ಕೊಡಗಿನ ವಿರಾಜಪೇಟೆ ತಾಲೂಕಿನ ದೇವರಪುರ ಗ್ರಾಮದಲ್ಲಿ ಗಿರಿಜನರು ಆಚರಿಸುವ ಕುಂಡೆ ಹಬ್ಬ ನಿನ್ನೆ ನಡೆಯಿತು. ಈ ಹಬ್ಬದಲ್ಲಿ ಗಂಡಸರು ಹೆಂಗಸಿನ ವೇಷ ತೊಡ್ತಾರೆ. ಕೈಯಲ್ಲಿ ಒಂದು ಬುರುಡೆ ಹಿಡಿದು ಕುಂಡೆ ಹಾಡನ್ನ ಹಾಡ್ತಾ ಎಲ್ಲರಿಂದಲೂ ಹಣ ವಸೂಲಿ ಮಾಡ್ತಾರೆ. ಹಣ ನೀಡದಿದ್ದಲ್ಲಿ ಅವರಿಗೆ ಬೈಗುಳದ ಸುರಿಮಳೆ. ಹೀಗಾಗಿ ಇದು ಬೈಗುಳದ ಹಬ್ಬ ಅಂತಲೂ ಫೇಮಸ್. ಸಾವಿರಾರು ಗಿರಿಜನರು ಸೇರಿ ಈ ಹಬ್ಬವನ್ನ ಆಚರಿಸಿದ್ರು.
(ಇಂದು ಸಮಯ ದಲ್ಲಿ ಪ್ರಸಾರವಾದ ಸುದ್ದಿ)