ಹೊಲಸು ರಾಜಕೀಯದಲ್ಲಿ ಬಿಝಿಯಾಗಿರುವಾಗ ಇದೆಲ್ಲ ಗಮನಕ್ಕೆ ಬರುತ್ತದೆಯೆ?

…………..

ಇಂದು ‘ಸಮಯ’ದಲ್ಲಿ ಪ್ರಸಾರವಾದ ಸುದ್ದಿ ಇದು.

ಗುಲ್ಬರ್ಗಾದಲ್ಲಿ ಪಿಡಿಓ ಒಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪಂಚಾಯತಿ ಸದಸ್ಯರು ಹಾಗೂ ಶಾಸಕರ ಕಿರುಕುಳ ತಾಳಲಾರದೆ ಸೇಡಂ ತಾಲೂಕಿನ ಕಾನಾಗಡ್ಡ ಗ್ರಾಮದಲ್ಲಿ ಪಿಡಿಓ ಪ್ರಸನ್ನಾತ್ಮ ಆತ್ಮಹತ್ಯೆಗೆ ಮುಂದಾಗಿದ್ರು ಉದ್ಯೋಗ ಖಾತ್ರಿ ಯೋಜನೆಯನ್ನುಯಶಸ್ವಿಗೊಳಿಸಲು, ಪಿಡಿಓ ಪ್ರಸನ್ನಾತ್ಮ ಅನೇಕಬಾರಿ ಪಂಚಾಯತಿ ಸದಸ್ಯರಿಗೆ ಹೇಳಿದ್ರು. ಆದ್ರೆ, ಅದಕ್ಕೆ ಒಪ್ಪದಸದಸ್ಯರು ತಮ್ಮೊಂದಿಗೆ ಹೊಂದಾಣಿಕೆ ಮಾಡಿಕೊಂಡು, ಕೆಲಸ ಮಾಡುವಂತೆಪೀಡಿಸುತ್ತಿದ್ದರಂತೆ. ಕೆಲವರು ಪ್ರಾಣ ಬೆದರಿಕೆಕೂಡ ಹಾಕಿದ್ದರಂತೆ. ಇದರಿಂದ ನೊಂದ ಪ್ರಸನ್ನಾತ್ಮ, ನಿನ್ನೆ ಪತ್ರ ಬರೆದಿಟ್ಟು ನಿದ್ದೆ ಮಾತ್ರೆ ಸೇವಿಸಿದ್ದಾರೆ. ಅಸ್ವಸ್ಥಗೊಂಡ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸನ್ನಾತ್ಮ ಗುಲ್ಬರ್ಗಾದ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಮುಧೋಳ ಪೊಲೀಸ್ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.