇಷಕ್ಕೆ ಮುಖ್ಯ ಕಾರಣ ಮುಖ್ಯವಾಗಿ ಭಯ!

ಆರ್‌ಎಸ್‌ಎಸ್ ಇದುವರೆಗೂ ಮಾಡಿಕೊಂಡು ಬಂದಿರುವ ಸಮಾಜಸೇವೆಗೆ ಮಾಧ್ಯಮಗಳು ಯಾವಾಗಲೂ ಜಾಣ ಕುರುಡು ಪ್ರದರ್ಶಿಸಿವೆ. ಆರ್‌ಎಸ್‌ಎಸ್ ಅಸ್ತಿತ್ವದಲ್ಲಿರುವುದೇ ಹಿಂಸಾಚಾರ ಹುಟ್ಟುಹಾಕಲು ಮತ್ತು ಅಲ್ಪಸಂಖ್ಯಾತರ ಎದೆಯಲ್ಲಿ ನಡುಕ ಹುಟ್ಟಿಸಲು ಎನ್ನುವಂತೆ ಅದನ್ನು ಬಿಂಬಿಸಲಾಗುತ್ತಿದೆ. ಇವರುಗಳು ಹೇಳುವುದನ್ನು ಕೇಳಿದರೆ ಭಾರತವನ್ನು ಉಗ್ರ ಹಿಂದೂ ರಾಷ್ಟ್ರವನ್ನಾಗಿ ಮಾಡಿ ಎಣೆಯಿಲ್ಲದ ದಬ್ಬಾಳಿಕೆ ನಡೆಸುವ ದಿನಕ್ಕಾಗಿ ಅದು ಕಾಯುತ್ತಿದೆಯೇನೋ ಅನ್ನಿಸುತ್ತದೆ! ಆದರೆ ಈ ರೀತಿಯ ಬ್ರಾಂಡಿಂಗ್‌ನಿಂದಾಗಿ ಮೀಡಿಯಾಗಳಿಗಂತೂ ಲಾಭವಾಗಿದೆ. ಈಗಂತೂ ವಿದ್ಯಾವಂತ ಭಾರತೀಯರಿಗೆ ಆರ್‌ಎಸ್‌ಎಸ್‌ನ ಹೆಸರೇ ಲೇವಡಿಯ ವಿಷಯವಾಗಿ ಹೋಗಿದೆ. ಆದರೆ ಅದು ದೇಶಕ್ಕೆ ಕೊಟ್ಟ ಕೊಡುಗೆಯ ಬಗ್ಗೆ ಮಾತ್ರ ಎಲ್ಲಿಯೂ ಚರ್ಚೆಯಾಗುವುದಿಲ್ಲ.

   ಯಾವುದೇ ನೈಸರ್ಗಿಕ ವಿಪತ್ತುಗಳ ಉದಾಹರಣೆಯನ್ನೇ ತೆಗೆದುಕೊಳ್ಳಿ. ನೆರೆ, ಬರ, ಭೂಕಂಪ, ಸುನಾಮಿ… ಯಾವುದೇ ಇರಲಿ, ಆರ್‌ಎಸ್‌ಎಸ್‌ನ ಸ್ವಯಂಸೇವಕರು ಆ ಸ್ಥಳಕ್ಕೆ ಎಲ್ಲರಿಗಿಂತ ಮುಂಚಿತವಾಗಿ ತಲುಪಿ ಕಷ್ಟದಲ್ಲಿರುವವರ ನೆರವಿಗೆ ಮುಂದಾಗುತ್ತಾರೆ. ಆ ಸಮಯದಲ್ಲಿ ಅವರು ತಮ್ಮ comfort ಬಗ್ಗೆ ಯೋಚಿಸುವುದೇ ಇಲ್ಲ. ಆದರೆ ಮಾಧ್ಯಮಗಳು ಎಂದಾದರೂ ಈ ಕುರಿತು ವರದಿ ಮಾಡುತ್ತವೆಯೇ? ಇದು ಅವರ ಅಪ್ರಾಮಾಣಿಕತೆಯನ್ನು ತೋರಿಸುವುದಿಲ್ಲವೇ? ಆರ್‌ಎಸ್‌ಎಸ್‌ನ ಪ್ರಮುಖ ಶಕ್ತಿಯೆಂದರೆ ಅದರ ಸ್ವಯಂಸೇವಕರು. ಇವರುಗಳೆಲ್ಲಾ ದೇಶಕ್ಕಗಿ ಸ್ವಹಿತವನ್ನು ಮರೆತವರು. ಇವರುಗಳಲ್ಲಿ ಸಾವಿರಾರು ಕಾರ್ಯಕರ್ತರು ಆರಂಕಿಯ ಸಂಬಳ ಪಡೆಯುವಷ್ಟು ಅರ್ಹತೆ ಹೊಂದಿದ್ದರೂ ಕೊನೆಗೂ ಅವರು ಆಯ್ಕೆ ಮಾಡಿಕೊಂಡದ್ದು ದೇಶಸೇವೆಯನ್ನು.

ಈ ನಿಸ್ವಾರ್ಥ ಸೇವೆಯೇ ಅವರುಗಳಿಗೆ ಕೋಟ್ಯಂತರ ಭಾರತೀಯರ ಹೃದಯದಲ್ಲಿ ಭದ್ರವಾದ ಸ್ಥಾನ ಒದಗಿಸಿಕೊಟ್ಟಿದೆ. ಹಾಗಾಗೇ ಎಎನ್‌ಐ ಮತ್ತು ಅದೇ ಮನಸ್ಥಿತಿಯ ಸುದ್ದಿ ವಾಹಿನಿಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಈ ಪ್ರಮಾಣದಲ್ಲಿ ವಿರೋಧದ ಅಲೆಯೆದ್ದಿರುವುದು. ದೇಶಕ್ಕಾಗಿ ಜೀವನ ಮುಡಿಪಿಟ್ಟಿರುವ ಇಷ್ಟೊಂದು ಪ್ರಮಾಣದ ಜನರನ್ನು ಆರ್‌ಎಸ್‌ಎಸ್‌ನಂತೆ ಪ್ರಪಂಚದ ಇನ್ನಾವುದೇ ಸಂಸ್ಥೆಗೆ ಹುಟ್ಟುಹಾಕಲು, ಬೆಸೆಯಲು ಸಾಧ್ಯವಾಗಿದೆಯೇ?! ಒಂದು ವೇಳೆ ಅದು ದುರ್ಬಲ ಸಂಘವಾಗಿದ್ದರೆ ಕಾಂಗ್ರೆಸ್ ಮತ್ತು ಕಮ್ಯುನಿಷ್ಟ್ ಸರ್ಕಾರಗಳ ನಿರಂತರ ದಾಳಿಗೆ ಮೆತ್ತಗಾಗಿ ಇಷ್ಟು ಹೊತ್ತಿಗಾಗಲೇ ನೆಲಕಚ್ಚಿರುತ್ತಿತ್ತು. ತುರ್ತು ಪರಿಸ್ಥಿತಿಯ ಸಮಯದಲ್ಲಿ ಈ ಸಂಘ ತನ್ನ ಜೀವನದ ಅತ್ಯಂತ ಘೋರ ಸಮಯವನ್ನು ಎದುರಿಸಿತು. ಆದರೂ ಆಗಿನ ಸರಸಂಘಚಾಲಕರು ತಮ್ಮ ಕಾರ್ಯಕರ್ತರೊಂದಿಗೆ ಮಾತನಾಡುತ್ತಾ, ’ಇಂದಿರಾ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವನ್ನು ಕ್ಷಮಿಸಿಬಿಡಿ. ಎಷ್ಟಿದ್ದರೂ ಅವರು ನಮ್ಮವರಲ್ಲವೇ?’ ಎಂದು ಹೇಳಿ ದೊಡ್ಡತನ ಮೆರೆದಿದ್ದರು!

ಭಾಗವತ್‌ರ ಖಾಕಿ ಚೆಡ್ಡಿಯ ಬಗ್ಗೆ ಗೇಲಿ ಮಾಡಿ ಅವರ ವ್ಯಕ್ತಿತ್ವವನ್ನು ಅಳೆಯಲು ಮುಂದಾಗುವ ವರದಿಗಾರರಿಗೆ ನಾವೂ ಹಾಗೇ ಗೇಲಿ ಮಾಡಬಹುದಲ್ಲವೇ? ಅವರ ತಂದೆಯದ್ದೋ, ಸೋದರಿಯದ್ದೋ ಅಥವಾ ತಾಯಿಯದ್ದೋ ಉಡುಗೆಯ ಬಗ್ಗೆ ಕುಹಕವಾಡಿದರೆ ಅವರು ಸುಮ್ಮನಿರುತ್ತಾರಾ? ’ಅವರ ಬಗ್ಗೆ ನೀನು ಹೀಗೆ ಮಾತಾಡುವೆ ಅಂತ ನನಗೆ ಮೊದಲೇ ಗೊತ್ತಿತ್ತು’ ಎಂದು ನಾಚಿಕೆಯಿಲ್ಲದೆ ನುಣುಚಿಕೊಂಡುಬಿಡುತ್ತಾರೆ.

ಆರ್‌ಎಸ್‌ಎಸ್ ಅನ್ನು ಉಗ್ರ ಸಂಸ್ಥೆಯಂತೆ ಬಿಂಬಿಸುತ್ತಿರುವ ಮಾಧ್ಯಮಮಂದಿಯ ವೈಯಕ್ತಿಕ ಜೀವನವನ್ನೇ ಒಮ್ಮೆ ನೋಡಿ. ಅಲ್ಲಿ ತುಂಬಿರುವುದು ಬರೀ ಕೊಳಕು ಮಾತ್ರ. ಕಾಂಗ್ರೆಸ್ ಪರ ಪ್ರಚಾರ ಮಾಡುವುದು, ಭೂ ಕಬಳಿಕೆ, ಮೋದಿಯನ್ನು ಕಿತ್ತೆಸೆಯಬೇಕೆಂದು ಪದೇ ಪದೇ ಬೊಬ್ಬಿಡುವುದು ಇವರುಗಳ ನೈತಿಕತೆ! ಅರ್ಧ ದಿನವಾದರೂ ಭಾಗವತ್‌ರಂತೆ ಇವರುಗಳಿಗೆ ಬದುಕಲು ಸಾಧ್ಯವೇ? ಆದರೂ ನೈತಿಕತೆಯ ಉತ್ತುಂಗವನ್ನು ತಲುಪಿದವರಂತೆ ವರ್ತಿಸುತ್ತಾ ಆರ್‌ಎಸ್‌ಎಸ್, ಭಾಗವತ್‌ರನ್ನು ಹೀಗಳೆಯುತ್ತಾರೆ. ಇವರು ಯಾವ ಪ್ರಪಂಚದಲ್ಲಿ ಬದುಕುತ್ತಿದ್ದಾರೋ ತಿಳಿಯುತ್ತಿಲ್ಲ. ಅದಕ್ಕಿಂತ ಮುಖ್ಯವಾಗಿ ಇದನ್ನೆಲ್ಲಾ ಸಹಿಸಿಕೊಳ್ಳುತ್ತಾ ಕುಳಿತುಕೊಂಡಿದ್ದೇವಲ್ಲ, ನಾವ್ಯಾವ ದುಃಸ್ವಪ್ನದಲ್ಲಿ ಬುದಕುತ್ತಿದ್ದೇವೆಯೋ ತಿಳಿಯದು. ಆರ್‌ಎಸ್‌ಎಸ್ ಅನ್ನು ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಆ ಪ್ರಶ್ನೆಗಳು ಸತ್ಯ ಮತ್ತು ಪ್ರಾಮಾಣಿಕೆಯ ತಳಹದಿಯನ್ನು ಹೊಂದಿರಬೇಕು. ಆರ್‌ಎಸ್‌ಎಸ್‌ನ ಸೈದ್ಧಾಂತಿಕ ಮತ್ತು ಬೌದ್ಧಿಕ ವೈಫಲ್ಯಗಳೇನೇ ಇದ್ದರೂ, ಅದರಂತಹ ನಿಸ್ವಾರ್ಥ ದೇಶಸೇವಾ ಮನೋಭಾವ ಪ್ರಪಂಚದಲ್ಲಿ ಯಾರಿಗೂ ಇರಲಿಕ್ಕಿಲ್ಲ. ಅದನ್ನು ಪ್ರಶ್ನಿಸುವುದಕ್ಕೆ ಸಾಧ್ಯವೂ ಇಲ್ಲ. ಹೊರಗಿನವನಾದ ನಾನೇ ಈ ಮಾತನ್ನು ಹೇಳುತ್ತಿದ್ದೇನೆ!

ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದೇನು?

ಗೀತ ರಾಮಾಯಣ ಬೇಕಾಗಿದೆ

ಮರಾಠಿಯಲ್ಲಿ ಗ. ದಿ. ಮಾಡಗುಳಕರ ವಿರಚಿತ ಹಾಗೂ ಸುಧೀರ್ ಫಡಕೆ ಹಾಡಿರುವ ಗೀತ ರಾಮಾಯಣ ಪ್ರಸಿದ್ಧವಾಗಿದೆ. ಕನ್ನಡದಲ್ಲಿ ಅದೇ ಮ್ಯೂಸಿಕ್ ನಲ್ಲಿ ಅದನ್ನು ಎಂ. ಎಸ್. ಕಾಮತ್ ಹಾಡಿದ್ದಾರೆ. ಯಾರ ಬಳಿಯಾದರೂ ಕನ್ನಡದ ಧ್ವನಿ ಸುರುಳಿ ಅಥವಾ ಸಿಡಿ ಇದ್ದರೆ ದಯವಿಟ್ಟು ನೀಡಿ.

ವಿಶ್ವಾಸಿ

ಸುಘೋಷ್